Home / ಕವನ / ಕವಿತೆ / ನನಗೆ ಗೊತ್ತಿರಲಿಲ್ಲ….

ನನಗೆ ಗೊತ್ತಿರಲಿಲ್ಲ….

ನಾವು ಪುಟ್ಟ ಹುಡುಗಿಯಾಗಿದ್ದಾಗ
ಆಕಾಶಗೊಳಗೆ ಬೆಂಕಿಯಂತಹ
ನೋವಿದೆಯೆಂದು ಗೊತ್ತಿರಲಿಲ್ಲ.
ಮಳೆ ಸೂರ್ಯನ ಕಣ್ಣೀರು
ಎಂದು ಗೊತ್ತಿರಲಿಲ್ಲ.
ಗಡಗಡ ಎಂದು ಭೂಮಿ
ನಡುಗುವುದು ಅವಮಾನದಿಂದ
ಎಂದು ಗೊತ್ತಿರಲಿಲ್ಲ.

ಗೊತ್ತಿದ್ದರೆ….
ಈಡೇರದ ಆಸೆಗಳ ಮೇಲೆ
ಅಷ್ಟೊಂದು ಕಣ್ಣೀರು
ಹರಿಸುತ್ತಿರಲಿಲ್ಲ.

ಐದು ನಯಾಪೈಸೆಗಾಗಿ
ಆಟದ ಬೊಂಬೆಗಾಗಿ
ಬೆಲ್ಲದ ಮಿಠಾಯಿಗಾಗಿ
ಜರಿ ಲಂಗಕ್ಕಾಗಿ
ಅಷ್ಟೊಂದು ಕಣ್ಣೀರು
ಹರಿಸುತ್ತಿರಲಿಲ್ಲ.

ನನ್ನ ಗೆಳತಿಯರಿಗೆ
ಶ್ರೀಮಂತ ರೆಕ್ಕೆಗಳಿದ್ದವು
ಅವರು ಹಾರುತ್ತಿದ್ದರು
ಹದ್ದುಗಳಂತೆ ಎತ್ತರದಲ್ಲಿ.
ನಾನೋ ನಿಲ್ಲುತ್ತಿದ್ದೆ ಒಂಟಿಯಾಗಿ
ಆಟದ ಕುದುರೆ ಸಹ
ಏರಲಾಗದೆ ಖಾಲಿ ಖಾಲಿ.

ನನ್ನ ಗೆಳತಿಯರು ಅದೆಷ್ಟೊ
ಸಂತೋಷದ ಚಿಟ್ಟೆಗಳನ್ನು
ಸೃಷ್ಟಿಸುತ್ತಿದ್ದರು ನನ್ನೆದುರಲ್ಲಿ.
ನಾನು ಗುಬ್ಬಚ್ಚಿಯಾಗಿ
ಅಣಬೆಯಾಗಿ
ಅಪ್ಪಚ್ಚಿಯಾಗಿ ನೆಲದಲ್ಲಿ
ಹೊರಳುತ್ತಿದ್ದೆ ಹತಾಶೆಯಲ್ಲಿ.

ನನಗೂ ಜೊತೆಗಾರರಿದ್ದರು.
ಮಾತಾಡದ ರೈಲು ಹಳಿಗಳು
ಪುಟಿಯುವ ಹೊಂಡದ
ಮೀನುಗಳು
ಹುರಿದ ಹುಣಿಸೆಬೀಜಗಳು
ಚೌಕ-ಭಾರಗಳು.

ನನಗೆ ಎಷ್ಟೊ ಸಲ
ಅನಿಸುತ್ತಿತ್ತು
ಇಡಿ ಪ್ರಪಂಚವೆ
ನಗುವನ್ನು ನನ್ನ ಮುಖದ
ಮೇಲೆ ಉಗುಳಿದ ಹಾಗೆ
ಆಗೆಲ್ಲ ನಾನು ಮುಖಮುಚ್ಚಿಕೊಂಡು
ಇಳಿಯುತ್ತಿದ್ದೆ ನನ್ನೊಳಗೆ.

ಈಗ ನಾನು ದೊಡ್ಡವಳಾಗಿದ್ದೇನೆ.
ತಾರೆಯರನ್ನು ಕಿತ್ತು
ಮಡಿಲಿಗೆ ಹಾಕಿಕೊಳ್ಳುವಷ್ಟು
ಎತ್ತರ ಬೆಳೆದಿದ್ದೇನೆ.
ಒಂಟಿಯಾಗಿ ಸುತ್ತುತ್ತಿರುವ
ಹದ್ದುಗಳೀಗ ನೋಡುತ್ತಿವೆ.
ನನ್ನನ್ನು
ಸುಮ್ಮನೆ ನೋಡುತ್ತಿವೆ.


Tagged:

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...