Home / ಕವನ / ಕವಿತೆ / ದೇವರಾಟ ಕಣಗಂಡೆ ಸಂಶಿಯೊಳು

ದೇವರಾಟ ಕಣಗಂಡೆ ಸಂಶಿಯೊಳು

ದೇವರಾಟ ಕಣಗಂಡೆ ಸಂಶಿಯೊಳು
ಹಾವ ಕಡದು ಸತ್ತಿತೋ ಹುಡುಗಾ
ಜೀವ ಹೋಗಿ ಜನ ಮೌನವಾಯಿತೋ
ಕಾವಿಲಿಟ್ಟಳೋ ಬೆಡಗಾ
ಕಾವಲಿಟ್ಟಳೋ ಮೃತ್ಯುದೇವತೀ
ತಾ ಒದಗಿಸಿ ಅದರೊಳು ದಿಡಗಾ
ಸಾವು ಬಂತು ಹನ್ನೆರಡು ವರುಷಕೆ
ಆವ ಭಾವ ಆರಿಯದ ಯಡಗಾ
ಭಾವ ಶುದ್ಧವಿದು ಬ್ರಹ್ಮ ಲಿಖಿತದಲಿ
ತಾಯಿ ತಂದಿ ಗರ್ಭದ ಹಡಗಾ
ಯಾವ ಮಾತೇನಂತ ಹೇಳಲಿ
ಮಾಯ ಸಖಿಯ ಕೈಯನ ಕಡಗಾ
ಅಟವ ನೋಡಿ ಆವ ಸಾಯಕಾಗಿ ಒಂದು ಸರ್ಪಾ
ಈ ಪಾಯ ವಡವಿ ಯಮನೂರ ಒಡಿಯನಕ್ಷೇಪಾ
ಮುಂಚೆ ಹೇಳತಿದ್ದ ಅವರಪ್ಪಾ
ಬಹು ಛಾಯ ರಾಜನೆಂಬುವಂಥ ಹೆಸರಿನ ಟೋಪಾ
ಚಿಕ್ಕ ಪ್ರಾಯದ ಕಮ೯ದ ಪಾಪಾ
ಆವುಕಾವುಗಳು ತಿಳಿಯದೆ ಲೋಕದಿ
ಈ ವಿಸ್ತರ ಈ ಪರಿ ಹೀಗಾ
ಆಯಾಸಿಲ್ಲದೆ ಬ್ಯಾನಿ ಜನರು ಕಂಡು
ಸೇವಿ ನೆಡದಿತು ಪೊಡವಿಯ ಮ್ಯಾಗ ||೧||

ವಸುಧಿಯೊಳು ಹೊಸಮಾತು ಕೌತುಕುಕಾ
ಮುಸಲ್ಮಾನ ಜನ ಮಹಿಮಕುಲಾ
ಕೊಸರಿ ಬಂದು ಕಾಳುರಗ ಹೆಚ್ಚಿತು
ಹಸುಮಗನೀತನ ಪುಣ್ಯ ಫಲಾ
ವಿಷವು ಏರಿ ಅಸುಹಾರಿದ ಹೆಣವನು
ಹಸನಮಾಡಿ ಹುಗಿದಂಥ ಸ್ಥಳಾ
ಉಸುಕುಬೈಲಿ ಎರೆಮಣ್ಣಿನ ಗೋರಿಗೆ
ಶಿವಬ್ರಹ್ಮ ರಕ್ಕಸ ಜಾಲಾ
ಅಸಲ ತುರುಕರು ಜಾತಿ ಕಮ೯ದಲಿ
ಓದಕಿಮಾಡ್ಯಾರೋ ಬಿಸಮಿಲ್ಲಾ
ಹೆಸರಾದ ಸಂಶಿ ದೊಡ್ಡಗ್ರಾಮಯೆಂಬುವದು ಗೊತ್ತಾ
ದೆಸೆಗೆಟ್ಟು ಊರೊಳ್ಯಾವತ್ತಾ
ಕುಶಲದಿ ಗೌಡ ಕುಲಕರ್ಣಿ ರೈತ ಜನ ಜತ್ತಾ
ಹಸನಾದ ಸಾವಕಾರ ಸಹಿತ
ದಶದಿಕ್ಕಿಗ್ಹತ್ತಿತೋ ಸುದ್ದಿ ನೂತನೆಂಬೂತಾ
ಶಿವ ಬಲ್ಲಾ ಅವರ ಮಸಲತ್ತಾ
ಹುಸಿಯನಾಡಲಹುದಾಗದು ಲೋಕದಿ
ಬೆಸಿಗಿ ಬ್ಯಾರೆ ಡಂಬಕ ಭೋಗಾ
ತುಸುದಿನದೊಳಗಿದು ವಡದು ಹೋಗುತದ
ಕಸಮೂಲದ ಕರ್ಮದ ಪಡಗಾ ||೨||

