Home / ಕವನ / ಕವಿತೆ / ನಾರಿಯರ ವಿಸ್ತರಿಸಿ ಸಾರಶಾಸ್ತ್ರ ಪೂರವಿಸಿ

ನಾರಿಯರ ವಿಸ್ತರಿಸಿ ಸಾರಶಾಸ್ತ್ರ ಪೂರವಿಸಿ

ನಾರಿಯರ ವಿಸ್ತರಿಸಿ ಸಾರಶಾಸ್ತ್ರ ಪೂರವಿಸಿ
ಪಾರಗಾಣಲಿಲ್ಲ ಪಾಪದ ಕುಂಡಾ
ಘೋರನರಕದಿ ನೀವು ಜಾರಿಬಿದ್ದು ಹೊರಳುವಾಗ್ಗೆ
ಸೇರದಾಯಿತು ಈ ಬ್ರಹ್ಮಾಂಡ
ಪಿಂಡ ರಕ್ತ ಮಾಂಸ ಚರ್ಮ ಹೇಸಿಕೆಯ ಕಾಣಲಾಗಿ
ಅದಕಂತೀರಿ ಬಾಳಿಯ ದಿಂಡಾ
ತೋಳ ತೋಡಿ ನಾಭಿ ಸುಳಿ ಹಾಳುಗುಂಡಿ
ಮೇಲು ಕುಚದುಂಡ ಹೆಂಡಿ ಹೊಲಸಿನ ಕೈಚಂಡಾ
ದೂರದಿಂದ ನೋಡಿದರೆ ವಾರಿಜಾಕ್ಷಿ ಅನ್ನುವದೆಲ್ಲ
ನೀರಗಣ್ಣು ಪಿಚ್ಚ ಹೊಲಸಿನ ರುಂಡಾ
ಧಾರುಣಿಯ ಕವಿಗಳೆಲ್ಲ ಗಾರುಗೊಂಡು
ಹೀರಿಕೊಂಡು ಚಲ್ಲುತದೆ ಬಹುದೂರ ಚಂಡ ಮುಂಡಾ
||ಇಳವು||
ಪರಿಗೂಳಿಸಿ ಪೃಥ್ವಿ ನವಖಂಡಾ
ಅರಿಯದಲೆ ಉಸುರಿದವ ಬಂಡಾ
ಸರಿಯಹುದೆ ಸಮಾಸದಿ ತಂಡಾ
ಅರಿಕಿಲ್ಲದಾಯಿತೆ ಉದ್ಧಂಡಾ
||ಏರು||
ಆರಿಗ್ಹೇಳಿದರೂ ಇದು ತೀರಲಿಲ್ಲ ತಿಳಿಬುದ್ಧಿ
ತೋರಿಕೊಡುವೆನು ವೇದದಿ ಪುಂಡಾ
ದಾರಿಕಾರರ ಮಾತಲ್ಲಾ ದೂರ ತಿಳಿ ಮನದೊಳು
ಮಾರಿರೂಪ ನಾರಿ ನರಕದ ತಂಡಾ || ೧ ||

ನಾಡಿಗಲ್ಲ ಅಧಿಕಾದ ರೂಢಿಯೊಳು ಮಲಹಣ
ನೋಡಿ ನೋಡಿ ಸ್ತ್ರೀಯೊಳು ಮೋಹವಿಟ್ಟು
ಬ್ಯಾಡರಾಕಿ ಸಿಂಗರಿಸಿ ಹಾಡಿಕೊಂಡು ಹಲಬುತ
ಪಾಡಗಾಣಲಿಲ್ಲ ಇದಕವಬ್ರಷ್ಟಾ

ನೋಡಿ ಪರಶಿವ ಅವನ
ಕೇಡು ನುಡಿ ಕೇಳಲಾಗಿ
ರೂಢಿ ತಳಕ್ಕೆ ದೂಡಿ ನೂಕಿಸಿ ಬಿಟ್ಟ
ಆಡಲೇನು ಇಂಥ ಕವಿತ
ಬೇಡವಾಯ್ತಣ್ಣ ಹರಗೆ
ಕಾಡ ಕುಲದೊಳುಹೋಗಿ ಕುಲಗೆಟ್ಟ
||ಇಳವು||
ಹಂಗಸರ ವರ್ಣಿಸುವ ಮೂರ್ಖಾ
ವರ್ಣಶಾಸ್ತ್ರದ ಸಿಂಗರದ ತರ್ಕಾ
ಪದದಲ್ಲಿ ಇವನಿಗೇನರ್ಕಾ
ಯಮರಾಜನ ಕೈಯೊಳಗಿರ್ಕಾ
||ಏರು||
ಹೆಣ್ಣು ಜಾತಿಯ ವಿಸ್ತರಿಸಿ
ಕಣ್ಣು ಕಾಣಲಿಲ್ಲ ಕವಿ
ಬಣ್ಣಗೆಟ್ಟು ಬೊಗಳುವ ಬಲುಭಂಡಾ
ಸಣ್ಣಸಿತು ವೇದಶಾಸ್ತ್ರ ಬಣ್ಣಿಸಲು ಸವನಲ್ಲಾ
ಪುಣ್ಯಗೊಡಲಿಲ್ಲ ಪೂರ್ವದ ಭಂಡಾ ||೨||

