Home / ಕವನ / ಕವಿತೆ / ಹ್ಯಾಗೆ ಮಾಡಬೇಕ-ಈಕಿ ಸೋಗ ನೋಡಿ

ಹ್ಯಾಗೆ ಮಾಡಬೇಕ-ಈಕಿ ಸೋಗ ನೋಡಿ

ಹ್ಯಾಗೆ ಮಾಡಬೇಕ ಈಕಿ ಸೋಗ ನೋಡಿ ಸುಮ್ಮನೆ
ಹೋಗುವದಾಗವಲ್ಲದೈ ಸಾಂಬಾ
ಯೋಗಿ ಜನರಿಗೆ ಬಾಯ್ಗೆ
ಬೀಗ ಹಾಕಿದಳೆಂದು
ಕೂಗುತದ ವೇದಾಗಮ ತುಂಬಾ
ಬ್ಯಾಗದಿ ಶೃಂಗಾರವಾಗಿ
ಸಾಗಿ ಬಂದು ಸುಳಿದರೆ
ಮೇಘ ಮಿಂಚಿನಂತೆ ಮಾರಿಯ ಬಿಂಬಾ
ಈಗ ನೋಡುತಿರೆ ಈ
ಜಗದೊಳು ಮನುಜರ ಮನಸಿಜದೊರಿ ಭಾಗ್ಯದ ಕುಂಭಾ
ಲಾಗವಾಗಿ ಲಕ್ಷಣ ತೂಗುತದ ಯವ್ವನ
ನಾಗಲೋಕದ ಪದ್ಮಿನಿ ರಂಭಾ
ರಾಜದಿ ರಾಜೀವಮುಖಿ
ಸೋಗಿ ನೇತ್ರವನು ಕಂಡು
ಬ್ಯಾಗಿ ಹತ್ತಿತಲ್ಲೋ ಮನ್ಮಥ ಸಾಂಬಾ
ಬಗಿಬಗಿಯಲಿಂದ ಜಗಕಿಳಿದು ಜನದೊಳತಿ ಜಾಲಾ
ಒಗದಾಳೋ ವಿಟದ ಮನ ಕೀಲಾ
ಅಗಣಿತದಿ ಆದಳು ಸುಗುಣಾತ್ಮರಿಗೆ ಮೂಲಾ
ಮುಗುಳ್ನಗಿ ಮುರಕ ಮುದ್ದು ಲೀಲಾ
ಹಗಲಿರುಳು ಇವಳ ಆಳಾಪಹತ್ತಿ ಬೆಂಬಾಲಾ
ತಿರುಗಿದ ಋಷಿಗಳು ಶಿವ ಬಲ್ಲಾ
ಭೋಗ ಉಪರತಿ ಸೈ
ಯೋಗಿ ಸಂಪದ ಸುಖ
ಆಗದಾಂಗ ಆದಿತೆಂದೆದಿಗೆಂಬಾ || ೧ ||

ಬಾಳನೇತ್ರನೊಳು ಶಕ್ತಿ ಬಾಳವಿಲಾಸದಲಿಂದ
ತಾಳಿದಳು ಶಿವ ನಿಜರೂಪಸ್ಥಳಾ
ಬಾಳಿವಂತಿ ನಾಡೀರೋಳು
ಬಾಳಮಂದಿ ಶರಣರನ್ನು ತರಬೆನೆಂದು
ತಾಳ್ತೈತಿ ನಿನ್ನ ಛಲಾ
ವಾಳೆವಾಯಿತೆಂದು ಹರನಾ
ಮ್ಯಾಳದಿಂದ ಮನೆಗೆ ಬಂದು
ಹೇಳಿ ಕಳಿವ್ಯಾಳೋ ತಾಮಸದ ಕಳಾ
ಗಾಳಿ ಸೋಂಕಲಳಿಯ ಮುನಿ ಮೃಗಗಳಕೊಲ್ಲುವಂಥಾ
ಜಾಲ ಜಗದೊಳಗಿದು ಹೆಣ್ಣುಕುಲಾ
ಬಾಲೆ ತಯಾರಾಗಿ ಸಾಗಿ
ಮೇಲು ಆಕಾಶದ ತಾರಿ
ಪೋಲ್ವ ಚನ್ನಿಗಮುಖಿ ಪದ್ಮಗಳಾ
ಕಲ್ಲು ಕದಪು ಕನ್ನಡಿಗಳಾ
ಕೋಲಮಿಂಚಿನಂತೆ ಕಣ್ಣು
ಸಾಲ ದಂತ ದಾಳಿಂಬ್ರ ತುಟಿ ಹವಳಾ
ಆ ಲಲನೆ ತಿದ್ದಿ ತಿಲ್ಕಿಟ್ಟು ಫಣಿಗೆ ಕಸ್ತೂರಿ
ಭೂಲೋಕದೊಳಗೆ ವಿಸ್ತಾರಿ
ಒಪ್ಪುವಂತ ಕರ್ಣದೊಳು ಬುಗುಡಿ ಬಾವಲಿ ಬಲು ಭಾರಿ
ಚಳತುಂಬು ವಜ್ರಗಳು ಹೇರಿ
ವಸ್ತ್ರ ಆಭರಣ ಅಲಂಕಾರ ಭಾರಿ
ಕಲಿಯಗಕೆ ಇಳಿದಳೋ ಬೀರಿ
ಕೀಲಗಡಗ ಹರಡಿ ಹಸ್ತ
ಕಾಲ ಸರಪಳಿ ರುಳಿ ತೋಳ್ಬ೦ದಿ ವಂಕಿ
ನಡುವಿನ ಡಾಬಾ ಬಾಳಿ ಸುಳಿ ನಳಿನಾಭಿ
ತೋಳ್ಗಳ ಬೀಸುತ
ಸೂಳ್ಗೇರಿಯೊಳು ಸುಳಿದಳೋ ಜಂಬಾ || ೨ ||

