Home / ಲೇಖನ / ವಿಜ್ಞಾನ / ಅಪಾಯದ ಕರೆ ಗಂಟೆ ಹೊಡೆಯುವ ಸೇಪ್ಟಿಸೂಟ್

ಅಪಾಯದ ಕರೆ ಗಂಟೆ ಹೊಡೆಯುವ ಸೇಪ್ಟಿಸೂಟ್

ಅಪಾಯದ ಕಾರ್ಖಾನೆ, ಅಣು ವಿದ್ಯುತ್ ಕೇಂದ್ರ ಮತ್ತು ಅನಿಲಯುಕ್ತ ಕೇಂದ್ರಗಳಲ್ಲಿ ಕೆಲಸ ಮಾಡುವುದು ಮೈತುಂಬ ಎಚ್ಚರಿಕೆಯನ್ನಿಟ್ಟುಕೊಂಡೇ ಮಾಡಬೇಕಾಗುತ್ತದೆ. ಅನಿರೀಕ್ಷಿತವಾಗಿ ಬೆಂಕಿ ತಗಲುವುದು. ಕೈ ಕಾಲುಗಳಿಗೆ ಜಖಂ ಆಗುವುದು. ಇತ್ಯಾದಿ ಅಪಾಯಗಳಾಗುತ್ತಲೇ ಇರುತ್ತದೆ. ಇಂಥಹ ಸ್ಥಳಗಳಲ್ಲಿ ಕೆಲಸ ಮಾಡುವ ಜನರಿಗಾಗಿ ಅಪಾಯ ರಹಿತ ಮತ್ತು ಅಪಾಯದ ಎಚ್ಚರಿಕೆಯನ್ನು ನೀಡುವ ಸೇಷ್ಟಿಸೂಟ್‌ಗಳು ರಚನೆಯಾಗಿವೆ.

ಇಂಥಹ ವಸ್ತ್ರಗಳನ್ನು ಅಮೇರಿಕಾದ ನ್ಯೂಮೆಕ್ಸಿಕೋದಲ್ಲಿರುವ ‘ಲಾಸ್ ಆಲಾಮೋಸ್’ ರಾಷ್ಟ್ರೀಯ ಪ್ರಯೋಗಶಾಲೆ ತಯಾರಿಸುತ್ತದೆ. ಮತ್ತು ಈ ಸೂಟ್‌ಗೆ ಪೆಟೆಂಟ್ ಸಹ ದೂರೆತಿದೆ. ಅಪಾಯಕಾರಿ ಪರಿಸ್ಥಿತಿಯಲ್ಲಿ ಈ ವಸ್ತ್ರದಲ್ಲಿರುವ ವಿಶೇಷ ವಿದ್ಯುತ್ ವಾಹಕಗಳು ತಕ್ಷಣ ಪ್ರೇರಿತವಾಗಿ ಅಪಾಯದ ಕರೆಗಂಟೆಯನ್ನು ಬಾರಿಸುತ್ತವೆ. ವಿವಿಧ ವಿಕಿರಣಗಳು, ವಿಷಾನಿಲಗಳು, ಜೈವಿಕ ಅನಿಲಗಳು ಇತ್ಯಾದಿಗಳನ್ನು ಇದು ತಡೆದು ಹಿಡಿಯುತ್ತವೆ. ಈ ಕಾರಣವಾಗಿ ಇಲ್ಲಿಯ ಕೆಲಸಗಾರರು ಭಯವಿಲ್ಲದೇ ಉತ್ಪಾದನೆಯನ್ನು ಮಾಡಬಹುದು. ಈ ಕಡೆ ಮನೆಯಲ್ಲಿ ಹೆಂಗಸರಿಗೂ ನೆಮ್ಮದಿ ಕೂಡ.

