Home / ಕವನ / ಕವಿತೆ / ಹ್ಯಾಗೆ ಮಾಡಬೇಕ-ಈಕಿ ಸೋಗ ನೋಡಿ

ಹ್ಯಾಗೆ ಮಾಡಬೇಕ-ಈಕಿ ಸೋಗ ನೋಡಿ

ಹ್ಯಾಗೆ ಮಾಡಬೇಕ ಈಕಿ ಸೋಗ ನೋಡಿ ಸುಮ್ಮನೆ
ಹೋಗುವದಾಗವಲ್ಲದೈ ಸಾಂಬಾ
ಯೋಗಿ ಜನರಿಗೆ ಬಾಯ್ಗೆ
ಬೀಗ ಹಾಕಿದಳೆಂದು
ಕೂಗುತದ ವೇದಾಗಮ ತುಂಬಾ
ಬ್ಯಾಗದಿ ಶೃಂಗಾರವಾಗಿ
ಸಾಗಿ ಬಂದು ಸುಳಿದರೆ
ಮೇಘ ಮಿಂಚಿನಂತೆ ಮಾರಿಯ ಬಿಂಬಾ
ಈಗ ನೋಡುತಿರೆ ಈ
ಜಗದೊಳು ಮನುಜರ ಮನಸಿಜದೊರಿ ಭಾಗ್ಯದ ಕುಂಭಾ
ಲಾಗವಾಗಿ ಲಕ್ಷಣ ತೂಗುತದ ಯವ್ವನ
ನಾಗಲೋಕದ ಪದ್ಮಿನಿ ರಂಭಾ
ರಾಜದಿ ರಾಜೀವಮುಖಿ
ಸೋಗಿ ನೇತ್ರವನು ಕಂಡು
ಬ್ಯಾಗಿ ಹತ್ತಿತಲ್ಲೋ ಮನ್ಮಥ ಸಾಂಬಾ
ಬಗಿಬಗಿಯಲಿಂದ ಜಗಕಿಳಿದು ಜನದೊಳತಿ ಜಾಲಾ
ಒಗದಾಳೋ ವಿಟದ ಮನ ಕೀಲಾ
ಅಗಣಿತದಿ ಆದಳು ಸುಗುಣಾತ್ಮರಿಗೆ ಮೂಲಾ
ಮುಗುಳ್ನಗಿ ಮುರಕ ಮುದ್ದು ಲೀಲಾ
ಹಗಲಿರುಳು ಇವಳ ಆಳಾಪಹತ್ತಿ ಬೆಂಬಾಲಾ
ತಿರುಗಿದ ಋಷಿಗಳು ಶಿವ ಬಲ್ಲಾ
ಭೋಗ ಉಪರತಿ ಸೈ
ಯೋಗಿ ಸಂಪದ ಸುಖ
ಆಗದಾಂಗ ಆದಿತೆಂದೆದಿಗೆಂಬಾ || ೧ ||

ಬಾಳನೇತ್ರನೊಳು ಶಕ್ತಿ ಬಾಳವಿಲಾಸದಲಿಂದ
ತಾಳಿದಳು ಶಿವ ನಿಜರೂಪಸ್ಥಳಾ
ಬಾಳಿವಂತಿ ನಾಡೀರೋಳು
ಬಾಳಮಂದಿ ಶರಣರನ್ನು ತರಬೆನೆಂದು
ತಾಳ್ತೈತಿ ನಿನ್ನ ಛಲಾ
ವಾಳೆವಾಯಿತೆಂದು ಹರನಾ
ಮ್ಯಾಳದಿಂದ ಮನೆಗೆ ಬಂದು
ಹೇಳಿ ಕಳಿವ್ಯಾಳೋ ತಾಮಸದ ಕಳಾ
ಗಾಳಿ ಸೋಂಕಲಳಿಯ ಮುನಿ ಮೃಗಗಳಕೊಲ್ಲುವಂಥಾ
ಜಾಲ ಜಗದೊಳಗಿದು ಹೆಣ್ಣುಕುಲಾ
ಬಾಲೆ ತಯಾರಾಗಿ ಸಾಗಿ
ಮೇಲು ಆಕಾಶದ ತಾರಿ
ಪೋಲ್ವ ಚನ್ನಿಗಮುಖಿ ಪದ್ಮಗಳಾ
ಕಲ್ಲು ಕದಪು ಕನ್ನಡಿಗಳಾ
ಕೋಲಮಿಂಚಿನಂತೆ ಕಣ್ಣು
ಸಾಲ ದಂತ ದಾಳಿಂಬ್ರ ತುಟಿ ಹವಳಾ
ಆ ಲಲನೆ ತಿದ್ದಿ ತಿಲ್ಕಿಟ್ಟು ಫಣಿಗೆ ಕಸ್ತೂರಿ
ಭೂಲೋಕದೊಳಗೆ ವಿಸ್ತಾರಿ
ಒಪ್ಪುವಂತ ಕರ್ಣದೊಳು ಬುಗುಡಿ ಬಾವಲಿ ಬಲು ಭಾರಿ
ಚಳತುಂಬು ವಜ್ರಗಳು ಹೇರಿ
ವಸ್ತ್ರ ಆಭರಣ ಅಲಂಕಾರ ಭಾರಿ
ಕಲಿಯಗಕೆ ಇಳಿದಳೋ ಬೀರಿ
ಕೀಲಗಡಗ ಹರಡಿ ಹಸ್ತ
ಕಾಲ ಸರಪಳಿ ರುಳಿ ತೋಳ್ಬ೦ದಿ ವಂಕಿ
ನಡುವಿನ ಡಾಬಾ ಬಾಳಿ ಸುಳಿ ನಳಿನಾಭಿ
ತೋಳ್ಗಳ ಬೀಸುತ
ಸೂಳ್ಗೇರಿಯೊಳು ಸುಳಿದಳೋ ಜಂಬಾ || ೨ ||

