Home / ಲೇಖನ / ವಿಜ್ಞಾನ / ಅಪಾಯದ ಕರೆ ಗಂಟೆ ಹೊಡೆಯುವ ಸೇಪ್ಟಿಸೂಟ್

ಅಪಾಯದ ಕರೆ ಗಂಟೆ ಹೊಡೆಯುವ ಸೇಪ್ಟಿಸೂಟ್

ಅಪಾಯದ ಕಾರ್ಖಾನೆ, ಅಣು ವಿದ್ಯುತ್ ಕೇಂದ್ರ ಮತ್ತು ಅನಿಲಯುಕ್ತ ಕೇಂದ್ರಗಳಲ್ಲಿ ಕೆಲಸ ಮಾಡುವುದು ಮೈತುಂಬ ಎಚ್ಚರಿಕೆಯನ್ನಿಟ್ಟುಕೊಂಡೇ ಮಾಡಬೇಕಾಗುತ್ತದೆ. ಅನಿರೀಕ್ಷಿತವಾಗಿ ಬೆಂಕಿ ತಗಲುವುದು. ಕೈ ಕಾಲುಗಳಿಗೆ ಜಖಂ ಆಗುವುದು. ಇತ್ಯಾದಿ ಅಪಾಯಗಳಾಗುತ್ತಲೇ ಇರುತ್ತದೆ. ಇಂಥಹ ಸ್ಥಳಗಳಲ್ಲಿ ಕೆಲಸ ಮಾಡುವ ಜನರಿಗಾಗಿ ಅಪಾಯ ರಹಿತ ಮತ್ತು ಅಪಾಯದ ಎಚ್ಚರಿಕೆಯನ್ನು ನೀಡುವ ಸೇಷ್ಟಿಸೂಟ್‌ಗಳು ರಚನೆಯಾಗಿವೆ.

ಇಂಥಹ ವಸ್ತ್ರಗಳನ್ನು ಅಮೇರಿಕಾದ ನ್ಯೂಮೆಕ್ಸಿಕೋದಲ್ಲಿರುವ ‘ಲಾಸ್ ಆಲಾಮೋಸ್’ ರಾಷ್ಟ್ರೀಯ ಪ್ರಯೋಗಶಾಲೆ ತಯಾರಿಸುತ್ತದೆ. ಮತ್ತು ಈ ಸೂಟ್‌ಗೆ ಪೆಟೆಂಟ್ ಸಹ ದೂರೆತಿದೆ. ಅಪಾಯಕಾರಿ ಪರಿಸ್ಥಿತಿಯಲ್ಲಿ ಈ ವಸ್ತ್ರದಲ್ಲಿರುವ ವಿಶೇಷ ವಿದ್ಯುತ್ ವಾಹಕಗಳು ತಕ್ಷಣ ಪ್ರೇರಿತವಾಗಿ ಅಪಾಯದ ಕರೆಗಂಟೆಯನ್ನು ಬಾರಿಸುತ್ತವೆ. ವಿವಿಧ ವಿಕಿರಣಗಳು, ವಿಷಾನಿಲಗಳು, ಜೈವಿಕ ಅನಿಲಗಳು ಇತ್ಯಾದಿಗಳನ್ನು ಇದು ತಡೆದು ಹಿಡಿಯುತ್ತವೆ. ಈ ಕಾರಣವಾಗಿ ಇಲ್ಲಿಯ ಕೆಲಸಗಾರರು ಭಯವಿಲ್ಲದೇ ಉತ್ಪಾದನೆಯನ್ನು ಮಾಡಬಹುದು. ಈ ಕಡೆ ಮನೆಯಲ್ಲಿ ಹೆಂಗಸರಿಗೂ ನೆಮ್ಮದಿ ಕೂಡ.