ಮೊದಲು ಪಾಲಿವಿನೈಲ ಆಲ್ಕೋಹಾಲ್ ಮತ್ತು ಉಪ್ಪುಗಳನ್ನು ಗ್ಲಿಸರಾಲ್‌ನಲ್ಲಿ ಕರಗಿಸಿ ಅರೆವಾಹಕ ಘನ ಪದಾರ್ಥಗಳನ್ನು ತಯಾರಿಸಲಾಗುತ್ತದೆ. ಇದಕ್ಕೆ ವಿದ್ಯುತ್ ವಾಹಕ ಪಾಲಿಮರ್ ಪದಾರ್ಥದ ಪದರವನ್ನು ಕೊಡಲಾಗುತ್ತದೆ. ಹೀಗೆ ತಯಾರಾದ ಬಟ್ಟೆಯಿಂದ ಸೂಟ್‌ಗಳನ್ನು ಹೊಲೆಯಲಾಗುತ್ತದೆ. ವಾಹಕ ಪದರನಲ್ಲಿ ವಿದ್ಯುತ್ ತಂತಿಯ ಸಂಪರ್ಕವಿರುತ್ತದೆ. ಅಪಾಯಕಾರಿ ಪರಿಸರವಿದ್ದಾಗ ವಿದ್ಯುತ್ ಮಂಡಲ ಪೂರ್ಣವಾಗಿ ಅಪಾಯದ ಗಂಟೆಯನ್ನು ಬಾರಿಸುತ್ತದೆ. ಈ ದಿಸೆಯಲ್ಲಿ ಅಲ್ಲಿಯ ಕಾರ್ಖಾನೆಗಳ ಕೆಲಸಗಾರರಿಗೆ ನೆಮ್ಮದಿ ಇದೆ. ಪರಿಸರ ಮಾಲಿನ್ಯದ ತೊಂದರೆ ಇರದೇ ಈ ಕೆಲಸಗಳಿಗೆ ಬಹಳೇ ‘ಡಿಮ್ಯಾಂಡ’ ಕೂಡ ಇದೆ.
*****

Tagged:

Leave a Reply

Your email address will not be published. Required fields are marked *

ಬೆಳಕಿನಿಂದ ಜಗಜಗಿಸುವ ಸಂಜೆ ರಾವು ಬಡಿದಂತೆ ಮಬ್ಬಾಗಿತ್ತು. ಈ ಮಬ್ಬು ಹಿಂದೆಂದೂ ಇದಿಲ್ಲ. ದೇಶದ ಹದಿನೇಳು ವರ್ಷದ ಸ್ವಾತಂತ್ರದಲ್ಲಿ, ಮಧ್ಯಮ ತರಗತಿಯ ಜೀವನ ಕೈ ಬಾಯಿಯಾಗಿದ್ದರೂ ದೂರದ ಆಶಯ ಹೊಂಗಿರಣವೊಂದು ಸದಾ ಹೊಳೆದು ಭಾವೀ ಪೀಳಿಗೆಯ ಮನೋಲ್ಲಾಸ ಮಾಡುತ್ತಿತ್ತು. ಆದರೆ ಈ ಮಬ್ಬುಗತ್ತ...

ಅವಳು ಯಾವ ಹುಡುಗರ ಜೊತ ನಿಂತು ಮಾತನಾಡಿದರೂ ಶ್ರೀಕಾಂತನಪಾಲಿಗೆ ಆ ಹುಡುಗರು ವಿಲನ್‌ಗಳಂತೆಯೇ ಭಾಸವಾಗುತ್ತಿದ್ದರು. ಅವಳು ತನ್ನ ಕಾಲೇಜಿನ ಲೆಕ್ಚರರ್‌ಗಳು ಪಾಠ ಮಾಡುವ ವೈಖರಿ ಸ್ಟೈಲು ಹೈಲುಗಳ ಕುರಿತು ಬಣ್ಣಿಸುವಾಗಲೂ ಕೇಳಲಾಗದೆ ಶ್ರೀಯ ಹೊಟ್ಟೆಯಲೆಲ್ಲಾ ತಳಮಳ. ಅಷ್ಟೇಕೆ ಅವಳು ತನ್ನ ತ...

ಬೆಳಿಗ್ಗೆ ಏಳರ ಸಮಯ ಮೈಸೂರಿನ ರೋಹಿಣಿ ಲಾಡ್ಜ್‌ನ ಕೊಠಡಿ ಸಂಖ್ಯೆ ೧೦೩. ಪೋಲೀಸರು, ಪತ್ರಕರ್ತರು, ಫೊಟೋ ಗ್ರಾಫರ್‌ಗಳಿಂದ ತುಂಬಿಹೋಗಿದೆ. ಬೆಳ್ಳಂ ಬೆಳಿಗ್ಗೆಯೇ ಯುವತಿಯೊಬ್ಬಳ ಕೊಲೆ ನಡೆದುಹೋಗಿದೆ. ಲಾಡ್ಜ್‌ನ ಹೊರಗೆ ಜನರು ಕುತೂಹಲಭರಿತರಾಗಿ ಸೇರಿದ್ದಾರೆ. ಸೇರಿದ್ದ ಜನರನ್ನು ನಿಯಂತ್ರ...

೧ ಗೌರಿಯ ಹಬ್ಬವು ಕಳೆದು ಕೆಲವು ದಿನಗಳಾಗಿದ್ದುವು. ಭಾಗೀರಥಮ್ಮನೂ ಅವಳ ಜೊತೆಯ ಹುಡುಗಿಯರೂ ಒಂದೊಂದು ದಿನವನ್ನು ಕಳೆಯುವುದೂ ಒಂದೊಂದು ಯುಗವನ್ನು ಕಳೆದಂತೆ ಕಷ್ಟವಾಗಿದ್ದಿತು. ಅವರು ಎಷ್ಟು ಕುತೂಹಲದಿಂದ ಬಯಸಿದರೂ ದಿನಗಳು ಬೇಗ ಬೇಗ ಉರುಳಲೊಲ್ಲವು. ಒಂದು ದಿನ ಅವರೆಲ್ಲರೂ ಸೇರಿ ಕವಡೆಯ...

ಸಂಜೆ ನಾಲ್ಕು ಗಂಟೆಯಾದರೆ ಸಾಕು. ಅವರೆಲ್ಲರೂ ಒಬ್ಬೊಬ್ಬರಾಗಿ ಬಂದು ಸೇರುತ್ತಾರೆ. ಅದೊಂದು ಪಂಚಾಯಿತಿ ಕಟ್ಟೆ ಇದ್ದಂತೆ. ಮಧ್ಯದಲ್ಲೊಂದು ಸಿಮೆಂಟ್ ಬೆಂಚು, ಅದರ ಎಡ, ಬಲ ಎರಡೂ ಕಡೆ ಇವರೇ ಒಂದಷ್ಟು ಕಲ್ಲು ಚಪ್ಪಡಿಗಳನ್ನು ಎಳೆದು ತಂದು ಕೊಡುವುದಕ್ಕೆ ಪೀಠಗಳನ್ನು ಮಾಡಿಕೊಂಡಿದ್ದಾರೆ. ಸ...

ತಿಮ್ಮಣ್ಣ ನಮ್ಮೂರಿನ ಪಕ್ಕದ ಹಳ್ಳಿಯಲ್ಲಿನ ಅಡುಗೆ ಭಟ್ಟ ತಿಪ್ಪಾಭಟ್ಟರ ಮಗ. ತಿಪ್ಪಾಭಟ್ಟರಿಗೆ ಮದುವೆಯಾಗಿ ಹತ್ತು ವರ್ಷ ಕಳೆದರೂ ಮಕ್ಕಳಾಗಿರಲಿಲ್ಲ. ಕೊನೆಗೆ ಪಕ್ಕದ ಮನೆಯ ಕಮಲಾಕ್ಷಮ್ಮನ ಸಲಹೆ ಮೇರೆಗೆ ಮಗುವಾದರೆ ತಿರುಪತಿಗೆ ಹೋಗಿ ಬರುವ ಹರಕೆ ಹೊತ್ತರು. ತಿಮ್ಮಪ್ಪನ ಕೃಪಾಕಟಾಕ್ಷವೋ ...