ಕವಿಯ ಹುಚ್ಚು ಮನಸ್ಸು

ಕವಿಯ ಹುಚ್ಚು ಮನಸ್ಸು
ಕುಳಿತಲ್ಲಿ ಕೂರುವುದಿಲ್ಲ
ಒಂದು ವಸ್ತುವಿನಿಂದ
ಇನ್ನೊಂದು ವಸ್ತುವಿಗೆ
ನೆಗೆಯುತ್ತಲೇ ಇರುತ್ತದೆ

ಅದು ಉದಾತ್ತವಾಗಲು ಬಯಸುತ್ತಲೇ
ಸಣ್ಣತನವನ್ನೂ ತೋರಿಸುತ್ತದೆ
ತಥಾಗತನ ಧ್ಯಾನದಲ್ಲಿ ಕೂಡ
ಯೋನಿ ಶಿಶ್ನಗಳ ಕುರಿತು
ಯೋಚಿಸುತ್ತದೆ

ಶಬ್ದ ನಿಶ್ಯಬ್ದಗಳ
ಶ್ವಾಸ ನಿಶ್ವಾಸಗಳ
ಬೆನ್ನು ಹತ್ತುತ್ತದೆ
ತೆರೆದ ಕಿಟಕಿಗಳ
ಒಳಗೆ ಹಣಿಕುತ್ತದೆ

ಕಾಣುವ ಸಂಗತಿಗಳನ್ನು
ಕಡೆಗಣಿಸುತ್ತದೆ
ಕಾಣದ ಸಂಗತಿಗಳನ್ನು
ಕಂಡಿದ್ದೇನೆಂದು
ಭ್ರಮಿಸುತ್ತದೆ

ಸರಿ ಸರಿ ಯೋಚಿಸುದದನೆಲ್ಲ
ಬರೆಯಬೇಕಾಗಿಲ್ಲ
ಎಲ್ಲ ಮುಚ್ಚು ಮರೆಗಳನೂ
ತೆರೆದು ಮುಖಕ್ಕೆ
ಹಿಡಿಯಬೇಕಾಗಿಲ್ಲ

ತೋರಿಸು ಆಕಾಶ, ಸಮುದ್ರ.
ಹಿಮಾಲಯ, ಅಚ್ಛೋದ ಸರೋವರ
ನಾಗಾರ್ಜುನ ಸಾಗರ ಅಣೆಕಟ್ಟು
ಕನಾಟ್ ಸರ್ಕಲು
ಶೆರಾಟನ್ ಹೋಟೆಲು

ಒಂದೊಂದು ವಿಚಾರಗಳನ್ನೂ
ಚಿನ್ನದ ನೀರಲ್ಲಿ ಅದ್ದಿ ತೆಗೆ-ಆಗ ಅವು
ಥಳಥಳಿಸುವುವು-ಅವರವರ
ಪ್ರಿಯತಮೆಯರ ಕೊರಳ
ಆಭರಣಗಳಂತೆ

ಜನರು ಆದರಿಸುವರು ಮಹಾ
ದಾರ್ಶನಿಕನೆಂದು ಹೊಗಳುವರು
ಎಲ್ಲರೂ ಕರೆಯುವರು
ಯಾರೂ ತಮ್ಮ ಹೆಂಡಂದಿರನ್ನು
ನಿನ್ನ ಜತೆ ಬಿಡಲು ಹೆದರರು
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ವಿಪರ್ಯಾಸಗಳು
Next post ಸೂರ್ಯ

ಸಣ್ಣ ಕತೆ

  • ಸ್ವಯಂಪ್ರಕಾಶ

    ಇಸ್ತ್ರೀ ಇಲ್ಲದ ಸೀರೆ, ಬಾಚದ ತಲೆ... ಕೈಯಲ್ಲಿ ಚೀಲದ ತುಂಬ ತರ್ಕಾರಿಗಳೊಂದಿಗೆ ಮಾರುಕಟ್ಟೆಯಿಂದ ಹೊರಗೆ ಬರುವುದು ಭ್ರಮರೆ’ಯೇ... ಕಂಡು ತುಂಬಾ ಆಶ್ಚರ್ಯವಾಯಿತು. ರೋಡಿನ ಈ ಕಡೆ ಕಾರು… Read more…

  • ತ್ರಿಪಾದ

    ವಿಲಿಯಂ ಜೋನ್ಸ್ ಭಾರತದ ದೇವನಹಳ್ಳಿ ವಿಮಾನ ನಿಲ್ದಾಣದಲ್ಲಿ ಇಳಿದಾಗ, ಅವನ ಮನವನ್ನು ಕಾಡುತ್ತಿದ್ದ ಪ್ರೀತಿ ಅವನ ಹೆಂಡತಿ ಮಕ್ಕಳೊಂದಿಗೆ ಅವನನ್ನು ಅತಿಯಾಗಿ ಹಚ್ಚಿಕೊಂಡಿದ್ದ ಅವನ ಪ್ರೀತಿಯ ನಾಯಿ… Read more…

  • ಅವನ ಹೆಸರಲ್ಲಿ

    ಎಂದಿನಂತೆ ಬೆಳಿಗ್ಗೆ ಮಾಮೂಲಿ ಸಮಯಕ್ಕೆ ಎಚ್ಚರವಾದರೂ, ಎಂದಿನ ಉಲ್ಲಾಸ ನನ್ನಲ್ಲಿರಲಿಲ್ಲ. ತಿರುಗುತ್ತಿರುವ ಫ್ಯಾನಿನತ್ತ ದೃಷ್ಟಿ ಇಟ್ಟು ಮಲಗಿಕೊಂಡೇ ಆಲೋಚನೆ ಮಾಡುತ್ತಿದ್ದೆ. ನಿನ್ನೆ ತಾನೇ ಸರಕಾರಿ ಕೆಲಸದಿಂದ ನಿವೃತ್ತಿಯಾಗಿ… Read more…

  • ಇರುವುದೆಲ್ಲವ ಬಿಟ್ಟು

    ನಿಂತ ರೈಲು ಬೋಗಿಯೊಳಗಿಂದ ನನ್ನ ದೃಷ್ಟಿ ಹೊರಗಿನ ನಿಲ್ದಾಣವನ್ನು ವೀಕ್ಷಿಸುತ್ತಿತ್ತೇ ಹೊರತು ನನ್ನ ಮನಸ್ಸು ಮಾತ್ರ ನಾಗಾಲೋಟದಿಂದ ಓಡುತ್ತಿತ್ತು. ಒಂದು ರೀತಿಯಲ್ಲಿ ಆಲೋಚನೆಗಳು ನನ್ನ ಗೆಳೆಯ ಎಂದೇ… Read more…

  • ಪತ್ರ ಪ್ರೇಮ

    ಅಂಚೆ ಇಲಾಖೆಯ ಅದೊಂದು ಸಮಾರಂಭ. ಇಲಾಖೆಯ ಸಿಬ್ಬಂದಿ ವರ್ಗದ ಕಾರ್ಯದಕ್ಷತೆ ಕುರಿತು ಕೇಂದ್ರ ಕಾರ್ಮಿಕ ಸಚಿವ ಆಸ್ಕರ್‍ ಫರ್ನಾಂಡಿಸ್ ಅಮೆರಿಕಾದಲ್ಲಿ ನಡೆದ ಒಂದು ಸತ್ಯ ಘಟನೆ ಎಂದು… Read more…

cheap jordans|wholesale air max|wholesale jordans|wholesale jewelry|wholesale jerseys