Home / ಕವನ / ಕವಿತೆ / ವಿಪರ್ಯಾಸಗಳು

ವಿಪರ್ಯಾಸಗಳು

ಅಲ್ಲಿ ವಿದ್ವತ್ತಿನದೇ ಮೇಲುಗೈ
ದ್ವೈತಕ್ಕೂ ಅಲ್ಲ, ಅದ್ವೈತಕ್ಕೂ ಅಲ್ಲ
ಅಸಲಿಗೆ ದ್ವೈತ ಅದ್ವೈತಗಳೇ
ಇಲ್ಲ, ಎಲ್ಲ ವಿದ್ವತ್ತಿನ ಕರಾಮತ್ತು
ಹೊಸತು ಹುಡುಕುವ ಪರಿ
ಪರಿಪರಿಯಾಗಿ

ಇನ್ನೊಂದೆಡೆ ಕಾಂಚಾಣದ
ಕುಣಿತ
ಸತ್ಯಕ್ಕೂ ಸ್ಥಳವಿಲ್ಲ
ಜ್ಞಾನಕ್ಕೂ ಬೆಲೆಯಿಲ್ಲ
ಸತ್ಯ ಜ್ಞಾನಗಳೆರಡು
ಕಾಂಚಾಣದ ಮಾರುಕಟ್ಟೆಯಲ್ಲಿ
ಇಡಲ್ಪಟ್ಟಿವೆ ಗಿರವಿಗೆ

ಅಲ್ಲೊಂದು ಸೌಂದರ್ಯ ರಾಶಿ
ನೈಜತೆಯೋ, ಕೃತಕತೆಯೋ,
ಅರಿಯದಂತಿರೆ ಅಲಂಕಾರ
ನಟನೆಯೇ ನಿಜವೆಂಬ
ಭ್ರಮೆಯ ಬದುಕು

ಮತ್ತಲ್ಲಿ ಮಠಗಳು ಆಶ್ರಮಗಳು
ಸಭ್ಯಸ್ಥರ ಕೂಟ
ಖಾವಿಬಟ್ಟೆಗಳ ಮೇಲಾಟ

ವಿದ್ಯೆ ಬುದ್ಧಿಗಳ ಆಗರ
ಸಹನೆ ಸಂಯಮಗಳ ಸಾಗರ
ಆದರೂ ಖಾವಿ ಬಟ್ಟೆಯಲ್ಲೂ ಕಾಮಿ
ಅಲ್ಲಿಯೂ ಅಂಟಿದ ರಕ್ತದ ಕಲೆ
ಅನ್ಯಾಯ ಅನಾಚಾರ ವ್ಯಭಿಚಾರಗಳ ಬಲೆ

ಮತ್ತೊಂದು ಕಾಲ ಕಾಯುತ್ತಿದೆ
ವಿಧ್ವಂಸಕರೆ ವಿಧ್ವಾಂಸರಾಗುವರು
ಜಾರೆಯೆಂದರೆ ಗರತಿ
ಸನ್ಯಾಸಿಯೆಂದರೆ ಸಂಸಾರಿ
ಚಾಂಡಾಲನೆ ಗುರುವಾಗುವನು
ಅರ್ಥವಾಗದ
ಮತ್ತೆ ಅರ್ಥೈಸಲಾಗದ
ಆದರೂ ಜಾಣ ಕುರುಡು ನಾಟಕಗಳು
ಎಂಥೆಂಥದೋ ವಿಪರ್ಯಾಸಗಳು


Tagged:

ಎಲೈ ಓದುಗರೇ! ಕಣ್ಣುಗಳನ್ನು ಅಗಲಿಸಿ ಏಕಚಿತ್ತದಿಂದ ಓದಿ! ನಾನೊಂದು ಕಥೆ ಹೇಳಲಿದ್ದೇನೆ. ರೋಮಾಂಚಕಾರಿ, ಮೈನಡುಗಿಸುವಂತಹ ಕಥೆ! ಒಬ್ಬ ಸಾಹಿತಿಯ ಕಥೆ! ಸಾಹಿತಿ ಆಗೇ ತೀರಬೇಕೆಂದು ಹಂಬಲಿಸುವವನ ಕಥೆ! ಸಾಹಿತ್ಯದಲ್ಲಿ ಎಲ್ಲ ಬಿರುದು ಬಹುಮಾನಗಳನ್ನು, ಪ್ರಶಸ್ತಿ ಪ್ರಶಂಸೆಗಳನ್ನು ಹೇಗೆ ಪಡೆ...