ಧಾರುಣಿಗೆ ಮೀರಿ ಮಾಯ ಅವತಾರ
ಸಾರಿ ಹೊರಟು ಬರುತದ ದೂರದಿಂದ ಬರಬರಾ
ದಾರಿಯೊಳು ಲಂಕಾಪುರ
ವೀರದಾನ್ನವರ ಸುಟ್ಟುಬಿಟ್ಟಿತು
ಕುಂಭಕರ್ಣ ರಾವಣಾಸುರಾ
ಭಾರತದೀ ಧೀರ ಕ್ಷತ್ರಿಯರನ್ನು ಮುರಿದೊತ್ತಿ
ಸೂರೆಮಾಡಿದಳು ಗಮಕಿಲೆ ಪೂರಾ
ಹರಿ ಹರ ಬ್ರಹ್ಮರನು ಸುರಮುನಿ ಜನರನು
ಜಾರತನದಲಿ ಮೆಚ್ಚಿಸಿ ಪಾರಾ
ಪರಿಪರಿಯಲಿಂದ ಸಂಚರಿಸಿ ಬಂದು
ಶಿಶುನಾಳಾ ಪ್ರಭುವರನ ಕಂಡು ಕಳವಳಾ
ತೋರಲ್ಕೆ ಕೆಟ್ಟಿತು ಮಾಯದಿಂದ
ಮಾಡಿದಳಾಕಿ ಮ್ಯಾಳಾ
ತಿಳಿದಷ್ಟು ಹೇಳುವೆ ಕುಶಲಗಳಾ
ನಾರಿಯರ ವಾಸಗೂಡಿ
ಮೂರು ನುಡಿ ಪದ ಹಾಡಿ
ಪಾರಗಾಂಬುದು ಪರಮಾಲಂಬಾ ||೩||
*****

 

Tagged:

Leave a Reply

Your email address will not be published. Required fields are marked *

ಬೆಳಕಿನಿಂದ ಜಗಜಗಿಸುವ ಸಂಜೆ ರಾವು ಬಡಿದಂತೆ ಮಬ್ಬಾಗಿತ್ತು. ಈ ಮಬ್ಬು ಹಿಂದೆಂದೂ ಇದಿಲ್ಲ. ದೇಶದ ಹದಿನೇಳು ವರ್ಷದ ಸ್ವಾತಂತ್ರದಲ್ಲಿ, ಮಧ್ಯಮ ತರಗತಿಯ ಜೀವನ ಕೈ ಬಾಯಿಯಾಗಿದ್ದರೂ ದೂರದ ಆಶಯ ಹೊಂಗಿರಣವೊಂದು ಸದಾ ಹೊಳೆದು ಭಾವೀ ಪೀಳಿಗೆಯ ಮನೋಲ್ಲಾಸ ಮಾಡುತ್ತಿತ್ತು. ಆದರೆ ಈ ಮಬ್ಬುಗತ್ತ...

ಅವಳು ಯಾವ ಹುಡುಗರ ಜೊತ ನಿಂತು ಮಾತನಾಡಿದರೂ ಶ್ರೀಕಾಂತನಪಾಲಿಗೆ ಆ ಹುಡುಗರು ವಿಲನ್‌ಗಳಂತೆಯೇ ಭಾಸವಾಗುತ್ತಿದ್ದರು. ಅವಳು ತನ್ನ ಕಾಲೇಜಿನ ಲೆಕ್ಚರರ್‌ಗಳು ಪಾಠ ಮಾಡುವ ವೈಖರಿ ಸ್ಟೈಲು ಹೈಲುಗಳ ಕುರಿತು ಬಣ್ಣಿಸುವಾಗಲೂ ಕೇಳಲಾಗದೆ ಶ್ರೀಯ ಹೊಟ್ಟೆಯಲೆಲ್ಲಾ ತಳಮಳ. ಅಷ್ಟೇಕೆ ಅವಳು ತನ್ನ ತ...

ಬೆಳಿಗ್ಗೆ ಏಳರ ಸಮಯ ಮೈಸೂರಿನ ರೋಹಿಣಿ ಲಾಡ್ಜ್‌ನ ಕೊಠಡಿ ಸಂಖ್ಯೆ ೧೦೩. ಪೋಲೀಸರು, ಪತ್ರಕರ್ತರು, ಫೊಟೋ ಗ್ರಾಫರ್‌ಗಳಿಂದ ತುಂಬಿಹೋಗಿದೆ. ಬೆಳ್ಳಂ ಬೆಳಿಗ್ಗೆಯೇ ಯುವತಿಯೊಬ್ಬಳ ಕೊಲೆ ನಡೆದುಹೋಗಿದೆ. ಲಾಡ್ಜ್‌ನ ಹೊರಗೆ ಜನರು ಕುತೂಹಲಭರಿತರಾಗಿ ಸೇರಿದ್ದಾರೆ. ಸೇರಿದ್ದ ಜನರನ್ನು ನಿಯಂತ್ರ...

೧ ಗೌರಿಯ ಹಬ್ಬವು ಕಳೆದು ಕೆಲವು ದಿನಗಳಾಗಿದ್ದುವು. ಭಾಗೀರಥಮ್ಮನೂ ಅವಳ ಜೊತೆಯ ಹುಡುಗಿಯರೂ ಒಂದೊಂದು ದಿನವನ್ನು ಕಳೆಯುವುದೂ ಒಂದೊಂದು ಯುಗವನ್ನು ಕಳೆದಂತೆ ಕಷ್ಟವಾಗಿದ್ದಿತು. ಅವರು ಎಷ್ಟು ಕುತೂಹಲದಿಂದ ಬಯಸಿದರೂ ದಿನಗಳು ಬೇಗ ಬೇಗ ಉರುಳಲೊಲ್ಲವು. ಒಂದು ದಿನ ಅವರೆಲ್ಲರೂ ಸೇರಿ ಕವಡೆಯ...

ಸಂಜೆ ನಾಲ್ಕು ಗಂಟೆಯಾದರೆ ಸಾಕು. ಅವರೆಲ್ಲರೂ ಒಬ್ಬೊಬ್ಬರಾಗಿ ಬಂದು ಸೇರುತ್ತಾರೆ. ಅದೊಂದು ಪಂಚಾಯಿತಿ ಕಟ್ಟೆ ಇದ್ದಂತೆ. ಮಧ್ಯದಲ್ಲೊಂದು ಸಿಮೆಂಟ್ ಬೆಂಚು, ಅದರ ಎಡ, ಬಲ ಎರಡೂ ಕಡೆ ಇವರೇ ಒಂದಷ್ಟು ಕಲ್ಲು ಚಪ್ಪಡಿಗಳನ್ನು ಎಳೆದು ತಂದು ಕೊಡುವುದಕ್ಕೆ ಪೀಠಗಳನ್ನು ಮಾಡಿಕೊಂಡಿದ್ದಾರೆ. ಸ...

ತಿಮ್ಮಣ್ಣ ನಮ್ಮೂರಿನ ಪಕ್ಕದ ಹಳ್ಳಿಯಲ್ಲಿನ ಅಡುಗೆ ಭಟ್ಟ ತಿಪ್ಪಾಭಟ್ಟರ ಮಗ. ತಿಪ್ಪಾಭಟ್ಟರಿಗೆ ಮದುವೆಯಾಗಿ ಹತ್ತು ವರ್ಷ ಕಳೆದರೂ ಮಕ್ಕಳಾಗಿರಲಿಲ್ಲ. ಕೊನೆಗೆ ಪಕ್ಕದ ಮನೆಯ ಕಮಲಾಕ್ಷಮ್ಮನ ಸಲಹೆ ಮೇರೆಗೆ ಮಗುವಾದರೆ ತಿರುಪತಿಗೆ ಹೋಗಿ ಬರುವ ಹರಕೆ ಹೊತ್ತರು. ತಿಮ್ಮಪ್ಪನ ಕೃಪಾಕಟಾಕ್ಷವೋ ...