ಅತ್ತರೂ ನಿನಕೂಟ ನಕ್ಕರೂ ನಿನಕೂಟ

ಮುಗಿಲೊಡೆದು ಹಾಡ್ಯಾವು ಮೊಗ್ಗೊಡೆದು ನೋಡ್ಯಾವು
ಕೇಳುವಿಯ ಈ ಕೂಗು ಓ ತಂದೆಯೇ
ಕಡಲು ಆರತಿಯೆತ್ತಿ ಮುಗಿಲು ಮಲ್ಲಿಗೆ ಸುತ್ತಿ
ನೋಡುವಿಯು ಈ ಕೂಸು ಓ ತಂದೆಯೇ

ನೀಲಬಾನಿನ ಹಕ್ಕಿ ಬಾನಿನಾಚೆಯ ಚುಕ್ಕಿ
ಅಪ್ಪಯ್ಯ ಅಪ್ಪಯ್ಯ ಎಂದಿರುವವು
ತೆಂಗೆಲ್ಲಾ ತಲೆದೂಗಿ ಬಾಳೆ ಜೋಗುಳ ಹಾಡಿ
ಬಾರಯ್ಯ ತಾರಯ್ಯ ಹಾಡಿರುವವು

ಜೊಂಡು ಜೋಪುಡಿ ಬೇಡ ಪುಂಡಿ ಪಡುವಲ ಬೇಡ
ಹುಳಿ ಇರಲಿ ಸಿಹಿ ಇರಲಿ ನೀನಿರಲಿ ಬಾ
ನಾ ನಿನ್ನ ಬಳಿ ಇರಲಿ ನೀನನ್ನ ಎದೆಗಿರಲಿ
ಮುಪ್ಪಿರಲಿ ಸುದ್ದಿರಲಿ ಸದ್ದಿರಲಿ ಬಾ

ಅತ್ತರೂ ನಿನಕೂಟ ನಕ್ಕರೂ ನಿನಕೂಟ
ಬಾರಯ್ಯ ನನ್ನಯ್ಯ ತಾರಯ್ಯ ತಾ
ಉಳಿದರೂ ನಿನಕೂಟ ಅಳಿದರೂ ನಿನಕೂಟ
ಓ ಅಯ್ಯ ದೇವಯ್ಯ ಬಾರಯ್ಯ ಬಾ
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಹೂವಾಡಿಗಿತ್ತಿ
Next post ಬದುಕು

ಸಣ್ಣ ಕತೆ

  • ಮಿಂಚಿನ ದೀಪ

    ಸಂಜೆ ಮೊಗ್ಗೂಡೆದಿತ್ತು. ಆಕಾಶದ ತುಂಬೆಲ್ಲಾ ಬಣ್ಣದ ಬಾಟಲಿ ಉರುಳಿಸಿದ ಹಾಗೆ ಕೆಂಪು, ನೀಲಿ ಬಣ್ಣ ಚೆಲ್ಲಿ, ಚಳಿಗಾಲದ ಸಂಜೆಯ ಮಬ್ಬಿನ ತೆಳುಪರದೆಯ ‘ಓಡಿನಿ’ ಎಲ್ಲವನ್ನೂ ಸುತ್ತುವಂತೆ ಪಸರಿಸಿಕೊಂಡಿತ್ತು.… Read more…

  • ಬೋರ್ಡು ಒರಸುವ ಬಟ್ಟೆ

    ಪ್ರಕರಣ ೬ ಸುತ್ತಮುತ್ತಲಿನ ಕೆಲವು ಪಾಠಶಾಲೆಗಳನ್ನು ನೋಡಿಕೊಂಡು ರಂಗಣ್ಣ ಜನಾರ್ದನಪುರಕ್ಕೆ ನಾಲ್ಕು ದಿನಗಳ ನಂತರ ಹಿಂದಿರುಗಿದನು. ರೇಂಜಿನಲ್ಲಿ ಹಲವು ಸುಧಾರಣೆಗಳಾಗಬೇಕೆಂಬುದು ಅವನ ಅನುಭವಕ್ಕೆ ಬಂದಿತು. ತನಗೆ ತೋರಿದ… Read more…

  • ತನ್ನೊಳಗಣ ಕಿಚ್ಚು

    ಶಕೀಲಾ ಇನ್ನೂ ಮನೆಗೆ ಬಂದಿಲ್ಲ ಮೈಮೇಲೆ ಮುಳ್ಳುಗಳು ಎದ್ದಂಗಾಗದೆ. ಅಸಲು ಜೀವಂತ ಅದಾಳೋ? ಉಳಿದಾಳೆ ಜಿಂದಾ ಅಂಬೋದಾದ್ರೆ ಎಲ್ಲಿ? ಕತ್ಲೆ ಕವ್ಕತಾ ಅದೆ. ಈಗಷ್ಟೇ ಒಂದು ಗಂಟೆ… Read more…

  • ಮೇಷ್ಟ್ರು ರಂಗಪ್ಪ

    ಪ್ರಕರಣ ೫ ರಂಗಣ್ಣ ರೇಂಜಿನಲ್ಲಿ ಅಧಿಕಾರ ವಹಿಸಿ ನಾಲ್ಕು ತಿಂಗಳಾದುವು. ಸುಮಾರು ನಲವತ್ತು ಐವತ್ತು ಪಾಠಶಾಲೆಗಳ ತನಿಖೆ ಮತ್ತು ಭೇಟಿಗಳಿಂದ ಪ್ರಾಥಮಿಕ ವಿದ್ಯಾಭ್ಯಾಸದ ಸ್ಥಿತಿ ತಕ್ಕ ಮಟ್ಟಿಗೆ… Read more…

  • ಹೃದಯದ ತೀರ್ಪು

    ಬೆಳಿಗ್ಗೆ ಏಳು ಗಂಟೆಯ ಹೊತ್ತಿಗೆ ತಿಂಡಿ ಕೂಡ ಮಾಡದೆ ಹೊರ ಹೋಗುತ್ತಿದ್ದ ಯೂಸುಫ್, ಮಧ್ಯಾಹ್ನ ಮಾತ್ರ ಮನೆಯಲ್ಲಿ ಉಣ್ಣುತ್ತಿದ್ದ. ರಾತ್ರಿಯ ಊಟ ಅವನ ತಾಯಿಯ ಮನೆಯಲ್ಲಿ. ತಾಯಿಯ… Read more…