Home / ಕವನ / ಕವಿತೆ / ವಿಮರ್ಶೆ

ವಿಮರ್ಶೆ

ನೀನು ನಿಂತ ನೆಲವನ್ನು
ನಂದನವನವೆಂದೂ
ಕೂತ ಬಂಡೆಯನ್ನು
ಐರಾವತವೆಂದೂ
ನಡೆದಾಡಿದ ಭಂಗಿ
ನಟರಾಜನದೆಂದೂ
ಒಪ್ಪಿಕೊಳ್ಳಲು
ನನ್ನಿಂದ ಆಗೊಲ್ಲ.

ನೀನು ಮೋಜಿಗಾಗಿ
ನದಿಯನ್ನು ಈಜಿದ್ದನ್ನು
ಸಮುದ್ರ ದಾಟಿದಷ್ಟು
ಸೋಜಿಗದಿಂದ ನೋಡಲು
ನನ್ನಿಂದ ಆಗೊಲ್ಲ.

ನೀನು ಮೂಸಿದ್ದು
ಮಂದಾರವೆಂದೂ
ಪೂಸಿದ್ದು ಶ್ರೀಗಂಧವೆಂದೂ
ಸಾಬೀತು ಮಾಡಲು
ನನ್ನಿಂದ ಆಗೊಲ್ಲ.

ನೀನು ಗೆರೆ ಎಳೆದದ್ದೆ
ರಂಗೋಲೆಯೆಂದು
ಸುತ್ತಿದ ಸೊನ್ನೆಯೆ
ಸೂರ್ಯನೆಂದು ಸಂಭ್ರಮಿಸಲು
ನನ್ನಿಂದ ಆಗೊಲ್ಲ.

ನಿಜ ಹೇಳಬೇಕೆಂದರೆ
ನನಗೆ ಬೆಳಕಿನ ಬಗ್ಗೆ
ವ್ಯಾಮೋಹವಾಗಲಿ
ಕತ್ತಲೆಯ ಬಗ್ಗೆ ಕನಿಕರವಾಗಲಿ ಇಲ್ಲ.

ನನ್ನ ತೋಟದಲ್ಲಿ
ನೂರಾರು ಬಣ್ಣದ ಹೂಗಳಿವೆ.
ಮಾವಿನ ಮರದ
ಜೊತೆ ಜೊತೆಗೆ
ಬೇವಿನ ಮರಗಳೂ ಇವೆ.
ಹಾಗಲ ಹಾಗೂ ಸಿಹಿಗುಂಬಳ
ಒಂದೇ ಚಪ್ಪರವನ್ನು
ತಬ್ಬಿ ನಿಂತಿವೆ.

ಕೆಲವರನ್ನು ಬೆಟ್ಟ ಹತ್ತಿಸಿದ್ದರೆ
ಅನುರಾಗದಿಂದಲ್ಲ
ಹಲವರನ್ನು ಕಂದಕಕ್ಕೆ
ನೂಕಿದ್ದರೆ ಆಕಸ್ಮಿಕವೂ ಅಲ್ಲ!
*****

Tagged:

Leave a Reply

Your email address will not be published. Required fields are marked *

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಹೊರ ಕೋಣೆಯಲ್ಲಿ ಕಾಲೂರಿ ಕೂತು ಬೀಡಿ ಕಟ್ಟುತ್ತಿದ್ದ ಸುಮಯ್ಯಾಗೆ ಕಣ್ಣು ಮತ್ತು ಕಿವಿಯ ಸುತ್ತಲೇ ಆಗಾಗ ಗುಂಯ್.. ಎನ್ನುತ್ತಾ ನೊಣವೊಂದು ಸರಿಸುಮಾರು ಹದಿನೈದು ನಿಮಿಷಗಳಿಂದ ಹಾರಾಡುತ್ತಾ ಕಿರಿಕಿರಿ ಮಾಡುತ್ತಿತ್ತು. ಹಿಡಿದು ಹೊಸಕಿ ಹಾಕಬೇಕೆಂದರೆ ಕೈಗೆ ಸಿಗದೆ ಮೈ ಪರಚಿಕೊಳ್ಳಬೇಕೆನ್ನ...

ಮೂಲ: ಗಾಯ್ ಡಿ ಮೊಪಾಸಾ ಗಗನಚುಂಬಿತವಾದ ಬೀಚ್‌ ವೃಕ್ಷಗಳೊಳಗಿಂದ ತಪ್ಪಿಸಿಕೊಂಡು ಸೂರ್ಯ ಕಿರಣಗಳು ಹೊಲಗಳ ಮೇಲೆ ಬೆಳಕನ್ನು ಕೆಡುವುವುದು ಬಲು ಅಪರೂಪ. ಬೆಳೆದ ಹುಲ್ಲನ್ನು ಕೊಯ್ದುದರಿಂದಲೂ, ದನಗಳೂ ಕಚ್ಚಿ ಕಚ್ಚಿ ತಿಂದುದರಿಂದಲೂ ನೆಲವು ಅಲ್ಲಲ್ಲಿ ತಗ್ಗು ದಿನ್ನೆಯಾಗಿ ಒಡೆದು ಕಾಣುತ್ತಿ...