Home / ಕವನ / ಕವಿತೆ / ನಾ…. ಬರುತ್ತೇನೆ ಕೇಳು!

ನಾ…. ಬರುತ್ತೇನೆ ಕೇಳು!

ಒಂದಲ್ಲ ಒಂದು ದಿನ ನಿನ್ನ
ಕನಸಿನಲ್ಲಿ ಸದ್ದಿಲ್ಲದೆ ಸುಳಿದು
ಬರುವವಳೇ…. ನಾನು
ಜಾಡಿಸಿ ಒದ್ದೋಡಿಸಿದರೆ
ಬಾಗಿಲ ಕಟಕಟಾಯಿಸಿವೆನು.
ನಿನ್ನ ಪೊಗರು ಮಾತೆಲ್ಲ ಗಾಳಿಯಲ್ಲಿ
ತೂರಿ ಹೋಗುವ ಹಾಗೆ ಗೆಜ್ಜೆ-
ಝಣಗುಟ್ಟಿಸುವೆನು, ಕಣ್-
ತಪ್ಪಿಸಿಯಾದರೂ ಒಳನುಗ್ಗುವೆನು.

‘ಹಠಮಾರಿ ಹೆಣ್ಣು’ ಎಂದು
ಅನ್ನುವಿಯಾದರೆ ಅನ್ನು, ಆದರೆ
ಅತ್ತಿಂದಿತ್ತ ಗೋಣಾಡಿಸಿ ಮಾತ್ರ
ತುಂಟ ಕಂಗಳಿಗೆ ಎರಚದಿರು ಮಣ್ಣು,
ದಯವಿಟ್ಟು ದಯೆಯಿಟ್ಟು ದಾರಿಬಿಡು.
ಕೆಣಕದೆ, ಒಳಗೇನಿದೆಯೆಂದು
ಇಣುಕಿ ನೋಡುವೆನು, ಗುಲಾಬಿ
ಮೃದುಪಾದದ ಹೆಜ್ಜೆಯಿಟ್ಟು
ನೋವಾಗದ ಹಾಗೆ ನಡೆದಾಡುವೆನು.
ಖಾಲಿಯೆನಿಸಿದರೆ ಒಂದಿಷ್ಟು
ಹಸಿರ ಬೆಳಸುವೆನು.

ನೋಡು: ನಾಳಿನ ದಿನ ಕಣ್ಣ ಪೊರೆ
ಕಳಚಿ, ನೆನಪು ನಿಚ್ಚಳವಾಗಿ,
ಮಸುಕು ಹೆಜ್ಜೆಯನ್ನಪ್ಪಿ, ನೀ…
ಬಿಕ್ಕಳಿಸುವಾಗ ಸಾವಿರ ಮೈಲುಗಳಾಚೆ
ಸಮಶೃತಿಯಲ್ಲಿ ನುಡಿಯಬಹುದು
ನನ್ನ ಗೆಜ್ಜೆಯ ಗುನುಗು.

ಆಗ: ಬಾಜಾ-ಬಜಂತ್ರಿ ನುಡಿಸಿ
‘ಸುಸ್ವಾಗತ’ ಫಲಕ ತೂಗು ಹಾಕಿದರೂ
ತಿರುಗಿ ನೋಡುವವಳಲ್ಲ ನಾನು.
ಎರಡೂ ಕೈ ಚಾಚಿ ‘ಬಾ’ ಎಂದು
ಕರೆದರೂ ಬರುವವಳಲ್ಲ ನಾನು
ಬರಬೇಕೆನಿಸಿದರೂ ಬರಲಾಗುವುದಿಲ್ಲ ಕೇಳು!
ಹಿಂದಿರುಗಿ ಬರಲಾರದಷ್ಟು ದೂರ
ಹೋದ ಮೇಲೆ ಹೇಗೆ ಬರುವುದು ಹೇಳು?


Tagged:

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಹೊರ ಕೋಣೆಯಲ್ಲಿ ಕಾಲೂರಿ ಕೂತು ಬೀಡಿ ಕಟ್ಟುತ್ತಿದ್ದ ಸುಮಯ್ಯಾಗೆ ಕಣ್ಣು ಮತ್ತು ಕಿವಿಯ ಸುತ್ತಲೇ ಆಗಾಗ ಗುಂಯ್.. ಎನ್ನುತ್ತಾ ನೊಣವೊಂದು ಸರಿಸುಮಾರು ಹದಿನೈದು ನಿಮಿಷಗಳಿಂದ ಹಾರಾಡುತ್ತಾ ಕಿರಿಕಿರಿ ಮಾಡುತ್ತಿತ್ತು. ಹಿಡಿದು ಹೊಸಕಿ ಹಾಕಬೇಕೆಂದರೆ ಕೈಗೆ ಸಿಗದೆ ಮೈ ಪರಚಿಕೊಳ್ಳಬೇಕೆನ್ನ...

ಮೂಲ: ಗಾಯ್ ಡಿ ಮೊಪಾಸಾ ಗಗನಚುಂಬಿತವಾದ ಬೀಚ್‌ ವೃಕ್ಷಗಳೊಳಗಿಂದ ತಪ್ಪಿಸಿಕೊಂಡು ಸೂರ್ಯ ಕಿರಣಗಳು ಹೊಲಗಳ ಮೇಲೆ ಬೆಳಕನ್ನು ಕೆಡುವುವುದು ಬಲು ಅಪರೂಪ. ಬೆಳೆದ ಹುಲ್ಲನ್ನು ಕೊಯ್ದುದರಿಂದಲೂ, ದನಗಳೂ ಕಚ್ಚಿ ಕಚ್ಚಿ ತಿಂದುದರಿಂದಲೂ ನೆಲವು ಅಲ್ಲಲ್ಲಿ ತಗ್ಗು ದಿನ್ನೆಯಾಗಿ ಒಡೆದು ಕಾಣುತ್ತಿ...