ಹೂಡು ಎತ್ತು ಬಂಡಿ ಈ ಕ್ಷಣಕ ಕೊಟ್ಟರೆ
ಜೋಡ ಕಂದೂರಿ ಮಾಡುವೆನೆಂದು
ಕಿವುಡ ಕುರುಡ ಕುಂಟ ಮುಂಡ ಮುಕರ‍್ಯಾ
ಬೋಡಮೂಕ ಬಾಯ್ಬೇಕೆಂದು
ಜಾಡ ಬಣಜಿಗರು ವ್ಯವಹಾರಾಗಲೆಂದು
ಕೋಡಗನ್ಹಾಂಗ ಕುಣಿಯುತ ಬಂದು
ಬಾಡ ಮಾರುವಾ ಬಾಗುವಾನರು
ನೀಡುತಿಹರು ಸಕ್ಕರಿ ಒಯ್ದು
ಹಾಡುವ ಚೌಡಕಿಯ ಜೋಗಿ ಜಂಗಮ ಫಕ್ಕೀರಾ
ಆಡುವ ಡೊಂಬ ಜಾತಿಗಾರಾ
ಪಾಡಾಗಿ ಪದಗಳ್ಹೇಳುವ ದಾಸ ದೂರ ದೂರಾ
ಕೇಡಿಗ ಕಿಳ್ಳಿಕ್ಯಾತರ ಮೋಡಿಕಾರಾ
ಪುಂಗಿ ಬಾರಿಸುವಂತ ಕೊರವರಾ
ಗಾಡೀಗ ಗೊಲ್ಲ ಹಾವಗಾರಾ
ಆಡಲೇನು ಅತಿ ಚೋದ್ಯವಾಯಿತು
ರೂಢಿ ಜನಕೆ ಈಗ ಈಗ
ಕಾಡ ಅಡವಿಯೊಳು ಸತ್ತದವಕ ಜನ
ಮಾಡಿದಲ್ಲೋ ಸಿಂಗರ ಹೀಂಗಾ ||೩||
ಇಷ್ಟು ಇರಲಿ ಈ ಮಾತು ಇಲ್ಲಿಗೆ
ಕೆಟ್ಟ ನಡತಿ ಹೆಂಗಸರ ಚಾಳಿ
ಹೊಟ್ಟಿನೂವು ಹೊಲಿಕಟ್ಟು ಮುಂಚಿಗೆ
ಮುಟ್ಟಾಗದ ಮಳ್ಳೇರು ಕೇಳಿ
ಸಿಟ್ಟಿಲೆ ಗಂಡಸರು ಬಿಟ್ಟರೆ ಉಡಲಿಕ್ಕೆ
ಬಟ್ಟಿಗಾಣದೆ ತೊಳಲಾಡುವ ಸೂಳಿ
ಮಿಟ್ಟಿಯಂತ ಮಿಂಡ ಮನಿಗೆ ಬಾ ಆಂತಾಳ
ಕಟ್ಟಳಿ ಮನದನ್ನ ಹಳಹಳಿ
ಕಟ್ಟಗಡಿಕೆರ ಮಾತಿಗೆ ಮರುಳಾಗಿ ಗೆಳತೇರೆಲ್ಲರೂ ಜೋಡಿ
ಹೊರಟಾರೋ ಬರಬೇಕಂತ ನೋಡಿ
ಪಟಿಪಿತಾಂಬರುಟ್ಟಾರೋ ಗೆಳತೆರೆಲ್ಲರೂ ಜೋಡಿ
ರೊಟ್ಟಿ ಬುತ್ತಿ ಕಟ್ಟ್ಯಾರೋ ಲಗುಮಾಡಿ
ತಟ್ಟಾನೆ ಕೂಡ್ರುವ ಸಿಂಗರದ ಸಸ್ಸರಟ ಗಾಡಿ
ಗಟ್ಟ್ಯಾಗಿ ಹತ್ತುವ ಚಕ್ಕಡಿ
ಸೃಷ್ಟಿಯೊಳಗಿನ ಸ್ತ್ರೀಜನ ಬರತದ
ಅಷ್ಟ ದಿಕ್ಕಿಲಿ ಬ್ಯಾಗ ಬ್ಯಾಗ
ಹುಟ್ಟಬಂಜಿಯರು ಮಕ್ಕಳ ಬೇಡತಾರ ತಮ್ಮ ಮನಸಿನ್ಯಾಗಾ ||೪||

