ಪಂಜಾಬಿಗೆ ಪ್ರೀತಿ

ಗಂಗ ತುಂಗ ಯಮುನಾ ಗೋದಾವರಿ
ನದಿಗಳೆಲ್ಲವನ್ನು ನಾನು ಪ್ರೀತಿಸುತ್ತೇನೆ
ಬಿಯಾಸ್ ನದಿಯೆ
ನಿನ್ನನ್ನು ಹೆಚ್ಚು ಪ್ರೀತಿಸುತ್ತೇನೆ

ನಾನು ಹಡೆದ ಧರ್‍ಮಗಳನ್ನೂ
ಸಾಕಿ ಸಲಹಿದ ದೇವರುಗಳನ್ನೂ
ಗೌರವಿಸಿದ್ದೇನೆ.
ಸಿಖ್ ಧರ್‍ಮವೇ ಗುರುಗ್ರಂಥ ಸಾಹೇಬನೇ
ನಿನಗೂ ತಲೆಬಾಗುತ್ತೇನೆ.

ಒಮ್ಮೆ ನಿನ್ನ ಕೈಯಲ್ಲಿ ಬಂದೂಕಿತ್ತು
ಎಂಬುದನ್ನು ಮರೆತುಬಿಡುತ್ತೇನೆ.
ನೀನು ಮೂಡಿಸಿದ ರಕ್ತದ ಕಲೆಗಳನ್ನು
ಯಾವತ್ತಿಗೂ ಅಳಿಸಿಹಾಕುತ್ತೇನೆ.

ಗಾಯಗೊಂಡ ಮರಿಹಕ್ಕಿಯೇ
ನನ್ನ ಬೆಚ್ಚನೆಯ ಗೂಡಿಗೆ
ನಿನ್ನನ್ನು ಮರಳಿ ಒಯ್ಯುತ್ತೇನೆ.

ಬಿಸಾಡಿ ಹೋದ ಮರಿಮೀನೇ
ತಣ್ಣನೆಯ ನದಿಗಳ ನಾಡಿಗೆ
ನಿನ್ನನ್ನು ಮರಳಿ ಒಯ್ಯುತ್ತೇನೆ.

ಸಿಡಿಲು-ಗುಡುಗಿನ ಆಕಾಶರಾಯನೆ
ಕೇಳು-
ಈ ತಾಯಿ ನಿನ್ನಲ್ಲಿ
ಮೊರೆಯಿಡುತ್ತಿದ್ದಾಳೆ….

ಹೇಳು-
ಮತ್ತೆ ಮಳೆ ಬರುವುದೇ?
ಸುಡುವ ಈ ನೆಲದೊಳಗೆ
ಹೊಳೆ ಹರಿವುದೆ?
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಶಬರಿ – ೨
Next post ಹೊಗಳಿಕೆ

ಸಣ್ಣ ಕತೆ

  • ಕಲ್ಪನಾ

    ಚಿತ್ರ: ಟಾಮ್ ಬಿ ಇದು ಇಪ್ಪತ್ತು ವರ್ಷಗಳ ಹಿಂದಿನ ಕಥೆ! ಮಾತನಾಡುವ ಸಿನಿಮಾ ಪ್ರಪಂಚ ಅದೇ ಆಗ ದಕ್ಷಿಣ ಭಾರತದಲ್ಲಿ ತಲೆಯೆತ್ತಿದ್ದಿತು! ಸಿನಿಮಾದಲ್ಲಿ ಪಾತ್ರವಹಿಸುವ ನಟಿನಟಿಯರನ್ನು ಅಚ್ಚರಿಯ… Read more…

  • ಕೂನನ ಮಗಳು ಕೆಂಚಿಯೂ….

    ಬೊಮ್ಮನಹಳ್ಳಿ ಸಂತೆಯಿಂದ ದಲ್ಲಾಳಿಗೆ ಸಂಚಾಗಾರ ಎಂದು ನೂರು ರೂಪಾಯಿ ಸೇರಿ ಒಂದು ಸಾವಿರದ ಒಂದುನೂರು ಕೊಟ್ಟು ತಂದ ’ಚೆನ್ನಿ’ಕರುಹಾಕಿ ಮೂರು ತಿಂಗಳಲ್ಲಿ ಕೊಟ್ಟಿಗೆಯೊಳಗೆ ಕಾಲು ಜಾರಿ ಬಿದ್ದದ್ದೆ… Read more…

  • ಅಪರೂಪದ ಬಾಂಧವ್ಯ

    ಹೆತ್ತ ತಾಯಿ ಬಿಟ್ಟುಹೋದ ಎರಡು ಮುಂಗಸಿ ಮರಿಗಳು ಅನಾಥವಾಗಿ ಚೀರಾಡುತ್ತಿದ್ದುದು, ಮನೆಯ ಮಕ್ಕಳ ಕಣ್ಣಿಗೆ ಬಿದ್ದಿತು. "ಅಪ್ಪಾ ಇಲ್ಲಿ ನೋಡು, ಮುಂಗುಸಿ ಮರಿ ಅಳುತ್ತಾ ಇವೆ. ಅದಕ್ಕೆ… Read more…

  • ನಿಂಗನ ನಂಬಿಗೆ

    ಹೊಸಳ್ಳಿ ನೋಡುವದಕ್ಕೆ ಸಣ್ಣದಾದರೂ ಕಣ್ಣಿಗೆ ಅಂದವಾಗಿದೆ. ಬೆಳವಲ ನಾಡಿನಲ್ಲಿ ಬರಿ ಬಯಲೆಂದು ಟೀಕೆ ಮಾಡುವವರಿಗೆ ಹೊಸಳ್ಳಿ ಕೂಗಿ ಹೇಳುತ್ತಿದೆ - ತಾನು ಮಲೆನಾಡ ಮಗಳೆಂದು ! ಊರ… Read more…

  • ಧರ್ಮಸಂಸ್ಥಾಪನಾರ್ಥಾಯ

    ಕಪಿಲಳ್ಳಿಯ ಏಕೈಕ ಸಂರಕ್ಷಕ ಕಪಿಲೇಶ್ವರನ ವಾರ್ಷಿಕ ರಥೋತ್ಸವದ ಮುನ್ನಾದಿನ ಧಾರ್ಮಿಕ ಪ್ರವಚನವೊಂದನ್ನು ಏರ್ಪಡಿಸಲೇಬೇಕೆಂದೂ, ಇಲ್ಲದಿದ್ದರೆ ಜಾತ್ರಾ ಮಹೋತ್ಸವಕ್ಕೆ ತನ್ನ ಸಪೋರ್ಟು ಮತ್ತು ಕೋ-ಆಪರೇಶನ್ನು ಬಿಲ್ಲು ಕುಲ್ಲು ಸಿಗಲಾರದೆಂದೂ,… Read more…

cheap jordans|wholesale air max|wholesale jordans|wholesale jewelry|wholesale jerseys