Home / ಕವನ / ಕವಿತೆ / ಕವಿಯ ಹುಚ್ಚು ಮನಸ್ಸು

ಕವಿಯ ಹುಚ್ಚು ಮನಸ್ಸು

ಕವಿಯ ಹುಚ್ಚು ಮನಸ್ಸು
ಕುಳಿತಲ್ಲಿ ಕೂರುವುದಿಲ್ಲ
ಒಂದು ವಸ್ತುವಿನಿಂದ
ಇನ್ನೊಂದು ವಸ್ತುವಿಗೆ
ನೆಗೆಯುತ್ತಲೇ ಇರುತ್ತದೆ

ಅದು ಉದಾತ್ತವಾಗಲು ಬಯಸುತ್ತಲೇ
ಸಣ್ಣತನವನ್ನೂ ತೋರಿಸುತ್ತದೆ
ತಥಾಗತನ ಧ್ಯಾನದಲ್ಲಿ ಕೂಡ
ಯೋನಿ ಶಿಶ್ನಗಳ ಕುರಿತು
ಯೋಚಿಸುತ್ತದೆ

ಶಬ್ದ ನಿಶ್ಯಬ್ದಗಳ
ಶ್ವಾಸ ನಿಶ್ವಾಸಗಳ
ಬೆನ್ನು ಹತ್ತುತ್ತದೆ
ತೆರೆದ ಕಿಟಕಿಗಳ
ಒಳಗೆ ಹಣಿಕುತ್ತದೆ

ಕಾಣುವ ಸಂಗತಿಗಳನ್ನು
ಕಡೆಗಣಿಸುತ್ತದೆ
ಕಾಣದ ಸಂಗತಿಗಳನ್ನು
ಕಂಡಿದ್ದೇನೆಂದು
ಭ್ರಮಿಸುತ್ತದೆ

ಸರಿ ಸರಿ ಯೋಚಿಸುದದನೆಲ್ಲ
ಬರೆಯಬೇಕಾಗಿಲ್ಲ
ಎಲ್ಲ ಮುಚ್ಚು ಮರೆಗಳನೂ
ತೆರೆದು ಮುಖಕ್ಕೆ
ಹಿಡಿಯಬೇಕಾಗಿಲ್ಲ

ತೋರಿಸು ಆಕಾಶ, ಸಮುದ್ರ.
ಹಿಮಾಲಯ, ಅಚ್ಛೋದ ಸರೋವರ
ನಾಗಾರ್ಜುನ ಸಾಗರ ಅಣೆಕಟ್ಟು
ಕನಾಟ್ ಸರ್ಕಲು
ಶೆರಾಟನ್ ಹೋಟೆಲು

ಒಂದೊಂದು ವಿಚಾರಗಳನ್ನೂ
ಚಿನ್ನದ ನೀರಲ್ಲಿ ಅದ್ದಿ ತೆಗೆ-ಆಗ ಅವು
ಥಳಥಳಿಸುವುವು-ಅವರವರ
ಪ್ರಿಯತಮೆಯರ ಕೊರಳ
ಆಭರಣಗಳಂತೆ

ಜನರು ಆದರಿಸುವರು ಮಹಾ
ದಾರ್ಶನಿಕನೆಂದು ಹೊಗಳುವರು
ಎಲ್ಲರೂ ಕರೆಯುವರು
ಯಾರೂ ತಮ್ಮ ಹೆಂಡಂದಿರನ್ನು
ನಿನ್ನ ಜತೆ ಬಿಡಲು ಹೆದರರು
*****

Tagged:

Leave a Reply

Your email address will not be published. Required fields are marked *

“ಸುಭದ್ರೆ, ನೀನು ಎಂದು….” ದೈನ್ಯವಾಣಿಯಿಂದ ಕೇಳಿಕೊಂಡ ಶ್ರೀಧರ. “ತಡೆ ಶ್ರೀಧರ. ಹ್ಞ. ಹತ್ತಿರ ಬರಬೇಡ. ಪ್ರತಿಯೊಂದು ಕಾರ್ಯಕ್ಕೂ ಮುಹೂರ್ತ ಬರಬೇಕು; ಸ್ವಲ್ಪ ಕಾಲ ತಡೆ. ಒಮ್ಮೆ ಹೇಳಿದೆ: ನಾನು ನಿನ್ನವಳೆಂದು, ನಂಬಿಕೊ.” “ಎಷ್ಟು ದಿನ ಈ ನ...

