Home / ಕವನ / ಕವಿತೆ / ಹ್ಯಾಗೆ ಮಾಡಬೇಕ-ಈಕಿ ಸೋಗ ನೋಡಿ

ಹ್ಯಾಗೆ ಮಾಡಬೇಕ-ಈಕಿ ಸೋಗ ನೋಡಿ

ಹ್ಯಾಗೆ ಮಾಡಬೇಕ ಈಕಿ ಸೋಗ ನೋಡಿ ಸುಮ್ಮನೆ
ಹೋಗುವದಾಗವಲ್ಲದೈ ಸಾಂಬಾ
ಯೋಗಿ ಜನರಿಗೆ ಬಾಯ್ಗೆ
ಬೀಗ ಹಾಕಿದಳೆಂದು
ಕೂಗುತದ ವೇದಾಗಮ ತುಂಬಾ
ಬ್ಯಾಗದಿ ಶೃಂಗಾರವಾಗಿ
ಸಾಗಿ ಬಂದು ಸುಳಿದರೆ
ಮೇಘ ಮಿಂಚಿನಂತೆ ಮಾರಿಯ ಬಿಂಬಾ
ಈಗ ನೋಡುತಿರೆ ಈ
ಜಗದೊಳು ಮನುಜರ ಮನಸಿಜದೊರಿ ಭಾಗ್ಯದ ಕುಂಭಾ
ಲಾಗವಾಗಿ ಲಕ್ಷಣ ತೂಗುತದ ಯವ್ವನ
ನಾಗಲೋಕದ ಪದ್ಮಿನಿ ರಂಭಾ
ರಾಜದಿ ರಾಜೀವಮುಖಿ
ಸೋಗಿ ನೇತ್ರವನು ಕಂಡು
ಬ್ಯಾಗಿ ಹತ್ತಿತಲ್ಲೋ ಮನ್ಮಥ ಸಾಂಬಾ
ಬಗಿಬಗಿಯಲಿಂದ ಜಗಕಿಳಿದು ಜನದೊಳತಿ ಜಾಲಾ
ಒಗದಾಳೋ ವಿಟದ ಮನ ಕೀಲಾ
ಅಗಣಿತದಿ ಆದಳು ಸುಗುಣಾತ್ಮರಿಗೆ ಮೂಲಾ
ಮುಗುಳ್ನಗಿ ಮುರಕ ಮುದ್ದು ಲೀಲಾ
ಹಗಲಿರುಳು ಇವಳ ಆಳಾಪಹತ್ತಿ ಬೆಂಬಾಲಾ
ತಿರುಗಿದ ಋಷಿಗಳು ಶಿವ ಬಲ್ಲಾ
ಭೋಗ ಉಪರತಿ ಸೈ
ಯೋಗಿ ಸಂಪದ ಸುಖ
ಆಗದಾಂಗ ಆದಿತೆಂದೆದಿಗೆಂಬಾ || ೧ ||

ಬಾಳನೇತ್ರನೊಳು ಶಕ್ತಿ ಬಾಳವಿಲಾಸದಲಿಂದ
ತಾಳಿದಳು ಶಿವ ನಿಜರೂಪಸ್ಥಳಾ
ಬಾಳಿವಂತಿ ನಾಡೀರೋಳು
ಬಾಳಮಂದಿ ಶರಣರನ್ನು ತರಬೆನೆಂದು
ತಾಳ್ತೈತಿ ನಿನ್ನ ಛಲಾ
ವಾಳೆವಾಯಿತೆಂದು ಹರನಾ
ಮ್ಯಾಳದಿಂದ ಮನೆಗೆ ಬಂದು
ಹೇಳಿ ಕಳಿವ್ಯಾಳೋ ತಾಮಸದ ಕಳಾ
ಗಾಳಿ ಸೋಂಕಲಳಿಯ ಮುನಿ ಮೃಗಗಳಕೊಲ್ಲುವಂಥಾ
ಜಾಲ ಜಗದೊಳಗಿದು ಹೆಣ್ಣುಕುಲಾ
ಬಾಲೆ ತಯಾರಾಗಿ ಸಾಗಿ
ಮೇಲು ಆಕಾಶದ ತಾರಿ
ಪೋಲ್ವ ಚನ್ನಿಗಮುಖಿ ಪದ್ಮಗಳಾ
ಕಲ್ಲು ಕದಪು ಕನ್ನಡಿಗಳಾ
ಕೋಲಮಿಂಚಿನಂತೆ ಕಣ್ಣು
ಸಾಲ ದಂತ ದಾಳಿಂಬ್ರ ತುಟಿ ಹವಳಾ
ಆ ಲಲನೆ ತಿದ್ದಿ ತಿಲ್ಕಿಟ್ಟು ಫಣಿಗೆ ಕಸ್ತೂರಿ
ಭೂಲೋಕದೊಳಗೆ ವಿಸ್ತಾರಿ
ಒಪ್ಪುವಂತ ಕರ್ಣದೊಳು ಬುಗುಡಿ ಬಾವಲಿ ಬಲು ಭಾರಿ
ಚಳತುಂಬು ವಜ್ರಗಳು ಹೇರಿ
ವಸ್ತ್ರ ಆಭರಣ ಅಲಂಕಾರ ಭಾರಿ
ಕಲಿಯಗಕೆ ಇಳಿದಳೋ ಬೀರಿ
ಕೀಲಗಡಗ ಹರಡಿ ಹಸ್ತ
ಕಾಲ ಸರಪಳಿ ರುಳಿ ತೋಳ್ಬ೦ದಿ ವಂಕಿ
ನಡುವಿನ ಡಾಬಾ ಬಾಳಿ ಸುಳಿ ನಳಿನಾಭಿ
ತೋಳ್ಗಳ ಬೀಸುತ
ಸೂಳ್ಗೇರಿಯೊಳು ಸುಳಿದಳೋ ಜಂಬಾ || ೨ ||

