Home / ಕವನ / ಕವಿತೆ / ದೇವರಾಟ ಕಣಗಂಡೆ ಸಂಶಿಯೊಳು

ದೇವರಾಟ ಕಣಗಂಡೆ ಸಂಶಿಯೊಳು

ದೇವರಾಟ ಕಣಗಂಡೆ ಸಂಶಿಯೊಳು
ಹಾವ ಕಡದು ಸತ್ತಿತೋ ಹುಡುಗಾ
ಜೀವ ಹೋಗಿ ಜನ ಮೌನವಾಯಿತೋ
ಕಾವಿಲಿಟ್ಟಳೋ ಬೆಡಗಾ
ಕಾವಲಿಟ್ಟಳೋ ಮೃತ್ಯುದೇವತೀ
ತಾ ಒದಗಿಸಿ ಅದರೊಳು ದಿಡಗಾ
ಸಾವು ಬಂತು ಹನ್ನೆರಡು ವರುಷಕೆ
ಆವ ಭಾವ ಆರಿಯದ ಯಡಗಾ
ಭಾವ ಶುದ್ಧವಿದು ಬ್ರಹ್ಮ ಲಿಖಿತದಲಿ
ತಾಯಿ ತಂದಿ ಗರ್ಭದ ಹಡಗಾ
ಯಾವ ಮಾತೇನಂತ ಹೇಳಲಿ
ಮಾಯ ಸಖಿಯ ಕೈಯನ ಕಡಗಾ
ಅಟವ ನೋಡಿ ಆವ ಸಾಯಕಾಗಿ ಒಂದು ಸರ್ಪಾ
ಈ ಪಾಯ ವಡವಿ ಯಮನೂರ ಒಡಿಯನಕ್ಷೇಪಾ
ಮುಂಚೆ ಹೇಳತಿದ್ದ ಅವರಪ್ಪಾ
ಬಹು ಛಾಯ ರಾಜನೆಂಬುವಂಥ ಹೆಸರಿನ ಟೋಪಾ
ಚಿಕ್ಕ ಪ್ರಾಯದ ಕಮ೯ದ ಪಾಪಾ
ಆವುಕಾವುಗಳು ತಿಳಿಯದೆ ಲೋಕದಿ
ಈ ವಿಸ್ತರ ಈ ಪರಿ ಹೀಗಾ
ಆಯಾಸಿಲ್ಲದೆ ಬ್ಯಾನಿ ಜನರು ಕಂಡು
ಸೇವಿ ನೆಡದಿತು ಪೊಡವಿಯ ಮ್ಯಾಗ ||೧||

ವಸುಧಿಯೊಳು ಹೊಸಮಾತು ಕೌತುಕುಕಾ
ಮುಸಲ್ಮಾನ ಜನ ಮಹಿಮಕುಲಾ
ಕೊಸರಿ ಬಂದು ಕಾಳುರಗ ಹೆಚ್ಚಿತು
ಹಸುಮಗನೀತನ ಪುಣ್ಯ ಫಲಾ
ವಿಷವು ಏರಿ ಅಸುಹಾರಿದ ಹೆಣವನು
ಹಸನಮಾಡಿ ಹುಗಿದಂಥ ಸ್ಥಳಾ
ಉಸುಕುಬೈಲಿ ಎರೆಮಣ್ಣಿನ ಗೋರಿಗೆ
ಶಿವಬ್ರಹ್ಮ ರಕ್ಕಸ ಜಾಲಾ
ಅಸಲ ತುರುಕರು ಜಾತಿ ಕಮ೯ದಲಿ
ಓದಕಿಮಾಡ್ಯಾರೋ ಬಿಸಮಿಲ್ಲಾ
ಹೆಸರಾದ ಸಂಶಿ ದೊಡ್ಡಗ್ರಾಮಯೆಂಬುವದು ಗೊತ್ತಾ
ದೆಸೆಗೆಟ್ಟು ಊರೊಳ್ಯಾವತ್ತಾ
ಕುಶಲದಿ ಗೌಡ ಕುಲಕರ್ಣಿ ರೈತ ಜನ ಜತ್ತಾ
ಹಸನಾದ ಸಾವಕಾರ ಸಹಿತ
ದಶದಿಕ್ಕಿಗ್ಹತ್ತಿತೋ ಸುದ್ದಿ ನೂತನೆಂಬೂತಾ
ಶಿವ ಬಲ್ಲಾ ಅವರ ಮಸಲತ್ತಾ
ಹುಸಿಯನಾಡಲಹುದಾಗದು ಲೋಕದಿ
ಬೆಸಿಗಿ ಬ್ಯಾರೆ ಡಂಬಕ ಭೋಗಾ
ತುಸುದಿನದೊಳಗಿದು ವಡದು ಹೋಗುತದ
ಕಸಮೂಲದ ಕರ್ಮದ ಪಡಗಾ ||೨||

ಹೂಡು ಎತ್ತು ಬಂಡಿ ಈ ಕ್ಷಣಕ ಕೊಟ್ಟರೆ
ಜೋಡ ಕಂದೂರಿ ಮಾಡುವೆನೆಂದು
ಕಿವುಡ ಕುರುಡ ಕುಂಟ ಮುಂಡ ಮುಕರ‍್ಯಾ
ಬೋಡಮೂಕ ಬಾಯ್ಬೇಕೆಂದು
ಜಾಡ ಬಣಜಿಗರು ವ್ಯವಹಾರಾಗಲೆಂದು
ಕೋಡಗನ್ಹಾಂಗ ಕುಣಿಯುತ ಬಂದು
ಬಾಡ ಮಾರುವಾ ಬಾಗುವಾನರು
ನೀಡುತಿಹರು ಸಕ್ಕರಿ ಒಯ್ದು
ಹಾಡುವ ಚೌಡಕಿಯ ಜೋಗಿ ಜಂಗಮ ಫಕ್ಕೀರಾ
ಆಡುವ ಡೊಂಬ ಜಾತಿಗಾರಾ
ಪಾಡಾಗಿ ಪದಗಳ್ಹೇಳುವ ದಾಸ ದೂರ ದೂರಾ
ಕೇಡಿಗ ಕಿಳ್ಳಿಕ್ಯಾತರ ಮೋಡಿಕಾರಾ
ಪುಂಗಿ ಬಾರಿಸುವಂತ ಕೊರವರಾ
ಗಾಡೀಗ ಗೊಲ್ಲ ಹಾವಗಾರಾ
ಆಡಲೇನು ಅತಿ ಚೋದ್ಯವಾಯಿತು
ರೂಢಿ ಜನಕೆ ಈಗ ಈಗ
ಕಾಡ ಅಡವಿಯೊಳು ಸತ್ತದವಕ ಜನ
ಮಾಡಿದಲ್ಲೋ ಸಿಂಗರ ಹೀಂಗಾ ||೩||
ಇಷ್ಟು ಇರಲಿ ಈ ಮಾತು ಇಲ್ಲಿಗೆ
ಕೆಟ್ಟ ನಡತಿ ಹೆಂಗಸರ ಚಾಳಿ
ಹೊಟ್ಟಿನೂವು ಹೊಲಿಕಟ್ಟು ಮುಂಚಿಗೆ
ಮುಟ್ಟಾಗದ ಮಳ್ಳೇರು ಕೇಳಿ
ಸಿಟ್ಟಿಲೆ ಗಂಡಸರು ಬಿಟ್ಟರೆ ಉಡಲಿಕ್ಕೆ
ಬಟ್ಟಿಗಾಣದೆ ತೊಳಲಾಡುವ ಸೂಳಿ
ಮಿಟ್ಟಿಯಂತ ಮಿಂಡ ಮನಿಗೆ ಬಾ ಆಂತಾಳ
ಕಟ್ಟಳಿ ಮನದನ್ನ ಹಳಹಳಿ
ಕಟ್ಟಗಡಿಕೆರ ಮಾತಿಗೆ ಮರುಳಾಗಿ ಗೆಳತೇರೆಲ್ಲರೂ ಜೋಡಿ
ಹೊರಟಾರೋ ಬರಬೇಕಂತ ನೋಡಿ
ಪಟಿಪಿತಾಂಬರುಟ್ಟಾರೋ ಗೆಳತೆರೆಲ್ಲರೂ ಜೋಡಿ
ರೊಟ್ಟಿ ಬುತ್ತಿ ಕಟ್ಟ್ಯಾರೋ ಲಗುಮಾಡಿ
ತಟ್ಟಾನೆ ಕೂಡ್ರುವ ಸಿಂಗರದ ಸಸ್ಸರಟ ಗಾಡಿ
ಗಟ್ಟ್ಯಾಗಿ ಹತ್ತುವ ಚಕ್ಕಡಿ
ಸೃಷ್ಟಿಯೊಳಗಿನ ಸ್ತ್ರೀಜನ ಬರತದ
ಅಷ್ಟ ದಿಕ್ಕಿಲಿ ಬ್ಯಾಗ ಬ್ಯಾಗ
ಹುಟ್ಟಬಂಜಿಯರು ಮಕ್ಕಳ ಬೇಡತಾರ ತಮ್ಮ ಮನಸಿನ್ಯಾಗಾ ||೪||

