Home / ಕವನ / ಕವಿತೆ / ತೊಗಲ ಮಲಿಯನ ಹಾಲು ಕುಡಿದು ದೊಡ್ಡವರಾಗಿ

ತೊಗಲ ಮಲಿಯನ ಹಾಲು ಕುಡಿದು ದೊಡ್ಡವರಾಗಿ

ತೊಗಲ ಮಲಿಯನ ಹಾಲು ಕುಡಿದು ದೊಡ್ಡವರಾಗಿ
ಶೀಲ ಮಾಡತೀರಿ ನಾಡೆಲ್ಲಾ
ತೊಗಲಿನ ಆಟಾ ತಿಳಿಯದು ತಮ್ಮಾ
ತಗಲುಮಾತು ಒಂದು ಚೂರಿಲ್ಲ ||ಪ||

ತೊಗಲಿನೊಳಗೆ ತೊಗಲ್ಹುಟ್ಟತೈತಿ
ಕಾಮನಾಟಾ ಕೇಳೋ ಕಡಿಮೆ ಜಲಾ
ಪಿಂಡರಕ್ತ ಕಾಯದೇಹ ಕಣ್ಣಿಗೆ ಛಾಯಾ
ಕಾಣಿಸುವದು ಈ ತೊಗಲಾ
ಕುಡಗೋಲ ಪಿಡಿದು ಕೂಲಿಮಾಡಿ
ತುಂಬಿಸಬೇಕೋ ಈ ಚೀಲಾ
ಒಂದರಘಳಿಗೀ ಅನ್ನವಿಲ್ಲದಿರೆ
ಸೈಲಬೀಳತೈತ್ಯೋ ಈ ತೊಗಲಾ
||ಇಳವು||
ತೊಗಲಿನ ಉಸಾಬರಿ ನಾನು ಎಷ್ಟು ಮಾಡಬೇಕ
ಬೇಗು ಬೆಳಗು ಸಂಜಿಯಾ ತನಕ
ಸ್ಥಿರವಿಲ್ಲದ ತೊಗಲು ಹುಟ್ಟಿಬಂತು ಸಾವುದಕ
ಗೊತ್ತುಹತ್ತಲಿಲ್ಲೋ ಸವಿ ಸುಖಕ
||ಏರು||
ತೊಗಲಿನ ಸವಿಸುಖ ತೊಗಲು ಬಲ್ಲದಿದು
ರಾತ್ರಿ ಹಗಲು ಹರಿದಾಡೋ ತೊಗಲಾ ||೧||

ಸತ್ತು ಹೋಗಲು ಭೂಮಿಯ ಕಿತ್ತು ಹಾಕತೈತಿ
ಮತ್ತೆ ತೊಗಲು ಜೀವಕಾಧಾರಾ
ತೊಗಲಿನ ಬಾರು ಮಿಣಿ ಜತಿಗೆ ಕಣ್ಣಿ ತೊಗಲ ಮ್ಯಾಡಾರ

ತೊಗಲಿಗೆ ತೊಗಲಾ ಮದುವೆ ಮಾಡಿದರು
ತೊಗಲಿಗೆ ಮಾಡ್ಯಾರೋ ಉಪಕಾರ
ಅರಿಶಿನ ಕುಂಕುಮ ಅರದು ಎರದುಕರ
ತೊಗಲಿಗೆ ಮಾಡ್ಯಾರೋ ಸಿಂಗಾರಾ
||ಇಳವು||
ತೊಗಲಿಗೆ ಮೆಚ್ಚಿ ವೀರಾಧಿವೀರ ಜನರೆಲ್ಲಾ
ಸತ್ತುಹೋದರೆಂಬುವದು ಗುಲ್ಲಾ
ಇಂದ್ರ ಚಂರ್ರ ದೇವತೆ ಋಷಿ
ಮುಳುಗಿ ಹೋದರೋ ಎಲ್ಲಾ
ಇದರಾಟಾ ಯಾರಿಗೂ ತಿಳಿಲಿಲ್ಲಾ
||ಏರು||
ನಾ ಆದರೇನು ನೀ ಆದರೇನು
ಅರಸ ಪ್ರಧಾನಿ ಆದರೋ ತೊಗಲಾ || ೨ ||

