ಸೆಪ್ಟೆಂಬರ – ೧೧

ಗಗನಚುಂಬಿ ಮಹಡಿಗಳಿಗೆ
ಮುತ್ತಿಡುವ ಆತುರದಿ…
ನಾ… ನೀ… ಎನ್ನುತಲೆ ಮುತ್ತಿಟ್ಟವು
ಮನುಕುಲದ ಬುಡವೇ ಅಲುಗಾಡಿತು

ಬಾಂಧವ್ಯ ಬೆಸೆದು ನಿಂತ ಮಹಡಿಗಳು
ಒಮ್ಮೆಲೆ ಜಾರಗುಂಡಿಯಾಟವಾಡಿದವು
ಬಿದ್ದ ಗತಜೀವನ ಮಹಡಿಗಳು
ಮಣ್ಣು ಧೂಳಿನ ಮುಸುಕಲಿ ಮುಚ್ಚಿದವು
ಕನಸುಗಳ ಬೆನ್ನೇರಿ ಹೊರಟವರು
ಜರಿದ ಮಹಡಿಗಳಡಿ ಶವವಾದರು
ವಿಧಿ-ವಿಲಾಸವು ಗಹಗಹಿಸುತಲಿ..
ಮನುಕುಲಕೆ ಪ್ರಶ್ನೆ ಕೇಳುತಲಿದ್ದವು

ನಾ… ನಾನೇ… ನಾನು
ಎನ್ನುತ ಅಹಂಗಳ ಸೆರೆಯಾಗಿ
ಸುಂದರ ಬದುಕಿಗೆ ಬೆಂಕಿಯಿಡುತ
ಆಸೆ-ಅಸೂಯೆ… ಆತಂಕಗಳ ಗೂಡಾಗಿತ್ತು

ತಾನೇ ತಾನು ಭಯ ಆವೇಶಗಳಡಿ
ಆತೃಪ್ತತೆಯ ಆತಂಕವಾದಿಯಾಗುತ
ಹರಡುತಿಹ ಅಸಮಾನತೆಯಲಿ
ಭಯೋತ್ಪಾದನೆಯ… ಬೆಂಕಿ…
ಮನುಕುಲದ ನಗುವ ಸುಡುತ
ಶಾಂತಿ-ಬದುಕು-ಅಳಿಸಿದವು

*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಮಂಗಳಾರತಿ ಎತ್ತಿ ಮಂತ್ರಶಕ್ತಿಯರು
Next post ಬಾಲೆರೆಲ್ಲರು ಮುತ್ತಿ ನೀಲಾಂಜನವನೆತ್ತಿ

ಸಣ್ಣ ಕತೆ

  • ನಿಂಗನ ನಂಬಿಗೆ

    ಹೊಸಳ್ಳಿ ನೋಡುವದಕ್ಕೆ ಸಣ್ಣದಾದರೂ ಕಣ್ಣಿಗೆ ಅಂದವಾಗಿದೆ. ಬೆಳವಲ ನಾಡಿನಲ್ಲಿ ಬರಿ ಬಯಲೆಂದು ಟೀಕೆ ಮಾಡುವವರಿಗೆ ಹೊಸಳ್ಳಿ ಕೂಗಿ ಹೇಳುತ್ತಿದೆ - ತಾನು ಮಲೆನಾಡ ಮಗಳೆಂದು ! ಊರ… Read more…

  • ಬೂಬೂನ ಬಾಳು

    ನಮ್ಮೂರು ಚಿಕ್ಕ ಹಳ್ಳಿ. ಹಳ್ಳಿಯೆಂದ ಕೂಡಲೆ, ಅದಕ್ಕೆ ಬರಬೇಕಾದ ಎಲ್ಲ ವಿಶೇಷಣಗಳೂ ಬರಬೇಕಲ್ಲವೇ ? ಸುತ್ತಲೂ ಹಸುರಾಗಿ ಒಪ್ಪುವ ಹೊಲಗಳು, ನಾಲ್ಕೂ ಕಡೆಗೆ ಸಾಗಿ ಹೋಗುವ ದಾರಿಗಳು,… Read more…

  • ಹುಟ್ಟು

    ಶಾದಿ ಮಹಲ್‌ನ ಒಳ ಆವರಣದಲ್ಲಿ ದೊಡ್ಡ ಹಾಲ್‌ನಲ್ಲಿ ಹೆಂಗಸರೆಲ್ಲಾ ಸೇರಿದ್ದರು. ಹೊರಗಡೆ ಹಾಕಿದ್ದ ಶಾಮಿಯಾನದಲ್ಲಿ ಗಂಡಸರು ನೆರೆದಿದ್ದರು. ಒಂದು ಕಡೆಯ ಎತ್ತರವಾದ ವೇದಿಕೆಯ ಮೇಲೆ ಮದುವೆ ಗಂಡು,… Read more…

  • ಮೃಗಜಲ

    "People are trying to work towards a good quality of life for tomorrow instead of living for today, for many… Read more…

  • ಬಿರುಕು

    ಚಂಪಾ ಹಾಲು ತುಂಬಿದ ಲೋಟ ಕೈಯಲ್ಲಿ ಹಿಡಿದು ಒಳಗೆ ಬಂದಳು. ಎಂದಿನಂತೆ ಮೇಜಿನ ಮೇಲಿಟ್ಟು ಮಾತಿಲ್ಲದೆ ಹೊರಟು ಹೋಗುತ್ತಿದ್ದ ಅವಳು ಹೊರಡುವ ಸೂಚನೆಯನ್ನೇ ತೋರದಿದ್ದಾಗ ಮೂರ್‍ತಿ ಬೆಚ್ಚಿ… Read more…

cheap jordans|wholesale air max|wholesale jordans|wholesale jewelry|wholesale jerseys