ಅಣ್ಣ ಜ್ಞಾನಿಗಳು ಹೇಳುವೆ ಆ ಹೆಣ
ಮಣ್ಣಿನೊಳಗ್ಹುಗುದರು ಮೂರುದಿನಕ
ಕಣ್ಣಿಟ್ಟಳು ಮಹಾತ್ಮದ ಲಕ್ಷ್ಮಿ
ಸಣ್ಣಹುಡುಗನ ಪುಣ್ಯದ ಘನಕ
ಬಣ್ಣಿಸಿ ಪೇಳುವೆ ಬಹುತರ ಲೋಕದಿ
ಹೆಣಿದ ಸುಳ್ಳಿನ ಸಂಧಾನಕ
ನುಣ್ಣಗೆ ಹದಿನೆಂಟು ಜಾತಿ ಜನಂಗಳು
ಇನ್ನೊದಗುವ ಕರ್ಮದ ರಿಣಕ
ಉಣ್ಣಿ ಹತ್ತಿದ ಎತ್ತು
ಗಿಣ್ಣಿ ರೋಗಾಪತ್ತು ಧನ್ಯನಾಗಿ ನಡಕೊಂಬುದಕ
ಹುಣ್ಣು ಹುಗಳು ಜ್ವರ ವಾಯು ಶೂಲಿ ನರ
ತನ್ನ ಬ್ಯಾನಿ ನೋವಿನ ಗುಣಕ
ಚನ್ನಾಗಿ ನಿನ್ನ ತನು ಮನದಿ ತಿಳಿದು ನೋಡಣ್ಣಾ
ಅನ್ಯಾಯ ಕಲಿಯುಗದವರ್ನಾ
ಸೊನ್ನೀಲಿ ಸುಮ್ಮನಿರು ಸುಗುಣನಾದರೆ ಇನ್ನಾ
ಮುನ್ನಾ ಅರವು ಹಿಡಿದು ನಡಿ ಜಾಣಾ
ಕರ್ನಾಟಕ ದೇಶ ನಡುಮಧ್ಯ ಶಿಶುವಿನಾಳ ಸ್ಥಾನಾ
ನಿರ್ಣೈಸಿ ನಿಜದಿ ಕವಿತವನಾ
ಕುನ್ನಿ ಮನುಜರು ಮಾಡುವ ಕಪಟಕೆ
ಕುಹಕತನದಲಿ ಈಗಾ
ರನ್ನಮಾತು ಇದು ಸಹಜಸಾರ ತಿಳಿ
ನಿನ್ನ್ಮನದೊಳು ಬೇಗಾ
*****

 

Tagged:

Leave a Reply

Your email address will not be published. Required fields are marked *

ಸರ್‍ಕಸ್ಸು ಮುಗಿದರೂ ಅವನು ಅಲ್ಲಿಯೇ ಕುಳಿತಿದ್ದ. ಎಲ್ಲಾ ಎದ್ದು ಹೋಗಿದ್ದರು. ಎರಡನೇ ಷೋ ಆರಂಭವಾಗಲು ಕೆಲವೇ ಸಮಯ ಉಳಿದಿತ್ತು. ಅವನ ಕಣ್ಣುಗಳು ಏನನ್ನೋ ಹುಡುಕುತ್ತಿದ್ದವು. ಆ ಸರ್‍ಕಸ್ಸಿನ ಹುಡುಗಿ ಪ್ರವೇಶಿಸಿ ಓಡಿ ಬಂದು ಎರಡು ಬಾರಿ ಲಾಗಾ ಹಾಕಿ ಇವನ ಮುಂದೆಯೇ ನಿಂತಂತಾಯಿತು. ಆಕೆಯ...