ಒಲ್ಲೆನೆಂದ್ರೆ ಮ್ಯಾಲೆಬಿದ್ದು
ಜುಲುಮೆಯಿಂದ ಜೋಲಿಹೊಡೆದು
ಕೆಡವಿಬಿಟ್ಟಳು ಕಟ್ಟಿಚಲ್ಲಿದ್ಹಾಂಗೆ
ಸೋಲದವರ‍್ಯಾರು ಹೆಣ್ಣ
ಜಾಲತನಕಣಿಯುಂಟೆ
ಹೇಳತಾರ ಕಂಡ ಹಿರಿಯರು ನಮಗೆ
ಕೇಳಿಕೊಂಡು ನಿನ್ನ ನಂಬಿ
ಬಾಳಮಂದಿ ಕೆಟ್ಟರ‍್ಹಿಂಗ
ತೋಳತಿರುವುತ ಎದ್ದು ಬರುವಾಗ್ಗೆ
ತಾಳಲಾರದೆ ಯತಿಗಳು ತಪಗೆಟ್ಟು ವೃತಗೆಟ್ಟು
ಆಲ್ಪರಿಯುತ ಬಳಲುವರ‍್ಹಿಂಗ
ಹಲವು ಶಾಸ್ತ್ರ ವೇದ ಮಂತ್ರ ಕಲಿತಂಥ ಕವಿಗಳ
ಜಾಳಮಾಡಿಬಿಟ್ಟಿತು ಜಗದಾಗ
ಜಲಜಾಕ್ಷಿ ಜಪಿಸುತ ಗಾಳದಾಗ ಕಲಹದೊಳು
ಚಾಳದಪ್ಪಿ ಬಿದ್ದ ಮೀನದ ಹಾಂಗೆ
||ಇಳವು||
ಮೂರುಲೋಕ ಕೆಟ್ಟವು ನಿನಗಾಗಿ
ಬೆನ್ನುಹತ್ತಿ ಬರುತಾವೇ ಭವರೋಗಿ
ಮ್ಯಾಳಗೊಂಡು ಮೆರಿತಿ ಮನಸಾಗಿ
ಸೋಲದಾಯ್ತು ವಿಷಯ ಸುಖಭೋಗಿ
||ಏರು||

ಕಾಳಕೂಟಕತ್ತಲೊಳು ಗೋಳಿಟ್ಟು ಕೂಗುತದೆ
ಹೇಳಲಾರೆ ನಾನು ಗಾಣದೆತ್ತಿನ ಹಾಗೆ
ಮೇಲುಗ್ರಾಮ ಶಿಶುನಾಳಧೀಶನನೊಲುಮೆ ಇರಲಿಕ್ಕೆ
ಬೀಳಬಾರದು ಹೆಂಗಸರ ಬಲಿಯೊಳಗೆ || ೩ ||
*****

 

Tagged:

Leave a Reply

Your email address will not be published. Required fields are marked *

ಬೆಳಕಿನಿಂದ ಜಗಜಗಿಸುವ ಸಂಜೆ ರಾವು ಬಡಿದಂತೆ ಮಬ್ಬಾಗಿತ್ತು. ಈ ಮಬ್ಬು ಹಿಂದೆಂದೂ ಇದಿಲ್ಲ. ದೇಶದ ಹದಿನೇಳು ವರ್ಷದ ಸ್ವಾತಂತ್ರದಲ್ಲಿ, ಮಧ್ಯಮ ತರಗತಿಯ ಜೀವನ ಕೈ ಬಾಯಿಯಾಗಿದ್ದರೂ ದೂರದ ಆಶಯ ಹೊಂಗಿರಣವೊಂದು ಸದಾ ಹೊಳೆದು ಭಾವೀ ಪೀಳಿಗೆಯ ಮನೋಲ್ಲಾಸ ಮಾಡುತ್ತಿತ್ತು. ಆದರೆ ಈ ಮಬ್ಬುಗತ್ತ...

