ವಿಪರ್ಯಾಸಗಳು

ಅಲ್ಲಿ ವಿದ್ವತ್ತಿನದೇ ಮೇಲುಗೈ
ದ್ವೈತಕ್ಕೂ ಅಲ್ಲ, ಅದ್ವೈತಕ್ಕೂ ಅಲ್ಲ
ಅಸಲಿಗೆ ದ್ವೈತ ಅದ್ವೈತಗಳೇ
ಇಲ್ಲ, ಎಲ್ಲ ವಿದ್ವತ್ತಿನ ಕರಾಮತ್ತು
ಹೊಸತು ಹುಡುಕುವ ಪರಿ
ಪರಿಪರಿಯಾಗಿ

ಇನ್ನೊಂದೆಡೆ ಕಾಂಚಾಣದ
ಕುಣಿತ
ಸತ್ಯಕ್ಕೂ ಸ್ಥಳವಿಲ್ಲ
ಜ್ಞಾನಕ್ಕೂ ಬೆಲೆಯಿಲ್ಲ
ಸತ್ಯ ಜ್ಞಾನಗಳೆರಡು
ಕಾಂಚಾಣದ ಮಾರುಕಟ್ಟೆಯಲ್ಲಿ
ಇಡಲ್ಪಟ್ಟಿವೆ ಗಿರವಿಗೆ

ಅಲ್ಲೊಂದು ಸೌಂದರ್ಯ ರಾಶಿ
ನೈಜತೆಯೋ, ಕೃತಕತೆಯೋ,
ಅರಿಯದಂತಿರೆ ಅಲಂಕಾರ
ನಟನೆಯೇ ನಿಜವೆಂಬ
ಭ್ರಮೆಯ ಬದುಕು

ಮತ್ತಲ್ಲಿ ಮಠಗಳು ಆಶ್ರಮಗಳು
ಸಭ್ಯಸ್ಥರ ಕೂಟ
ಖಾವಿಬಟ್ಟೆಗಳ ಮೇಲಾಟ

ವಿದ್ಯೆ ಬುದ್ಧಿಗಳ ಆಗರ
ಸಹನೆ ಸಂಯಮಗಳ ಸಾಗರ
ಆದರೂ ಖಾವಿ ಬಟ್ಟೆಯಲ್ಲೂ ಕಾಮಿ
ಅಲ್ಲಿಯೂ ಅಂಟಿದ ರಕ್ತದ ಕಲೆ
ಅನ್ಯಾಯ ಅನಾಚಾರ ವ್ಯಭಿಚಾರಗಳ ಬಲೆ

ಮತ್ತೊಂದು ಕಾಲ ಕಾಯುತ್ತಿದೆ
ವಿಧ್ವಂಸಕರೆ ವಿಧ್ವಾಂಸರಾಗುವರು
ಜಾರೆಯೆಂದರೆ ಗರತಿ
ಸನ್ಯಾಸಿಯೆಂದರೆ ಸಂಸಾರಿ
ಚಾಂಡಾಲನೆ ಗುರುವಾಗುವನು
ಅರ್ಥವಾಗದ
ಮತ್ತೆ ಅರ್ಥೈಸಲಾಗದ
ಆದರೂ ಜಾಣ ಕುರುಡು ನಾಟಕಗಳು
ಎಂಥೆಂಥದೋ ವಿಪರ್ಯಾಸಗಳು


Previous post ನಾ…. ಬರುತ್ತೇನೆ ಕೇಳು!
Next post ಕವಿಯ ಹುಚ್ಚು ಮನಸ್ಸು

ಸಣ್ಣ ಕತೆ

  • ತ್ರಿಪಾದ

    ವಿಲಿಯಂ ಜೋನ್ಸ್ ಭಾರತದ ದೇವನಹಳ್ಳಿ ವಿಮಾನ ನಿಲ್ದಾಣದಲ್ಲಿ ಇಳಿದಾಗ, ಅವನ ಮನವನ್ನು ಕಾಡುತ್ತಿದ್ದ ಪ್ರೀತಿ ಅವನ ಹೆಂಡತಿ ಮಕ್ಕಳೊಂದಿಗೆ ಅವನನ್ನು ಅತಿಯಾಗಿ ಹಚ್ಚಿಕೊಂಡಿದ್ದ ಅವನ ಪ್ರೀತಿಯ ನಾಯಿ… Read more…

