Home / ಕವನ / ಕವಿತೆ / ಸಾಂಬಗ ಸಾಕ್ಷಾತ್ ಅಂಬ ಕೇಳತಾಳೋ

ಸಾಂಬಗ ಸಾಕ್ಷಾತ್ ಅಂಬ ಕೇಳತಾಳೋ

ಸಾಂಬಗ ಸಾಕ್ಷಾತ್ ಅಂಬ ಕೇಳತಾಳೋ
ಸಾಂಬ ಕೇಳು ನಮ ವಿಟರಾರು
ತುಂಬಿದಂಥ ಕುಚ ಕುಂಭದಿ ಅಮೃತ ನಂಬಿಕೊಂಡಂತೋರು
ಅಂಬರದೊಳಗಿರುವ ಜಾತಿಗಳಿಗೆ ಇಂಬುಗೊಟ್ಟವರು
ಜಂಬದ ವಿಟವಿದೂಷಕನಾಗಲು ಪೀಠಮದ೯ನಿಕರೇಬುವರು
ಕುಂಭಿನಿಯೊಳು ಈ ವಿಷಯ ಕರಡಂಬಕತನದಲ್ಲಿ ಮೆರೆಯುವರು
ರಂಭೆರು ಲೋಕದಿ ಕಂಭನಡಿಸಿ ಅವಲಂಬನದೊಳು ಮರಿಗೊಂಬುವರು

||ಇಳವು||
ಮುಂಭಾಗವ ರೋಹಿಣಿ ಚಂದ್ರನ ಬೀರಿ ಬೆಂಬಲದಿ ಅಶ್ವಿನಿಯ ತಾರಿ
ಹಿಂಭಾಗ ಮುಖಾ ಭುಜರಸ ವಿದೂಷಕ ಸಾರಿ
ಹಿಂಭಾಗದರೋ ಸುಖದೋರಿ
||ಏರು||
ತುಂಬಿಲ ರಂಧ್ರದಿ ತವಕ ತೂರ್ಯ ಅದ
-ರುಂಬುವ ಪಾನದ ಪಾಕ ಮದುರ
ತುಂಬಿದಂಥ ಕುಚ ಕುಂಭದಿ ಅಮೃತನಂಬಿಕೊಂಡು ಪುರುಷನ ತೋರು || ೧ ||

ನಾಗಲೀಕ ನಾರಾಯಣ ಲಕ್ಷ್ಮಿಸಹವಾಸದಲಿ ಸರಸದ ಘೋರಾ
ಬ್ಯಾಗ ಬ್ರಹ್ಮ ಸರಸ್ವತಿ ಸಂಯೋಗದಿ ಮೇರು ಕಿರಣದಿಂದ್ರಿಯ ಮೋರಾ
ಜಾಗಲಾಗ ಪಾರಾಗ ರುದ್ರಗ ಹೋಗಿ ಕಾಳಿ ತಾಳಿದ ವಿವರಾ

ಸಾಗುತಿಹುದು ಸುರಿದಾಂಕುರ ಮೂಗಿನ
ಮೇಘ ಹೊಳೆಯುವ ರೇಖವು ಮೂರಾ

||ಇಳವು||
ಭೋಗಕ್ಕೆ ಹಸ್ತಿನಿಯ ಜೋಡು
ರಾಗಂಗ ರೋಮದ ಕೋಡು
ಮ್ಯಾಗ ಬಂದು ಬೀಳುವದು ನೋಡು
ನೀಗುವದಲ್ಲೆ ಮನ್ಮಥನ ಬೀಡು

||ಏರು||
ಸೂಸುತಿಹುದು ಯವ್ವನದಿ ಮನಸಿಜನ ಬೀದಿಯೊಳಗೆ
ಕಾಮಶಾಸ್ತ್ರಕರತುಂಬಿದಂಥ ಕುಚಕುಂಭದಿ
ಅಮೃತ ನಂಬಿಕೊಂಡ ಪುರುಷನ ತೋರು

ಹಟದಿ ಶಿವೆ ಬೆಸಗೊಳ್ಳಲು ಶಿವ ತಾ ತಿಳಿಸಿದ ಸಾರು
ಪಟಹ ಬರದು ಚಿತ್ರದಲಿ ರೂಪಿಸಲು
ನಿಟಗೊಳಿಸಿತು ಹೃದಯದ ಬೇರು
ಮಟನೋಟವು ಕಮಟಕರ ಭೂಟಕ ಪದ್ಮಿನಿಯ ಮೈಬೆವರು
ಚಟುಲ ಕಟಾಕ್ಷದಿ ಪರಶಿವ ಪೇಳಲು
ಧಟಿತವಾದ ಶರೀರದ ಕವಲು
ಕುಟಿಲ ಕೋಹರತಿಮಾರಗ ಹೊಳೆಯಲು
ಘಟನೆ ನಿಮಗ ತಿಳಿಸಿದ ಸಾರು
||ಏರು||
ಶಂಕಿನಿಗ ಸಪ್ತ‌ಋಷಿ ಬೆದರಿ
ಜಟ ಹರಕೊಂಡರು ಪಲುವದರಿ

||ಇಳವು||
ನಿಟಿಲನೇತ್ರ ಶಿಶುನಾಳಧೀಶಗ ಅಷ್ಟ ಜನರು
ಸ್ತ್ರೀ ಪುರುಷರು ತುಂಬಿದಂಥ ಕುಚಕುಂಭದಿ
ಅಮೃತ ನಂಬಿಕೊಂಡ ಪುರುಷನ ತೋರು || ೩ ||
*****

 

Tagged:

Leave a Reply

Your email address will not be published. Required fields are marked *

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...