ಅವಳು ಯಾವ ಹುಡುಗರ ಜೊತ ನಿಂತು ಮಾತನಾಡಿದರೂ ಶ್ರೀಕಾಂತನಪಾಲಿಗೆ ಆ ಹುಡುಗರು ವಿಲನ್‌ಗಳಂತೆಯೇ ಭಾಸವಾಗುತ್ತಿದ್ದರು. ಅವಳು ತನ್ನ ಕಾಲೇಜಿನ ಲೆಕ್ಚರರ್‌ಗಳು ಪಾಠ ಮಾಡುವ ವೈಖರಿ ಸ್ಟೈಲು ಹೈಲುಗಳ ಕುರಿತು ಬಣ್ಣಿಸುವಾಗಲೂ ಕೇಳಲಾಗದೆ ಶ್ರೀಯ ಹೊಟ್ಟೆಯಲೆಲ್ಲಾ ತಳಮಳ. ಅಷ್ಟೇಕೆ ಅವಳು ತನ್ನ ತ...

ಬೆಳಿಗ್ಗೆ ಏಳರ ಸಮಯ ಮೈಸೂರಿನ ರೋಹಿಣಿ ಲಾಡ್ಜ್‌ನ ಕೊಠಡಿ ಸಂಖ್ಯೆ ೧೦೩. ಪೋಲೀಸರು, ಪತ್ರಕರ್ತರು, ಫೊಟೋ ಗ್ರಾಫರ್‌ಗಳಿಂದ ತುಂಬಿಹೋಗಿದೆ. ಬೆಳ್ಳಂ ಬೆಳಿಗ್ಗೆಯೇ ಯುವತಿಯೊಬ್ಬಳ ಕೊಲೆ ನಡೆದುಹೋಗಿದೆ. ಲಾಡ್ಜ್‌ನ ಹೊರಗೆ ಜನರು ಕುತೂಹಲಭರಿತರಾಗಿ ಸೇರಿದ್ದಾರೆ. ಸೇರಿದ್ದ ಜನರನ್ನು ನಿಯಂತ್ರ...

೧ ಗೌರಿಯ ಹಬ್ಬವು ಕಳೆದು ಕೆಲವು ದಿನಗಳಾಗಿದ್ದುವು. ಭಾಗೀರಥಮ್ಮನೂ ಅವಳ ಜೊತೆಯ ಹುಡುಗಿಯರೂ ಒಂದೊಂದು ದಿನವನ್ನು ಕಳೆಯುವುದೂ ಒಂದೊಂದು ಯುಗವನ್ನು ಕಳೆದಂತೆ ಕಷ್ಟವಾಗಿದ್ದಿತು. ಅವರು ಎಷ್ಟು ಕುತೂಹಲದಿಂದ ಬಯಸಿದರೂ ದಿನಗಳು ಬೇಗ ಬೇಗ ಉರುಳಲೊಲ್ಲವು. ಒಂದು ದಿನ ಅವರೆಲ್ಲರೂ ಸೇರಿ ಕವಡೆಯ...

ಸಂಜೆ ನಾಲ್ಕು ಗಂಟೆಯಾದರೆ ಸಾಕು. ಅವರೆಲ್ಲರೂ ಒಬ್ಬೊಬ್ಬರಾಗಿ ಬಂದು ಸೇರುತ್ತಾರೆ. ಅದೊಂದು ಪಂಚಾಯಿತಿ ಕಟ್ಟೆ ಇದ್ದಂತೆ. ಮಧ್ಯದಲ್ಲೊಂದು ಸಿಮೆಂಟ್ ಬೆಂಚು, ಅದರ ಎಡ, ಬಲ ಎರಡೂ ಕಡೆ ಇವರೇ ಒಂದಷ್ಟು ಕಲ್ಲು ಚಪ್ಪಡಿಗಳನ್ನು ಎಳೆದು ತಂದು ಕೊಡುವುದಕ್ಕೆ ಪೀಠಗಳನ್ನು ಮಾಡಿಕೊಂಡಿದ್ದಾರೆ. ಸ...

ತಿಮ್ಮಣ್ಣ ನಮ್ಮೂರಿನ ಪಕ್ಕದ ಹಳ್ಳಿಯಲ್ಲಿನ ಅಡುಗೆ ಭಟ್ಟ ತಿಪ್ಪಾಭಟ್ಟರ ಮಗ. ತಿಪ್ಪಾಭಟ್ಟರಿಗೆ ಮದುವೆಯಾಗಿ ಹತ್ತು ವರ್ಷ ಕಳೆದರೂ ಮಕ್ಕಳಾಗಿರಲಿಲ್ಲ. ಕೊನೆಗೆ ಪಕ್ಕದ ಮನೆಯ ಕಮಲಾಕ್ಷಮ್ಮನ ಸಲಹೆ ಮೇರೆಗೆ ಮಗುವಾದರೆ ತಿರುಪತಿಗೆ ಹೋಗಿ ಬರುವ ಹರಕೆ ಹೊತ್ತರು. ತಿಮ್ಮಪ್ಪನ ಕೃಪಾಕಟಾಕ್ಷವೋ ...