Home / ಕವನ / ಕವಿತೆ / ಸಾಂಬಗ ಸಾಕ್ಷಾತ್ ಅಂಬ ಕೇಳತಾಳೋ

ಸಾಂಬಗ ಸಾಕ್ಷಾತ್ ಅಂಬ ಕೇಳತಾಳೋ

ಸಾಂಬಗ ಸಾಕ್ಷಾತ್ ಅಂಬ ಕೇಳತಾಳೋ
ಸಾಂಬ ಕೇಳು ನಮ ವಿಟರಾರು
ತುಂಬಿದಂಥ ಕುಚ ಕುಂಭದಿ ಅಮೃತ ನಂಬಿಕೊಂಡಂತೋರು
ಅಂಬರದೊಳಗಿರುವ ಜಾತಿಗಳಿಗೆ ಇಂಬುಗೊಟ್ಟವರು
ಜಂಬದ ವಿಟವಿದೂಷಕನಾಗಲು ಪೀಠಮದ೯ನಿಕರೇಬುವರು
ಕುಂಭಿನಿಯೊಳು ಈ ವಿಷಯ ಕರಡಂಬಕತನದಲ್ಲಿ ಮೆರೆಯುವರು
ರಂಭೆರು ಲೋಕದಿ ಕಂಭನಡಿಸಿ ಅವಲಂಬನದೊಳು ಮರಿಗೊಂಬುವರು

||ಇಳವು||
ಮುಂಭಾಗವ ರೋಹಿಣಿ ಚಂದ್ರನ ಬೀರಿ ಬೆಂಬಲದಿ ಅಶ್ವಿನಿಯ ತಾರಿ
ಹಿಂಭಾಗ ಮುಖಾ ಭುಜರಸ ವಿದೂಷಕ ಸಾರಿ
ಹಿಂಭಾಗದರೋ ಸುಖದೋರಿ
||ಏರು||
ತುಂಬಿಲ ರಂಧ್ರದಿ ತವಕ ತೂರ್ಯ ಅದ
-ರುಂಬುವ ಪಾನದ ಪಾಕ ಮದುರ
ತುಂಬಿದಂಥ ಕುಚ ಕುಂಭದಿ ಅಮೃತನಂಬಿಕೊಂಡು ಪುರುಷನ ತೋರು || ೧ ||

ನಾಗಲೀಕ ನಾರಾಯಣ ಲಕ್ಷ್ಮಿಸಹವಾಸದಲಿ ಸರಸದ ಘೋರಾ
ಬ್ಯಾಗ ಬ್ರಹ್ಮ ಸರಸ್ವತಿ ಸಂಯೋಗದಿ ಮೇರು ಕಿರಣದಿಂದ್ರಿಯ ಮೋರಾ
ಜಾಗಲಾಗ ಪಾರಾಗ ರುದ್ರಗ ಹೋಗಿ ಕಾಳಿ ತಾಳಿದ ವಿವರಾ

ಸಾಗುತಿಹುದು ಸುರಿದಾಂಕುರ ಮೂಗಿನ
ಮೇಘ ಹೊಳೆಯುವ ರೇಖವು ಮೂರಾ

||ಇಳವು||
ಭೋಗಕ್ಕೆ ಹಸ್ತಿನಿಯ ಜೋಡು
ರಾಗಂಗ ರೋಮದ ಕೋಡು
ಮ್ಯಾಗ ಬಂದು ಬೀಳುವದು ನೋಡು
ನೀಗುವದಲ್ಲೆ ಮನ್ಮಥನ ಬೀಡು

||ಏರು||
ಸೂಸುತಿಹುದು ಯವ್ವನದಿ ಮನಸಿಜನ ಬೀದಿಯೊಳಗೆ
ಕಾಮಶಾಸ್ತ್ರಕರತುಂಬಿದಂಥ ಕುಚಕುಂಭದಿ
ಅಮೃತ ನಂಬಿಕೊಂಡ ಪುರುಷನ ತೋರು

ಹಟದಿ ಶಿವೆ ಬೆಸಗೊಳ್ಳಲು ಶಿವ ತಾ ತಿಳಿಸಿದ ಸಾರು
ಪಟಹ ಬರದು ಚಿತ್ರದಲಿ ರೂಪಿಸಲು
ನಿಟಗೊಳಿಸಿತು ಹೃದಯದ ಬೇರು
ಮಟನೋಟವು ಕಮಟಕರ ಭೂಟಕ ಪದ್ಮಿನಿಯ ಮೈಬೆವರು
ಚಟುಲ ಕಟಾಕ್ಷದಿ ಪರಶಿವ ಪೇಳಲು
ಧಟಿತವಾದ ಶರೀರದ ಕವಲು
ಕುಟಿಲ ಕೋಹರತಿಮಾರಗ ಹೊಳೆಯಲು
ಘಟನೆ ನಿಮಗ ತಿಳಿಸಿದ ಸಾರು
||ಏರು||
ಶಂಕಿನಿಗ ಸಪ್ತ‌ಋಷಿ ಬೆದರಿ
ಜಟ ಹರಕೊಂಡರು ಪಲುವದರಿ

||ಇಳವು||
ನಿಟಿಲನೇತ್ರ ಶಿಶುನಾಳಧೀಶಗ ಅಷ್ಟ ಜನರು
ಸ್ತ್ರೀ ಪುರುಷರು ತುಂಬಿದಂಥ ಕುಚಕುಂಭದಿ
ಅಮೃತ ನಂಬಿಕೊಂಡ ಪುರುಷನ ತೋರು || ೩ ||
*****