ಧಾರುಣಿಗೆ ಮೀರಿ ಮಾಯ ಅವತಾರ
ಸಾರಿ ಹೊರಟು ಬರುತದ ದೂರದಿಂದ ಬರಬರಾ
ದಾರಿಯೊಳು ಲಂಕಾಪುರ
ವೀರದಾನ್ನವರ ಸುಟ್ಟುಬಿಟ್ಟಿತು
ಕುಂಭಕರ್ಣ ರಾವಣಾಸುರಾ
ಭಾರತದೀ ಧೀರ ಕ್ಷತ್ರಿಯರನ್ನು ಮುರಿದೊತ್ತಿ
ಸೂರೆಮಾಡಿದಳು ಗಮಕಿಲೆ ಪೂರಾ
ಹರಿ ಹರ ಬ್ರಹ್ಮರನು ಸುರಮುನಿ ಜನರನು
ಜಾರತನದಲಿ ಮೆಚ್ಚಿಸಿ ಪಾರಾ
ಪರಿಪರಿಯಲಿಂದ ಸಂಚರಿಸಿ ಬಂದು
ಶಿಶುನಾಳಾ ಪ್ರಭುವರನ ಕಂಡು ಕಳವಳಾ
ತೋರಲ್ಕೆ ಕೆಟ್ಟಿತು ಮಾಯದಿಂದ
ಮಾಡಿದಳಾಕಿ ಮ್ಯಾಳಾ
ತಿಳಿದಷ್ಟು ಹೇಳುವೆ ಕುಶಲಗಳಾ
ನಾರಿಯರ ವಾಸಗೂಡಿ
ಮೂರು ನುಡಿ ಪದ ಹಾಡಿ
ಪಾರಗಾಂಬುದು ಪರಮಾಲಂಬಾ ||೩||
*****

 

Tagged:

Leave a Reply

Your email address will not be published. Required fields are marked *

ಸರ್‍ಕಸ್ಸು ಮುಗಿದರೂ ಅವನು ಅಲ್ಲಿಯೇ ಕುಳಿತಿದ್ದ. ಎಲ್ಲಾ ಎದ್ದು ಹೋಗಿದ್ದರು. ಎರಡನೇ ಷೋ ಆರಂಭವಾಗಲು ಕೆಲವೇ ಸಮಯ ಉಳಿದಿತ್ತು. ಅವನ ಕಣ್ಣುಗಳು ಏನನ್ನೋ ಹುಡುಕುತ್ತಿದ್ದವು. ಆ ಸರ್‍ಕಸ್ಸಿನ ಹುಡುಗಿ ಪ್ರವೇಶಿಸಿ ಓಡಿ ಬಂದು ಎರಡು ಬಾರಿ ಲಾಗಾ ಹಾಕಿ ಇವನ ಮುಂದೆಯೇ ನಿಂತಂತಾಯಿತು. ಆಕೆಯ...