ಅಣ್ಣ ಜ್ಞಾನಿಗಳು ಹೇಳುವೆ ಆ ಹೆಣ
ಮಣ್ಣಿನೊಳಗ್ಹುಗುದರು ಮೂರುದಿನಕ
ಕಣ್ಣಿಟ್ಟಳು ಮಹಾತ್ಮದ ಲಕ್ಷ್ಮಿ
ಸಣ್ಣಹುಡುಗನ ಪುಣ್ಯದ ಘನಕ
ಬಣ್ಣಿಸಿ ಪೇಳುವೆ ಬಹುತರ ಲೋಕದಿ
ಹೆಣಿದ ಸುಳ್ಳಿನ ಸಂಧಾನಕ
ನುಣ್ಣಗೆ ಹದಿನೆಂಟು ಜಾತಿ ಜನಂಗಳು
ಇನ್ನೊದಗುವ ಕರ್ಮದ ರಿಣಕ
ಉಣ್ಣಿ ಹತ್ತಿದ ಎತ್ತು
ಗಿಣ್ಣಿ ರೋಗಾಪತ್ತು ಧನ್ಯನಾಗಿ ನಡಕೊಂಬುದಕ
ಹುಣ್ಣು ಹುಗಳು ಜ್ವರ ವಾಯು ಶೂಲಿ ನರ
ತನ್ನ ಬ್ಯಾನಿ ನೋವಿನ ಗುಣಕ
ಚನ್ನಾಗಿ ನಿನ್ನ ತನು ಮನದಿ ತಿಳಿದು ನೋಡಣ್ಣಾ
ಅನ್ಯಾಯ ಕಲಿಯುಗದವರ್ನಾ
ಸೊನ್ನೀಲಿ ಸುಮ್ಮನಿರು ಸುಗುಣನಾದರೆ ಇನ್ನಾ
ಮುನ್ನಾ ಅರವು ಹಿಡಿದು ನಡಿ ಜಾಣಾ
ಕರ್ನಾಟಕ ದೇಶ ನಡುಮಧ್ಯ ಶಿಶುವಿನಾಳ ಸ್ಥಾನಾ
ನಿರ್ಣೈಸಿ ನಿಜದಿ ಕವಿತವನಾ
ಕುನ್ನಿ ಮನುಜರು ಮಾಡುವ ಕಪಟಕೆ
ಕುಹಕತನದಲಿ ಈಗಾ
ರನ್ನಮಾತು ಇದು ಸಹಜಸಾರ ತಿಳಿ
ನಿನ್ನ್ಮನದೊಳು ಬೇಗಾ
*****

 

Tagged:

Leave a Reply

Your email address will not be published. Required fields are marked *

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...

ಎಲೈ ಓದುಗರೇ! ಕಣ್ಣುಗಳನ್ನು ಅಗಲಿಸಿ ಏಕಚಿತ್ತದಿಂದ ಓದಿ! ನಾನೊಂದು ಕಥೆ ಹೇಳಲಿದ್ದೇನೆ. ರೋಮಾಂಚಕಾರಿ, ಮೈನಡುಗಿಸುವಂತಹ ಕಥೆ! ಒಬ್ಬ ಸಾಹಿತಿಯ ಕಥೆ! ಸಾಹಿತಿ ಆಗೇ ತೀರಬೇಕೆಂದು ಹಂಬಲಿಸುವವನ ಕಥೆ! ಸಾಹಿತ್ಯದಲ್ಲಿ ಎಲ್ಲ ಬಿರುದು ಬಹುಮಾನಗಳನ್ನು, ಪ್ರಶಸ್ತಿ ಪ್ರಶಂಸೆಗಳನ್ನು ಹೇಗೆ ಪಡೆ...

