ಅಪಾಯದ ಕರೆ ಗಂಟೆ ಹೊಡೆಯುವ ಸೇಪ್ಟಿಸೂಟ್

ಅಪಾಯದ ಕರೆ ಗಂಟೆ ಹೊಡೆಯುವ ಸೇಪ್ಟಿಸೂಟ್

ಅಪಾಯದ ಕಾರ್ಖಾನೆ, ಅಣು ವಿದ್ಯುತ್ ಕೇಂದ್ರ ಮತ್ತು ಅನಿಲಯುಕ್ತ ಕೇಂದ್ರಗಳಲ್ಲಿ ಕೆಲಸ ಮಾಡುವುದು ಮೈತುಂಬ ಎಚ್ಚರಿಕೆಯನ್ನಿಟ್ಟುಕೊಂಡೇ ಮಾಡಬೇಕಾಗುತ್ತದೆ. ಅನಿರೀಕ್ಷಿತವಾಗಿ ಬೆಂಕಿ ತಗಲುವುದು. ಕೈ ಕಾಲುಗಳಿಗೆ ಜಖಂ ಆಗುವುದು. ಇತ್ಯಾದಿ ಅಪಾಯಗಳಾಗುತ್ತಲೇ ಇರುತ್ತದೆ. ಇಂಥಹ ಸ್ಥಳಗಳಲ್ಲಿ ಕೆಲಸ ಮಾಡುವ ಜನರಿಗಾಗಿ ಅಪಾಯ ರಹಿತ ಮತ್ತು ಅಪಾಯದ ಎಚ್ಚರಿಕೆಯನ್ನು ನೀಡುವ ಸೇಷ್ಟಿಸೂಟ್‌ಗಳು ರಚನೆಯಾಗಿವೆ.

ಇಂಥಹ ವಸ್ತ್ರಗಳನ್ನು ಅಮೇರಿಕಾದ ನ್ಯೂಮೆಕ್ಸಿಕೋದಲ್ಲಿರುವ ‘ಲಾಸ್ ಆಲಾಮೋಸ್’ ರಾಷ್ಟ್ರೀಯ ಪ್ರಯೋಗಶಾಲೆ ತಯಾರಿಸುತ್ತದೆ. ಮತ್ತು ಈ ಸೂಟ್‌ಗೆ ಪೆಟೆಂಟ್ ಸಹ ದೂರೆತಿದೆ. ಅಪಾಯಕಾರಿ ಪರಿಸ್ಥಿತಿಯಲ್ಲಿ ಈ ವಸ್ತ್ರದಲ್ಲಿರುವ ವಿಶೇಷ ವಿದ್ಯುತ್ ವಾಹಕಗಳು ತಕ್ಷಣ ಪ್ರೇರಿತವಾಗಿ ಅಪಾಯದ ಕರೆಗಂಟೆಯನ್ನು ಬಾರಿಸುತ್ತವೆ. ವಿವಿಧ ವಿಕಿರಣಗಳು, ವಿಷಾನಿಲಗಳು, ಜೈವಿಕ ಅನಿಲಗಳು ಇತ್ಯಾದಿಗಳನ್ನು ಇದು ತಡೆದು ಹಿಡಿಯುತ್ತವೆ. ಈ ಕಾರಣವಾಗಿ ಇಲ್ಲಿಯ ಕೆಲಸಗಾರರು ಭಯವಿಲ್ಲದೇ ಉತ್ಪಾದನೆಯನ್ನು ಮಾಡಬಹುದು. ಈ ಕಡೆ ಮನೆಯಲ್ಲಿ ಹೆಂಗಸರಿಗೂ ನೆಮ್ಮದಿ ಕೂಡ.

ಮೊದಲು ಪಾಲಿವಿನೈಲ ಆಲ್ಕೋಹಾಲ್ ಮತ್ತು ಉಪ್ಪುಗಳನ್ನು ಗ್ಲಿಸರಾಲ್‌ನಲ್ಲಿ ಕರಗಿಸಿ ಅರೆವಾಹಕ ಘನ ಪದಾರ್ಥಗಳನ್ನು ತಯಾರಿಸಲಾಗುತ್ತದೆ. ಇದಕ್ಕೆ ವಿದ್ಯುತ್ ವಾಹಕ ಪಾಲಿಮರ್ ಪದಾರ್ಥದ ಪದರವನ್ನು ಕೊಡಲಾಗುತ್ತದೆ. ಹೀಗೆ ತಯಾರಾದ ಬಟ್ಟೆಯಿಂದ ಸೂಟ್‌ಗಳನ್ನು ಹೊಲೆಯಲಾಗುತ್ತದೆ. ವಾಹಕ ಪದರನಲ್ಲಿ ವಿದ್ಯುತ್ ತಂತಿಯ ಸಂಪರ್ಕವಿರುತ್ತದೆ. ಅಪಾಯಕಾರಿ ಪರಿಸರವಿದ್ದಾಗ ವಿದ್ಯುತ್ ಮಂಡಲ ಪೂರ್ಣವಾಗಿ ಅಪಾಯದ ಗಂಟೆಯನ್ನು ಬಾರಿಸುತ್ತದೆ. ಈ ದಿಸೆಯಲ್ಲಿ ಅಲ್ಲಿಯ ಕಾರ್ಖಾನೆಗಳ ಕೆಲಸಗಾರರಿಗೆ ನೆಮ್ಮದಿ ಇದೆ. ಪರಿಸರ ಮಾಲಿನ್ಯದ ತೊಂದರೆ ಇರದೇ ಈ ಕೆಲಸಗಳಿಗೆ ಬಹಳೇ ‘ಡಿಮ್ಯಾಂಡ’ ಕೂಡ ಇದೆ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಬರಿ ಓಳು (ಷೋ)
Next post ಅರ್ಘ್ಯ