ತೊಗಲು ತೊಳಿದುಕರ ನೀರ ಮಡಿಯ ಮಾಡಿ
ಗುಂಡಿಯಂತಿದೋ ಪಿಕನಾಶಿ
ಗಂಧ ವಿಭೂತಿ ತೊಗಲಿಗೆ ಧರಿಸಿ
ಜಾತಿ ಚಾತಿ ಬ್ಯಾರೆಯೆನಿಸಿ
ಜಪತಪವೆಂದು ಸನ್ಯಾಸಿ
ಬೂದಿಯೆಲ್ಲ ಮೈಯಿಗೆ ಪೂಸಿ
ಶಿವಶಿವಯೆಂದು ಶಿವಪೂಜಿ ಮಾಡುತಿ
ತೊಗಲಿನ ಮ್ಯಾಲೆ ಕೂತು ಜಪ ಎಣಿಸಿ
||ಇಳವು||
ಬಂಧು ಬಳಗಯೆಲ್ಲ ಮುಂದು ಹಾಕಿಕೊಂಡು ಬರುತೀರಿ
ತೊಗಲಿನ ಬೀಗರಿರತೀರಿ
ಮಿಗಿಲಾದ ತೊಗಲಿಗೆ ಮಾನ ಮರ್ಯಾದೆ ಮಾಡತೀರಿ
ದಾನ ದಕ್ಷಿಣೆಯನ್ನು ಕೊಡತೀರಿ

|| ಏರು||
ಸಿದ್ದ ಶಿಶುನಾಳಧೀಶನ ದಯೆಯೊಳು
ಬುದ್ಧಿವಂತರು ತಿಳಿಯಿರಿ ತೊಗಲಾ || ೩ ||
*****

 

Tagged:

Leave a Reply

Your email address will not be published. Required fields are marked *

ಸರ್‍ಕಸ್ಸು ಮುಗಿದರೂ ಅವನು ಅಲ್ಲಿಯೇ ಕುಳಿತಿದ್ದ. ಎಲ್ಲಾ ಎದ್ದು ಹೋಗಿದ್ದರು. ಎರಡನೇ ಷೋ ಆರಂಭವಾಗಲು ಕೆಲವೇ ಸಮಯ ಉಳಿದಿತ್ತು. ಅವನ ಕಣ್ಣುಗಳು ಏನನ್ನೋ ಹುಡುಕುತ್ತಿದ್ದವು. ಆ ಸರ್‍ಕಸ್ಸಿನ ಹುಡುಗಿ ಪ್ರವೇಶಿಸಿ ಓಡಿ ಬಂದು ಎರಡು ಬಾರಿ ಲಾಗಾ ಹಾಕಿ ಇವನ ಮುಂದೆಯೇ ನಿಂತಂತಾಯಿತು. ಆಕೆಯ...

“ಸುಭದ್ರೆ, ನೀನು ಎಂದು….” ದೈನ್ಯವಾಣಿಯಿಂದ ಕೇಳಿಕೊಂಡ ಶ್ರೀಧರ. “ತಡೆ ಶ್ರೀಧರ. ಹ್ಞ. ಹತ್ತಿರ ಬರಬೇಡ. ಪ್ರತಿಯೊಂದು ಕಾರ್ಯಕ್ಕೂ ಮುಹೂರ್ತ ಬರಬೇಕು; ಸ್ವಲ್ಪ ಕಾಲ ತಡೆ. ಒಮ್ಮೆ ಹೇಳಿದೆ: ನಾನು ನಿನ್ನವಳೆಂದು, ನಂಬಿಕೊ.” “ಎಷ್ಟು ದಿನ ಈ ನ...

