ಹೈದರಾಬಾದಿನಲ್ಲಿ ಜೂನ್

ಹೈದರಾಬಾದಿನಲ್ಲಿ ಜೂನ್ ಎಂದೊಡನೆ
ಬೇಕಾದ್ದು ತಳತಳಿಸುವ ಗ್ಲಾಸುಗಳಲ್ಲಿ
ತಂಪು ಪಾನೀಯಗಳ ಸುಖ
ಮಾತಾಡುವುದಕ್ಕೆ ನೋಡುವುದಕ್ಕೆ
ಅವರವರು ಬಯಸುವ ಮುಖ

ಅದೃಷ್ಟವಿದ್ದರೆ ಆಗಾಗ ಸುಳಿಯುವ ಗಾಳಿ
ಆ ಗಾಳಿಯಲ್ಲೆಲ್ಲೋ ತೆರೆಗಳ ತೇವ
ಶಾಖದೊಂದಿಗೆ ಸಮ್ಮಿಳಿಸಿದ್ದು
ಎಷ್ಟೋ ಒಣ ಬಯಲುಗಳನ್ನೂ
ದಂಡೆಗಳನ್ನೂ ಹಾಯ್ದು

ನಾಳೆ ಬರುವುದು ಮಳೆ ಇಂದು ಬರದಿದ್ದರೆ
ಅಥವಾ ನಾಡಿದು, ಮುಂದಿನ ವಾರ
ಬಂದೇ ಬರುವುದಂತೂ ನಿಜ
ಆತನಕ ಹಿಂದಿನ ಪ್ರಣಯದ ನೆನಪು
ಮೂಡುವುದು ಸಹಜ

ಸಂಜೆಯ ದೀಪಗಳನ್ನು ತುಸು ತಡವಾಗಿ
ಹಚ್ಚಿದರೆ ಸಾಲದೆ? ಆಕಾಶದ ಬೆಳಕನ್ನು
ಓಡಿಸಬೇಕು ಯಾಕೆ?
ನಮ್ಮ ದೀಪಗಳು ನಾವೆ-ಪರಸ್ಪರ
ಬೆಳಗುವವರೆಗೆ

ಅಲ್ಲಿದೆ ಈ ಸಂಜೆಯ ವಿಜೃಂಭಣೆಯಲ್ಲಿ
ಎಷ್ಟೊಂದು ದಿವ್ಯ ಮನುಷ್ಯರ ಮುಖ!
ಅಹ! ಏನದು ಕೇಳಿಸಿದ ಸದ್ದು?
ಏನಿಲ್ಲ, ಕಿಟಕಿ ಗಾಜಿನ ಮೇಲೆ ಬಿದ್ದ
ಆಕಸ್ಮಿಕ ಹನಿಯದ್ದು
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಸ್ಥಿಮಿತ
Next post ಹುಷಾರು

ಸಣ್ಣ ಕತೆ

  • ದಿನಚರಿಯ ಪುಟದಿಂದ

    ಮಂಗಳೂರಿನ ಹೃದಯ ಭಾಗದಿಂದ ಸುಮಾರು ೧೫ ಕಿ.ಮೀ. ದೂರದಲ್ಲಿರುವ ಚಿತ್ರಾಪುರ ಪೇಟೆ ಕೆಲವು ವಿಷಯಗಳಲ್ಲಿ ಪ್ರಖ್ಯಾತಿಯನ್ನು ಹೊಂದಿದೆ. ಸಿಟಿಬಸ್ಸುಗಳು ಇಲ್ಲಿ ಓಡಾಡುತ್ತಿಲ್ಲವಾದರೂ ಬಸ್ಸುಗಳಿಗೇನೂ ಕಮ್ಮಿಯಿಲ್ಲ. ಎಕ್ಸ್‌ಪ್ರೆಸ್ ಬಸ್ಸುಗಳು… Read more…

  • ಕರಾಚಿ ಕಾರಣೋರು

    ಮಳೆಗಾಲ ಆರಂಭವಾಯಿತೆಂದರೆ ಕುಂಞಿಕಣ್ಣ ಕುರುಪ್ಪನ ಏಣೆಲು ಗದ್ದೆಗೆ ನೇಜಿ ಕೆಲಸಕ್ಕೆ ಹೋಗಲು ಕಪಿಲಳ್ಳಿಯ ಹೆಂಗಸರು, ಗಂಡಸರು ತುದಿಗಾಲಲ್ಲಿ ಕಾಯುತ್ತಿರುತ್ತಾರೆ. ವರ್ಷವಿಡೀ ವಿಪ್ರರ ಮತ್ತು ವಿಪ್ರಾತಿವಿಪ್ರರ ಆಡಿಕೆ ತೋಟಗಳಲ್ಲಿ… Read more…

  • ಗುಲ್ಬಾಯಿ

    ನಮ್ಮ ಪರಮಮಿತ್ರರಾದ ಗುಂಡೇರಾವ ಇವರ ನೇತ್ರರೋಗದ ಚಿಕಿತ್ಸೆ ಗಾಗಿ ನಾವು ಮೂವರು ಮಿರ್ಜಿಯಲ್ಲಿರುವ ಡಾಕ್ಟರ ವಾಲ್ನೆಸ್ ಇವರ ಔಷಧಾಲಯಕ್ಕೆ ಬಂದಿದ್ದೆವು. ಗುಂಡೇರಾಯರು ಹಗಲಿರುಳು ಔಷಧಾಲಯದಲ್ಲಿಯೇ ಇರಬೇಕಾಗಿರುವದರಿಂದ ಆ… Read more…

  • ಆ ರಾತ್ರಿ

    ಆ ದಿನ ಮಧ್ಯಾಹ್ನ ವಸಂತನ ಮನೆಯಲ್ಲಿ ಬಹಳ ಗಡಿಬಿಡಿ! ವಸಂತ ತಾನು ಕೂಡುವ ಕೋಣೆಯನ್ನು ಅತ್ಯಂತ ಶಿಸ್ತಿನಿಂದ ಇಡುವ ಕಾರ್ಯದಲ್ಲಿ ಮಗ್ನನಾಗಿದ್ದನು. ಗಡಿಯಾರದ ಮುಳ್ಳುಗಳು ಎರಡು ಗಂಟೆಯಾದುದನ್ನು… Read more…

  • ಸ್ನೇಹಲತಾ

    ೧೫-೯-೧೯.. ಈಗ ಮನಸ್ಸಿಗೆ ನೆಮ್ಮದಿಯೆನಿಸುತ್ತಿದೆ. ಇಂದಿನಿಂದ ಮತ್ತೆ ನನ್ನ ದಿನಚರಿ ಬರೆಯುವ ಕಾರ್ಯಕ್ರಮವನ್ನು ಆರಂಭಿಸಬೇಕು. ದಿನಚರಿಯೆ ನನ್ನ ಸಹಧರ್ಮಿಣಿ; ನನ್ನ ಸಹ-ಸಂಚಾರಿ; ಅದೆ ನನಗೆ ಸಂತಸ ಕೊಡುವುದು.… Read more…