ಆ ಹಾದಿ ಸಾಗಿದೆಡೆ
ನಡೆದು ಬಿಡು ಮಾನವ
ಇರದು ಹುಡುಕಾಟ
ಹಂಬಲಿಕೆ ನಿನಗೆ
ಕುರುಡ ಮೋಹದ
ಕುದುರೆ ಕೈಕೊಟ್ಟ ಕ್ಷಣವೇ
ಉರಿದು ಬಿದ್ದಿದೆ
ನಿನ್ನ ಆಶೆ ಗೋಪುರ ಬಣವೆ
ಬೊಗಳೆ ಮಾತಿಗೆ ಬಲಿ
ಬೀಳುವುದು ತರವಲ್ಲ
ಸ್ಥಿಮಿತ ಮನಸಿನ ಧೈರ್ಯ
ನಿನಗೆ ಹೊಸತಲ್ಲ
ಎತ್ತ ನೋಡಿದರತ್ತ
ಕುಹಕ ಕರಿಮುಖ ಕಂಡು
ನಡೆಸದಿರು ಹಿನ್ನಡೆಗೆ
ಬದುಕು ದುಸ್ತರವೆಂದು
ಕ್ಷಮಿಸು ದಕ್ಕಿದಾ ದಾರಿ
ಬದುಕು ನೈಜತೆ ತೋರಿ
ತ್ಯಜಿಸು ಅಪರಮಾರ್ಗದ ಕರ್ಮ
ಆರಿತು ಧರ್ಮದಾ ಮರ್ಮ
ಬಯಸಿದ್ದು ಬೇಕೆಂಬ
ಹಠಕ್ಕಿಲ್ಲ ನಾಸ್ತಿ
ಸಿಕ್ಕಪಾಲೆ ಸುಖವೆಂದರೆ
ಬದುಕು ಸ್ವರ್ಗದಾ ಆಸ್ತಿ
ಆಂಗ್ಲಭಾಷಾ ಉಪನ್ಯಾಸಕಿ
ಪ್ರಕಟಿತ ಕೃತಿಗಳು: ಏಣಿ ಮತ್ತು ಪದಗಳೊಂದಿಗೆ ನಾನು[ ಕವನ ಸಂಕಲನಗಳು,] ಪಾಶ್ಚಿಮಾತ್ಯ ಸಾಹಿತ್ಯ ಲೋಕ [ಅಂಕಣಬರಹ ಕೃತಿ]
ಪ್ರಶಸ್ತಿಗಳು: ಏಣಿ ಕವನ ಸಂಕಲನಕ್ಕೆ ಕನ್ನಡ ಸಾಹಿತ್ಯ ಪರಿಷತ್ತಿನ ಶ್ರೀಮತಿ ಶಾರದಾ ರಾಮಲಿಂಗಪ್ಪ ದತ್ತಿ ಪ್ರಶಸ್ತಿ,
ಸಂಕ್ರಮಣ ಕಾವ್ಯ ಪ್ರಶಸ್ತಿ ೨೦೧೬, ರವಿಕಿರಣ ಸಾಹಿತ್ಯ ಪ್ರತಿಷ್ಠಾನ ಬೆಂಗಳೂರು ಪ್ರಥಮ ಕಥಾ ಬಹುಮಾನ ೨೦೧೮ , ತುಷಾರ ಮಾಸ ಪತ್ರಿಕೆಯ ಕ್ಯಾಲಿಫೋನರ್ಿಯಾ ಕಾವ್ಯಾಂಜಲಿ ತೃತೀಯ ಕಥಾ ಬಹುಮಾನ ೨೦೧೮ ಇತ್ಯಾದಿ ಬಹುಮಾನ ಬಂದಿದೆ.ಮೊಗವೀರ ಮಾಸಪತ್ರಿಕೆ ಮುಂಬಯಿ ೨೦೧೭ರ ಸಮಾಧಾನಕರ ಕಥಾ ಬಹುಮಾನ, ಕರಾವಳಿ ಮುಂಜಾವು ದಿನಪತ್ರಿಕೆಯ ದೀಪಾವಳಿ ಕಥಾ ಸ್ಪಧರ್ೆಗಳಲ್ಲಿ ಬಹುಮಾನ ಇತ್ಯಾದಿ ಬಂದಿರುತ್ತವೆ.