“ಎಷ್ಟು ದಿನ ಹೀಗೇ ತೊಂದರೆ ಪಟ್ಟುಕೊಳ್ಳುತ್ತಿರುವದು ಕೃಷ್ಣ ಮೂರ್ತಿ? ಮಕ್ಕಳನ್ನು ಆರಯ್ಯುವದು, ಅಡಿಗೆ ಮಾಡುವದು- ಇವುಗಳಿಗೆಲ್ಲ ಆಳು ಇಟ್ಟು ಪೂರೈಸೀತೇ? ಸುಮ್ಮನೆ ಇನ್ನೊಂದು ಮದುವೆಯಾಗಿ ಬಿಡಬಾರದೇ?” “ಪ್ರೀತಿ ಇಷ್ಟು ಅಗ್ಗ ಅಲ್ಲ ನೋಡು” “ಪ್ರೀತಿಯ ವಿಷಯವೇನೇ ...

ಕಾಲೇಜಿನ ಲೈಬ್ರೆರಿಯಿಂದ ಹೊರಬಂದ ಅವಳು ಒಮ್ಮೆ ಆಟದ ಮೈದಾನವನ್ನು ದಿಟ್ಟಿಸಿ ನೋಡಿದಳು. ಮೈದಾನ ಖಾಲಿ ಇರುವುದನ್ನು ಖಚಿತ ಮಾಡಿಕೊಂಡ ಅವಳು ವೇಗವಾಗಿ ನಡೆಯುತ್ತಾ ರಾಜ ರಸ್ತೆಗೆ ಬಂದಳು. ಅಲ್ಲಿಂದ ತನ್ನ ಮನೆಯ ವಿರುದ್ಧ ದಿಕ್ಕಿಗೆ ಹೆಜ್ಜೆ ಹಾಕ ತೊಡಗಿದಳು. ತನ್ನ ಶಕ್ತಿಯನ್ನೆಲ್ಲಾ ಪ್ರಯ...

ಅಡಿಕೆ ಭತ್ತಗಳ ವ್ಯಾಪಾರದಿಂದ ಅಶ್ವತ್ಥ ಹೆಬ್ಬಾರರು ನೂರಾರು ಸಾವಿರ ರೂಪಾಯಿ ಗಳಿಸಿದರೆಂದು ದಟ್ಟವಾಗಿ ಸುದ್ದಿ ಹಬ್ಬಿತು. ಇದಕ್ಕೆ ಸಾಕ್ಷಿ ಕೊಡುವಂತೆ ಹೆಬ್ಬಾರರು ಗ್ರಾಮದೇವಸ್ಥಾನದಲ್ಲಿ ಒಂದು ಯಜ್ಞವನ್ನು ಮಾಡಿಸುವೆನೆಂದು ಸಾರಿ, ತಯಾರಿ ಮಾಡಹತ್ತಿದರು. ತಟ್ಟೆಯ ಬಿಡಾರದಲ್ಲಿ ಸಾಲೆ ನ...

ಬ್ಯಾಂಕಿನ ಅರೆತೆರೆದ ಬಾಗಿಲನ್ನು ದೂಡಿ ಒಳಬಂದ ಪ್ರಹ್ಲಾದ, ಕೆಲಸದಲ್ಲಿ ಮಗ್ನಳಾಗಿದ್ದ ಸುಮಾಳ ಬಳಿಗೋಡಿ ಅವಳ ಪರ್‍ಸನ್ನು ತಡಕಾಡಿ ಹಣತೆಗೆದುಕೊಂಡು ಬಂದಷ್ಟೇ ವೇಗದಿಂದ ಹೊರಗೋಡಿದ್ದ. “ಏನು ಮಗರಾಯನ ಗಲಾಟೆ” ಹತ್ತಿರದಲ್ಲಿದ್ದ ದಿನಕರನ ಪ್ರಶ್ನೆಗೆ “ಅವನದ್ದು ಯಾವಾ...

ನನ್ನ ಜನ್ಮ ಗ್ರಾಮಕ್ಕೆ ಹೋಗದೆ ನಾಲ್ಕಾರು ವರುಷಗಳಾಗಿದ್ದವು. ಮೇ ತಿಂಗಳ ಬೆವರನ್ನು ತೋಟದ ಅಬ್ಬಿಯಲ್ಲಿ ತೊಳೆದು ತಂಪಾಗಿ ಒಂದು ಮಾಸ ಕಳೆದು ಬರುವ ಎಂದು ಹಳ್ಳಿಗೆ ಹೋಗಿದ್ದೆ. ಮನೆಗೆ ತಲುಪಿದ ಮರುದಿನವೇ ತಂಗಿಯ ಮನೆಗೆ ಹೋಗುವದು ನನ್ನ ಪದ್ಧತಿ. ನಮ್ಮ ಕೇರಿಯ ಎದುರಿನ ಗುಡ್ಡೆಯನ್ನು ಹತ್...