ಸಣ್ಣ ಕತೆ

  • ಕಲ್ಪನಾ

    ಚಿತ್ರ: ಟಾಮ್ ಬಿ ಇದು ಇಪ್ಪತ್ತು ವರ್ಷಗಳ ಹಿಂದಿನ ಕಥೆ! ಮಾತನಾಡುವ ಸಿನಿಮಾ ಪ್ರಪಂಚ ಅದೇ ಆಗ ದಕ್ಷಿಣ ಭಾರತದಲ್ಲಿ ತಲೆಯೆತ್ತಿದ್ದಿತು! ಸಿನಿಮಾದಲ್ಲಿ ಪಾತ್ರವಹಿಸುವ ನಟಿನಟಿಯರನ್ನು ಅಚ್ಚರಿಯ… Read more…

  • ಸಾವು

    ಈ ಗೊಂಡಾರಣ್ಯದಲ್ಲಿ ನಾನು ಬಂದುದಾದರೂ ಹೇಗೆ? ಅಗೋ ಅಲ್ಲಿ ಲಾಸ್ಯವಾಗಿ ಬಳುಕುತ್ತಾ ನಲಿಯುತ್ತಾ ತುಂತುರು ತುಂತುರಾಗಿ ಮುತ್ತಿನ ಹನಿಗಳನ್ನು ಪ್ರೋಕ್ಷಿಸುತ್ತಿರುವ ಝರಿಯ ರಮಣೀಯತೆಯನ್ನೂ ಮೀರುವಂತಹ ಭಯಾನಕತೆ ವ್ಯಾಪಿಸಿದೆಯಲ್ಲಾ… Read more…

  • ಕುಟೀರವಾಣಿ

    ಪೀಠಿಕೆ ನನ್ನ ಬಡಗುಡಿಸಲ ಹೆಸರು "ಆನಂದಕುಟೀರ". ಒಂದು ದಿನ ನಡುಮಧ್ಯಾಹ್ನ. ಕುಟೀರದೊಳಗೆ ಮುರುಕು ಕಿಟಿಕಿಯ ಹತ್ತಿರ ಕುಳಿತು, ಹೊರಗಿನ ಪ್ರಸಂಚವನು ನೋಡುತಿದ್ದೆ. ಮನಸು ಬೇಸರದಿಂದ ತುಂಬಿ ಹೋಗಿತ್ತು.… Read more…

  • ತಾಯಿ-ಬಂಜೆ

    "ಅಯ್ಯೋ! ಅಮ್ಮ!... ನೋವು... ನೋವು... ಸಂಕಟ.... ಅಮ್ಮ!-" ಒಂದೇ ಸಮನಾಗಿ ನರಳಾಟ. ಹೊಟ್ಟೆಯನ್ನು ಕಡೆಗೋಲಿನಿಂದ ಕಡದಂತಾಗುತ್ತಿತ್ತು. ಈ ಕಲಕಾಟದಿಂದ ನರ ನರವೂ ಕಿತ್ತು ಹೋದಂತಾಗಿ ಮೈಕೈಯೆಲ್ಲಾ ನೋವಿನಿಂದ… Read more…

  • ದುರಾಶಾ ದುರ್ವಿಪಾಕ

    "ಒಳ್ಳೇದು, ಅವನನ್ನು ಒಳಗೆ ಬರಹೇಳು" ಎಂದು ಪ್ರೇಮಚಂದನು- ಘನವಾದ ವ್ಯಾಪಾರಸ್ಥನು- ಆಢ್ಯತೆಯಿಂದ, ತಾನು ಆಡುವ ಒಂದೊಂದು ಶಬ್ದವನ್ನು ತೂಕಮಾಡಿ ಚಲ್ಲುವಂತೆ ಸಾವಕಾಶವಾಗಿ ನುಡಿದನು. ಬಾಗಿಲಲ್ಲಿ ನಿಂತಿದ್ದ ವೃದ್ಧ… Read more…