Home / ಕವನ / ಕವಿತೆ / ದೇವರಾಟ ಕಣಗಂಡೆ ಸಂಶಿಯೊಳು

ದೇವರಾಟ ಕಣಗಂಡೆ ಸಂಶಿಯೊಳು

ದೇವರಾಟ ಕಣಗಂಡೆ ಸಂಶಿಯೊಳು
ಹಾವ ಕಡದು ಸತ್ತಿತೋ ಹುಡುಗಾ
ಜೀವ ಹೋಗಿ ಜನ ಮೌನವಾಯಿತೋ
ಕಾವಿಲಿಟ್ಟಳೋ ಬೆಡಗಾ
ಕಾವಲಿಟ್ಟಳೋ ಮೃತ್ಯುದೇವತೀ
ತಾ ಒದಗಿಸಿ ಅದರೊಳು ದಿಡಗಾ
ಸಾವು ಬಂತು ಹನ್ನೆರಡು ವರುಷಕೆ
ಆವ ಭಾವ ಆರಿಯದ ಯಡಗಾ
ಭಾವ ಶುದ್ಧವಿದು ಬ್ರಹ್ಮ ಲಿಖಿತದಲಿ
ತಾಯಿ ತಂದಿ ಗರ್ಭದ ಹಡಗಾ
ಯಾವ ಮಾತೇನಂತ ಹೇಳಲಿ
ಮಾಯ ಸಖಿಯ ಕೈಯನ ಕಡಗಾ
ಅಟವ ನೋಡಿ ಆವ ಸಾಯಕಾಗಿ ಒಂದು ಸರ್ಪಾ
ಈ ಪಾಯ ವಡವಿ ಯಮನೂರ ಒಡಿಯನಕ್ಷೇಪಾ
ಮುಂಚೆ ಹೇಳತಿದ್ದ ಅವರಪ್ಪಾ
ಬಹು ಛಾಯ ರಾಜನೆಂಬುವಂಥ ಹೆಸರಿನ ಟೋಪಾ
ಚಿಕ್ಕ ಪ್ರಾಯದ ಕಮ೯ದ ಪಾಪಾ
ಆವುಕಾವುಗಳು ತಿಳಿಯದೆ ಲೋಕದಿ
ಈ ವಿಸ್ತರ ಈ ಪರಿ ಹೀಗಾ
ಆಯಾಸಿಲ್ಲದೆ ಬ್ಯಾನಿ ಜನರು ಕಂಡು
ಸೇವಿ ನೆಡದಿತು ಪೊಡವಿಯ ಮ್ಯಾಗ ||೧||

ವಸುಧಿಯೊಳು ಹೊಸಮಾತು ಕೌತುಕುಕಾ
ಮುಸಲ್ಮಾನ ಜನ ಮಹಿಮಕುಲಾ
ಕೊಸರಿ ಬಂದು ಕಾಳುರಗ ಹೆಚ್ಚಿತು
ಹಸುಮಗನೀತನ ಪುಣ್ಯ ಫಲಾ
ವಿಷವು ಏರಿ ಅಸುಹಾರಿದ ಹೆಣವನು
ಹಸನಮಾಡಿ ಹುಗಿದಂಥ ಸ್ಥಳಾ
ಉಸುಕುಬೈಲಿ ಎರೆಮಣ್ಣಿನ ಗೋರಿಗೆ
ಶಿವಬ್ರಹ್ಮ ರಕ್ಕಸ ಜಾಲಾ
ಅಸಲ ತುರುಕರು ಜಾತಿ ಕಮ೯ದಲಿ
ಓದಕಿಮಾಡ್ಯಾರೋ ಬಿಸಮಿಲ್ಲಾ
ಹೆಸರಾದ ಸಂಶಿ ದೊಡ್ಡಗ್ರಾಮಯೆಂಬುವದು ಗೊತ್ತಾ
ದೆಸೆಗೆಟ್ಟು ಊರೊಳ್ಯಾವತ್ತಾ
ಕುಶಲದಿ ಗೌಡ ಕುಲಕರ್ಣಿ ರೈತ ಜನ ಜತ್ತಾ
ಹಸನಾದ ಸಾವಕಾರ ಸಹಿತ
ದಶದಿಕ್ಕಿಗ್ಹತ್ತಿತೋ ಸುದ್ದಿ ನೂತನೆಂಬೂತಾ
ಶಿವ ಬಲ್ಲಾ ಅವರ ಮಸಲತ್ತಾ
ಹುಸಿಯನಾಡಲಹುದಾಗದು ಲೋಕದಿ
ಬೆಸಿಗಿ ಬ್ಯಾರೆ ಡಂಬಕ ಭೋಗಾ
ತುಸುದಿನದೊಳಗಿದು ವಡದು ಹೋಗುತದ
ಕಸಮೂಲದ ಕರ್ಮದ ಪಡಗಾ ||೨||

