ಹಾಯ್ಕೆಗಳು

೧. ಒಣಧೂಳಿನ ಕವಲುದಾರಿಯಲ್ಲಿ
ನಿಂತಿದ್ದೆ ತಿಳಿಯದೇ ಸುತ್ತಿ ಎದ್ದು ಬಿದ್ದು
ಸಂಕಟದ ಸುಳಿಯಲಿ ತಬ್ಬಿಬ್ಬು ಅವನು
ಎಂದು ಬಂದನೋ ಬಾರನೋ ಒಂದೂ ತಿಳಿಯದೆ.

೨. ಒಂದು ದಾರಿಯಲಿ ನಡೆದ ಅಕ್ಕನಂತೆ
ಮನ್ನಿಸು ಪ್ರಭುವೇ ಕಾಲುದಾರಿ ಕಾಡುದಾರಿ ಆಗಿ
ಗುಡ್ಡ ಬೆಟ್ಟ ಕಣಿವೆ ಝರಿ ಇಲ್ಲದೇ ಕಳೆದು
ಹೋಗಿವೆ ಕನಸುಗಳೆಲ್ಲವೂ ಎಂದೂ ಸಿಗದಂತೆ.

೩. ಅಲ್ಲಿ ಇಲ್ಲಿ ಎಲ್ಲೆಲ್ಲೂ ಹುಡುಕಿ ಹಳವಂಡ
ರುಚ‌ಇಲ್ಲ ಸಿಹಿ‌ಇಲ್ಲ ಬರೀ ಚಪ್ಪೇ ಸೀಬೆ
ಹಸಿರು ಕೋಗಿಲೆ ಗಿಳಿ ಇಲ್ಲದ ಬಯಲುದಾರಿ
ಹರಡಿದೆ ಉರಿಬಿಸಿಲು ಬೆಳದಿಂಗಳೆಂದೂ ಕಾಣದಂತೆ.

೪. ಮಳೆ ಚಳಿ ಹನಿ ಇಬ್ಬನಿ ಇಲ್ಲದೇ ಗದ್ದೇ
ಹೊಲದ ಹುಡಿ ಮಣ್ಣಿನ ಕಡುವಾಸನೆಗೆ
ಎದೆತೆರೆದು ಅಲೆಯುತ್ತಿದ್ದೇನೆ ಜೋಗತಿಯಾಗಿ
ಮಾತುಗಳು ಗದ್ದಲ ಎಬ್ಬಿಸಿವೆ ಮೌನ ಧ್ಯಾನದಲಿ ಕಂತಿದೆ.

೫. ದುಃಖ ಮಾನ ಸಾವು ನೋವುಗಳ
ಹೆರಿಗೆ ಮನೆ ಹಾಲು ವಾಸನೆಗೆ ಒಡೆದಮನ
ಕೊನೆಗೂ ಅರ್ಥವಾಗಲಿಲ್ಲ ಪಟ್ಟು ಬಿಡದ ಬದುಕು
ಚಿಗುರು, ಕಾಳು ಮೊಳಕೆಯ ಮೂಕ ಮರ್ಮರವ.

೬. ರೋಗದಲಿ ಮಾಗಿದ ದೇಹ ತುಂಡು ಬಟ್ಟೆ
ಬಯಲು ದಾರಿಯ ಹಾಲು ಬೆಳಕು ಕಡಲು
ಎದೆಯ ಹಾಡು ಇಳಿದಿಳಿದು ಜೀವಜಲ
ನದಿ ಹರಿದು ಬಯಲು ಪೊರೆದ ಹರವಿನ ದಾಂಪತ್ಯ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ರಾತ್ರಿ
Next post ಚುಂಬನ