“ಸುಭದ್ರೆ, ನೀನು ಎಂದು….” ದೈನ್ಯವಾಣಿಯಿಂದ ಕೇಳಿಕೊಂಡ ಶ್ರೀಧರ. “ತಡೆ ಶ್ರೀಧರ. ಹ್ಞ. ಹತ್ತಿರ ಬರಬೇಡ. ಪ್ರತಿಯೊಂದು ಕಾರ್ಯಕ್ಕೂ ಮುಹೂರ್ತ ಬರಬೇಕು; ಸ್ವಲ್ಪ ಕಾಲ ತಡೆ. ಒಮ್ಮೆ ಹೇಳಿದೆ: ನಾನು ನಿನ್ನವಳೆಂದು, ನಂಬಿಕೊ.” “ಎಷ್ಟು ದಿನ ಈ ನ...

ಮಳೆ ಜೋರಾಗಿ ಸುರಿಯುತ್ತಿತ್ತು. ಚಾವಣಿ ತೂತಾಗಿ ಸೋರುತ್ತಿದ್ದುದರಿಂದ ಸಾವಿತ್ರಿಗೆ ನಿದ್ದೆ ಇರಲಿಲ್ಲ. ಅವಳ ಉಗ್ಗವನದೂ ಅದೇ ಕತೆ. ಒಂದು ಮೂಲೆಯಲ್ಲಿ ಉಗ್ಗವನಿಗೆ ಒರಗಿಕೊಂಡು ಹಳೇ ಕಂಬಳಿ ಹೊದ್ದು ಸಾವಿತ್ರಿ ತೂಕಡಿಸುತ್ತಿದ್ದಳು. ಬಾಗಿಲ ಸಂದಿನಿಂದ ಆಗಾಗ ಚಳಕ್ಕನೆ ಕಾಣಿಸಿಕೊಳ್ಳುವ ಮಿ...

ದೀಪಾವಳಿಯ ಸೂಟಿಯನ್ನು ಕಳೆಯಲು ಊರಿಗೆ ಹೋಗಿದ್ದೆ. ಹಳ್ಳಿಗೆ ಹೋದಾಗೆಲ್ಲ ಕತೆಯ ಸುಬ್ಬಣ್ಣನ ಮನೆಗೆ ಹೋಗದಿದ್ದರೆ ನನ್ನ ಮನಸ್ಸು ಕೇಳುವದಿಲ್ಲ. ಊರಿಗೆ ಬಂದು ತನ್ನ ಮನೆಗೆ ಬರದಿದ್ದರೆ ಸುಬ್ಬಣ್ಣ ಬಿಡುತ್ತಾನೇ? ಅವನ ಆಮಂತ್ರಣ ಬರುವ ಮುಂಚೆಯೇ ಹೋಗುವದು ಉಚಿತವೆಂದು ತೋರಿತು. ಅವನ ಕತೆ ಕೇ...

ಒಂದು ತಿಂಗಳ ಮಗು ಹೆನ್ರಿ ನೋಡಲು ಬಲು ಮುದ್ದಾಗಿದ್ದ. ಸೇಬಿನ ಕೆನ್ನೆಗಳು, ದೊಡ್ಡ ಕಪ್ಪು ಕಣ್ಣುಗಳು, ತಲೆಯಲ್ಲಿ ಕೆಂಚು ಕೂದಲು, ನೀಳ ಮೂಗು, ಮುದ್ದಾದ ಪುಟ್ಟ ಬಾಯಿ, ನೋಡಿದೊಡನೆ ಹೇಳಬಹುದಿತ್ತು ಆ ಮಗು ಬ್ರಿಟಿಷ್ ತಂದೆ ತಾಯಿಗೆ ಹುಟ್ಟಿದವನೆಂದು. ತಂದೆ ಸ್ಮಿಥ್ ಮತ್ತು ತಾಯಿ ಮೇರಿಗೆ...

ಕೊನೆಗೊಮ್ಮೆ ಶಂಕರ ಹೂಂಗುಟ್ಟಲೇಬೇಕಾಯಿತು. “ಹುಡುಗಿ ಮನಸ್ಸಿಗೆ ಬಂದರೆ ಮಾತ್ರ ಆಗಿ. ಈ ವಿಷಯದಲ್ಲಿ ಒತ್ತಾಯಮಾಡಬರುತ್ತದೆಯೇ?” ಎಂದು ಶಿವರಾಮ ಹೆಗಡೆಯವರು ಶಂಕರನನ್ನು ಹೊರಡಿಸಿದರು. ದಾರಿಯುದ್ದಕ್ಕೂ ಹೆಗಡೆಯವರು ತಮ್ಮ ಮಗಳ ಗುಣಗಾನವನ್ನು ಪ್ರಸ್ತುತ ಅಪ್ರಸ್ತುತ ಪ್ರಶಂಸೆಗಳಿಂದ...