  • ಕೇರೀಜಂ…

    ಮಂಜೇಲ್ಮುಂಜೇಲಿ ಯೆದ್ಬೇಗ್ನೇ ಕೇರ್ಮುಂದ್ಗಡೆ ಸಿವಪ್ಪ ಚೂರಿ, ಕತ್ತಿ, ಕುಡ್ಗೋಲು, ಯಿಳ್ಗೆಮಣೆ, ಕೊಡ್ಲಿನ... ಮಸ್ಗೆಲ್ಗೆ ಆಕಿ, ಗಸ್ಗಾಸಾ... ನುಣ್ಗೆ ತ್ವಟ್ವಟ್ಟೇ... ನೀರ್ಬಟ್ಗಾಂತಾ, ಜ್ವಲ್ಸುರ್ಗಿಗ್ಯಾಂತಾ, ಅವ್ಡುಗಚ್ಗೊಂಡೂ ಮಸೆಯತೊಡ್ಗಿದ್ವನ... ಕಟ್ದಿ ತುರ್ಬು,… Read more…

  • ಅವರು ನಮ್ಮವರಲ್ಲ

    ಪೇದೆ ಪ್ರಭಾಕರ ಫೈಲುಗಳನ್ನು ನನ್ನ ಟೇಬಲ್ ಮೇಲೆ ಇಟ್ಟು, ‘ಸರ್ ಸಾಹೇಬರು ನಿಮ್ಮನ್ನು ಕರೆಯುತ್ತಿದ್ದಾರೆ’ ಎಂದು ಹೇಳಿ ಮಾಮೂಲಿನಂತೆ ಹೊರಟು ಹೋದ. ಸಮಯ ನೋಡಿದೆ. ೧೦:೩೦ ಗಂಟೆ.… Read more…

  • ಅಮ್ಮ

    ‘ಅಮ್ಮನ್ಗೆ ಯಿಡೀ ರಾತ್ರೆಲ್ಲ ವಾಂತಿ ಭೇದಿ ವುಬ್ಸ ಆಯಾಸ... ಕುತ್ರೂಸಾ... ಬಾಳಾ ಯೆಚ್ಕುಡ್ಮೆಯಾಗಿ ರಾಮ್ಪಾರ್ದ ಡಾಕಿಟ್ರಾತ್ರ ತೋರ್ಸಿದ್ರು ಗುಣಾಗಿಲ್ಲ! ನೀ ಆದಷ್ಟು ಗಡಾನೇ ವೂರ್ಗೆ ಬಾಣ್ಣ...’ ಸೇಕ್ರಿ,… Read more…

  • ಡಿಪೋದೊಳಗಣ ಕಿಚ್ಚು…

    ಚಿತ್ರ: ವಾಲ್ಡೊಪೆಪರ್‍ ಬೆಳಿ… ಬೆಳಿಗ್ಗೆನೇ… ಡಿಪೋದಲ್ಲಿ, ಜನ್ರು ಜಮಾಯಿಸಿದ್ದು ಕಂಡು, ಡಿಪೋ ಮ್ಯಾನೇಜರ್ ಮನೋಜ್ ಪಾಟೀಲರ ಹೃದಯ ಬಾಯಿಗೆ ಬಂತು. ’ಮ್ಯಾನೇಜರ್ ಡಿಪೋದಲ್ಲಿ ಕ್ಷಣ ಇಲ್ಲೆಂದ್ರೆ ಸಾಕು…… Read more…