ಸಣ್ಣ ಕತೆ

  • ಕಂಬದಹಳ್ಳಿಗೆ ಭೇಟಿ

    ಪ್ರಕರಣ ೪ ಮಾರನೆಯ ದಿನ ಪ್ರಾತಃಕಾಲ ಆರು ಗಂಟೆಗೆಲ್ಲ ರಂಗಣ್ಣನು ಸ್ನಾನಾದಿ ನಿತ್ಯ ಕರ್ಮಗಳನ್ನು ಮುಗಿಸಿಕೊಂಡು ಉಡುಪುಗಳನ್ನು ಧರಿಸುವುದಕ್ಕೆ ತೊಡಗಿದನು, ಬೈಸ್ಕಲ್ ಮೇಲೆ ಪ್ರಯಾಣ ಮಾಡಬೇಕಾದ್ದರಿಂದ ಸರ್ಜ್‍ಸೂಟು… Read more…

  • ಹೃದಯದ ತೀರ್ಪು

    ಬೆಳಿಗ್ಗೆ ಏಳು ಗಂಟೆಯ ಹೊತ್ತಿಗೆ ತಿಂಡಿ ಕೂಡ ಮಾಡದೆ ಹೊರ ಹೋಗುತ್ತಿದ್ದ ಯೂಸುಫ್, ಮಧ್ಯಾಹ್ನ ಮಾತ್ರ ಮನೆಯಲ್ಲಿ ಉಣ್ಣುತ್ತಿದ್ದ. ರಾತ್ರಿಯ ಊಟ ಅವನ ತಾಯಿಯ ಮನೆಯಲ್ಲಿ. ತಾಯಿಯ… Read more…

  • ವ್ಯವಸ್ಥೆ

    ಮಗಳ ಮದುವೆ ಪಿಕ್ಸ್ ಆಗಿದ್ದರಿಂದ ದೊಡ್ಡ ತಲೆ ಭಾರ ಇಳಿದಂತಾಗಿತ್ತು. ಮದುವೆ ಮುಂದಿನ ತಿಂಗಳ ಕೊನೆಯ ವಾರವೆಂದು ದಿನಾಂಕವನ್ನೂ ನಿಗದಿಪಡಿಸಲಾಗಿತ್ತು. ಗಂಡಿನವರ ತರಾತುರಿಗೆ ಒಪ್ಪಲೇಬೇಕಾದ ಪರಿಸ್ಥಿತಿ ನನ್ನದು.… Read more…

  • ಮಂಜುಳ ಗಾನ

    ಶ್ರೀ ಸರಸ್ವತಿ ಕಾಲೇಜಿನ ಪಾಠಪ್ರವಚನಗಳ ಬಗ್ಗೆ ಎರಡನೆ ಮಾತಿಲ್ಲ. ಅತ್ಯಂತ ಉತ್ತಮ ಗುಣಮಟ್ಟದ ಶಿಕ್ಷಣ ವಿದ್ಯಾರ್ಥಿಗಳಿಗೆ ದೊರಕುತ್ತಿತ್ತು. ಆದರೆ ಈ ಕಾಲೇಜಿನ ವಿಶೇಷವೆಂದರೆ ವಿದ್ಯಾರ್ಥಿಗಳ ಮತ್ತು ಉಪನ್ಯಾಸಕರ… Read more…

  • ದೊಡ್ಡ ಬೋರೇಗೌಡರು

    ಪ್ರಕರಣ ೭ ಪ್ರಾಥಮಿಕ ಮತ್ತು ಮಾಧ್ಯಮಿಕ ವಿದ್ಯಾಭ್ಯಾಸಗಳ ಸಮಸ್ಯೆ ಬಹಳ ದೊಡ್ಡದೆಂದು ರಂಗಣ್ಣನಿಗೆ ತಿಳಿದುಬಂತು. ಮೇಲಿನವರು ಬರಿಯ ವರದಿಗಳನ್ನು ತಯಾರು ಮಾಡುವುದರಲ್ಲಿಯೂ ಹೊರಗಿನ ಪ್ರಾಂತದವರಿಗೆ - ಅದರಲ್ಲಿಯೂ… Read more…