Home / ಕವನ / ಕವಿತೆ / ಎತ್ತಿರಿ ಆರತಿ ಮುಕ್ತಾಂಗನೆಯರೆಲ್ಲ

ಎತ್ತಿರಿ ಆರತಿ ಮುಕ್ತಾಂಗನೆಯರೆಲ್ಲ

ಎತ್ತಿರಿ ಆರತಿ ಮುಕ್ತಾಂಗನೆಯರೆಲ್ಲ
ಅರ್ಥಿಲೆ ಶ್ರೀ ವೀರಭದ್ರನಿಗೆ || ಪ ||

ಗಿರಿಜಹರ‍ ಶ್ರೀ ವರಕುಮಾರಗೆ
ಸರಸಿಜಾಕ್ಷಿಯರೆಲ್ಲ ಬಂದು
ಸರಿಗಮವನ್ನು ಪಾಡುತ ಧೀರ ಶ್ರೀವರ ವೀರಭದ್ರಗೆ || ಅ. ಪ. ||

ಕಿಡಿಗಣ್ಣು ಕೆಂಜಡಿ ನೊಸಲಿನೊಳು ವಿಭೂತಿ
ನಿನ್ನಯ ಪಾದ ಕೊರವಿಯ ಸಾಲು ಒಪ್ಪುವದು ಚಂದಾ
ಕಡಗ ಕಂಕಣ ತೋಳಬಾಪುರಿ ಕರ್ಣಕುಂಡಲದಿಂದ ಒಪ್ಪುತ
ಮಂಡಲಕ ಪತಿಹರನ ಬಲನೇತ್ರದಲಿ ಜನಿಸಿದ ವೀರಭದ್ರನಿಗೆ || ೦ ||

ಹರನ ಅಪ್ಪಣೆಯಿಂದ ಭರದ ವೀರಗಾಸಿ ತೊಟ್ಟು
ಛಲದಿ ದಕ್ಷನ ಕೊಂದ ದೇವಾ
ದೇವ-ದಾನವರೊಳಗೆ ಬಹುಶಮಶೂರನೆನಸಿದ ವೀರಭದ್ರಗೆ
ನಳಿನಮುಖಿಯರು ಬಂದು ಪಂಚದಾರುತಿ ಪಿಡಿದು ಜಪಿಸುತ || ೨ ||

ಉಗ್ರಮೂರುತಿ ವೀರಭದ್ರಗೆ
ಪ್ರಳಯಕಾಲದ ರುದ್ರನೆಂದು ಅವತಾರ ಶ್ರೀ ಜಗದೀಶಗೆ
ಪೊಡವಿಯೊಳು ಶಿಶುನಾಳನೆನಿಪ ಒಡೆಯ ಸದ್ಗುರುನಾಥನೊಲವಿಲೆ
ಇಳೆಯೊಳಗೆ ಸೊರಟೂರ ಗ್ರಾಮದಿ ನೆಲಸಿದಂಥಾ ಶ್ರೀ ವೀರಭದ್ರಗೆ || ೩ ||
*****

 

Tagged:

Leave a Reply

Your email address will not be published. Required fields are marked *

(ಒಂದು ಐತಿಹಾಸಿಕ ಕತೆ) ಹ್ಹಃ ಹ್ಹಃ ಹ್ಹಃ! ಅಹ್ಹಃ ಅಹ್ಹಃ ಅಹ್ಹಃ!! ಗಝುನಿ ಮಹಮೂದನಿಗೆ ಹಿಡಿಸಲಾರದ ನಗೆ. ನಕ್ಕು ನಕ್ಕು ಅವನ ಹೊಟ್ಟೆ ನೋಯುತ್ತಿದ್ದಿತು. ಆದರೂ ಅವನ ಆ ತಿರಸ್ಕಾರದ ನಗೆ ತಡೆಯಲಾರದಾಯಿತು. ಅದೊಂದು ಸುಪ್ರಸಿದ್ದವಾದ ಸೋಮನಾಥ ದೇವಾಲಯ. ಭಾರತದ ವೈಭವವನ್ನು ವಿಶ್ವಕ್ಕೆ ತೋ...

ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಕೀಲಿಕರಣ: ಎಮ್.ಎನ್.ಎಸ್.ರಾವ್