ಎತ್ತಿರಿ ಆರತಿ ಮುಕ್ತಾಂಗನೆಯರೆಲ್ಲ

ಎತ್ತಿರಿ ಆರತಿ ಮುಕ್ತಾಂಗನೆಯರೆಲ್ಲ
ಅರ್ಥಿಲೆ ಶ್ರೀ ವೀರಭದ್ರನಿಗೆ || ಪ ||

ಗಿರಿಜಹರ‍ ಶ್ರೀ ವರಕುಮಾರಗೆ
ಸರಸಿಜಾಕ್ಷಿಯರೆಲ್ಲ ಬಂದು
ಸರಿಗಮವನ್ನು ಪಾಡುತ ಧೀರ ಶ್ರೀವರ ವೀರಭದ್ರಗೆ || ಅ. ಪ. ||

ಕಿಡಿಗಣ್ಣು ಕೆಂಜಡಿ ನೊಸಲಿನೊಳು ವಿಭೂತಿ
ನಿನ್ನಯ ಪಾದ ಕೊರವಿಯ ಸಾಲು ಒಪ್ಪುವದು ಚಂದಾ
ಕಡಗ ಕಂಕಣ ತೋಳಬಾಪುರಿ ಕರ್ಣಕುಂಡಲದಿಂದ ಒಪ್ಪುತ
ಮಂಡಲಕ ಪತಿಹರನ ಬಲನೇತ್ರದಲಿ ಜನಿಸಿದ ವೀರಭದ್ರನಿಗೆ || ೦ ||

ಹರನ ಅಪ್ಪಣೆಯಿಂದ ಭರದ ವೀರಗಾಸಿ ತೊಟ್ಟು
ಛಲದಿ ದಕ್ಷನ ಕೊಂದ ದೇವಾ
ದೇವ-ದಾನವರೊಳಗೆ ಬಹುಶಮಶೂರನೆನಸಿದ ವೀರಭದ್ರಗೆ
ನಳಿನಮುಖಿಯರು ಬಂದು ಪಂಚದಾರುತಿ ಪಿಡಿದು ಜಪಿಸುತ || ೨ ||

ಉಗ್ರಮೂರುತಿ ವೀರಭದ್ರಗೆ
ಪ್ರಳಯಕಾಲದ ರುದ್ರನೆಂದು ಅವತಾರ ಶ್ರೀ ಜಗದೀಶಗೆ
ಪೊಡವಿಯೊಳು ಶಿಶುನಾಳನೆನಿಪ ಒಡೆಯ ಸದ್ಗುರುನಾಥನೊಲವಿಲೆ
ಇಳೆಯೊಳಗೆ ಸೊರಟೂರ ಗ್ರಾಮದಿ ನೆಲಸಿದಂಥಾ ಶ್ರೀ ವೀರಭದ್ರಗೆ || ೩ ||
*****

 

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಬಾಲೆರೆಲ್ಲರು ಮುತ್ತಿ ನೀಲಾಂಜನವನೆತ್ತಿ
Next post ಅಂಬಾಗಾರುತಿಯನ್ನು ರಂಬೇರು ಬೆಳಗಿರೆ

ಸಣ್ಣ ಕತೆ

  • ಇರುವುದೆಲ್ಲವ ಬಿಟ್ಟು

    ನಿಂತ ರೈಲು ಬೋಗಿಯೊಳಗಿಂದ ನನ್ನ ದೃಷ್ಟಿ ಹೊರಗಿನ ನಿಲ್ದಾಣವನ್ನು ವೀಕ್ಷಿಸುತ್ತಿತ್ತೇ ಹೊರತು ನನ್ನ ಮನಸ್ಸು ಮಾತ್ರ ನಾಗಾಲೋಟದಿಂದ ಓಡುತ್ತಿತ್ತು. ಒಂದು ರೀತಿಯಲ್ಲಿ ಆಲೋಚನೆಗಳು ನನ್ನ ಗೆಳೆಯ ಎಂದೇ… Read more…

  • ದಿನಚರಿಯ ಪುಟದಿಂದ

    ಮಂಗಳೂರಿನ ಹೃದಯ ಭಾಗದಿಂದ ಸುಮಾರು ೧೫ ಕಿ.ಮೀ. ದೂರದಲ್ಲಿರುವ ಚಿತ್ರಾಪುರ ಪೇಟೆ ಕೆಲವು ವಿಷಯಗಳಲ್ಲಿ ಪ್ರಖ್ಯಾತಿಯನ್ನು ಹೊಂದಿದೆ. ಸಿಟಿಬಸ್ಸುಗಳು ಇಲ್ಲಿ ಓಡಾಡುತ್ತಿಲ್ಲವಾದರೂ ಬಸ್ಸುಗಳಿಗೇನೂ ಕಮ್ಮಿಯಿಲ್ಲ. ಎಕ್ಸ್‌ಪ್ರೆಸ್ ಬಸ್ಸುಗಳು… Read more…

  • ಆಪ್ತಮಿತ್ರ

    ಧಾರಾಕಾರವಾಗಿ ಮಳೆ ಸುರಿಯುತ್ತಿತ್ತು. ದೊಡ್ಡದೊಡ್ಡ ಮರಗಳು ಭೋರ್ ಎಂದು ಬೀಸುವ ಗಾಳಿಯಲ್ಲಿ ತೂಗಾಡುತ್ತಿದ್ದವು. ಇಂಗ್ಲೆಂಡಿನ ಆ ಚಳಿ ಮಳೆಯಲ್ಲಿ ಎರಡು ಆಪ್ತಮಿತ್ರ ಜೀವಗಳು ಒಂದನ್ನು ಅನುಸರಿಸಿ ಇನ್ನೊಂದು… Read more…

  • ಬಾಳ ಚಕ್ರ ನಿಲ್ಲಲಿಲ್ಲ

    ತಂದೆಯ ಸಾವು ಕುಟುಂಬವನ್ನೇ ಬೀದಿಪಾಲು ಮಾಡಿತು. ಹೊಸಪೇಟೆಯ ಚಪ್ಪರದ ಹಳ್ಳಿಯಲ್ಲಿ ವಾಸವಾಗಿದ್ದ ಇಮಾಮ್ ಸಾಬ್ ಹಾಗೂ ಝೈನಾಬ್ ದಂಪತಿಗಳಿಗೆ ೬ ಹೆಣ್ಣು ಮಕ್ಕಳು, ಒಂದು ಗಂಡು ಮಗು.… Read more…

  • ನಂಬಿಕೆ

    ಮಧ್ಯರಾತ್ರಿ ನಿದ್ದೆಯಿಂದ ಎಚ್ಚೆತ್ತ ಕಾದ್ರಿ ಒಮ್ಮೆ ಎಡಕ್ಕೆ ಮತ್ತೊಮ್ಮೆ ಬಲಕ್ಕೆ ಹೊರಳಾಡಿದ. ಹೂ... ಹೂ.... ನಿದ್ರೆ ಬರಲಾರದು. ಎದ್ದು ಕುಳಿತು ಪಕ್ಕದ ಚಾಪೆಯತ್ತ ಕಣ್ಣಾಡಿಸಿದ ಪಾತು ಅವನ… Read more…

cheap jordans|wholesale air max|wholesale jordans|wholesale jewelry|wholesale jerseys