ಮಳೆ ಜೋರಾಗಿ ಸುರಿಯುತ್ತಿತ್ತು. ಚಾವಣಿ ತೂತಾಗಿ ಸೋರುತ್ತಿದ್ದುದರಿಂದ ಸಾವಿತ್ರಿಗೆ ನಿದ್ದೆ ಇರಲಿಲ್ಲ. ಅವಳ ಉಗ್ಗವನದೂ ಅದೇ ಕತೆ. ಒಂದು ಮೂಲೆಯಲ್ಲಿ ಉಗ್ಗವನಿಗೆ ಒರಗಿಕೊಂಡು ಹಳೇ ಕಂಬಳಿ ಹೊದ್ದು ಸಾವಿತ್ರಿ ತೂಕಡಿಸುತ್ತಿದ್ದಳು. ಬಾಗಿಲ ಸಂದಿನಿಂದ ಆಗಾಗ ಚಳಕ್ಕನೆ ಕಾಣಿಸಿಕೊಳ್ಳುವ ಮಿ...

ದೀಪಾವಳಿಯ ಸೂಟಿಯನ್ನು ಕಳೆಯಲು ಊರಿಗೆ ಹೋಗಿದ್ದೆ. ಹಳ್ಳಿಗೆ ಹೋದಾಗೆಲ್ಲ ಕತೆಯ ಸುಬ್ಬಣ್ಣನ ಮನೆಗೆ ಹೋಗದಿದ್ದರೆ ನನ್ನ ಮನಸ್ಸು ಕೇಳುವದಿಲ್ಲ. ಊರಿಗೆ ಬಂದು ತನ್ನ ಮನೆಗೆ ಬರದಿದ್ದರೆ ಸುಬ್ಬಣ್ಣ ಬಿಡುತ್ತಾನೇ? ಅವನ ಆಮಂತ್ರಣ ಬರುವ ಮುಂಚೆಯೇ ಹೋಗುವದು ಉಚಿತವೆಂದು ತೋರಿತು. ಅವನ ಕತೆ ಕೇ...

ಒಂದು ತಿಂಗಳ ಮಗು ಹೆನ್ರಿ ನೋಡಲು ಬಲು ಮುದ್ದಾಗಿದ್ದ. ಸೇಬಿನ ಕೆನ್ನೆಗಳು, ದೊಡ್ಡ ಕಪ್ಪು ಕಣ್ಣುಗಳು, ತಲೆಯಲ್ಲಿ ಕೆಂಚು ಕೂದಲು, ನೀಳ ಮೂಗು, ಮುದ್ದಾದ ಪುಟ್ಟ ಬಾಯಿ, ನೋಡಿದೊಡನೆ ಹೇಳಬಹುದಿತ್ತು ಆ ಮಗು ಬ್ರಿಟಿಷ್ ತಂದೆ ತಾಯಿಗೆ ಹುಟ್ಟಿದವನೆಂದು. ತಂದೆ ಸ್ಮಿಥ್ ಮತ್ತು ತಾಯಿ ಮೇರಿಗೆ...

ಕೊನೆಗೊಮ್ಮೆ ಶಂಕರ ಹೂಂಗುಟ್ಟಲೇಬೇಕಾಯಿತು. “ಹುಡುಗಿ ಮನಸ್ಸಿಗೆ ಬಂದರೆ ಮಾತ್ರ ಆಗಿ. ಈ ವಿಷಯದಲ್ಲಿ ಒತ್ತಾಯಮಾಡಬರುತ್ತದೆಯೇ?” ಎಂದು ಶಿವರಾಮ ಹೆಗಡೆಯವರು ಶಂಕರನನ್ನು ಹೊರಡಿಸಿದರು. ದಾರಿಯುದ್ದಕ್ಕೂ ಹೆಗಡೆಯವರು ತಮ್ಮ ಮಗಳ ಗುಣಗಾನವನ್ನು ಪ್ರಸ್ತುತ ಅಪ್ರಸ್ತುತ ಪ್ರಶಂಸೆಗಳಿಂದ...

ಅಡಿಗೆಯ ಮನೆಯಿಂದ ಉಮೆಯು ಓಡಿ ಬಂದು “ನೀರಿನ ಕೊಡದ ಬಳಿಗೆ ಒಂದು ಕಪ್ಪೆ ಕುಳಿತಿದೆ. ಹೊರಗೆ ಹಾಕಿ ಕೊಡಿ” ಅಂದಳು. ತನಗೆ ಹೆದರದವಳು ಒಂದು ಕಪ್ಪೆಗೆ ಅಂಜುತ್ತಾಳಲ್ಲ ಅಂದುಕೊಂಡು ಉಮೇಶ ಒಳಗೆ ಬಂದ. ಕಪ್ಪೆಯು ಭದ್ರಾಸನ ಹಾಕಿತ್ತು. ಉಮೇಶ ಒಂದು ಸೌದೆಯಿಂದ ಕೊಡವನ್ನು ಕುಟ್ಟಿ...