ಹೈದರಾಬಾದಿನಲ್ಲಿ ಜೂನ್

ಹೈದರಾಬಾದಿನಲ್ಲಿ ಜೂನ್ ಎಂದೊಡನೆ
ಬೇಕಾದ್ದು ತಳತಳಿಸುವ ಗ್ಲಾಸುಗಳಲ್ಲಿ
ತಂಪು ಪಾನೀಯಗಳ ಸುಖ
ಮಾತಾಡುವುದಕ್ಕೆ ನೋಡುವುದಕ್ಕೆ
ಅವರವರು ಬಯಸುವ ಮುಖ

ಅದೃಷ್ಟವಿದ್ದರೆ ಆಗಾಗ ಸುಳಿಯುವ ಗಾಳಿ
ಆ ಗಾಳಿಯಲ್ಲೆಲ್ಲೋ ತೆರೆಗಳ ತೇವ
ಶಾಖದೊಂದಿಗೆ ಸಮ್ಮಿಳಿಸಿದ್ದು
ಎಷ್ಟೋ ಒಣ ಬಯಲುಗಳನ್ನೂ
ದಂಡೆಗಳನ್ನೂ ಹಾಯ್ದು

ನಾಳೆ ಬರುವುದು ಮಳೆ ಇಂದು ಬರದಿದ್ದರೆ
ಅಥವಾ ನಾಡಿದು, ಮುಂದಿನ ವಾರ
ಬಂದೇ ಬರುವುದಂತೂ ನಿಜ
ಆತನಕ ಹಿಂದಿನ ಪ್ರಣಯದ ನೆನಪು
ಮೂಡುವುದು ಸಹಜ

ಸಂಜೆಯ ದೀಪಗಳನ್ನು ತುಸು ತಡವಾಗಿ
ಹಚ್ಚಿದರೆ ಸಾಲದೆ? ಆಕಾಶದ ಬೆಳಕನ್ನು
ಓಡಿಸಬೇಕು ಯಾಕೆ?
ನಮ್ಮ ದೀಪಗಳು ನಾವೆ-ಪರಸ್ಪರ
ಬೆಳಗುವವರೆಗೆ

ಅಲ್ಲಿದೆ ಈ ಸಂಜೆಯ ವಿಜೃಂಭಣೆಯಲ್ಲಿ
ಎಷ್ಟೊಂದು ದಿವ್ಯ ಮನುಷ್ಯರ ಮುಖ!
ಅಹ! ಏನದು ಕೇಳಿಸಿದ ಸದ್ದು?
ಏನಿಲ್ಲ, ಕಿಟಕಿ ಗಾಜಿನ ಮೇಲೆ ಬಿದ್ದ
ಆಕಸ್ಮಿಕ ಹನಿಯದ್ದು
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಸ್ಥಿಮಿತ
Next post ಹುಷಾರು

ಸಣ್ಣ ಕತೆ

  • ಸಾವಿಗೊಂದು ಸ್ಮಾರಕ

    ಶಾಲೆಯ ಮಾಸ್ತರ್ ಆಗಿ ಗಜರಾಜ ಸಿಂಗ್ ಅವರು ಪ್ರೈಮರಿ ಶಾಲೆಯ ಮಕ್ಕಳಿಗೆ ಹೇಳಿಕೊಡುತ್ತಿದ್ದ ಮೊದಲ ಪಾಠವೆಂದರೆ "ತಂದೆ ತಾಯಿಯನ್ನು ಗೌರವಿಸಿ, ಅವರೇ ನಿಮ್ಮ ಪಾಲಿನ ದೈವ" ಎಂದು.… Read more…

  • ಮಾದಿತನ

    ಮುಂಗೋಳಿ... ಕೂಗಿದ್ದೆ ತಡ, ಪೆರ್‍ಲಜ್ಜ ದಿಡಿಗ್ಗನೆದ್ದ. ರಾತ್ರಿಯೆಲ್ಲ... ವಂದೇ ಸಮ್ನೆ ಅಳುತ್ತಾ, ವುರೀಲೋ... ಬ್ಯಾಡೋ... ಯಂಬಂತೆ, ದೀಪದ ಬುಡ್ಡಿ, ನಡ್ಮುನೆ ಕಂಬ್ಕಂಟಿ, ಸಣ್ಗೆ ವುರಿತಿತ್ತು. ಯದೆವಳ್ಗೆ ಮಜ್ಗೆ… Read more…

  • ದೊಡ್ಡವರು

    ಬೀದಿ ಬದಿಯ ಪುಸ್ತಕದ ಅಂಗಡಿ ಪ್ರಭಾಕರನನ್ನು ಅರಿಯದವರು ಬಹಳ ವಿರಳ. ತಳ್ಳೋ ಗಾಡಿಯ ಮೇಲೆ ದೊಡ್ಡ ಟ್ರಂಕನ್ನಿಟ್ಟು ನಿಧಾನವಾಗಿ ತಳ್ಳಿಕೊಂಡು ಬರುವ ಪ್ರಭಾಕರ ಕೆನರಾ ಬ್ಯಾಂಕಿನ ರಸ್ತೆಬದಿ… Read more…

  • ಕಂಬದಹಳ್ಳಿಗೆ ಭೇಟಿ

    ಪ್ರಕರಣ ೪ ಮಾರನೆಯ ದಿನ ಪ್ರಾತಃಕಾಲ ಆರು ಗಂಟೆಗೆಲ್ಲ ರಂಗಣ್ಣನು ಸ್ನಾನಾದಿ ನಿತ್ಯ ಕರ್ಮಗಳನ್ನು ಮುಗಿಸಿಕೊಂಡು ಉಡುಪುಗಳನ್ನು ಧರಿಸುವುದಕ್ಕೆ ತೊಡಗಿದನು, ಬೈಸ್ಕಲ್ ಮೇಲೆ ಪ್ರಯಾಣ ಮಾಡಬೇಕಾದ್ದರಿಂದ ಸರ್ಜ್‍ಸೂಟು… Read more…

  • ಕಲಾವಿದ

    "ನನಗದು ಬೇಕಿಲ್ಲ. ಬೇಕಿಲ್ಲ! ಸುಮ್ಮನೆ ಯಾಕೆ ಗೋಳು ಹುಯ್ಯುತ್ತೀಯಮ್ಮಾ?" "ಹೀಗೇ ಎಷ್ಟು ದಿನ ಮನೆಯಲ್ಲೇ ಕುಳಿತಿರುವೆ, ಮಗು?" "ಇಷ್ಟು ದಿನವಿರಲಿಲ್ಲವೇನಮ್ಮ-ಇನ್ನು ಮೇಲೆಯೂ ಹಾಗೆಯೇ, ಹೊರಗಿನ ಪ್ರಪಂಚಕ್ಕಿಂತ ನನ್ನ… Read more…