ಪಂಜದಮ್ಯಾಲ ನಿನ್ನ ಮನಸು

ಪಂಜದಮ್ಯಾಲ ನಿನ್ನ ಮನಸು ಕಾಲ-
ಕಂಜದೆ ಅದರೊಳು ಕಂಡಂಥ ಕನಸು || ಪ ||

ಅಂಜದಿರು ಅಲಾವಿ ಹಬ್ಬದಿ
ರಂಜಿಸುವ ರಾಜಿಸುವ ಮೋರುಮ
ಪಂಜದೊಳು ಪರಿತೆದ್ದು ಆಡುವ
ಭಜನವು ಬಹುತೆರದಿ ಪೂಜಿಸು || ಆ. ಪ. ||

ಜಲದೊಳು ಉರಿಯ ಬಿಸಿಲಣ್ಣ ಮಹಾ-
ಕಲಹ ಕರ್ಬಲದೊಳು ಕಲಹದಿರಣ್ಣ
ನೆಲದ ಹುಬಿದ ಬಲುಮಿ ಕುಣಿಯೊಳು
ಚೆಲುವ ಹಣ್ಗಳ ಹಾಕಿ ಮುಚ್ಚುತ
ದಳದ ಗೋದಾಳಿಂಬ್ರ ಊರುದು
ತಿಳಿದುಕೊ ತಾಬೂತಿನೊಳು ಘನ || ೧ ||

ಡೋಲಿಯೆಂಬುವದಿದು ಖಾಲಿ ಭೂ-
ಮಾಲಿ ಹಾಕಿ ಜನ ಜಗಕ ವಿಶಾಲಿ
ಬಾಲಕರು ಅಲಿ ಸಂತನೆಲೆಯನು
ಹೇಳಲಿರದೆ ದಣಿದು ಇಳೆಯೊಳು
ಮಾವು ಶಿಶುನಾಳೇಶನಾಲಯ-
ದೊಳು ಶಹದತ್ತ ಕತ್ತಲದಿ || ೨ ||
*****

 

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಬದುಕು ಬೇಡ ಅನ್ನಿಸಲಿಲ್ಲ
Next post ಪುಣ್ಯಕೋಟಿಗೆ

ಸಣ್ಣ ಕತೆ

  • ವಾಮನ ಮಾಸ್ತರರ ಏಳು ಬೀಳು

    "ಏಳು!" ಅಂದರು ವಾಮನ ಮಾಸ್ತರರು. ರಾಜಪ್ಪ ಏಳಲಿಲ್ಲ. ಎಂದಿನಂತೆ ಕಿಟಿಕಿಯ ಹೊರಗೆ ಹೆದ್ದಾರಿಯಲ್ಲಿ ಹೋಗುತ್ತಿದ್ದ ವಾಹನಗಳನ್ನೂ ದಾರಿಹೋಕರನ್ನೂ ನೋಡುತ್ತ, ಡೆಸ್ಕಿನ ಮೇಲೆ ಬಲಗೈಯ ಸೊಂಟು ಊರಿ, ಕೈಯಮೇಲೆ… Read more…

  • ಅವರು ನಮ್ಮವರಲ್ಲ

    ಪೇದೆ ಪ್ರಭಾಕರ ಫೈಲುಗಳನ್ನು ನನ್ನ ಟೇಬಲ್ ಮೇಲೆ ಇಟ್ಟು, ‘ಸರ್ ಸಾಹೇಬರು ನಿಮ್ಮನ್ನು ಕರೆಯುತ್ತಿದ್ದಾರೆ’ ಎಂದು ಹೇಳಿ ಮಾಮೂಲಿನಂತೆ ಹೊರಟು ಹೋದ. ಸಮಯ ನೋಡಿದೆ. ೧೦:೩೦ ಗಂಟೆ.… Read more…

  • ಆನುಗೋಲು

    ರೈಲು ನಿಲ್ದಾಣದಲ್ಲಿ ನಿಂತಿತು! "ಪೇಪರ! ಡೇಲಿ ಪೇಪರ!........ಟಾಯಿಮ್ಸ, ಫ್ರೀ ಪ್ರೆಸ್, ಸಕಾಳ! ಪ್ಲಾಟ ಫಾರ್ಮ ಮೇಲಿನ ಜನರ ನೂರೆಂಟು ಗದ್ದಲದಲ್ಲಿ ಈ ಧ್ವನಿಯು ಎದ್ದು ಕೇಳಿಸುತ್ತಿತ್ತು. ಹೋಗುವವರ… Read more…

  • ದೊಡ್ಡವರು

    ಬೀದಿ ಬದಿಯ ಪುಸ್ತಕದ ಅಂಗಡಿ ಪ್ರಭಾಕರನನ್ನು ಅರಿಯದವರು ಬಹಳ ವಿರಳ. ತಳ್ಳೋ ಗಾಡಿಯ ಮೇಲೆ ದೊಡ್ಡ ಟ್ರಂಕನ್ನಿಟ್ಟು ನಿಧಾನವಾಗಿ ತಳ್ಳಿಕೊಂಡು ಬರುವ ಪ್ರಭಾಕರ ಕೆನರಾ ಬ್ಯಾಂಕಿನ ರಸ್ತೆಬದಿ… Read more…

  • ಸ್ವಯಂಪ್ರಕಾಶ

    ಇಸ್ತ್ರೀ ಇಲ್ಲದ ಸೀರೆ, ಬಾಚದ ತಲೆ... ಕೈಯಲ್ಲಿ ಚೀಲದ ತುಂಬ ತರ್ಕಾರಿಗಳೊಂದಿಗೆ ಮಾರುಕಟ್ಟೆಯಿಂದ ಹೊರಗೆ ಬರುವುದು ಭ್ರಮರೆ’ಯೇ... ಕಂಡು ತುಂಬಾ ಆಶ್ಚರ್ಯವಾಯಿತು. ರೋಡಿನ ಈ ಕಡೆ ಕಾರು… Read more…

cheap jordans|wholesale air max|wholesale jordans|wholesale jewelry|wholesale jerseys