ಹ್ಯಾಗೆ ಮಾಡಬೇಕ-ಈಕಿ ಸೋಗ ನೋಡಿ

ಹ್ಯಾಗೆ ಮಾಡಬೇಕ ಈಕಿ ಸೋಗ ನೋಡಿ ಸುಮ್ಮನೆ
ಹೋಗುವದಾಗವಲ್ಲದೈ ಸಾಂಬಾ
ಯೋಗಿ ಜನರಿಗೆ ಬಾಯ್ಗೆ
ಬೀಗ ಹಾಕಿದಳೆಂದು
ಕೂಗುತದ ವೇದಾಗಮ ತುಂಬಾ
ಬ್ಯಾಗದಿ ಶೃಂಗಾರವಾಗಿ
ಸಾಗಿ ಬಂದು ಸುಳಿದರೆ
ಮೇಘ ಮಿಂಚಿನಂತೆ ಮಾರಿಯ ಬಿಂಬಾ
ಈಗ ನೋಡುತಿರೆ ಈ
ಜಗದೊಳು ಮನುಜರ ಮನಸಿಜದೊರಿ ಭಾಗ್ಯದ ಕುಂಭಾ
ಲಾಗವಾಗಿ ಲಕ್ಷಣ ತೂಗುತದ ಯವ್ವನ
ನಾಗಲೋಕದ ಪದ್ಮಿನಿ ರಂಭಾ
ರಾಜದಿ ರಾಜೀವಮುಖಿ
ಸೋಗಿ ನೇತ್ರವನು ಕಂಡು
ಬ್ಯಾಗಿ ಹತ್ತಿತಲ್ಲೋ ಮನ್ಮಥ ಸಾಂಬಾ
ಬಗಿಬಗಿಯಲಿಂದ ಜಗಕಿಳಿದು ಜನದೊಳತಿ ಜಾಲಾ
ಒಗದಾಳೋ ವಿಟದ ಮನ ಕೀಲಾ
ಅಗಣಿತದಿ ಆದಳು ಸುಗುಣಾತ್ಮರಿಗೆ ಮೂಲಾ
ಮುಗುಳ್ನಗಿ ಮುರಕ ಮುದ್ದು ಲೀಲಾ
ಹಗಲಿರುಳು ಇವಳ ಆಳಾಪಹತ್ತಿ ಬೆಂಬಾಲಾ
ತಿರುಗಿದ ಋಷಿಗಳು ಶಿವ ಬಲ್ಲಾ
ಭೋಗ ಉಪರತಿ ಸೈ
ಯೋಗಿ ಸಂಪದ ಸುಖ
ಆಗದಾಂಗ ಆದಿತೆಂದೆದಿಗೆಂಬಾ || ೧ ||

