ಶ್ರೀ ಗುರುವರನ ಕರುಣವ ಪಡೆಯುತ

ಶ್ರೀ ಗುರುವರನ ಕರುಣವ ಪಡೆಯುತ
ಬೇಗದಿರಾಗರಚನೆಯಿಂದ ಕೊಂಡಾಡಿ
ಭೋಗಿಭೂಷಣನನ್ನು ಭಕ್ತಿಯಿಂ ವೂಜಿಸಿ ಸಾಗಿಸು ಸಂಸಾರವಾ || ಪ ||

ಸಂಸಾರದಿಂ ಸುವಿಚಾರ ಮಾರ್ಗವ ತಿಳಿದು
ಸಂಸಾರಶರಧಿಯ ನೀ ದಾಂಟು || ಆ, ಪ. ||

ನೋಡು ಕಲಿಯುಗದ್ಯೆದು ಸಾವಿರ ವಷ೯ಕ್ಕೆ
ಕೇಡೊದಗುವದು ವಿಕಾರಿಗೆ
ನಾಡೆಲ್ಲ ಕೈಗೂಡಿ ನರರಿಗೆ ಪ್ರಳಯವು
ಕಾಡು ಸೇರಿದರೂ ಬಿಡದಣ್ಣಾ || ೧ ||

ಉತ್ತರದಿಕ್ಕಿನೊಳ್ಹುಟ್ಟುವದದು ರೋಗ
ಅಷ್ಟದಿಕ್ಕನೆ ಸುತ್ತಿಕೊಳ್ಳುವದು
ಅತ್ಯಧಿಕ ಇಂಗ್ಲೀಷ ಸರಕಾರ ದೊರೆಗಳಾ
ಗೊತ್ತುಮಾಡುವರು ಪ್ಲೇಗುಯೆಂತೆಂದು ||೨||

ರೋಗದ ಸೂಚನೆ ಮೊದಲು ಇಲಿಗೆ ತಗಲಿ
ಮ್ಯಾಗಿಂದ ಮನೆಯೊಳು ಬಿದ್ದಿಳಿಯೆ
ಆಗ ಜನರಿಗಂಟಿ ಗಾಭರಿಗೊಳ್ಳುತ
ಹ್ಯಾಗೆಮಾಡಲಿ ದೇವಾಯೆನ್ನವರು ||೩||

ಜಗಪತಿ ಪ್ರಜಕೆಲ್ಲಕಪ್ಪಣೆ ಇತ್ತನು
ತಗಲಬಾರದು ರೋಗ ಒಬ್ಬರಿಗೆ
ಅಗಲಿಸಿ ಊರಬಿಡಿಸಿ ಹೊರಗ್ಹಾಕಿಸಿ
ಮಿಗಿಲಾದ ಕ್ವಾರಂಟು ಕಟ್ಟಿಸುವಾ ||೪||

ಹೊಲಮನಿ ದ್ರವ್ಯದ ಬಲು ಚಿಂತಿಯಿ೦ ಬಿಟ್ಟು
ಹಲಬುತಡವಿಯೊಳು ಗುಡಿಸಲದಿ
ಇಳೆ ಜನರಿರುತಿತೆ ಕಳತಸ್ಕರರು
ಕಲ್ಲು ಕವಣಿಯೊಳಿಟ್ಟಿಟ್ಟು ಹೊಡೆಯುವರು ||೫||

ಒಬ್ಬರೊಬ್ಬರ ಬದಕಂ ಒಬ್ಬರೊಬ್ಬರಿಗಾಗಿ
ಒಬ್ಬರೊಬ್ಬರ ಮುಟ್ಟದಾಗುವದು
ಸರ್ವದೇಶದೊಳು ಪರಿ ಪರಿ ಕಷ್ಟ-.
ಗಳ್ಹಬ್ಬುತಿಹವು ದಿಟ ತಿಳಿ ಮನವೆ ||೬||

ಯಾಕೆ ಈ ಪರಿ ಕಷ್ಟ ನರರಿಗಾವುವದನೆ
ಕಾಕುಜನದಪಾಪ ಹೆಚ್ಚುತಿರೆ
ಲೋಕನಾಥನು ಭೂಮಿಗ್ಯಾಕೆ ಭಾರವು ಎಂದು
ತಾ ಕಳುಹಿದ ಮೃತ್ಯುದೇವತೆಯ ||೭||

ಗುರುಹಿರಿಯರನೆಲ್ಲ ಜರಿಯುತ ಜ್ಞಾನದಿ
ಪರದ್ರವ್ಯ ಪರಸ್ತ್ರೀಯ ಕದ್ದೊಯುತಾ
ಸರಿ ನಮಗಾರೆಂದು ದುರುಳರು ಗವ೯ದಿ
ಮೆರದಾಡುತಿರುವರು ಲೋಕದಲಿ ||೮||