ಮೊದಲು ಪಾಲಿವಿನೈಲ ಆಲ್ಕೋಹಾಲ್ ಮತ್ತು ಉಪ್ಪುಗಳನ್ನು ಗ್ಲಿಸರಾಲ್‌ನಲ್ಲಿ ಕರಗಿಸಿ ಅರೆವಾಹಕ ಘನ ಪದಾರ್ಥಗಳನ್ನು ತಯಾರಿಸಲಾಗುತ್ತದೆ. ಇದಕ್ಕೆ ವಿದ್ಯುತ್ ವಾಹಕ ಪಾಲಿಮರ್ ಪದಾರ್ಥದ ಪದರವನ್ನು ಕೊಡಲಾಗುತ್ತದೆ. ಹೀಗೆ ತಯಾರಾದ ಬಟ್ಟೆಯಿಂದ ಸೂಟ್‌ಗಳನ್ನು ಹೊಲೆಯಲಾಗುತ್ತದೆ. ವಾಹಕ ಪದರನಲ್ಲಿ ವಿದ್ಯುತ್ ತಂತಿಯ ಸಂಪರ್ಕವಿರುತ್ತದೆ. ಅಪಾಯಕಾರಿ ಪರಿಸರವಿದ್ದಾಗ ವಿದ್ಯುತ್ ಮಂಡಲ ಪೂರ್ಣವಾಗಿ ಅಪಾಯದ ಗಂಟೆಯನ್ನು ಬಾರಿಸುತ್ತದೆ. ಈ ದಿಸೆಯಲ್ಲಿ ಅಲ್ಲಿಯ ಕಾರ್ಖಾನೆಗಳ ಕೆಲಸಗಾರರಿಗೆ ನೆಮ್ಮದಿ ಇದೆ. ಪರಿಸರ ಮಾಲಿನ್ಯದ ತೊಂದರೆ ಇರದೇ ಈ ಕೆಲಸಗಳಿಗೆ ಬಹಳೇ ‘ಡಿಮ್ಯಾಂಡ’ ಕೂಡ ಇದೆ.
*****

Tagged:

Leave a Reply

Your email address will not be published. Required fields are marked *

ಮಳೆ ಜೋರಾಗಿ ಸುರಿಯುತ್ತಿತ್ತು. ಚಾವಣಿ ತೂತಾಗಿ ಸೋರುತ್ತಿದ್ದುದರಿಂದ ಸಾವಿತ್ರಿಗೆ ನಿದ್ದೆ ಇರಲಿಲ್ಲ. ಅವಳ ಉಗ್ಗವನದೂ ಅದೇ ಕತೆ. ಒಂದು ಮೂಲೆಯಲ್ಲಿ ಉಗ್ಗವನಿಗೆ ಒರಗಿಕೊಂಡು ಹಳೇ ಕಂಬಳಿ ಹೊದ್ದು ಸಾವಿತ್ರಿ ತೂಕಡಿಸುತ್ತಿದ್ದಳು. ಬಾಗಿಲ ಸಂದಿನಿಂದ ಆಗಾಗ ಚಳಕ್ಕನೆ ಕಾಣಿಸಿಕೊಳ್ಳುವ ಮಿ...

ದೀಪಾವಳಿಯ ಸೂಟಿಯನ್ನು ಕಳೆಯಲು ಊರಿಗೆ ಹೋಗಿದ್ದೆ. ಹಳ್ಳಿಗೆ ಹೋದಾಗೆಲ್ಲ ಕತೆಯ ಸುಬ್ಬಣ್ಣನ ಮನೆಗೆ ಹೋಗದಿದ್ದರೆ ನನ್ನ ಮನಸ್ಸು ಕೇಳುವದಿಲ್ಲ. ಊರಿಗೆ ಬಂದು ತನ್ನ ಮನೆಗೆ ಬರದಿದ್ದರೆ ಸುಬ್ಬಣ್ಣ ಬಿಡುತ್ತಾನೇ? ಅವನ ಆಮಂತ್ರಣ ಬರುವ ಮುಂಚೆಯೇ ಹೋಗುವದು ಉಚಿತವೆಂದು ತೋರಿತು. ಅವನ ಕತೆ ಕೇ...

