ಹಾಯ್ಕೆಗಳು

೧. ಒಣಧೂಳಿನ ಕವಲುದಾರಿಯಲ್ಲಿ
ನಿಂತಿದ್ದೆ ತಿಳಿಯದೇ ಸುತ್ತಿ ಎದ್ದು ಬಿದ್ದು
ಸಂಕಟದ ಸುಳಿಯಲಿ ತಬ್ಬಿಬ್ಬು ಅವನು
ಎಂದು ಬಂದನೋ ಬಾರನೋ ಒಂದೂ ತಿಳಿಯದೆ.

೨. ಒಂದು ದಾರಿಯಲಿ ನಡೆದ ಅಕ್ಕನಂತೆ
ಮನ್ನಿಸು ಪ್ರಭುವೇ ಕಾಲುದಾರಿ ಕಾಡುದಾರಿ ಆಗಿ
ಗುಡ್ಡ ಬೆಟ್ಟ ಕಣಿವೆ ಝರಿ ಇಲ್ಲದೇ ಕಳೆದು
ಹೋಗಿವೆ ಕನಸುಗಳೆಲ್ಲವೂ ಎಂದೂ ಸಿಗದಂತೆ.

೩. ಅಲ್ಲಿ ಇಲ್ಲಿ ಎಲ್ಲೆಲ್ಲೂ ಹುಡುಕಿ ಹಳವಂಡ
ರುಚ‌ಇಲ್ಲ ಸಿಹಿ‌ಇಲ್ಲ ಬರೀ ಚಪ್ಪೇ ಸೀಬೆ
ಹಸಿರು ಕೋಗಿಲೆ ಗಿಳಿ ಇಲ್ಲದ ಬಯಲುದಾರಿ
ಹರಡಿದೆ ಉರಿಬಿಸಿಲು ಬೆಳದಿಂಗಳೆಂದೂ ಕಾಣದಂತೆ.

೪. ಮಳೆ ಚಳಿ ಹನಿ ಇಬ್ಬನಿ ಇಲ್ಲದೇ ಗದ್ದೇ
ಹೊಲದ ಹುಡಿ ಮಣ್ಣಿನ ಕಡುವಾಸನೆಗೆ
ಎದೆತೆರೆದು ಅಲೆಯುತ್ತಿದ್ದೇನೆ ಜೋಗತಿಯಾಗಿ
ಮಾತುಗಳು ಗದ್ದಲ ಎಬ್ಬಿಸಿವೆ ಮೌನ ಧ್ಯಾನದಲಿ ಕಂತಿದೆ.

೫. ದುಃಖ ಮಾನ ಸಾವು ನೋವುಗಳ
ಹೆರಿಗೆ ಮನೆ ಹಾಲು ವಾಸನೆಗೆ ಒಡೆದಮನ
ಕೊನೆಗೂ ಅರ್ಥವಾಗಲಿಲ್ಲ ಪಟ್ಟು ಬಿಡದ ಬದುಕು
ಚಿಗುರು, ಕಾಳು ಮೊಳಕೆಯ ಮೂಕ ಮರ್ಮರವ.

೬. ರೋಗದಲಿ ಮಾಗಿದ ದೇಹ ತುಂಡು ಬಟ್ಟೆ
ಬಯಲು ದಾರಿಯ ಹಾಲು ಬೆಳಕು ಕಡಲು
ಎದೆಯ ಹಾಡು ಇಳಿದಿಳಿದು ಜೀವಜಲ
ನದಿ ಹರಿದು ಬಯಲು ಪೊರೆದ ಹರವಿನ ದಾಂಪತ್ಯ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ರಾತ್ರಿ
Next post ಚುಂಬನ

ಸಣ್ಣ ಕತೆ

  • ಸಾವಿಗೊಂದು ಸ್ಮಾರಕ

    ಶಾಲೆಯ ಮಾಸ್ತರ್ ಆಗಿ ಗಜರಾಜ ಸಿಂಗ್ ಅವರು ಪ್ರೈಮರಿ ಶಾಲೆಯ ಮಕ್ಕಳಿಗೆ ಹೇಳಿಕೊಡುತ್ತಿದ್ದ ಮೊದಲ ಪಾಠವೆಂದರೆ "ತಂದೆ ತಾಯಿಯನ್ನು ಗೌರವಿಸಿ, ಅವರೇ ನಿಮ್ಮ ಪಾಲಿನ ದೈವ" ಎಂದು.… Read more…

  • ಕಲ್ಪನಾ

    ಚಿತ್ರ: ಟಾಮ್ ಬಿ ಇದು ಇಪ್ಪತ್ತು ವರ್ಷಗಳ ಹಿಂದಿನ ಕಥೆ! ಮಾತನಾಡುವ ಸಿನಿಮಾ ಪ್ರಪಂಚ ಅದೇ ಆಗ ದಕ್ಷಿಣ ಭಾರತದಲ್ಲಿ ತಲೆಯೆತ್ತಿದ್ದಿತು! ಸಿನಿಮಾದಲ್ಲಿ ಪಾತ್ರವಹಿಸುವ ನಟಿನಟಿಯರನ್ನು ಅಚ್ಚರಿಯ… Read more…

  • ವಲಯ

    ಅವಳ ಕೈ ಬೆರಳುಗಳು ನನ್ನ ಮುಖದ ಮೇಲೆ ಲಯಬದ್ಧವಾಗಿ ಚಲಿಸುತ್ತಿವೆ. ಕಂಗಳ ಮೇಲೆ ಅದೊಂದು ತರಹ ಮಂಪರು ಮೆತ್ತ-ಮೆತ್ತಗೆ ಹಾರಾಡತೊಡಗುತ್ತಿದೆ! ನಾಳೆ ಹೋಗಬೇಕಾದ ‘ಪಾರ್ಟಿ’ ಗೆ ಈಗಾಗಲೇ… Read more…

  • ಎರಡು ಮದುವೆಗಳು

    ಮುಂಗಾರು ಮಳೆಗಳು ಸರಿಯಾಗಿ ಬಾರದೇ ಭುವನೇಶ್ವರದ ಹಳ್ಳಿಯ ಜನರಲ್ಲಿ ಒಂದು ರೀತಿಯ ಕಳವಳವಾಗಿತ್ತು. ಮಳೆ ಬಂದರೆ ಬೆಳೆ, ಬೆಳೆ ಆದರೆ ಬಾಳು ಎಂದು ಬದುಕುತ್ತಿದ್ದ ಅವರಿಗೆ ಏನು… Read more…

  • ಅವರು ನಮ್ಮವರಲ್ಲ

    ಪೇದೆ ಪ್ರಭಾಕರ ಫೈಲುಗಳನ್ನು ನನ್ನ ಟೇಬಲ್ ಮೇಲೆ ಇಟ್ಟು, ‘ಸರ್ ಸಾಹೇಬರು ನಿಮ್ಮನ್ನು ಕರೆಯುತ್ತಿದ್ದಾರೆ’ ಎಂದು ಹೇಳಿ ಮಾಮೂಲಿನಂತೆ ಹೊರಟು ಹೋದ. ಸಮಯ ನೋಡಿದೆ. ೧೦:೩೦ ಗಂಟೆ.… Read more…