ಹೇಳಲು ಬಹಳುಂಟು ಸೂಕ್ಷ್ಮದಿ ತಿಳಿಸುವೆ
ತಾಳೆಳು ಭೂಕಾಂತೆ ಬಹುಭಾರವಾ
ತಾಳಿದ ಶೇಷನು ಸೀರಖಾನಿ ನಿಂತನು
ಹಾಳುದೇಗುಲ ಹೊಕ್ಕ ಶಿವ ತಾನು ||೯||

ಈ ತೆರ ದುಜ೯ನ ಪ್ರಾಂತದಿಂದಲಿ ಬಹು-
ಪಾತಕ ಹೆಚ್ಚಿತು ಕಲಿಯೊಳಗೆ
ತಾತಗುರುಗೋವಿಂದನನು ಮೊರೆಹೊಕ್ಕರೆ
ಆತನೆ ರಕ್ಷಿಪ ಕರುಣದಲಿ || ೧೦ ||
*****

 

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಬಂದಿತು ಬರಬಹುದು
Next post ವ್ಯರ್ಥ ಆಲಾಪ

ಸಣ್ಣ ಕತೆ

  • ಗುಲ್ಬಾಯಿ

    ನಮ್ಮ ಪರಮಮಿತ್ರರಾದ ಗುಂಡೇರಾವ ಇವರ ನೇತ್ರರೋಗದ ಚಿಕಿತ್ಸೆ ಗಾಗಿ ನಾವು ಮೂವರು ಮಿರ್ಜಿಯಲ್ಲಿರುವ ಡಾಕ್ಟರ ವಾಲ್ನೆಸ್ ಇವರ ಔಷಧಾಲಯಕ್ಕೆ ಬಂದಿದ್ದೆವು. ಗುಂಡೇರಾಯರು ಹಗಲಿರುಳು ಔಷಧಾಲಯದಲ್ಲಿಯೇ ಇರಬೇಕಾಗಿರುವದರಿಂದ ಆ… Read more…

  • ಮೋಟರ ಮಹಮ್ಮದ

    ನಮ್ಮಂತಹ ಈಗಿನ ಜನಗಳಿಗೆ ಹೊಲ, ಮನೆ, ಪೂರ್ವಾರ್ಜಿತ ಆಸ್ತಿ ಪಾಸ್ತಿಗಳಲ್ಲಿ ಹೆಚ್ಚು ಆದರವಿಲ್ಲೆಂದು ನಮ್ಮ ಹಿರಿಯರು ಮೇಲಿಂದ ಮೇಲೆ ಏನನ್ನೋ ಒಟಗುಟ್ಟುತ್ತಿರುತ್ತಾರೆ. ನಾವಾದರೋ ಹಳ್ಳಿಯನ್ನು ಕಾಣದೆ ಎಷ್ಟೋ… Read more…

  • ದೊಡ್ಡವರು

    ಬೀದಿ ಬದಿಯ ಪುಸ್ತಕದ ಅಂಗಡಿ ಪ್ರಭಾಕರನನ್ನು ಅರಿಯದವರು ಬಹಳ ವಿರಳ. ತಳ್ಳೋ ಗಾಡಿಯ ಮೇಲೆ ದೊಡ್ಡ ಟ್ರಂಕನ್ನಿಟ್ಟು ನಿಧಾನವಾಗಿ ತಳ್ಳಿಕೊಂಡು ಬರುವ ಪ್ರಭಾಕರ ಕೆನರಾ ಬ್ಯಾಂಕಿನ ರಸ್ತೆಬದಿ… Read more…

  • ಗದ್ದೆ

    ಅದೊಂದು ಬೆಟ್ಟದ ಊರು. ಪುಟ್ಟ ಪುಟ್ಟ ಗುಡ್ಡಕ್ಕೆ ತಾಗಿಕೊಂಡು ಸಂದಿಯಲ್ಲಿ ಗೊಂದಿಯಲ್ಲಿ ಎದ್ದ ಗುಡಿಸಲುಗಳು ಅರ್ಥಾತ್ ಈ ಜೀವನ ಕಳೆಯೋ ಬಗೆಯಲಿ ಕಟ್ಟಿಕೊಂಡ ಪುಟ್ಟ ಮನೆಗಳು ಹೊತ್ತು… Read more…

  • ಮರೀಚಿಕೆ

    ನಂಬಿದರೆ ನಂಬಿ ಬಿಟ್ಟರೆ ಬಿಡಿ ನನ್ನೆಲ್ಲಾ ಭಾವನೆಗಳೂ ತಬ್ಬಲಿಗಳಾಗಿಬಿಟ್ಟಿವೆ. ