ಪುಣ್ಯಕೋಟಿಗೆ

ಮುಂದೆ ಬಂದರೆ ಹಾಯಬೇಡ
ಹಿಂದೆ ಬಂದರೆ ಒದೆಯಬೇಡ
ಎಂದು ಕಂಡ ಕಂಡವರಿಗೆಲ್ಲ ಕೈ ಮುಗಿದು
ಕಂಬನಿಯ ಕೆಚ್ಚಲು ಕರೆಯಬೇಡ
ಹುಟ್ಟಿಸಿದ ದೇವರು ಹುಲ್ಲನ್ನ ಮೇಯಿಸುವ
ನನ್ನ ಭವಿಷ್ಯವ ನೀನೇ ಬರೆಯಬೇಡ

ಹೋಗು ನಿನಗಾಗಿ
ಹಾತೊರೆದ ಹುಲಿಯ ಎದುರೇ ನಿಲ್ಲು
ಒಡ್ಡು ಗುಂಡಿಗೆಯ ರಕ್ತ ಬಿಸಿ
ನನ್ನ ಮಗು ತರಳ ಇನ್ನೂ ಹಸಿ
ಕೊಡು ಅವನಿಗೂ ಸಾವು
ಕೂಡಿ ಬರುವೆವು ನಾವು
ನಿನ್ನ ಜೀವಾರಣ್ಯ ರೋದನದ
ಹಂಬಲ ಕಟ್ಟಿದ ಕೊಟ್ಟಿಗೆಯಲ್ಲಿ
ಉಳಿಯಗೊಡು ನನ್ನ
ಕರುವಿನ ಕಿರಿದೊಗಲು ನೆಕ್ಕಿ ಇಗೋ
ಉಣಿಸುತ್ತೇನೆ ಶ್ವಾಸ-ನಾನೇ ಸತ್ತರೂ
ನನ್ನನ್ನೇ ನಿನಗೇ ಇತ್ತರೂ

ಸಾವು ನಿನ್ನನ್ನು ಕರೆಯುವ ಹೊತ್ತು,
ಈ ರೀತಿ ನನ್ನನ್ನೂ ಹೊತ್ತು
ನಡೆ ಕೂಡಿ ಬದುಕೋಣ ಸಾವಿನಲ್ಲೂ
ಮತ್ತು ಹಾಗೆ ಇಲ್ಲೂ

ಹೆಬ್ಬುಲಿಯ ಬಾಯಲ್ಲಿ
ಬಾಯಾರಿ ನಡೆವಾಗ
ನಿನ್ನ ಕರುವಿನ ಕರುಳು ಕೀಳಬೇಡ
ಹೀಗೆ ಮುಂದೂ ಹಾದು
ಹಿಂದಿಂದಲೂ ಒದೆದು
ನನ್ನ ತಬ್ಬಲಿ ‘ಮಾಡಿ’ ಹೋಗಬೇಡ
*****

 

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಪಂಜದಮ್ಯಾಲ ನಿನ್ನ ಮನಸು
Next post ಕನಸು

ಸಣ್ಣ ಕತೆ

  • ಕೊಳಲು ಉಳಿದಿದೆ

    ಮಾತಿನ ತೆರೆ ಒಂದು "ನೋಡಿ, ಜನರು ನನ್ನನ್ನು ನೋಡಿ ನಗುತ್ತಾರೆ! ಈ ಬಂಗಾರದ ಕೃಷ್ಣನ ಮೂರ್ತಿ ಇವಳ ಕೈಯಲ್ಲಿ ಯಾವಾಗಲೂ ಏಕೆ ಎಂದು ಕೇಳುತ್ತಾರೆ! ನನ್ನ ಹತ್ತರ… Read more…

  • ಪ್ರಥಮ ದರ್ಶನದ ಪ್ರೇಮ

    ಭಾಗೀರಥಿ ತೀರದಲ್ಲಿರುವದೊಂದು ಅತಿ ರಮಣೀಯವಾಗಿರುವ ಪ್ರದೇಶದಲ್ಲಿ ಕುಸುಮಪುರವೆಂಬ ಚಿಕ್ಕಿದಾದ ನಗರವಿತ್ತು. ಭೂಮಿಯ ಗುಣಕ್ಕಾಗಿ ಆ ಪ್ರದೇಶದಲ್ಲಿ ಬೆಳೆಯುವ ಬಕುಲ, ಚಂಪಕ, ಮಾಲತಿ, ಪುನ್ನಾಗ, ಗುಲಾಬೆ, ಸೇವಂತಿ ಮುಂತಾದ… Read more…

  • ಅಜ್ಜಿಯ ಪ್ರೇಮ

    ಎರಡನೆಯ ಹೆರಿಗೆಯಲ್ಲಿ ಅಸು ನೀಗಿದ ಮಗಳು ಕಮಲಳನ್ನು ಕಳಕೊಂಡ ತೊಂಬತ್ತು ವರ್ಷದ ಜಯಮ್ಮನಿಗೆ ಸಹಿಸಲಾಗದ ಸಂಕಟವಾಗಿತ್ತು. ಹೆಣ್ಣು ಮಗುವಿಗೆ ಜನ್ಮವಿತ್ತು ತನ್ನ ಇಹದ ಯಾತ್ರೆಯನ್ನು ಮುಗಿಸಿ ಹೋದ… Read more…

  • ಬ್ರಿಟನ್ ದಂಪತಿಗಳ ಪ್ರೇಮ ದಾಖಲೆ

    ಫ್ರಾಂಕ್ ಆಗ ಇನ್ನು ಹದಿನಾಲ್ಕು ವರ್ಷದ ಹುಡುಗ ತೆಳ್ಳಗೆ ಬೆಳ್ಳಗೆ ಇದ್ದು, ಕರಿಯ ಬಣ್ಣದ ದಟ್ಟ ಕೂದಲಿನ ಬ್ರಿಟಿಷ್ ಬಾಲಕ. ಹೈಸ್ಕೂಲಿನಲ್ಲಿ ಓದುತ್ತಿದ್ದ ಫ್ರಾಂಕ್‌ಗೆ ಕಾಲ್ಚೆಂಡು ಆಟ… Read more…

  • ಕರಿಗಾಲಿನ ಗಿರಿರಾಯರು

    ಪ್ರಜಾಪೀಡಕನಾದ ಮೈಸೂರಿನ ಟೀಪೂ ಸುಲ್ತಾನನನ್ನು ಶ್ರೀರಂಗ ಪಟ್ಟಣದ ಯುದ್ಧದಲ್ಲಿ ಕೊಂದು ಅವನ ರಾಜ್ಯವನ್ನು ಇಂಗ್ಲಿಶ್ ಸರಕಾರ ದವರು ತಮ್ಮ ವಶಕ್ಕೆ ತೆಗೆದುಕೊಂಡ ಕಾಲಕ್ಕೆ, ಉತ್ತರಕರ್ನಾಟಕದ ನಿವಾಸಿಗಳಾದ ಅನೇಕ… Read more…

cheap jordans|wholesale air max|wholesale jordans|wholesale jewelry|wholesale jerseys