 

Tagged:

Leave a Reply

Your email address will not be published. Required fields are marked *

ಅವಳು ಯಾವ ಹುಡುಗರ ಜೊತ ನಿಂತು ಮಾತನಾಡಿದರೂ ಶ್ರೀಕಾಂತನಪಾಲಿಗೆ ಆ ಹುಡುಗರು ವಿಲನ್‌ಗಳಂತೆಯೇ ಭಾಸವಾಗುತ್ತಿದ್ದರು. ಅವಳು ತನ್ನ ಕಾಲೇಜಿನ ಲೆಕ್ಚರರ್‌ಗಳು ಪಾಠ ಮಾಡುವ ವೈಖರಿ ಸ್ಟೈಲು ಹೈಲುಗಳ ಕುರಿತು ಬಣ್ಣಿಸುವಾಗಲೂ ಕೇಳಲಾಗದೆ ಶ್ರೀಯ ಹೊಟ್ಟೆಯಲೆಲ್ಲಾ ತಳಮಳ. ಅಷ್ಟೇಕೆ ಅವಳು ತನ್ನ ತ...

ಬೆಳಿಗ್ಗೆ ಏಳರ ಸಮಯ ಮೈಸೂರಿನ ರೋಹಿಣಿ ಲಾಡ್ಜ್‌ನ ಕೊಠಡಿ ಸಂಖ್ಯೆ ೧೦೩. ಪೋಲೀಸರು, ಪತ್ರಕರ್ತರು, ಫೊಟೋ ಗ್ರಾಫರ್‌ಗಳಿಂದ ತುಂಬಿಹೋಗಿದೆ. ಬೆಳ್ಳಂ ಬೆಳಿಗ್ಗೆಯೇ ಯುವತಿಯೊಬ್ಬಳ ಕೊಲೆ ನಡೆದುಹೋಗಿದೆ. ಲಾಡ್ಜ್‌ನ ಹೊರಗೆ ಜನರು ಕುತೂಹಲಭರಿತರಾಗಿ ಸೇರಿದ್ದಾರೆ. ಸೇರಿದ್ದ ಜನರನ್ನು ನಿಯಂತ್ರ...

೧ ಗೌರಿಯ ಹಬ್ಬವು ಕಳೆದು ಕೆಲವು ದಿನಗಳಾಗಿದ್ದುವು. ಭಾಗೀರಥಮ್ಮನೂ ಅವಳ ಜೊತೆಯ ಹುಡುಗಿಯರೂ ಒಂದೊಂದು ದಿನವನ್ನು ಕಳೆಯುವುದೂ ಒಂದೊಂದು ಯುಗವನ್ನು ಕಳೆದಂತೆ ಕಷ್ಟವಾಗಿದ್ದಿತು. ಅವರು ಎಷ್ಟು ಕುತೂಹಲದಿಂದ ಬಯಸಿದರೂ ದಿನಗಳು ಬೇಗ ಬೇಗ ಉರುಳಲೊಲ್ಲವು. ಒಂದು ದಿನ ಅವರೆಲ್ಲರೂ ಸೇರಿ ಕವಡೆಯ...

ಸಂಜೆ ನಾಲ್ಕು ಗಂಟೆಯಾದರೆ ಸಾಕು. ಅವರೆಲ್ಲರೂ ಒಬ್ಬೊಬ್ಬರಾಗಿ ಬಂದು ಸೇರುತ್ತಾರೆ. ಅದೊಂದು ಪಂಚಾಯಿತಿ ಕಟ್ಟೆ ಇದ್ದಂತೆ. ಮಧ್ಯದಲ್ಲೊಂದು ಸಿಮೆಂಟ್ ಬೆಂಚು, ಅದರ ಎಡ, ಬಲ ಎರಡೂ ಕಡೆ ಇವರೇ ಒಂದಷ್ಟು ಕಲ್ಲು ಚಪ್ಪಡಿಗಳನ್ನು ಎಳೆದು ತಂದು ಕೊಡುವುದಕ್ಕೆ ಪೀಠಗಳನ್ನು ಮಾಡಿಕೊಂಡಿದ್ದಾರೆ. ಸ...

ತಿಮ್ಮಣ್ಣ ನಮ್ಮೂರಿನ ಪಕ್ಕದ ಹಳ್ಳಿಯಲ್ಲಿನ ಅಡುಗೆ ಭಟ್ಟ ತಿಪ್ಪಾಭಟ್ಟರ ಮಗ. ತಿಪ್ಪಾಭಟ್ಟರಿಗೆ ಮದುವೆಯಾಗಿ ಹತ್ತು ವರ್ಷ ಕಳೆದರೂ ಮಕ್ಕಳಾಗಿರಲಿಲ್ಲ. ಕೊನೆಗೆ ಪಕ್ಕದ ಮನೆಯ ಕಮಲಾಕ್ಷಮ್ಮನ ಸಲಹೆ ಮೇರೆಗೆ ಮಗುವಾದರೆ ತಿರುಪತಿಗೆ ಹೋಗಿ ಬರುವ ಹರಕೆ ಹೊತ್ತರು. ತಿಮ್ಮಪ್ಪನ ಕೃಪಾಕಟಾಕ್ಷವೋ ...

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...