ವೈಣಿಕ

ಮುಗಿಲು ತುಂಬಿತು ನಿನ್ನ
ಅದ್ಭುತದ ಗಾಯನದ
ಸೊಂಪಿನಿಂಪಿನ ಮೇಳವು

ಮನವು ಪರವಶವಾಗಿ
ಸ್ವಾಮಿ ಸನ್ನಿಧಿಗೈದಿ
ಉಕ್ಕಿ ಬಂದಿತು ಧ್ಯಾನವು

ಕುಸುಮ ಮಾಲೆಗಳಂತೆ
ತೂಗಿ ಬಂದುವು ರಾಗ
ದಲೆಯ ತೆರದೊಳು ಗಮಕಗಳ್

ರಸವ ಚಿಮ್ಮುತ ಒಡೆದು
ಮೂಡಿದುವು ಶಬ್ದದೊಳು
ಮಿಂಚಿನಂದದಿ ಮೂರ್ಛೆಗಳ್

ಗಗ್ಘರಿಪ ತಾಳದನಿ
ಝೇಂಕರಿಪ ಮೇಳದನಿ
ಅಚ್ಯುತಾನಂತದೊಳಗೆ

ಸುಯ್ಯೆಂದು ಸುಳಿದಾಡಿ
ನೃತ್ಯವಂ ಗೈದಿಹುದು
ಎನ್ನೆದೆಯ ಆಳದೊಳಗೆ

ಆನಂದ ಸುಮವರಳಿ
ಮನದ ಭೃಂಗವು ಕೆರಳಿ
ಸೂರೆಗೊಂಡಿತು ಮಧುವನು

ತ್ಯಾಗರಾಜರ ಭಕ್ತ
ಭಂಡಾರದಗ್ಗಳದ
ಶ್ರಾವ್ಯಗೀತೆಯ ಸುಧೆಯನು

ಸಂಗೀತ ಕಲೆಯೊಳಗೆ
ಸಾಹಿತ್ಯವಡಗಿಹುದು
ದೇಹಿಯೊಳಗಾತ್ಮನಂತೆ

ತಾಪಸಿಯ ತಪದಂತೆ
ಸಸ್ಯಗಳ ಫಲದಂತೆ
ಪ್ರಣಯಿಗಳ ಪ್ರೇಮದಂತೆ

ಮಾತೃ ಗುರು ಸ್ಥಾನಗಳ-
ನಾಕ್ರಮಿಸಿಕೊಂಡಿಹುವು
ಸಂಗೀತ ಸಾಹಿತ್ಯಗಳ್

ಲೋಕೇಶನುನ್ನತಿಯ
ಸತ್ಯ ಸೌಂದರ್ಯಗಳ್
ಜೀವನಿಗೆ ಆದರ್ಶಗಳ್

ಈ ಕಲೆಗೆ ಸಮವಿಲ್ಲ
ಈ ಕಲೆಗೆ ಸೋಲಿಲ್ಲ
ಅಮರತ್ವವಿದು ವೈಣಿಕ
ಗಾನವಿದ್ದೆಡೆಯಿಂದ
ತಾನಾಗಿ ಮೂಡುವುದು
ಆನಂದಮಯದ ನಾಕ

ಯಾರಾದರೇನಣ್ಣ
ಗುಣಕೆ ಮತ್ಸರವುಂಟೆ?
ಗಾಯನದಿ ನಿಪುಣ ನೀನು

ದೊರೆವನಿತು ರಸವನ್ನು
ಸವಿಯಲೋಸುಗವೆಂದು
ಬಂದ ಜನಕಜೆಯು ನಾನು
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಹೆಸರಿನೊಳಗೇನಿದೆ?
Next post ಹಬ್ಬಗಳು ೨

ಸಣ್ಣ ಕತೆ

  • ಲೋಕೋಪಕಾರ!