ಧಾರುಣಿಗೆ ಮೀರಿ ಮಾಯ ಅವತಾರ
ಸಾರಿ ಹೊರಟು ಬರುತದ ದೂರದಿಂದ ಬರಬರಾ
ದಾರಿಯೊಳು ಲಂಕಾಪುರ
ವೀರದಾನ್ನವರ ಸುಟ್ಟುಬಿಟ್ಟಿತು
ಕುಂಭಕರ್ಣ ರಾವಣಾಸುರಾ
ಭಾರತದೀ ಧೀರ ಕ್ಷತ್ರಿಯರನ್ನು ಮುರಿದೊತ್ತಿ
ಸೂರೆಮಾಡಿದಳು ಗಮಕಿಲೆ ಪೂರಾ
ಹರಿ ಹರ ಬ್ರಹ್ಮರನು ಸುರಮುನಿ ಜನರನು
ಜಾರತನದಲಿ ಮೆಚ್ಚಿಸಿ ಪಾರಾ
ಪರಿಪರಿಯಲಿಂದ ಸಂಚರಿಸಿ ಬಂದು
ಶಿಶುನಾಳಾ ಪ್ರಭುವರನ ಕಂಡು ಕಳವಳಾ
ತೋರಲ್ಕೆ ಕೆಟ್ಟಿತು ಮಾಯದಿಂದ
ಮಾಡಿದಳಾಕಿ ಮ್ಯಾಳಾ
ತಿಳಿದಷ್ಟು ಹೇಳುವೆ ಕುಶಲಗಳಾ
ನಾರಿಯರ ವಾಸಗೂಡಿ
ಮೂರು ನುಡಿ ಪದ ಹಾಡಿ
ಪಾರಗಾಂಬುದು ಪರಮಾಲಂಬಾ ||೩||
*****

 

Tagged:

Leave a Reply

Your email address will not be published. Required fields are marked *

(ಒಂದು ಐತಿಹಾಸಿಕ ಕತೆ) ಹ್ಹಃ ಹ್ಹಃ ಹ್ಹಃ! ಅಹ್ಹಃ ಅಹ್ಹಃ ಅಹ್ಹಃ!! ಗಝುನಿ ಮಹಮೂದನಿಗೆ ಹಿಡಿಸಲಾರದ ನಗೆ. ನಕ್ಕು ನಕ್ಕು ಅವನ ಹೊಟ್ಟೆ ನೋಯುತ್ತಿದ್ದಿತು. ಆದರೂ ಅವನ ಆ ತಿರಸ್ಕಾರದ ನಗೆ ತಡೆಯಲಾರದಾಯಿತು. ಅದೊಂದು ಸುಪ್ರಸಿದ್ದವಾದ ಸೋಮನಾಥ ದೇವಾಲಯ. ಭಾರತದ ವೈಭವವನ್ನು ವಿಶ್ವಕ್ಕೆ ತೋ...

ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಕೀಲಿಕರಣ: ಎಮ್.ಎನ್.ಎಸ್.ರಾವ್