ಮಳೆ ಜೋರಾಗಿ ಸುರಿಯುತ್ತಿತ್ತು. ಚಾವಣಿ ತೂತಾಗಿ ಸೋರುತ್ತಿದ್ದುದರಿಂದ ಸಾವಿತ್ರಿಗೆ ನಿದ್ದೆ ಇರಲಿಲ್ಲ. ಅವಳ ಉಗ್ಗವನದೂ ಅದೇ ಕತೆ. ಒಂದು ಮೂಲೆಯಲ್ಲಿ ಉಗ್ಗವನಿಗೆ ಒರಗಿಕೊಂಡು ಹಳೇ ಕಂಬಳಿ ಹೊದ್ದು ಸಾವಿತ್ರಿ ತೂಕಡಿಸುತ್ತಿದ್ದಳು. ಬಾಗಿಲ ಸಂದಿನಿಂದ ಆಗಾಗ ಚಳಕ್ಕನೆ ಕಾಣಿಸಿಕೊಳ್ಳುವ ಮಿ...

ದೀಪಾವಳಿಯ ಸೂಟಿಯನ್ನು ಕಳೆಯಲು ಊರಿಗೆ ಹೋಗಿದ್ದೆ. ಹಳ್ಳಿಗೆ ಹೋದಾಗೆಲ್ಲ ಕತೆಯ ಸುಬ್ಬಣ್ಣನ ಮನೆಗೆ ಹೋಗದಿದ್ದರೆ ನನ್ನ ಮನಸ್ಸು ಕೇಳುವದಿಲ್ಲ. ಊರಿಗೆ ಬಂದು ತನ್ನ ಮನೆಗೆ ಬರದಿದ್ದರೆ ಸುಬ್ಬಣ್ಣ ಬಿಡುತ್ತಾನೇ? ಅವನ ಆಮಂತ್ರಣ ಬರುವ ಮುಂಚೆಯೇ ಹೋಗುವದು ಉಚಿತವೆಂದು ತೋರಿತು. ಅವನ ಕತೆ ಕೇ...

ಒಂದು ತಿಂಗಳ ಮಗು ಹೆನ್ರಿ ನೋಡಲು ಬಲು ಮುದ್ದಾಗಿದ್ದ. ಸೇಬಿನ ಕೆನ್ನೆಗಳು, ದೊಡ್ಡ ಕಪ್ಪು ಕಣ್ಣುಗಳು, ತಲೆಯಲ್ಲಿ ಕೆಂಚು ಕೂದಲು, ನೀಳ ಮೂಗು, ಮುದ್ದಾದ ಪುಟ್ಟ ಬಾಯಿ, ನೋಡಿದೊಡನೆ ಹೇಳಬಹುದಿತ್ತು ಆ ಮಗು ಬ್ರಿಟಿಷ್ ತಂದೆ ತಾಯಿಗೆ ಹುಟ್ಟಿದವನೆಂದು. ತಂದೆ ಸ್ಮಿಥ್ ಮತ್ತು ತಾಯಿ ಮೇರಿಗೆ...

ಕೊನೆಗೊಮ್ಮೆ ಶಂಕರ ಹೂಂಗುಟ್ಟಲೇಬೇಕಾಯಿತು. “ಹುಡುಗಿ ಮನಸ್ಸಿಗೆ ಬಂದರೆ ಮಾತ್ರ ಆಗಿ. ಈ ವಿಷಯದಲ್ಲಿ ಒತ್ತಾಯಮಾಡಬರುತ್ತದೆಯೇ?” ಎಂದು ಶಿವರಾಮ ಹೆಗಡೆಯವರು ಶಂಕರನನ್ನು ಹೊರಡಿಸಿದರು. ದಾರಿಯುದ್ದಕ್ಕೂ ಹೆಗಡೆಯವರು ತಮ್ಮ ಮಗಳ ಗುಣಗಾನವನ್ನು ಪ್ರಸ್ತುತ ಅಪ್ರಸ್ತುತ ಪ್ರಶಂಸೆಗಳಿಂದ...