ಎಲೈ ಓದುಗರೇ! ಕಣ್ಣುಗಳನ್ನು ಅಗಲಿಸಿ ಏಕಚಿತ್ತದಿಂದ ಓದಿ! ನಾನೊಂದು ಕಥೆ ಹೇಳಲಿದ್ದೇನೆ. ರೋಮಾಂಚಕಾರಿ, ಮೈನಡುಗಿಸುವಂತಹ ಕಥೆ! ಒಬ್ಬ ಸಾಹಿತಿಯ ಕಥೆ! ಸಾಹಿತಿ ಆಗೇ ತೀರಬೇಕೆಂದು ಹಂಬಲಿಸುವವನ ಕಥೆ! ಸಾಹಿತ್ಯದಲ್ಲಿ ಎಲ್ಲ ಬಿರುದು ಬಹುಮಾನಗಳನ್ನು, ಪ್ರಶಸ್ತಿ ಪ್ರಶಂಸೆಗಳನ್ನು ಹೇಗೆ ಪಡೆ...

“ಎಷ್ಟು ದಿನ ಹೀಗೇ ತೊಂದರೆ ಪಟ್ಟುಕೊಳ್ಳುತ್ತಿರುವದು ಕೃಷ್ಣ ಮೂರ್ತಿ? ಮಕ್ಕಳನ್ನು ಆರಯ್ಯುವದು, ಅಡಿಗೆ ಮಾಡುವದು- ಇವುಗಳಿಗೆಲ್ಲ ಆಳು ಇಟ್ಟು ಪೂರೈಸೀತೇ? ಸುಮ್ಮನೆ ಇನ್ನೊಂದು ಮದುವೆಯಾಗಿ ಬಿಡಬಾರದೇ?” “ಪ್ರೀತಿ ಇಷ್ಟು ಅಗ್ಗ ಅಲ್ಲ ನೋಡು” “ಪ್ರೀತಿಯ ವಿಷಯವೇನೇ ...

ಕಾಲೇಜಿನ ಲೈಬ್ರೆರಿಯಿಂದ ಹೊರಬಂದ ಅವಳು ಒಮ್ಮೆ ಆಟದ ಮೈದಾನವನ್ನು ದಿಟ್ಟಿಸಿ ನೋಡಿದಳು. ಮೈದಾನ ಖಾಲಿ ಇರುವುದನ್ನು ಖಚಿತ ಮಾಡಿಕೊಂಡ ಅವಳು ವೇಗವಾಗಿ ನಡೆಯುತ್ತಾ ರಾಜ ರಸ್ತೆಗೆ ಬಂದಳು. ಅಲ್ಲಿಂದ ತನ್ನ ಮನೆಯ ವಿರುದ್ಧ ದಿಕ್ಕಿಗೆ ಹೆಜ್ಜೆ ಹಾಕ ತೊಡಗಿದಳು. ತನ್ನ ಶಕ್ತಿಯನ್ನೆಲ್ಲಾ ಪ್ರಯ...

ಅಡಿಕೆ ಭತ್ತಗಳ ವ್ಯಾಪಾರದಿಂದ ಅಶ್ವತ್ಥ ಹೆಬ್ಬಾರರು ನೂರಾರು ಸಾವಿರ ರೂಪಾಯಿ ಗಳಿಸಿದರೆಂದು ದಟ್ಟವಾಗಿ ಸುದ್ದಿ ಹಬ್ಬಿತು. ಇದಕ್ಕೆ ಸಾಕ್ಷಿ ಕೊಡುವಂತೆ ಹೆಬ್ಬಾರರು ಗ್ರಾಮದೇವಸ್ಥಾನದಲ್ಲಿ ಒಂದು ಯಜ್ಞವನ್ನು ಮಾಡಿಸುವೆನೆಂದು ಸಾರಿ, ತಯಾರಿ ಮಾಡಹತ್ತಿದರು. ತಟ್ಟೆಯ ಬಿಡಾರದಲ್ಲಿ ಸಾಲೆ ನ...

ಬ್ಯಾಂಕಿನ ಅರೆತೆರೆದ ಬಾಗಿಲನ್ನು ದೂಡಿ ಒಳಬಂದ ಪ್ರಹ್ಲಾದ, ಕೆಲಸದಲ್ಲಿ ಮಗ್ನಳಾಗಿದ್ದ ಸುಮಾಳ ಬಳಿಗೋಡಿ ಅವಳ ಪರ್‍ಸನ್ನು ತಡಕಾಡಿ ಹಣತೆಗೆದುಕೊಂಡು ಬಂದಷ್ಟೇ ವೇಗದಿಂದ ಹೊರಗೋಡಿದ್ದ. “ಏನು ಮಗರಾಯನ ಗಲಾಟೆ” ಹತ್ತಿರದಲ್ಲಿದ್ದ ದಿನಕರನ ಪ್ರಶ್ನೆಗೆ “ಅವನದ್ದು ಯಾವಾ...