ಕಾರಚುಮ್ಮರ್‍ಯಾಕ ಮಿರ್‍ಚೀಯ ಭಜಿಯಾಕ

ಕಾರಚುಮ್ಮರ್‍ಯಾಕ ಮಿರ್‍ಚೀಯ ಭಜಿಯಾಕ
ನೋಡೀಕಿ ಸಣ್ಣಾಕಿ ನಕ್ಕಾಳಾ
ಗಿಡತುಂಬ ಗಿಳಿಯಾಕ ನೆಲತುಂಬ ಹೊಳಿಯಾಕ
ಚನ್ನಂಗಿ ಹೂವಾಗಿ ಹೊಕ್ಕಾಳಾ ||೧||

ಸುರ್ರೆಂದು ಕಡದಾಂಗ ಕೆನಿಮೊಸರು ನಕ್ಕಾಂಗ
ಈ ಹುಡಿಗಿ ಬೆಣ್ಯಾಗಿ ಜಿಗದಾಳಾ
ಕೊಕ್ಹೊಕ್ಕ ಕ್ಯಾಕೀಯ ಯಕ್ಕೀಯ ಕೊಕ್ಕೀಯ
ಹಾಕ್ಯಾಳ ಕೌವ್ವಂತ ಕೂಗ್ಯಾಳಾ ||೨||

ಎದಿತುಂಬ ತತ್ರಾಣಿ ಉತ್ತಮರ ಉತ್ರಾಣಿ
ಚಂದುಳ್ಳಿ ಬೋಗೂಣಿ ಈ ಹೆಣ್ಣಾ
ಹೊಸಗಿಣ್ಣ ವಡಿಬಣ್ಣ ಅವಲಕ್ಕ ಬವಲಕ್ಕ
ಚವಲಕ್ಕ ಡವಲಕ್ಕ ಈ ಕಣ್ಣಾ ||೩||

ಕೊರಳಾಗ ಕಾಳಿಂಗಿ ಹೆಳಲಸಿಂಬಿಯ ಸಂಗಿ
ನಾರಂಗಿ ಬೋರಂಗಿ ಕುಕ್ಕ್ಯಾಳಾ
ಹಕ್ಕಿ ಇಕ್ಕುಳ ಮೂಗು ಢಿಕ್ಕಿ ಎದಿಗಳ ಕೂಗು
ಢಿಕ್ಕಾಗಿ ಢಿಕಢಿಕ್ಕ ಹಾದಾಳಾ ||೪||

ಎಣ್ಯಾನ ಗಾರ್‍ಈಗಿ ಗಿರ್ರೆಂದು ಎದ್ದಾಂಗ
ಕಣ್ಣಾನ ಗಾಲೀಯ ತಿರುವ್ಯಾಳಾ
ಹೆಳಲು ನೀರಲ ತೋಳು ಟೊಂಕ ಬೂರಲ ಹೋಳು
ನೀಹೇಳು ಹೆಸರೇನು ಹೇಳ್ಯಾಳಾ ||೫||
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಬಂಗಲೆಯ ಭಾಗ್ಯ
Next post ಹಚ್ಚಿಕೊಳ್ಳಬೇಡ

ಸಣ್ಣ ಕತೆ

  • ಗೋಪಿ

    ವೆಂಕಪ್ಪನ ಜೊತೆಗೆ ಒಂದು ಆಕಳು ಇದ್ದೇ ಇದೆ. ಅವನ ಮನೆಯ ಮುಂದೆ ಯಾವಾಗಲೂ ಅದು ಜೋಲುಮೋರೆ ಹಾಕಿಕೊಂಡು ನಿಂತೇ ನಿಂತಿರುತ್ತದೆ. ದಾರಿಯಲ್ಲಿ ಹೋಗುತ್ತಿದ್ದವರನ್ನು ಮಿಕಿ ಮಿಕಿ ಕಣ್ಣು… Read more…

  • ಮೌನರಾಗ

    ಇಪ್ಪತ್ತೊಂಬತ್ತು ದಾಟಿ ಮೂವತ್ತಕ್ಕೆ ಕಾಲಿರಿಸುತ್ತಿದ್ದ ಸುಧೀರ್ ಮದುವೆಯ ಬಗ್ಗೆ ತಾಯಿ ಸೀತಮ್ಮ, ತಂದೆ ರಂಗರಾವ್ ಅವರಿಗೆ ಬಹಳ ಕಾತುರವಿತ್ತು. ಹೆಣ್ಣುಗಳನ್ನು ಸಂದರ್ಶಿಸಲು ಒಪ್ಪದೇ ಇದ್ದ ಸುಧೀರನ ಮನೋ… Read more…

  • ಅಹಮ್ ಬ್ರಹ್ಮಾಸ್ಮಿ

    ಬಹುಶಃ ಮೊದಲ ಬಾರಿ ನಾನು ಅವನನ್ನು ನೋಡುತ್ತಿರಬೇಕು. ಅವನು ಅಕಸ್ಮತ್ತಾಗಿ ನನ್ನ ಕಣ್ಣಿಗೆ ಬಿದ್ದನೋ, ಅಲ್ಲಾ ಅವನೇ ನಾನು ಕಾಣುವ ಹಾಗೆ ಎದುರಿಗೆ ಬಂದನೋ ಎಂಬ ವಿಷಯದಲ್ಲಿ… Read more…

  • ಬಸವನ ನಾಡಿನಲಿ

    ೧೯೯೧ರಲ್ಲಿ ನಾ ವಿಭಾಗೀಯ ಸಾರಿಗೆ ಅಧಿಕಾರಿ ಎಂದು ಬಡ್ತಿ ಹೊಂದಿದೆ! ಇಷ್ಟಕ್ಕೆ ಕೆಲವರು ಹೊಟ್ಟೆ ಉರಿ ಬಿದ್ದರು. ಪ್ರಾಮಾಣಿಕರು, ಶೋಷಿತರು, ವಂಚಿತರು, ಪಾಪದವರು, ಮುಂದೆ ಬರಲಿ ಎಂಬ… Read more…

  • ಹೃದಯದ ತೀರ್ಪು

    ಬೆಳಿಗ್ಗೆ ಏಳು ಗಂಟೆಯ ಹೊತ್ತಿಗೆ ತಿಂಡಿ ಕೂಡ ಮಾಡದೆ ಹೊರ ಹೋಗುತ್ತಿದ್ದ ಯೂಸುಫ್, ಮಧ್ಯಾಹ್ನ ಮಾತ್ರ ಮನೆಯಲ್ಲಿ ಉಣ್ಣುತ್ತಿದ್ದ. ರಾತ್ರಿಯ ಊಟ ಅವನ ತಾಯಿಯ ಮನೆಯಲ್ಲಿ. ತಾಯಿಯ… Read more…