ಹಾಯ್ಕೆಗಳು

೧. ಒಣಧೂಳಿನ ಕವಲುದಾರಿಯಲ್ಲಿ
ನಿಂತಿದ್ದೆ ತಿಳಿಯದೇ ಸುತ್ತಿ ಎದ್ದು ಬಿದ್ದು
ಸಂಕಟದ ಸುಳಿಯಲಿ ತಬ್ಬಿಬ್ಬು ಅವನು
ಎಂದು ಬಂದನೋ ಬಾರನೋ ಒಂದೂ ತಿಳಿಯದೆ.

೨. ಒಂದು ದಾರಿಯಲಿ ನಡೆದ ಅಕ್ಕನಂತೆ
ಮನ್ನಿಸು ಪ್ರಭುವೇ ಕಾಲುದಾರಿ ಕಾಡುದಾರಿ ಆಗಿ
ಗುಡ್ಡ ಬೆಟ್ಟ ಕಣಿವೆ ಝರಿ ಇಲ್ಲದೇ ಕಳೆದು
ಹೋಗಿವೆ ಕನಸುಗಳೆಲ್ಲವೂ ಎಂದೂ ಸಿಗದಂತೆ.

೩. ಅಲ್ಲಿ ಇಲ್ಲಿ ಎಲ್ಲೆಲ್ಲೂ ಹುಡುಕಿ ಹಳವಂಡ
ರುಚ‌ಇಲ್ಲ ಸಿಹಿ‌ಇಲ್ಲ ಬರೀ ಚಪ್ಪೇ ಸೀಬೆ
ಹಸಿರು ಕೋಗಿಲೆ ಗಿಳಿ ಇಲ್ಲದ ಬಯಲುದಾರಿ
ಹರಡಿದೆ ಉರಿಬಿಸಿಲು ಬೆಳದಿಂಗಳೆಂದೂ ಕಾಣದಂತೆ.

೪. ಮಳೆ ಚಳಿ ಹನಿ ಇಬ್ಬನಿ ಇಲ್ಲದೇ ಗದ್ದೇ
ಹೊಲದ ಹುಡಿ ಮಣ್ಣಿನ ಕಡುವಾಸನೆಗೆ
ಎದೆತೆರೆದು ಅಲೆಯುತ್ತಿದ್ದೇನೆ ಜೋಗತಿಯಾಗಿ
ಮಾತುಗಳು ಗದ್ದಲ ಎಬ್ಬಿಸಿವೆ ಮೌನ ಧ್ಯಾನದಲಿ ಕಂತಿದೆ.

೫. ದುಃಖ ಮಾನ ಸಾವು ನೋವುಗಳ
ಹೆರಿಗೆ ಮನೆ ಹಾಲು ವಾಸನೆಗೆ ಒಡೆದಮನ
ಕೊನೆಗೂ ಅರ್ಥವಾಗಲಿಲ್ಲ ಪಟ್ಟು ಬಿಡದ ಬದುಕು
ಚಿಗುರು, ಕಾಳು ಮೊಳಕೆಯ ಮೂಕ ಮರ್ಮರವ.

೬. ರೋಗದಲಿ ಮಾಗಿದ ದೇಹ ತುಂಡು ಬಟ್ಟೆ
ಬಯಲು ದಾರಿಯ ಹಾಲು ಬೆಳಕು ಕಡಲು
ಎದೆಯ ಹಾಡು ಇಳಿದಿಳಿದು ಜೀವಜಲ
ನದಿ ಹರಿದು ಬಯಲು ಪೊರೆದ ಹರವಿನ ದಾಂಪತ್ಯ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ರಾತ್ರಿ
Next post ಚುಂಬನ

ಸಣ್ಣ ಕತೆ

  • ಮನೆಮನೆಯ ಸಮಾಚಾರ

    ಪ್ರಮೋದನಗರದ ಸಮೀಪದಲ್ಲಿ ಹೂವಿನಹಳ್ಳಿಯೆಂಬದೊಂದು ಗ್ರಾಮವಿರುವದು. ಅಲ್ಲಿ ಪ್ರೌಢರಾಯನೆಂಬ ದೊಡ್ಡ ವೃತ್ತಿವಂತನಾದ ಗೃಹಸ್ಥನಿದ್ದನು. ಪ್ರೌಢರಾಯರಿಗೆ ಇಬ್ಬರು ಗಂಡುಮಕ್ಕಳೂ, ಒಬ್ಬ ಹೆಣ್ಣು ಮಗಳೂ ಇದ್ದರು. ರಾಯರ ಹಿರಿಯ ಮಗನಾದ ರಾಮಚಂದ್ರರಾಯನು… Read more…

  • ಆನುಗೋಲು

    ರೈಲು ನಿಲ್ದಾಣದಲ್ಲಿ ನಿಂತಿತು! "ಪೇಪರ! ಡೇಲಿ ಪೇಪರ!........ಟಾಯಿಮ್ಸ, ಫ್ರೀ ಪ್ರೆಸ್, ಸಕಾಳ! ಪ್ಲಾಟ ಫಾರ್ಮ ಮೇಲಿನ ಜನರ ನೂರೆಂಟು ಗದ್ದಲದಲ್ಲಿ ಈ ಧ್ವನಿಯು ಎದ್ದು ಕೇಳಿಸುತ್ತಿತ್ತು. ಹೋಗುವವರ… Read more…

  • ಕಳಕೊಂಡವನು

    ಸುಮಾರು ಒಂದು ಗಂಟೆಯ ಪಯಣದಿಂದ ಸುಸ್ತಾದ ಅವನು ಬಸ್ಸಿನಿಂದ ಇಳಿದು ರಸ್ತೆಯ ಬದಿಗೆ ಬಂದು ನಿಂತು ತನ್ನ ಕೈಗಡಿಯಾರ ದೃಷ್ಟಿಸಿದ. ಮಧ್ಯಾಹ್ನ ಒಂದು ಗಂಟೆ. ಒಮ್ಮೆ ಮುಖ… Read more…

  • ಕೂನನ ಮಗಳು ಕೆಂಚಿಯೂ….

    ಬೊಮ್ಮನಹಳ್ಳಿ ಸಂತೆಯಿಂದ ದಲ್ಲಾಳಿಗೆ ಸಂಚಾಗಾರ ಎಂದು ನೂರು ರೂಪಾಯಿ ಸೇರಿ ಒಂದು ಸಾವಿರದ ಒಂದುನೂರು ಕೊಟ್ಟು ತಂದ ’ಚೆನ್ನಿ’ಕರುಹಾಕಿ ಮೂರು ತಿಂಗಳಲ್ಲಿ ಕೊಟ್ಟಿಗೆಯೊಳಗೆ ಕಾಲು ಜಾರಿ ಬಿದ್ದದ್ದೆ… Read more…

  • ಒಲವೆ ನಮ್ಮ ಬದುಕು

    "The best of you is he who behaves best towards the members of his family" (The Holy Prophet) ವಾರದ ಸಂತೆ.… Read more…

cheap jordans|wholesale air max|wholesale jordans|wholesale jewelry|wholesale jerseys