“ಸುಭದ್ರೆ, ನೀನು ಎಂದು….” ದೈನ್ಯವಾಣಿಯಿಂದ ಕೇಳಿಕೊಂಡ ಶ್ರೀಧರ. “ತಡೆ ಶ್ರೀಧರ. ಹ್ಞ. ಹತ್ತಿರ ಬರಬೇಡ. ಪ್ರತಿಯೊಂದು ಕಾರ್ಯಕ್ಕೂ ಮುಹೂರ್ತ ಬರಬೇಕು; ಸ್ವಲ್ಪ ಕಾಲ ತಡೆ. ಒಮ್ಮೆ ಹೇಳಿದೆ: ನಾನು ನಿನ್ನವಳೆಂದು, ನಂಬಿಕೊ.” “ಎಷ್ಟು ದಿನ ಈ ನ...

ಮಳೆ ಜೋರಾಗಿ ಸುರಿಯುತ್ತಿತ್ತು. ಚಾವಣಿ ತೂತಾಗಿ ಸೋರುತ್ತಿದ್ದುದರಿಂದ ಸಾವಿತ್ರಿಗೆ ನಿದ್ದೆ ಇರಲಿಲ್ಲ. ಅವಳ ಉಗ್ಗವನದೂ ಅದೇ ಕತೆ. ಒಂದು ಮೂಲೆಯಲ್ಲಿ ಉಗ್ಗವನಿಗೆ ಒರಗಿಕೊಂಡು ಹಳೇ ಕಂಬಳಿ ಹೊದ್ದು ಸಾವಿತ್ರಿ ತೂಕಡಿಸುತ್ತಿದ್ದಳು. ಬಾಗಿಲ ಸಂದಿನಿಂದ ಆಗಾಗ ಚಳಕ್ಕನೆ ಕಾಣಿಸಿಕೊಳ್ಳುವ ಮಿ...

ದೀಪಾವಳಿಯ ಸೂಟಿಯನ್ನು ಕಳೆಯಲು ಊರಿಗೆ ಹೋಗಿದ್ದೆ. ಹಳ್ಳಿಗೆ ಹೋದಾಗೆಲ್ಲ ಕತೆಯ ಸುಬ್ಬಣ್ಣನ ಮನೆಗೆ ಹೋಗದಿದ್ದರೆ ನನ್ನ ಮನಸ್ಸು ಕೇಳುವದಿಲ್ಲ. ಊರಿಗೆ ಬಂದು ತನ್ನ ಮನೆಗೆ ಬರದಿದ್ದರೆ ಸುಬ್ಬಣ್ಣ ಬಿಡುತ್ತಾನೇ? ಅವನ ಆಮಂತ್ರಣ ಬರುವ ಮುಂಚೆಯೇ ಹೋಗುವದು ಉಚಿತವೆಂದು ತೋರಿತು. ಅವನ ಕತೆ ಕೇ...

ಒಂದು ತಿಂಗಳ ಮಗು ಹೆನ್ರಿ ನೋಡಲು ಬಲು ಮುದ್ದಾಗಿದ್ದ. ಸೇಬಿನ ಕೆನ್ನೆಗಳು, ದೊಡ್ಡ ಕಪ್ಪು ಕಣ್ಣುಗಳು, ತಲೆಯಲ್ಲಿ ಕೆಂಚು ಕೂದಲು, ನೀಳ ಮೂಗು, ಮುದ್ದಾದ ಪುಟ್ಟ ಬಾಯಿ, ನೋಡಿದೊಡನೆ ಹೇಳಬಹುದಿತ್ತು ಆ ಮಗು ಬ್ರಿಟಿಷ್ ತಂದೆ ತಾಯಿಗೆ ಹುಟ್ಟಿದವನೆಂದು. ತಂದೆ ಸ್ಮಿಥ್ ಮತ್ತು ತಾಯಿ ಮೇರಿಗೆ...

ಕೊನೆಗೊಮ್ಮೆ ಶಂಕರ ಹೂಂಗುಟ್ಟಲೇಬೇಕಾಯಿತು. “ಹುಡುಗಿ ಮನಸ್ಸಿಗೆ ಬಂದರೆ ಮಾತ್ರ ಆಗಿ. ಈ ವಿಷಯದಲ್ಲಿ ಒತ್ತಾಯಮಾಡಬರುತ್ತದೆಯೇ?” ಎಂದು ಶಿವರಾಮ ಹೆಗಡೆಯವರು ಶಂಕರನನ್ನು ಹೊರಡಿಸಿದರು. ದಾರಿಯುದ್ದಕ್ಕೂ ಹೆಗಡೆಯವರು ತಮ್ಮ ಮಗಳ ಗುಣಗಾನವನ್ನು ಪ್ರಸ್ತುತ ಅಪ್ರಸ್ತುತ ಪ್ರಶಂಸೆಗಳಿಂದ...