ಕರುಳು ಬಳ್ಳಿಯಲಿ
ಹರಿದು ಬಂದವನು
ರಕ್ತಗತನಾಗಿಹನು

ನರನಾಡಿಯಲಿ
ಸಂಚರಿಸಿ
ಉಸಿರು ಕೊಟ್ಟಿಹನು

ಆಶೆ ಬೆಂಕಿಯನಿಕ್ಕಿ
ಎಚ್ಚರವಾಗಿಹನು

ಈಗವನ ಕಣ್ಣಿಂದಲೆ
ನಾನವನ ನೋಡುವೆನು

ಹಣ್ಣಲ್ಲಿ ಬೇರೂರಿದಂತೆ
ನನ್ನಲ್ಲಿ ಅವನು.
*****