Home / ಕವನ / ಹಾಯ್ಕು / ಹಾಯ್ಕೆಗಳು

ಹಾಯ್ಕೆಗಳು

೧. ಒಣಧೂಳಿನ ಕವಲುದಾರಿಯಲ್ಲಿ
ನಿಂತಿದ್ದೆ ತಿಳಿಯದೇ ಸುತ್ತಿ ಎದ್ದು ಬಿದ್ದು
ಸಂಕಟದ ಸುಳಿಯಲಿ ತಬ್ಬಿಬ್ಬು ಅವನು
ಎಂದು ಬಂದನೋ ಬಾರನೋ ಒಂದೂ ತಿಳಿಯದೆ.

೨. ಒಂದು ದಾರಿಯಲಿ ನಡೆದ ಅಕ್ಕನಂತೆ
ಮನ್ನಿಸು ಪ್ರಭುವೇ ಕಾಲುದಾರಿ ಕಾಡುದಾರಿ ಆಗಿ
ಗುಡ್ಡ ಬೆಟ್ಟ ಕಣಿವೆ ಝರಿ ಇಲ್ಲದೇ ಕಳೆದು
ಹೋಗಿವೆ ಕನಸುಗಳೆಲ್ಲವೂ ಎಂದೂ ಸಿಗದಂತೆ.

೩. ಅಲ್ಲಿ ಇಲ್ಲಿ ಎಲ್ಲೆಲ್ಲೂ ಹುಡುಕಿ ಹಳವಂಡ
ರುಚ‌ಇಲ್ಲ ಸಿಹಿ‌ಇಲ್ಲ ಬರೀ ಚಪ್ಪೇ ಸೀಬೆ
ಹಸಿರು ಕೋಗಿಲೆ ಗಿಳಿ ಇಲ್ಲದ ಬಯಲುದಾರಿ
ಹರಡಿದೆ ಉರಿಬಿಸಿಲು ಬೆಳದಿಂಗಳೆಂದೂ ಕಾಣದಂತೆ.

೪. ಮಳೆ ಚಳಿ ಹನಿ ಇಬ್ಬನಿ ಇಲ್ಲದೇ ಗದ್ದೇ
ಹೊಲದ ಹುಡಿ ಮಣ್ಣಿನ ಕಡುವಾಸನೆಗೆ
ಎದೆತೆರೆದು ಅಲೆಯುತ್ತಿದ್ದೇನೆ ಜೋಗತಿಯಾಗಿ
ಮಾತುಗಳು ಗದ್ದಲ ಎಬ್ಬಿಸಿವೆ ಮೌನ ಧ್ಯಾನದಲಿ ಕಂತಿದೆ.

೫. ದುಃಖ ಮಾನ ಸಾವು ನೋವುಗಳ
ಹೆರಿಗೆ ಮನೆ ಹಾಲು ವಾಸನೆಗೆ ಒಡೆದಮನ
ಕೊನೆಗೂ ಅರ್ಥವಾಗಲಿಲ್ಲ ಪಟ್ಟು ಬಿಡದ ಬದುಕು
ಚಿಗುರು, ಕಾಳು ಮೊಳಕೆಯ ಮೂಕ ಮರ್ಮರವ.

೬. ರೋಗದಲಿ ಮಾಗಿದ ದೇಹ ತುಂಡು ಬಟ್ಟೆ
ಬಯಲು ದಾರಿಯ ಹಾಲು ಬೆಳಕು ಕಡಲು
ಎದೆಯ ಹಾಡು ಇಳಿದಿಳಿದು ಜೀವಜಲ
ನದಿ ಹರಿದು ಬಯಲು ಪೊರೆದ ಹರವಿನ ದಾಂಪತ್ಯ.
*****

Tagged:

Leave a Reply

Your email address will not be published. Required fields are marked *

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಹೊರ ಕೋಣೆಯಲ್ಲಿ ಕಾಲೂರಿ ಕೂತು ಬೀಡಿ ಕಟ್ಟುತ್ತಿದ್ದ ಸುಮಯ್ಯಾಗೆ ಕಣ್ಣು ಮತ್ತು ಕಿವಿಯ ಸುತ್ತಲೇ ಆಗಾಗ ಗುಂಯ್.. ಎನ್ನುತ್ತಾ ನೊಣವೊಂದು ಸರಿಸುಮಾರು ಹದಿನೈದು ನಿಮಿಷಗಳಿಂದ ಹಾರಾಡುತ್ತಾ ಕಿರಿಕಿರಿ ಮಾಡುತ್ತಿತ್ತು. ಹಿಡಿದು ಹೊಸಕಿ ಹಾಕಬೇಕೆಂದರೆ ಕೈಗೆ ಸಿಗದೆ ಮೈ ಪರಚಿಕೊಳ್ಳಬೇಕೆನ್ನ...

ಮೂಲ: ಗಾಯ್ ಡಿ ಮೊಪಾಸಾ ಗಗನಚುಂಬಿತವಾದ ಬೀಚ್‌ ವೃಕ್ಷಗಳೊಳಗಿಂದ ತಪ್ಪಿಸಿಕೊಂಡು ಸೂರ್ಯ ಕಿರಣಗಳು ಹೊಲಗಳ ಮೇಲೆ ಬೆಳಕನ್ನು ಕೆಡುವುವುದು ಬಲು ಅಪರೂಪ. ಬೆಳೆದ ಹುಲ್ಲನ್ನು ಕೊಯ್ದುದರಿಂದಲೂ, ದನಗಳೂ ಕಚ್ಚಿ ಕಚ್ಚಿ ತಿಂದುದರಿಂದಲೂ ನೆಲವು ಅಲ್ಲಲ್ಲಿ ತಗ್ಗು ದಿನ್ನೆಯಾಗಿ ಒಡೆದು ಕಾಣುತ್ತಿ...