ಬಾಲೆರೆಲ್ಲರು ಮುತ್ತಿ ನೀಲಾಂಜನವನೆತ್ತಿ

ಬಾಲೆರೆಲ್ಲರು ಮುತ್ತಿ ನೀಲಾಂಜನವನೆತ್ತಿ
ಲೋಲ ಸದ್ಗುರುನಾಥನೋಲಗದಿ || ಪ ||

ಕೀಲಕುಂಡಲಿ ಬಲಿದು ಮರುತನ
ಮೇಲಕೆಬ್ಬಿಸಿ ನಿಂತು ನಿಜನಲಿ
ಮೂಲ ಬ್ರಹ್ಮಾಲಯ ತುದಿನವ-
ಮಾಲಿನೊಳು ನೆಲಸಿರ್ಪ ದೇವಿಗೆ || ೧ ||

ಮಡಿ‌ಉಟ್ಟು ಮೈಲಿಗಿಕಡಿಗಿಟ್ಟು ಕೈಯಲಿ
ಬಿಡದೆ ಪಂದಳಗಿಯ ಪಿಡಿದುಕೊಂಡು
ಧೃಢದಿ ಮಂತ್ರವ ನುಡಿದು ಸಾಕ್ಷಾತ್ ನದಿಗಳಿಗೆ ನೈವೇದ್ಯವನರ್ಪಿಸಿ
ಸಡಗರದ ಸುವರ್ಣಪೀಠದ ಗುಡಿಯೊಳು ಅಡಗಿರ್ಪ ದೇವಿಗೆ || ೨ ||

ಕುಸುಮಗಂಧಿಯರು ಸಂತೋಷದಿಂದ ಕೂಡುತ
ಎಸೆವ ಸುಗಂಧ ಪತ್ರಿಯ ಧರಿಸಿ
ಶಶಿಕಿರಣ ತೇಜಃಪ್ರಕಾಶದ ಪಸರಿನೊಳು ಪರದೇಶಿ ಎನಿಸಿದ
ವಸುಧಿಯೊಳು ಶಿಶುನಾಳಧೀಶನ ಬೆಳಕಿನೊಳು ಬೆಳಗುತಿಹ ದೇವಿಗೆ || ೩ ||
*****

 

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಸೆಪ್ಟೆಂಬರ – ೧೧
Next post ಎತ್ತಿರಿ ಆರತಿ ಮುಕ್ತಾಂಗನೆಯರೆಲ್ಲ

ಸಣ್ಣ ಕತೆ

  • ಕಲ್ಪನಾ

    ಚಿತ್ರ: ಟಾಮ್ ಬಿ ಇದು ಇಪ್ಪತ್ತು ವರ್ಷಗಳ ಹಿಂದಿನ ಕಥೆ! ಮಾತನಾಡುವ ಸಿನಿಮಾ ಪ್ರಪಂಚ ಅದೇ ಆಗ ದಕ್ಷಿಣ ಭಾರತದಲ್ಲಿ ತಲೆಯೆತ್ತಿದ್ದಿತು! ಸಿನಿಮಾದಲ್ಲಿ ಪಾತ್ರವಹಿಸುವ ನಟಿನಟಿಯರನ್ನು ಅಚ್ಚರಿಯ… Read more…

  • ಹೃದಯದ ತೀರ್ಪು

    ಬೆಳಿಗ್ಗೆ ಏಳು ಗಂಟೆಯ ಹೊತ್ತಿಗೆ ತಿಂಡಿ ಕೂಡ ಮಾಡದೆ ಹೊರ ಹೋಗುತ್ತಿದ್ದ ಯೂಸುಫ್, ಮಧ್ಯಾಹ್ನ ಮಾತ್ರ ಮನೆಯಲ್ಲಿ ಉಣ್ಣುತ್ತಿದ್ದ. ರಾತ್ರಿಯ ಊಟ ಅವನ ತಾಯಿಯ ಮನೆಯಲ್ಲಿ. ತಾಯಿಯ… Read more…

  • ಆಮಿಷ

    ರಮಾ ಕುರ್ಚಿಯನ್ನೊರಗಿ ಕುಳಿತಿದ್ದಳು. ದುಃಖವೇ ಮೂರ್ತಿವೆತ್ತಂತೆ ಕುಳಿತಿದ್ದ ಅವಳ ಹೃದಯದಲ್ಲಿ ಭೀಕರ ಕೋಲಾಹಲ ನಡೆದಿತ್ತು. ಕಣ್ಣುಗಳು ಆಳಕ್ಕಿಳಿದಿದ್ದವು. ದೇಹದ ಅಣು ಅಣುವೂ ನೋವಿನಿಂದ ಮಿಡಿಯುತ್ತಿತ್ತು. "ತಾನೇಕೆ ದುಡುಕಿಬಿಟ್ಟೆ?… Read more…

  • ಮುಗ್ಧ

    ಆಲೀ........ ಏ ಆಲೀ........ ಐಸಮ್ಮ ಮಗನನ್ನು ಎಷ್ಟು ಜೋರಾಗಿ ಕರೆದರೂ ಆಲಿಯಿಂದ ಉತ್ತರ ಬರಲಿಲ್ಲ. ಒಂದು ಕಡೆ ಕತ್ತಲೆಯಾಗುತ್ತಾ ಬರುತ್ತಿದೆ. ಬೀಡಿ ಕಟ್ಟುಗಳನ್ನು ಸಂಜೆಯ ಒಳಗೆ ಬ್ರಾಂಚಿಗೆ… Read more…

  • ಆನುಗೋಲು

    ರೈಲು ನಿಲ್ದಾಣದಲ್ಲಿ ನಿಂತಿತು! "ಪೇಪರ! ಡೇಲಿ ಪೇಪರ!........ಟಾಯಿಮ್ಸ, ಫ್ರೀ ಪ್ರೆಸ್, ಸಕಾಳ! ಪ್ಲಾಟ ಫಾರ್ಮ ಮೇಲಿನ ಜನರ ನೂರೆಂಟು ಗದ್ದಲದಲ್ಲಿ ಈ ಧ್ವನಿಯು ಎದ್ದು ಕೇಳಿಸುತ್ತಿತ್ತು. ಹೋಗುವವರ… Read more…

cheap jordans|wholesale air max|wholesale jordans|wholesale jewelry|wholesale jerseys