Home / ಕವನ / ಕವಿತೆ / ನನಗೆ ಗೊತ್ತಿರಲಿಲ್ಲ….

ನನಗೆ ಗೊತ್ತಿರಲಿಲ್ಲ….

ನಾವು ಪುಟ್ಟ ಹುಡುಗಿಯಾಗಿದ್ದಾಗ
ಆಕಾಶಗೊಳಗೆ ಬೆಂಕಿಯಂತಹ
ನೋವಿದೆಯೆಂದು ಗೊತ್ತಿರಲಿಲ್ಲ.
ಮಳೆ ಸೂರ್ಯನ ಕಣ್ಣೀರು
ಎಂದು ಗೊತ್ತಿರಲಿಲ್ಲ.
ಗಡಗಡ ಎಂದು ಭೂಮಿ
ನಡುಗುವುದು ಅವಮಾನದಿಂದ
ಎಂದು ಗೊತ್ತಿರಲಿಲ್ಲ.

ಗೊತ್ತಿದ್ದರೆ….
ಈಡೇರದ ಆಸೆಗಳ ಮೇಲೆ
ಅಷ್ಟೊಂದು ಕಣ್ಣೀರು
ಹರಿಸುತ್ತಿರಲಿಲ್ಲ.

ಐದು ನಯಾಪೈಸೆಗಾಗಿ
ಆಟದ ಬೊಂಬೆಗಾಗಿ
ಬೆಲ್ಲದ ಮಿಠಾಯಿಗಾಗಿ
ಜರಿ ಲಂಗಕ್ಕಾಗಿ
ಅಷ್ಟೊಂದು ಕಣ್ಣೀರು
ಹರಿಸುತ್ತಿರಲಿಲ್ಲ.

ನನ್ನ ಗೆಳತಿಯರಿಗೆ
ಶ್ರೀಮಂತ ರೆಕ್ಕೆಗಳಿದ್ದವು
ಅವರು ಹಾರುತ್ತಿದ್ದರು
ಹದ್ದುಗಳಂತೆ ಎತ್ತರದಲ್ಲಿ.
ನಾನೋ ನಿಲ್ಲುತ್ತಿದ್ದೆ ಒಂಟಿಯಾಗಿ
ಆಟದ ಕುದುರೆ ಸಹ
ಏರಲಾಗದೆ ಖಾಲಿ ಖಾಲಿ.

ನನ್ನ ಗೆಳತಿಯರು ಅದೆಷ್ಟೊ
ಸಂತೋಷದ ಚಿಟ್ಟೆಗಳನ್ನು
ಸೃಷ್ಟಿಸುತ್ತಿದ್ದರು ನನ್ನೆದುರಲ್ಲಿ.
ನಾನು ಗುಬ್ಬಚ್ಚಿಯಾಗಿ
ಅಣಬೆಯಾಗಿ
ಅಪ್ಪಚ್ಚಿಯಾಗಿ ನೆಲದಲ್ಲಿ
ಹೊರಳುತ್ತಿದ್ದೆ ಹತಾಶೆಯಲ್ಲಿ.

ನನಗೂ ಜೊತೆಗಾರರಿದ್ದರು.
ಮಾತಾಡದ ರೈಲು ಹಳಿಗಳು
ಪುಟಿಯುವ ಹೊಂಡದ
ಮೀನುಗಳು
ಹುರಿದ ಹುಣಿಸೆಬೀಜಗಳು
ಚೌಕ-ಭಾರಗಳು.

ನನಗೆ ಎಷ್ಟೊ ಸಲ
ಅನಿಸುತ್ತಿತ್ತು
ಇಡಿ ಪ್ರಪಂಚವೆ
ನಗುವನ್ನು ನನ್ನ ಮುಖದ
ಮೇಲೆ ಉಗುಳಿದ ಹಾಗೆ
ಆಗೆಲ್ಲ ನಾನು ಮುಖಮುಚ್ಚಿಕೊಂಡು
ಇಳಿಯುತ್ತಿದ್ದೆ ನನ್ನೊಳಗೆ.

ಈಗ ನಾನು ದೊಡ್ಡವಳಾಗಿದ್ದೇನೆ.
ತಾರೆಯರನ್ನು ಕಿತ್ತು
ಮಡಿಲಿಗೆ ಹಾಕಿಕೊಳ್ಳುವಷ್ಟು
ಎತ್ತರ ಬೆಳೆದಿದ್ದೇನೆ.
ಒಂಟಿಯಾಗಿ ಸುತ್ತುತ್ತಿರುವ
ಹದ್ದುಗಳೀಗ ನೋಡುತ್ತಿವೆ.
ನನ್ನನ್ನು
ಸುಮ್ಮನೆ ನೋಡುತ್ತಿವೆ.


Tagged:

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಹೊರ ಕೋಣೆಯಲ್ಲಿ ಕಾಲೂರಿ ಕೂತು ಬೀಡಿ ಕಟ್ಟುತ್ತಿದ್ದ ಸುಮಯ್ಯಾಗೆ ಕಣ್ಣು ಮತ್ತು ಕಿವಿಯ ಸುತ್ತಲೇ ಆಗಾಗ ಗುಂಯ್.. ಎನ್ನುತ್ತಾ ನೊಣವೊಂದು ಸರಿಸುಮಾರು ಹದಿನೈದು ನಿಮಿಷಗಳಿಂದ ಹಾರಾಡುತ್ತಾ ಕಿರಿಕಿರಿ ಮಾಡುತ್ತಿತ್ತು. ಹಿಡಿದು ಹೊಸಕಿ ಹಾಕಬೇಕೆಂದರೆ ಕೈಗೆ ಸಿಗದೆ ಮೈ ಪರಚಿಕೊಳ್ಳಬೇಕೆನ್ನ...

ಮೂಲ: ಗಾಯ್ ಡಿ ಮೊಪಾಸಾ ಗಗನಚುಂಬಿತವಾದ ಬೀಚ್‌ ವೃಕ್ಷಗಳೊಳಗಿಂದ ತಪ್ಪಿಸಿಕೊಂಡು ಸೂರ್ಯ ಕಿರಣಗಳು ಹೊಲಗಳ ಮೇಲೆ ಬೆಳಕನ್ನು ಕೆಡುವುವುದು ಬಲು ಅಪರೂಪ. ಬೆಳೆದ ಹುಲ್ಲನ್ನು ಕೊಯ್ದುದರಿಂದಲೂ, ದನಗಳೂ ಕಚ್ಚಿ ಕಚ್ಚಿ ತಿಂದುದರಿಂದಲೂ ನೆಲವು ಅಲ್ಲಲ್ಲಿ ತಗ್ಗು ದಿನ್ನೆಯಾಗಿ ಒಡೆದು ಕಾಣುತ್ತಿ...