ಬಾಳನೇತ್ರನೊಳು ಶಕ್ತಿ ಬಾಳವಿಲಾಸದಲಿಂದ
ತಾಳಿದಳು ಶಿವ ನಿಜರೂಪಸ್ಥಳಾ
ಬಾಳಿವಂತಿ ನಾಡೀರೋಳು
ಬಾಳಮಂದಿ ಶರಣರನ್ನು ತರಬೆನೆಂದು
ತಾಳ್ತೈತಿ ನಿನ್ನ ಛಲಾ
ವಾಳೆವಾಯಿತೆಂದು ಹರನಾ
ಮ್ಯಾಳದಿಂದ ಮನೆಗೆ ಬಂದು
ಹೇಳಿ ಕಳಿವ್ಯಾಳೋ ತಾಮಸದ ಕಳಾ
ಗಾಳಿ ಸೋಂಕಲಳಿಯ ಮುನಿ ಮೃಗಗಳಕೊಲ್ಲುವಂಥಾ
ಜಾಲ ಜಗದೊಳಗಿದು ಹೆಣ್ಣುಕುಲಾ
ಬಾಲೆ ತಯಾರಾಗಿ ಸಾಗಿ
ಮೇಲು ಆಕಾಶದ ತಾರಿ
ಪೋಲ್ವ ಚನ್ನಿಗಮುಖಿ ಪದ್ಮಗಳಾ
ಕಲ್ಲು ಕದಪು ಕನ್ನಡಿಗಳಾ
ಕೋಲಮಿಂಚಿನಂತೆ ಕಣ್ಣು
ಸಾಲ ದಂತ ದಾಳಿಂಬ್ರ ತುಟಿ ಹವಳಾ
ಆ ಲಲನೆ ತಿದ್ದಿ ತಿಲ್ಕಿಟ್ಟು ಫಣಿಗೆ ಕಸ್ತೂರಿ
ಭೂಲೋಕದೊಳಗೆ ವಿಸ್ತಾರಿ
ಒಪ್ಪುವಂತ ಕರ್ಣದೊಳು ಬುಗುಡಿ ಬಾವಲಿ ಬಲು ಭಾರಿ
ಚಳತುಂಬು ವಜ್ರಗಳು ಹೇರಿ
ವಸ್ತ್ರ ಆಭರಣ ಅಲಂಕಾರ ಭಾರಿ
ಕಲಿಯಗಕೆ ಇಳಿದಳೋ ಬೀರಿ
ಕೀಲಗಡಗ ಹರಡಿ ಹಸ್ತ
ಕಾಲ ಸರಪಳಿ ರುಳಿ ತೋಳ್ಬ೦ದಿ ವಂಕಿ
ನಡುವಿನ ಡಾಬಾ ಬಾಳಿ ಸುಳಿ ನಳಿನಾಭಿ
ತೋಳ್ಗಳ ಬೀಸುತ
ಸೂಳ್ಗೇರಿಯೊಳು ಸುಳಿದಳೋ ಜಂಬಾ || ೨ ||

ಧಾರುಣಿಗೆ ಮೀರಿ ಮಾಯ ಅವತಾರ
ಸಾರಿ ಹೊರಟು ಬರುತದ ದೂರದಿಂದ ಬರಬರಾ
ದಾರಿಯೊಳು ಲಂಕಾಪುರ
ವೀರದಾನ್ನವರ ಸುಟ್ಟುಬಿಟ್ಟಿತು
ಕುಂಭಕರ್ಣ ರಾವಣಾಸುರಾ
ಭಾರತದೀ ಧೀರ ಕ್ಷತ್ರಿಯರನ್ನು ಮುರಿದೊತ್ತಿ
ಸೂರೆಮಾಡಿದಳು ಗಮಕಿಲೆ ಪೂರಾ
ಹರಿ ಹರ ಬ್ರಹ್ಮರನು ಸುರಮುನಿ ಜನರನು
ಜಾರತನದಲಿ ಮೆಚ್ಚಿಸಿ ಪಾರಾ
ಪರಿಪರಿಯಲಿಂದ ಸಂಚರಿಸಿ ಬಂದು
ಶಿಶುನಾಳಾ ಪ್ರಭುವರನ ಕಂಡು ಕಳವಳಾ
ತೋರಲ್ಕೆ ಕೆಟ್ಟಿತು ಮಾಯದಿಂದ
ಮಾಡಿದಳಾಕಿ ಮ್ಯಾಳಾ
ತಿಳಿದಷ್ಟು ಹೇಳುವೆ ಕುಶಲಗಳಾ
ನಾರಿಯರ ವಾಸಗೂಡಿ
ಮೂರು ನುಡಿ ಪದ ಹಾಡಿ
ಪಾರಗಾಂಬುದು ಪರಮಾಲಂಬಾ ||೩||
*****

 

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ದೇವರಾಟ ಕಣಗಂಡೆ ಸಂಶಿಯೊಳು
Next post ಮೋಜ ನೋಡಿರಿ ಗಾಂಜಿಯಮಕಿನ