ಹೂಡು ಎತ್ತು ಬಂಡಿ ಈ ಕ್ಷಣಕ ಕೊಟ್ಟರೆ
ಜೋಡ ಕಂದೂರಿ ಮಾಡುವೆನೆಂದು
ಕಿವುಡ ಕುರುಡ ಕುಂಟ ಮುಂಡ ಮುಕರ‍್ಯಾ
ಬೋಡಮೂಕ ಬಾಯ್ಬೇಕೆಂದು
ಜಾಡ ಬಣಜಿಗರು ವ್ಯವಹಾರಾಗಲೆಂದು
ಕೋಡಗನ್ಹಾಂಗ ಕುಣಿಯುತ ಬಂದು
ಬಾಡ ಮಾರುವಾ ಬಾಗುವಾನರು
ನೀಡುತಿಹರು ಸಕ್ಕರಿ ಒಯ್ದು
ಹಾಡುವ ಚೌಡಕಿಯ ಜೋಗಿ ಜಂಗಮ ಫಕ್ಕೀರಾ
ಆಡುವ ಡೊಂಬ ಜಾತಿಗಾರಾ
ಪಾಡಾಗಿ ಪದಗಳ್ಹೇಳುವ ದಾಸ ದೂರ ದೂರಾ
ಕೇಡಿಗ ಕಿಳ್ಳಿಕ್ಯಾತರ ಮೋಡಿಕಾರಾ
ಪುಂಗಿ ಬಾರಿಸುವಂತ ಕೊರವರಾ
ಗಾಡೀಗ ಗೊಲ್ಲ ಹಾವಗಾರಾ
ಆಡಲೇನು ಅತಿ ಚೋದ್ಯವಾಯಿತು
ರೂಢಿ ಜನಕೆ ಈಗ ಈಗ
ಕಾಡ ಅಡವಿಯೊಳು ಸತ್ತದವಕ ಜನ
ಮಾಡಿದಲ್ಲೋ ಸಿಂಗರ ಹೀಂಗಾ ||೩||
ಇಷ್ಟು ಇರಲಿ ಈ ಮಾತು ಇಲ್ಲಿಗೆ
ಕೆಟ್ಟ ನಡತಿ ಹೆಂಗಸರ ಚಾಳಿ
ಹೊಟ್ಟಿನೂವು ಹೊಲಿಕಟ್ಟು ಮುಂಚಿಗೆ
ಮುಟ್ಟಾಗದ ಮಳ್ಳೇರು ಕೇಳಿ
ಸಿಟ್ಟಿಲೆ ಗಂಡಸರು ಬಿಟ್ಟರೆ ಉಡಲಿಕ್ಕೆ
ಬಟ್ಟಿಗಾಣದೆ ತೊಳಲಾಡುವ ಸೂಳಿ
ಮಿಟ್ಟಿಯಂತ ಮಿಂಡ ಮನಿಗೆ ಬಾ ಆಂತಾಳ
ಕಟ್ಟಳಿ ಮನದನ್ನ ಹಳಹಳಿ
ಕಟ್ಟಗಡಿಕೆರ ಮಾತಿಗೆ ಮರುಳಾಗಿ ಗೆಳತೇರೆಲ್ಲರೂ ಜೋಡಿ
ಹೊರಟಾರೋ ಬರಬೇಕಂತ ನೋಡಿ
ಪಟಿಪಿತಾಂಬರುಟ್ಟಾರೋ ಗೆಳತೆರೆಲ್ಲರೂ ಜೋಡಿ
ರೊಟ್ಟಿ ಬುತ್ತಿ ಕಟ್ಟ್ಯಾರೋ ಲಗುಮಾಡಿ
ತಟ್ಟಾನೆ ಕೂಡ್ರುವ ಸಿಂಗರದ ಸಸ್ಸರಟ ಗಾಡಿ
ಗಟ್ಟ್ಯಾಗಿ ಹತ್ತುವ ಚಕ್ಕಡಿ
ಸೃಷ್ಟಿಯೊಳಗಿನ ಸ್ತ್ರೀಜನ ಬರತದ
ಅಷ್ಟ ದಿಕ್ಕಿಲಿ ಬ್ಯಾಗ ಬ್ಯಾಗ
ಹುಟ್ಟಬಂಜಿಯರು ಮಕ್ಕಳ ಬೇಡತಾರ ತಮ್ಮ ಮನಸಿನ್ಯಾಗಾ ||೪||