    ಸಾಥಿ ಶಿವರಾವ ಅವರಿಗೆ ಬಹು ದೊಡ್ಡ ಚಿಂತೆ! ಅವರು ಅನೇಕ ಪ್ರಶ್ನೆಗಳನ್ನು ಬಹು-ಸರಳವಾಗಿ ಬಿಡಿಸುತ್ತಿದ್ದರು. ಪರೀಕ್ಷೆಯಲ್ಲಿ ಅನೇಕ ಪ್ರಶ್ನೆಗಳಿಗೆ ಉತ್ತರ ಬರೆದಿದ್ದಾರು. ಆದರೆ ಎಂತಹ ದೊಡ್ಡ ಪ್ರಶ್ನೆ… Read more…

  • ಆವರ್ತನೆ

    ಒಬ್ಬ ಸಾಹಿತಿಯನ್ನು ನೋಡುವ ಕುತೂಹಲ ಯಾರಿಗಿಲ್ಲ? ಪಕ್ಕದೂರಿನ ಹೈಸ್ಕೂಲಿನಲ್ಲಿ ಕಾದಂಬರಿಕಾರ ಅ.ರ.ಸು.ರವರ ಕಾರ್ಯಕ್ರಮವಿದೆಯೆಂಬ ಸುದ್ದಿ ಕೇಳಿ ನಾವು ನೋಡಲು ಹೋದೆವು. ಅ.ರ.ಸು.ರವರ ಕೃತಿಗಳನ್ನು ನಾವಾರೂ ಹೆಚ್ಚಾಗಿ ಓದಿರಲಾರೆವು.… Read more…

  • ಮನೆಮನೆಯ ಸಮಾಚಾರ

    ಪ್ರಮೋದನಗರದ ಸಮೀಪದಲ್ಲಿ ಹೂವಿನಹಳ್ಳಿಯೆಂಬದೊಂದು ಗ್ರಾಮವಿರುವದು. ಅಲ್ಲಿ ಪ್ರೌಢರಾಯನೆಂಬ ದೊಡ್ಡ ವೃತ್ತಿವಂತನಾದ ಗೃಹಸ್ಥನಿದ್ದನು. ಪ್ರೌಢರಾಯರಿಗೆ ಇಬ್ಬರು ಗಂಡುಮಕ್ಕಳೂ, ಒಬ್ಬ ಹೆಣ್ಣು ಮಗಳೂ ಇದ್ದರು. ರಾಯರ ಹಿರಿಯ ಮಗನಾದ ರಾಮಚಂದ್ರರಾಯನು… Read more…

  • ದೇವರು ಮತ್ತು ಅಪಘಾತ

    ಊರಿನ ಕೊನೆಯಂಚಿನಲ್ಲಿದ್ದ ಕೆರೆಯಂಗಳದಲ್ಲಿ ಅಣಬೆಗಳಂತೆ ಮೈವೆತ್ತಿದ್ದ ಗುಡಿಸಲುಗಳಲ್ಲಿ ಕೊನೆಯದು ಅವಳದಾಗಿತ್ತು. ನಾಲ್ಕೈದು ಸಾರಿ ಮುನಿಸಿಪಾಲಿಟಿಯವರು ಆ ಗುಡಿಸಲುಗಳನ್ನು ಕಿತ್ತು ಹಾಕಿದ್ದರೂ ಮನುಷ್ಯ ಪ್ರಾಣಿಗಳ ಸೂರಿನ ಅದಮ್ಯ ಅವಶ್ಯಕ… Read more…

  • ಜೋತಿಷ್ಯ

    ತಮಿಳು ಮೂಲ: ಕೊನಷ್ಟೈ "ನೀವು ಏನು ಬೇಕಾದರೂ ಹೇಳಿ, ನನಗೆ ಜ್ಯೋತಿಷ್ಯದಲ್ಲಿ ನಂಬಿಕೆ ತಪ್ಪುವುದಿಲ್ಲ. ಅದರಲ್ಲಿಯೂ ರಾಮಲಿಂಗ ಜೋಯಿಸರಲ್ಲಿ ಪೂರ್ಣ ನಂಬಿಕೆ"ಎಂದಳು ಕಮಲಾ. ಸಮಯ, ಸಂಧ್ಯಾ ಕಾಲ.… Read more…

cheap jordans|wholesale air max|wholesale jordans|wholesale jewelry|wholesale jerseys