ಸಣ್ಣ ಕತೆ

  • ಡಿಪೋದೊಳಗಣ ಕಿಚ್ಚು…

    ಚಿತ್ರ: ವಾಲ್ಡೊಪೆಪರ್‍ ಬೆಳಿ… ಬೆಳಿಗ್ಗೆನೇ… ಡಿಪೋದಲ್ಲಿ, ಜನ್ರು ಜಮಾಯಿಸಿದ್ದು ಕಂಡು, ಡಿಪೋ ಮ್ಯಾನೇಜರ್ ಮನೋಜ್ ಪಾಟೀಲರ ಹೃದಯ ಬಾಯಿಗೆ ಬಂತು. ’ಮ್ಯಾನೇಜರ್ ಡಿಪೋದಲ್ಲಿ ಕ್ಷಣ ಇಲ್ಲೆಂದ್ರೆ ಸಾಕು…… Read more…

  • ಮೈಥಿಲೀ

    "ಹಾಗಿದ್ದರೆ, ಪಾಪವೆಂದರೇನು ಗುರುಗಳೇ?" ಕಣ್ಣು ಮುಚ್ಚಿ ಧ್ಯಾನಾಸಕ್ತರಾದ ಯೋಗೀಶ್ವರ ವಿದ್ಯಾರಣ್ಯರು ಕಣ್ತೆರೆಯಲಿಲ್ಲ. ಅಪ್ಪನ ಪ್ರಶ್ನೆಗೆ ಉತ್ತರ ಕೊಡಲಿಲ್ಲ. ತೇಜಪುಂಜವಾದ ಗಂಭೀರವಾದ ಮುಖದ ಮೇಲೊಂದು ಮುಗುಳುನಗೆ ಸುಳಿಯಿತು ಅಷ್ಟೇ!… Read more…

  • ಗಿಣಿಯ ಸಾಕ್ಷಿ

    ಹತ್ತಿರವಿದ್ದ ನೆರೆಹೊರೆಯ ಮನೆಯವರಿಗೆ ಗಿಣಿಯ ಕೀರಲು ಕಿರುಚಾಟ ಕೂಗಾಟ ಸತತವಾಗಿ ಕೇಳಿಬಂದಾಗ ಅವರು ಅಲ್ಲಿಗೆ ಧಾವಿಸಿ ಬಂದಿದ್ದರು. ಗೌರಿಯು ಕಳೇಬರವಾಗಿ ಬಿದ್ದಿರುವುದು ನೋಡಿ ಅವರಿಗೆ ದಿಗ್ಭ್ರಾಂತಿಯಾಯಿತು. ಅವಳ… Read more…

  • ಏಕಾಂತದ ಆಲಾಪ

    ಅಂದು ದಸರೆಯ ಮುನ್ನಾದಿನ ಮಕ್ಕಳಿಗೆಲ್ಲಾ ಶಾಲಾ ರಜೆ ದಿವಸಗಳು. ಅವಳು ಕಾತ್ಯಾಯನಿ, ಒಂದು ತಿಂಗಳಿಂದ ಆ ಪಟ್ಟಣದ ಪ್ರಸಿದ್ಧ ನೇತ್ರಾಲಯಕ್ಕೆ ಅಲೆಯುತ್ತಿದ್ದಾಳೆ. ಎರಡೂ ಕಣ್ಣುಗಳು ಪೊರೆಯಿಂದ ಮುಂದಾಗಿವೆ.… Read more…

  • ಅಹಮ್ ಬ್ರಹ್ಮಾಸ್ಮಿ

    ಬಹುಶಃ ಮೊದಲ ಬಾರಿ ನಾನು ಅವನನ್ನು ನೋಡುತ್ತಿರಬೇಕು. ಅವನು ಅಕಸ್ಮತ್ತಾಗಿ ನನ್ನ ಕಣ್ಣಿಗೆ ಬಿದ್ದನೋ, ಅಲ್ಲಾ ಅವನೇ ನಾನು ಕಾಣುವ ಹಾಗೆ ಎದುರಿಗೆ ಬಂದನೋ ಎಂಬ ವಿಷಯದಲ್ಲಿ… Read more…

cheap jordans|wholesale air max|wholesale jordans|wholesale jewelry|wholesale jerseys