ಕನ್ನಡ ವಿರೋಧಿ ಸಮರಕ್ಕೆ

ಮೊಳಗಲಿ ಎಲ್ಲೆಡೆ ಕನ್ನಡ ಕಹಳೆ
ಕನ್ನಡ ವಿರೋಧಿ ಸಮರಕ್ಕೆ
ಕನ್ನಡಾಂಬೆಯ ಕ್ಷೇಮವ ಕಾಯುತ
ಕನ್ನಡರಥ ಮುನ್ನಡೆಸೋಕೆ
ಅನ್ನವನುಂಡು ವಿಷವನು ಉಗುಳುವ
ನಿರಭಿಮಾನಿಗಳ ಧಿಕ್ಕರಿಸಿ
ನಾಡಿನ ಏಳ್ಗೆಗೆ ದೀಕ್ಷೆಯ ತೊಟ್ಟ
ಅಭಿಮಾನಿಗಳ ಪುರಸ್ಕರಿಸಿ
ನಡೆಯಲಿ ಕನ್ನಡ ವಿರೋಧಿ ಸಮರ
ಬುವಿಯಲಿ ಅಗಲು ಕನ್ನಡ ಅಮರ
ಎಂದೋ ಏನೋ ನಾಡನು ತಟ್ಟಿದ
ಶತಮಾನಗಳ ಶಾಪಕ್ಕೆ
ಕಂಡೂ ಕಾಣದೆ ಅರೆನಿದ್ರಿಸುತಿಹ
ಕನ್ನಡಿಗರ ಒಳದೋಷಕ್ಕೆ
ಅಂತ್ಯವ ಹಾಡುವ ಬೇಗನೆ ಬನ್ನಿ
ಕನ್ನಡಕ್ಕೆ ನಾವ್ ಮುಡಿಪು ಬನ್ನಿ
ಪಂಪ ರನ್ನ ಸರ್ವಜ್ಞ ದಾಸರ
ಕಾವ್ಯದ ಪಂಜಿನ ಬೆಳಕಲ್ಲಿ
ವೀರವಾಣಿ ಚೆನ್ನಮ್ಮನ ಖಡ್ಗವು
ತೋರಿದ ಮಾರ್ಗವ ಹಿಡಿಯುತಲಿ
ಮುನ್ನುಗ್ಗುವ ನಾವ್ ಶತ್ರುವನಳಿಸಿ
ಮುಗಿಲಿಗೆ ಕನ್ನಡ ಪತಾಕೆ ಹಾರಿಸಿ
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಮಂಡಲ
Next post ಶ್ರೀ ವಿದ್ಯಾರಣ್ಯರ ಅಡಿದಾವರೆಯಲ್ಲಿ

ಸಣ್ಣ ಕತೆ

  • ರಾಧೆಯ ಸ್ವಗತ

    ಈಗ ಸೃಷ್ಟಿಕರ್ತನ್ನು ದೂಷಿಸುತ್ತಾ ಕಾಲ ಕಳೆಯುತ್ತಿದ್ದೇನೆ ಕೃಷ್ಣಾ. ಹೆಂಗಸರಿಗ್ಯಾಕೆ ಅವರ ಪ್ರಿಯಕರರಿಗಿಂತ ಹೆಚ್ಚು ಆಯುಸ್ಸನ್ನು ಅವನು ಕೊಡುತ್ತಾನೋ? ನೀನು ಹೇಳುತ್ತಿದ್ದುದು ಮತ್ತೆ ಮತ್ತೆ ನೆನಪಾಗುತ್ತಿದೆ: "ರಾಧೆ, ಈ… Read more…

  • ಯಿದು ನಿಜದಿ ಕತೀ…

    ಯೀ ಕತೀನ ನಾ... ಯೀಗಾಗ್ಲೇ, ಬರ್ಲೇಬೇಕಾಗಿತ್ತು! ಆದ್ರೆ ನಾ ಯೀತನ್ಕ...  ಯಾಕೆ ಬರ್ಲೀಲ್ಲ? ನನ್ಗೇ ಗೊತ್ತಿಲ್ಲ. ಯಿದು ನಡೆದಿದ್ದು... ೧೯೬೬ರಲ್ಲಿ. ‘ವುಗಾದಿ ಮುಂದೆ ತಗಾದಿ...’ ಅಂಬಂಗೆ,  ವುಗಾದಿ… Read more…

  • ಪಾಠ

    ಚೈತ್ರ ಮಾಸದ ಮಧ್ಯ ಕಾಲ. ಬೇಸಿಗೆ ಕಾಲಿಟ್ಟಿದೆ. ವಸಂತಾಗಮನ ಈಗಾಗಾಲೇ ಆಗಿದೆ. ಊರಲ್ಲಿ ಸುಗ್ಗಿ ಸಮಯ. ಉತ್ತರ ಕರ್ನಾಟಕದ ನಮ್ಮ ಭಾಗದಲ್ಲಿ ಹತ್ತಿ ಜೋಳ ಪ್ರಮುಖ ಬೆಳೆಗಳು.… Read more…

  • ಕ್ಷಮೆ

    ಸುಂದರರಾಜ್ ಬೆಂಗಳೂರಿನಲ್ಲಿಯೇ ಹುಟ್ಟಿಬೆಳೆದವನು. ಹಾಗಾಗಿ ಅವನು ಕನ್ನಡ ಮಾಧ್ಯಮದಲ್ಲಿಯೇ ವಿಧ್ಯಾಭ್ಯಾಸ ಮಾಡಿ ಮುಂದೆ ಕಾಲೇಜಿನ ದಿನಗಳಲ್ಲಿ ಇಂಗ್ಲೀಷ್ ಮಾಧ್ಯಮದಲ್ಲಿ ಓದಿದ್ದ. ತನ್ನ ಮಾತೃ ಭಾಷೆಯಾದ ತಮಿಳು ಸಾಧಾರಣವಾಗಿ… Read more…

  • ಇರುವುದೆಲ್ಲವ ಬಿಟ್ಟು

    ಕುಮಾರನಿಗೆ ಪಕ್ಕದ ಮನೆಯ ರೆಡಿಯೋದಲ್ಲಿ ಬಸಪ್ಪ ಮಾದರ ಧ್ವನಿ ಕೇಳಿ ಎಚ್ಚರವಾಯ್ತು. ದೇಹಲಿ ಕೇಂದ್ರದಿಂದ ವಾರ್ತೆಗಳು ಬರುತ್ತಿದ್ದವು. ಹಾಸಿಗೆಯಿಂದ ಎದ್ದವನೆ ಕದ ತೆಗೆದ. ಬೆಳಗಿನ ಸೊಗಸು ಕೊರೆವ… Read more…

cheap jordans|wholesale air max|wholesale jordans|wholesale jewelry|wholesale jerseys