Home / ಕವನ / ಕವಿತೆ / ಸಾಂಬಗ ಸಾಕ್ಷಾತ್ ಅಂಬ ಕೇಳತಾಳೋ

ಸಾಂಬಗ ಸಾಕ್ಷಾತ್ ಅಂಬ ಕೇಳತಾಳೋ

ಸಾಂಬಗ ಸಾಕ್ಷಾತ್ ಅಂಬ ಕೇಳತಾಳೋ
ಸಾಂಬ ಕೇಳು ನಮ ವಿಟರಾರು
ತುಂಬಿದಂಥ ಕುಚ ಕುಂಭದಿ ಅಮೃತ ನಂಬಿಕೊಂಡಂತೋರು
ಅಂಬರದೊಳಗಿರುವ ಜಾತಿಗಳಿಗೆ ಇಂಬುಗೊಟ್ಟವರು
ಜಂಬದ ವಿಟವಿದೂಷಕನಾಗಲು ಪೀಠಮದ೯ನಿಕರೇಬುವರು
ಕುಂಭಿನಿಯೊಳು ಈ ವಿಷಯ ಕರಡಂಬಕತನದಲ್ಲಿ ಮೆರೆಯುವರು
ರಂಭೆರು ಲೋಕದಿ ಕಂಭನಡಿಸಿ ಅವಲಂಬನದೊಳು ಮರಿಗೊಂಬುವರು

||ಇಳವು||
ಮುಂಭಾಗವ ರೋಹಿಣಿ ಚಂದ್ರನ ಬೀರಿ ಬೆಂಬಲದಿ ಅಶ್ವಿನಿಯ ತಾರಿ
ಹಿಂಭಾಗ ಮುಖಾ ಭುಜರಸ ವಿದೂಷಕ ಸಾರಿ
ಹಿಂಭಾಗದರೋ ಸುಖದೋರಿ
||ಏರು||
ತುಂಬಿಲ ರಂಧ್ರದಿ ತವಕ ತೂರ್ಯ ಅದ
-ರುಂಬುವ ಪಾನದ ಪಾಕ ಮದುರ
ತುಂಬಿದಂಥ ಕುಚ ಕುಂಭದಿ ಅಮೃತನಂಬಿಕೊಂಡು ಪುರುಷನ ತೋರು || ೧ ||

ನಾಗಲೀಕ ನಾರಾಯಣ ಲಕ್ಷ್ಮಿಸಹವಾಸದಲಿ ಸರಸದ ಘೋರಾ
ಬ್ಯಾಗ ಬ್ರಹ್ಮ ಸರಸ್ವತಿ ಸಂಯೋಗದಿ ಮೇರು ಕಿರಣದಿಂದ್ರಿಯ ಮೋರಾ
ಜಾಗಲಾಗ ಪಾರಾಗ ರುದ್ರಗ ಹೋಗಿ ಕಾಳಿ ತಾಳಿದ ವಿವರಾ

ಸಾಗುತಿಹುದು ಸುರಿದಾಂಕುರ ಮೂಗಿನ
ಮೇಘ ಹೊಳೆಯುವ ರೇಖವು ಮೂರಾ

||ಇಳವು||
ಭೋಗಕ್ಕೆ ಹಸ್ತಿನಿಯ ಜೋಡು
ರಾಗಂಗ ರೋಮದ ಕೋಡು
ಮ್ಯಾಗ ಬಂದು ಬೀಳುವದು ನೋಡು
ನೀಗುವದಲ್ಲೆ ಮನ್ಮಥನ ಬೀಡು

||ಏರು||
ಸೂಸುತಿಹುದು ಯವ್ವನದಿ ಮನಸಿಜನ ಬೀದಿಯೊಳಗೆ
ಕಾಮಶಾಸ್ತ್ರಕರತುಂಬಿದಂಥ ಕುಚಕುಂಭದಿ
ಅಮೃತ ನಂಬಿಕೊಂಡ ಪುರುಷನ ತೋರು

ಹಟದಿ ಶಿವೆ ಬೆಸಗೊಳ್ಳಲು ಶಿವ ತಾ ತಿಳಿಸಿದ ಸಾರು
ಪಟಹ ಬರದು ಚಿತ್ರದಲಿ ರೂಪಿಸಲು
ನಿಟಗೊಳಿಸಿತು ಹೃದಯದ ಬೇರು
ಮಟನೋಟವು ಕಮಟಕರ ಭೂಟಕ ಪದ್ಮಿನಿಯ ಮೈಬೆವರು
ಚಟುಲ ಕಟಾಕ್ಷದಿ ಪರಶಿವ ಪೇಳಲು
ಧಟಿತವಾದ ಶರೀರದ ಕವಲು
ಕುಟಿಲ ಕೋಹರತಿಮಾರಗ ಹೊಳೆಯಲು
ಘಟನೆ ನಿಮಗ ತಿಳಿಸಿದ ಸಾರು
||ಏರು||
ಶಂಕಿನಿಗ ಸಪ್ತ‌ಋಷಿ ಬೆದರಿ
ಜಟ ಹರಕೊಂಡರು ಪಲುವದರಿ

||ಇಳವು||
ನಿಟಿಲನೇತ್ರ ಶಿಶುನಾಳಧೀಶಗ ಅಷ್ಟ ಜನರು
ಸ್ತ್ರೀ ಪುರುಷರು ತುಂಬಿದಂಥ ಕುಚಕುಂಭದಿ
ಅಮೃತ ನಂಬಿಕೊಂಡ ಪುರುಷನ ತೋರು || ೩ ||
*****

 

Tagged:

Leave a Reply

Your email address will not be published. Required fields are marked *

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...