ಒಂದು ತಿಂಗಳ ಮಗು ಹೆನ್ರಿ ನೋಡಲು ಬಲು ಮುದ್ದಾಗಿದ್ದ. ಸೇಬಿನ ಕೆನ್ನೆಗಳು, ದೊಡ್ಡ ಕಪ್ಪು ಕಣ್ಣುಗಳು, ತಲೆಯಲ್ಲಿ ಕೆಂಚು ಕೂದಲು, ನೀಳ ಮೂಗು, ಮುದ್ದಾದ ಪುಟ್ಟ ಬಾಯಿ, ನೋಡಿದೊಡನೆ ಹೇಳಬಹುದಿತ್ತು ಆ ಮಗು ಬ್ರಿಟಿಷ್ ತಂದೆ ತಾಯಿಗೆ ಹುಟ್ಟಿದವನೆಂದು. ತಂದೆ ಸ್ಮಿಥ್ ಮತ್ತು ತಾಯಿ ಮೇರಿಗೆ...

ಕೊನೆಗೊಮ್ಮೆ ಶಂಕರ ಹೂಂಗುಟ್ಟಲೇಬೇಕಾಯಿತು. “ಹುಡುಗಿ ಮನಸ್ಸಿಗೆ ಬಂದರೆ ಮಾತ್ರ ಆಗಿ. ಈ ವಿಷಯದಲ್ಲಿ ಒತ್ತಾಯಮಾಡಬರುತ್ತದೆಯೇ?” ಎಂದು ಶಿವರಾಮ ಹೆಗಡೆಯವರು ಶಂಕರನನ್ನು ಹೊರಡಿಸಿದರು. ದಾರಿಯುದ್ದಕ್ಕೂ ಹೆಗಡೆಯವರು ತಮ್ಮ ಮಗಳ ಗುಣಗಾನವನ್ನು ಪ್ರಸ್ತುತ ಅಪ್ರಸ್ತುತ ಪ್ರಶಂಸೆಗಳಿಂದ...

ಅಡಿಗೆಯ ಮನೆಯಿಂದ ಉಮೆಯು ಓಡಿ ಬಂದು “ನೀರಿನ ಕೊಡದ ಬಳಿಗೆ ಒಂದು ಕಪ್ಪೆ ಕುಳಿತಿದೆ. ಹೊರಗೆ ಹಾಕಿ ಕೊಡಿ” ಅಂದಳು. ತನಗೆ ಹೆದರದವಳು ಒಂದು ಕಪ್ಪೆಗೆ ಅಂಜುತ್ತಾಳಲ್ಲ ಅಂದುಕೊಂಡು ಉಮೇಶ ಒಳಗೆ ಬಂದ. ಕಪ್ಪೆಯು ಭದ್ರಾಸನ ಹಾಕಿತ್ತು. ಉಮೇಶ ಒಂದು ಸೌದೆಯಿಂದ ಕೊಡವನ್ನು ಕುಟ್ಟಿ...

ಹೊಲದ ಬದುವಿನ ಮೇಲೆ ಸಿದ್ದವ್ವ ಕುಳಿತಿದ್ದಳು. ಬಿಳಿ ಜ್ವಾಳದ ತೆನೆಗಳ ಮೇಲೆ ಹಾಯ್ದ ಗಾಳಿ ಒಂದೇ ಸಮನೆ ಬೀಸುತ್ತಿತ್ತು. ಇದೇ ಹೊಲದಲ್ಲಿ ತಾನು ಬಾಲ್ಯವನ್ನೆಲ್ಲಾ ಕಳೆದದ್ದು ನೆನಪಾಗಿ ಎಂಬತ್ತೈದರ ಸಿದ್ದವ್ವಳಿಗೆ ಮೈಯಲ್ಲಿ ಹರೆಯ ಉಕ್ಕಿ ಬಂದಂಗೆ ಆಯ್ತು. ತನ್ನ ಸೊರಗಿ ತೆಳುವಾದ ಕೈ ಕಾಲು...