ಅಣ್ಣ ಜ್ಞಾನಿಗಳು ಹೇಳುವೆ ಆ ಹೆಣ
ಮಣ್ಣಿನೊಳಗ್ಹುಗುದರು ಮೂರುದಿನಕ
ಕಣ್ಣಿಟ್ಟಳು ಮಹಾತ್ಮದ ಲಕ್ಷ್ಮಿ
ಸಣ್ಣಹುಡುಗನ ಪುಣ್ಯದ ಘನಕ
ಬಣ್ಣಿಸಿ ಪೇಳುವೆ ಬಹುತರ ಲೋಕದಿ
ಹೆಣಿದ ಸುಳ್ಳಿನ ಸಂಧಾನಕ
ನುಣ್ಣಗೆ ಹದಿನೆಂಟು ಜಾತಿ ಜನಂಗಳು
ಇನ್ನೊದಗುವ ಕರ್ಮದ ರಿಣಕ
ಉಣ್ಣಿ ಹತ್ತಿದ ಎತ್ತು
ಗಿಣ್ಣಿ ರೋಗಾಪತ್ತು ಧನ್ಯನಾಗಿ ನಡಕೊಂಬುದಕ
ಹುಣ್ಣು ಹುಗಳು ಜ್ವರ ವಾಯು ಶೂಲಿ ನರ
ತನ್ನ ಬ್ಯಾನಿ ನೋವಿನ ಗುಣಕ
ಚನ್ನಾಗಿ ನಿನ್ನ ತನು ಮನದಿ ತಿಳಿದು ನೋಡಣ್ಣಾ
ಅನ್ಯಾಯ ಕಲಿಯುಗದವರ್ನಾ
ಸೊನ್ನೀಲಿ ಸುಮ್ಮನಿರು ಸುಗುಣನಾದರೆ ಇನ್ನಾ
ಮುನ್ನಾ ಅರವು ಹಿಡಿದು ನಡಿ ಜಾಣಾ
ಕರ್ನಾಟಕ ದೇಶ ನಡುಮಧ್ಯ ಶಿಶುವಿನಾಳ ಸ್ಥಾನಾ
ನಿರ್ಣೈಸಿ ನಿಜದಿ ಕವಿತವನಾ
ಕುನ್ನಿ ಮನುಜರು ಮಾಡುವ ಕಪಟಕೆ
ಕುಹಕತನದಲಿ ಈಗಾ
ರನ್ನಮಾತು ಇದು ಸಹಜಸಾರ ತಿಳಿ
ನಿನ್ನ್ಮನದೊಳು ಬೇಗಾ
*****

 

Tagged:

Leave a Reply

Your email address will not be published. Required fields are marked *

(ಒಂದು ಐತಿಹಾಸಿಕ ಕತೆ) ಹ್ಹಃ ಹ್ಹಃ ಹ್ಹಃ! ಅಹ್ಹಃ ಅಹ್ಹಃ ಅಹ್ಹಃ!! ಗಝುನಿ ಮಹಮೂದನಿಗೆ ಹಿಡಿಸಲಾರದ ನಗೆ. ನಕ್ಕು ನಕ್ಕು ಅವನ ಹೊಟ್ಟೆ ನೋಯುತ್ತಿದ್ದಿತು. ಆದರೂ ಅವನ ಆ ತಿರಸ್ಕಾರದ ನಗೆ ತಡೆಯಲಾರದಾಯಿತು. ಅದೊಂದು ಸುಪ್ರಸಿದ್ದವಾದ ಸೋಮನಾಥ ದೇವಾಲಯ. ಭಾರತದ ವೈಭವವನ್ನು ವಿಶ್ವಕ್ಕೆ ತೋ...

ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಕೀಲಿಕರಣ: ಎಮ್.ಎನ್.ಎಸ್.ರಾವ್