Home / ಕವನ / ಕವಿತೆ / ಹೊಳಲು

ಹೊಳಲು

ಚಂದಿರನು ನಡುಗಗನ ವೊಂದಿರಲು ಮೌಕ್ತಿಕದ
ಅಂದಣವದೆತ್ತಿರಲು ಅಂದವೆನೆ ಪರರೆಲ್ಲ
ಹಿಂದಣಾ ದಿನಕಿಂತ ಸಂಧಿಸಿದ ಈ ರಜನಿ
ಭಾರತದಿ ಬಂತು ಹೊಳಲು

ಚಂದಿರನು ತಂಬೆಳಕ ನಗುವಿಡಲು ಅಪಹಾಸ
ದಂದಣವನೆತ್ತಿರಲು ಲಗುಬಿಗಿಯ ಪರರಾಳು
ಮಂದಿಗಳು ತಿಳಿದೇಳಲಗೊ! ಯೋಗಿ ಕರೆಯುತಿರೆ
ಬಾರೆನುತ ಬಂತು ಹೊಳಲು

ಕೀಳಕೀಳಲಿ ಪುಟ್ಟಿ ಮೇಲೆ ಮೇಲೇರುತಲಿ
ಆಳುತಲಿ ಜನಮನವ ಶೂಲಕೊಡ್ಡುತ ಸುರಿಸಿ
ಬಾಳ ಜೀವನ ಜಲವನಾಲಿಯರಿಯದಲಳಿಯೆ
ಜನರಿಳಿದು ಬಂದ ಹೊಳಲು

ಕಾಳು ಕಡ್ಡಿಯ ತೂರಿ ಮೇಲೆ ಮೇಲರಿಸುತ
ನಾಳಿನಾ ನವಯುಗಕೆ ಮೇಲೆನಿಪ ಬೀಜಗಳ
ಹೂಳುವರು ಬರಲಾಗಿ ಕಾಲ ಬಂದಿದೆಯೆನುತ
ಜನಜನದ ನುಡಿಯ ಹೊಳಲು

ಇದು ವಹ್ನಿಗಿರಿ ಇದುವೆ ಮಳೆವಹ್ನಿ ಹೊಳೆವಹ್ನಿ!
ಇದುವುಕ್ಕಿ ಧರೆಯೆಲ್ಲ ತಳಮಳಿಸಿ ನಡುಗುತಿದೆ
ಅದೊ! ಸೊಕ್ಕಿದಾಭಾವ! ತಳಹದಿಯು ಕುಸಿಬಿತ್ತು!
ಮರಳುತಿಹ ಯುಗದ ಹೊಳಲು

ಇದು ಸಿಡಿಲು ಕಾರ್ಮೋಡ ಪ್ರಳಯ ಜಲಧಾರೆಯಿವು
ಇದು ಝರಿಯ ಜಲಧಾರೆ ಇಳೆಗಿಳಿವ ದೇವನದಿ!
ಅದೋ! ವಹ್ನಿ ಕಬ್ಬೊಗೆಯು ಅಳಿದನಿವು ಸಿಡಿದವವು
ಚರಕದರೆ ತಿರುಗೆ! ಹೊಳಲು

ವಿಷಘಳಿಗೆ ಪರಜನಕೆ ಮಧುಯೋಗ ಭಾರತಕೆ
ಹಸಿದು ಶಂಕರಿ ನಿಲ್ಲಲದು ಪ್ರಲಯ ಪರಜನಕೆ
ಬಸಿಯಲೆಂಧಕ ರುಧಿರವದುನೆಲಕೆ ಶ್ರೀ ಶಾಂತಿ
ಎನುತೆನುವ ನರರ ಹೊಳಲು

ಹಸುಳೆಯಂದದಿ ನಕ್ಕು ಮಧುರ ಭಾವವ ಬೀರಿ
ಹೊಸತೆರನ ಜಿಹ್ವೆಯಲಿ ಸುಧೆಯ ಜಾಹ್ನವಿಯುದಿಸೆ
ಹೊಸಯುಗದ ಗಂಧವಹನಿದೊ ಗಾಂಧಿ ಏಳುತಿಹ
ಎನುತೆನುವ ನಾಡ! ಹೊಳಲು

ಅಲ್ಲೋಲ ಕಲ್ಲೋಲ ಉದಧಿಗಳು ಎಚ್ಚೆತ್ತು!
ಎಲ್ಲೆಲ್ಲು ಸಲ್ಲಾಪ ಕುದಿವ ಮನದಾಶಯದ
ಹೊಲ್ಲೆ ಹದ ಸುಳಿವಿರದ! ಮಧುಯುಗವು ಮರಳುತಿರೆ
ಉಲ್ಲಾಸದೊರೆಯ ಹೊಳಲು
*****

Tagged:

Leave a Reply

Your email address will not be published. Required fields are marked *

ಅವಳು ಯಾವ ಹುಡುಗರ ಜೊತ ನಿಂತು ಮಾತನಾಡಿದರೂ ಶ್ರೀಕಾಂತನಪಾಲಿಗೆ ಆ ಹುಡುಗರು ವಿಲನ್‌ಗಳಂತೆಯೇ ಭಾಸವಾಗುತ್ತಿದ್ದರು. ಅವಳು ತನ್ನ ಕಾಲೇಜಿನ ಲೆಕ್ಚರರ್‌ಗಳು ಪಾಠ ಮಾಡುವ ವೈಖರಿ ಸ್ಟೈಲು ಹೈಲುಗಳ ಕುರಿತು ಬಣ್ಣಿಸುವಾಗಲೂ ಕೇಳಲಾಗದೆ ಶ್ರೀಯ ಹೊಟ್ಟೆಯಲೆಲ್ಲಾ ತಳಮಳ. ಅಷ್ಟೇಕೆ ಅವಳು ತನ್ನ ತ...

ಬೆಳಿಗ್ಗೆ ಏಳರ ಸಮಯ ಮೈಸೂರಿನ ರೋಹಿಣಿ ಲಾಡ್ಜ್‌ನ ಕೊಠಡಿ ಸಂಖ್ಯೆ ೧೦೩. ಪೋಲೀಸರು, ಪತ್ರಕರ್ತರು, ಫೊಟೋ ಗ್ರಾಫರ್‌ಗಳಿಂದ ತುಂಬಿಹೋಗಿದೆ. ಬೆಳ್ಳಂ ಬೆಳಿಗ್ಗೆಯೇ ಯುವತಿಯೊಬ್ಬಳ ಕೊಲೆ ನಡೆದುಹೋಗಿದೆ. ಲಾಡ್ಜ್‌ನ ಹೊರಗೆ ಜನರು ಕುತೂಹಲಭರಿತರಾಗಿ ಸೇರಿದ್ದಾರೆ. ಸೇರಿದ್ದ ಜನರನ್ನು ನಿಯಂತ್ರ...

೧ ಗೌರಿಯ ಹಬ್ಬವು ಕಳೆದು ಕೆಲವು ದಿನಗಳಾಗಿದ್ದುವು. ಭಾಗೀರಥಮ್ಮನೂ ಅವಳ ಜೊತೆಯ ಹುಡುಗಿಯರೂ ಒಂದೊಂದು ದಿನವನ್ನು ಕಳೆಯುವುದೂ ಒಂದೊಂದು ಯುಗವನ್ನು ಕಳೆದಂತೆ ಕಷ್ಟವಾಗಿದ್ದಿತು. ಅವರು ಎಷ್ಟು ಕುತೂಹಲದಿಂದ ಬಯಸಿದರೂ ದಿನಗಳು ಬೇಗ ಬೇಗ ಉರುಳಲೊಲ್ಲವು. ಒಂದು ದಿನ ಅವರೆಲ್ಲರೂ ಸೇರಿ ಕವಡೆಯ...

ಸಂಜೆ ನಾಲ್ಕು ಗಂಟೆಯಾದರೆ ಸಾಕು. ಅವರೆಲ್ಲರೂ ಒಬ್ಬೊಬ್ಬರಾಗಿ ಬಂದು ಸೇರುತ್ತಾರೆ. ಅದೊಂದು ಪಂಚಾಯಿತಿ ಕಟ್ಟೆ ಇದ್ದಂತೆ. ಮಧ್ಯದಲ್ಲೊಂದು ಸಿಮೆಂಟ್ ಬೆಂಚು, ಅದರ ಎಡ, ಬಲ ಎರಡೂ ಕಡೆ ಇವರೇ ಒಂದಷ್ಟು ಕಲ್ಲು ಚಪ್ಪಡಿಗಳನ್ನು ಎಳೆದು ತಂದು ಕೊಡುವುದಕ್ಕೆ ಪೀಠಗಳನ್ನು ಮಾಡಿಕೊಂಡಿದ್ದಾರೆ. ಸ...

ತಿಮ್ಮಣ್ಣ ನಮ್ಮೂರಿನ ಪಕ್ಕದ ಹಳ್ಳಿಯಲ್ಲಿನ ಅಡುಗೆ ಭಟ್ಟ ತಿಪ್ಪಾಭಟ್ಟರ ಮಗ. ತಿಪ್ಪಾಭಟ್ಟರಿಗೆ ಮದುವೆಯಾಗಿ ಹತ್ತು ವರ್ಷ ಕಳೆದರೂ ಮಕ್ಕಳಾಗಿರಲಿಲ್ಲ. ಕೊನೆಗೆ ಪಕ್ಕದ ಮನೆಯ ಕಮಲಾಕ್ಷಮ್ಮನ ಸಲಹೆ ಮೇರೆಗೆ ಮಗುವಾದರೆ ತಿರುಪತಿಗೆ ಹೋಗಿ ಬರುವ ಹರಕೆ ಹೊತ್ತರು. ತಿಮ್ಮಪ್ಪನ ಕೃಪಾಕಟಾಕ್ಷವೋ ...

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...