ಸ್ಥಿಮಿತ

ಆ ಹಾದಿ ಸಾಗಿದೆಡೆ
ನಡೆದು ಬಿಡು ಮಾನವ
ಇರದು ಹುಡುಕಾಟ
ಹಂಬಲಿಕೆ ನಿನಗೆ

ಕುರುಡ ಮೋಹದ
ಕುದುರೆ ಕೈಕೊಟ್ಟ ಕ್ಷಣವೇ
ಉರಿದು ಬಿದ್ದಿದೆ
ನಿನ್ನ ಆಶೆ ಗೋಪುರ ಬಣವೆ

ಬೊಗಳೆ ಮಾತಿಗೆ ಬಲಿ
ಬೀಳುವುದು ತರವಲ್ಲ
ಸ್ಥಿಮಿತ ಮನಸಿನ ಧೈರ್ಯ
ನಿನಗೆ ಹೊಸತಲ್ಲ

ಎತ್ತ ನೋಡಿದರತ್ತ
ಕುಹಕ ಕರಿಮುಖ ಕಂಡು
ನಡೆಸದಿರು ಹಿನ್ನಡೆಗೆ
ಬದುಕು ದುಸ್ತರವೆಂದು

ಕ್ಷಮಿಸು ದಕ್ಕಿದಾ ದಾರಿ
ಬದುಕು ನೈಜತೆ ತೋರಿ
ತ್ಯಜಿಸು ಅಪರಮಾರ್ಗದ ಕರ್ಮ
ಆರಿತು ಧರ್ಮದಾ ಮರ್ಮ

ಬಯಸಿದ್ದು ಬೇಕೆಂಬ
ಹಠಕ್ಕಿಲ್ಲ ನಾಸ್ತಿ
ಸಿಕ್ಕಪಾಲೆ ಸುಖವೆಂದರೆ
ಬದುಕು ಸ್ವರ್ಗದಾ ಆಸ್ತಿ


Previous post ನಾನು ಮತ್ತು ಅವನು
Next post ಹೈದರಾಬಾದಿನಲ್ಲಿ ಜೂನ್

ಸಣ್ಣ ಕತೆ

  • ತಿಥಿ

    "ಲೋ ಬೋಸುಡಿಕೆ ನನ್ಮಗನೇ, ಇದು ಕೊನೆಯ ಬಾರಿ ನಿನಗೆ ವಾರ್ನಿಂಗ್ ಕೊಡುತ್ತಾ ಇದ್ದೇನೆ. ಮೂರು ಸಾರಿ ಈ ಜೈಲಿನಿಂದ ನಿನಗೆ ವಿದಾಯ ಕೊಟ್ಟಾಯಿತು. ಇನ್ನು ಹೋಗಿ ನಿನ್ನ… Read more…

  • ಕಳ್ಳನ ಹೃದಯಸ್ಪಂದನ

    ಅದು ಅಪರಾತ್ರಿ ೨ ಘಂಟೆ ಸಮಯ. ಎಲ್ಲರೂ ಗಾಢ ನಿದ್ರೆಯಲ್ಲಿದ್ದರು. ಊರಿನಿಂದ ಸ್ವಲ್ಪ ದೂರವಾಗಿದ್ದ ಕಲ್ಯಾಣ ನಗರದ ಬಡಾವಣೆ, ಅಷ್ಟಾಗಿ ಹತ್ತಿರ ಹತ್ತಿರವಲ್ಲದ ಮನೆಗಳು, ಒಂದು ವರ್ಷದ… Read more…

  • ಮೌನವು ಮುದ್ದಿಗಾಗಿ!

    ಮೋಹನರಾಯರು ರಗ್ಗಿನ ಮಸಕು ತೆಗೆದು ಸುತ್ತಲೂ ನೋಡಲು ಇನ್ನೂ ಎಲ್ಲವೂ ಶಾಂತವಾಗಿಯೇ ಇದ್ದಿತು. ಬೆಳಗಿನ ಜಾವವು ಜಾರಿ, ಸೂರ್ಯನು ಮೇಲಕ್ಕೇರಿದುದು ಅವರಿಗೆ ಅರಿವೇ ಇರಲಿಲ್ಲ. ಅಷ್ಟು ಗಾಢ… Read more…

  • ಮತ್ತೆ ಬಂದ ವಸಂತ

    ಚಿತ್ರ: ಆಮಿ ಮೊದಲ ರಾತ್ರಿಯ ಉನ್ಮಾದದಲ್ಲಿದ್ದ ಮಧುವಿನ ಕಿವಿ ಹಿಂಡಿ ಅವಳಂದಳು. ‘ಮಧು, ಇಂದಿನಿಂದ ನಾವು ಗಂಡ - ಹೆಂಡತಿಯಾಗಿರುವುದು ಬೇಡ. ಬದುಕಿನ ಕೊನೆ ತನಕವೂ ಗೆಳೆಯ… Read more…

  • ದೇವರು

    ನನ್ನ ದೇವರಿಗೆ, ಬಹಳ ದಿನಗಳ ನಂತರ ನಿಮಗೆ ಕಾಗದ ಬರೆಯುತ್ತಿದ್ದೇನೆ. ಏಕೆಂದರೆ ನೀವು ಬರೆದ ಕಾಗದಕ್ಕೆ ಉತ್ತರ ಕೇಳಿದ್ದೀರಿ. ನಾನೀಗ ಉತ್ತರ ಬರೆಯಲೇಬೇಕು ಬರೆಯುತ್ತಿದ್ದೇನೆ. "ಪತಿಯೇ ದೇವರು"… Read more…