“ಎಷ್ಟು ದಿನ ಹೀಗೇ ತೊಂದರೆ ಪಟ್ಟುಕೊಳ್ಳುತ್ತಿರುವದು ಕೃಷ್ಣ ಮೂರ್ತಿ? ಮಕ್ಕಳನ್ನು ಆರಯ್ಯುವದು, ಅಡಿಗೆ ಮಾಡುವದು- ಇವುಗಳಿಗೆಲ್ಲ ಆಳು ಇಟ್ಟು ಪೂರೈಸೀತೇ? ಸುಮ್ಮನೆ ಇನ್ನೊಂದು ಮದುವೆಯಾಗಿ ಬಿಡಬಾರದೇ?” “ಪ್ರೀತಿ ಇಷ್ಟು ಅಗ್ಗ ಅಲ್ಲ ನೋಡು” “ಪ್ರೀತಿಯ ವಿಷಯವೇನೇ ...

ಕಾಲೇಜಿನ ಲೈಬ್ರೆರಿಯಿಂದ ಹೊರಬಂದ ಅವಳು ಒಮ್ಮೆ ಆಟದ ಮೈದಾನವನ್ನು ದಿಟ್ಟಿಸಿ ನೋಡಿದಳು. ಮೈದಾನ ಖಾಲಿ ಇರುವುದನ್ನು ಖಚಿತ ಮಾಡಿಕೊಂಡ ಅವಳು ವೇಗವಾಗಿ ನಡೆಯುತ್ತಾ ರಾಜ ರಸ್ತೆಗೆ ಬಂದಳು. ಅಲ್ಲಿಂದ ತನ್ನ ಮನೆಯ ವಿರುದ್ಧ ದಿಕ್ಕಿಗೆ ಹೆಜ್ಜೆ ಹಾಕ ತೊಡಗಿದಳು. ತನ್ನ ಶಕ್ತಿಯನ್ನೆಲ್ಲಾ ಪ್ರಯ...

ಅಡಿಕೆ ಭತ್ತಗಳ ವ್ಯಾಪಾರದಿಂದ ಅಶ್ವತ್ಥ ಹೆಬ್ಬಾರರು ನೂರಾರು ಸಾವಿರ ರೂಪಾಯಿ ಗಳಿಸಿದರೆಂದು ದಟ್ಟವಾಗಿ ಸುದ್ದಿ ಹಬ್ಬಿತು. ಇದಕ್ಕೆ ಸಾಕ್ಷಿ ಕೊಡುವಂತೆ ಹೆಬ್ಬಾರರು ಗ್ರಾಮದೇವಸ್ಥಾನದಲ್ಲಿ ಒಂದು ಯಜ್ಞವನ್ನು ಮಾಡಿಸುವೆನೆಂದು ಸಾರಿ, ತಯಾರಿ ಮಾಡಹತ್ತಿದರು. ತಟ್ಟೆಯ ಬಿಡಾರದಲ್ಲಿ ಸಾಲೆ ನ...

ಬ್ಯಾಂಕಿನ ಅರೆತೆರೆದ ಬಾಗಿಲನ್ನು ದೂಡಿ ಒಳಬಂದ ಪ್ರಹ್ಲಾದ, ಕೆಲಸದಲ್ಲಿ ಮಗ್ನಳಾಗಿದ್ದ ಸುಮಾಳ ಬಳಿಗೋಡಿ ಅವಳ ಪರ್‍ಸನ್ನು ತಡಕಾಡಿ ಹಣತೆಗೆದುಕೊಂಡು ಬಂದಷ್ಟೇ ವೇಗದಿಂದ ಹೊರಗೋಡಿದ್ದ. “ಏನು ಮಗರಾಯನ ಗಲಾಟೆ” ಹತ್ತಿರದಲ್ಲಿದ್ದ ದಿನಕರನ ಪ್ರಶ್ನೆಗೆ “ಅವನದ್ದು ಯಾವಾ...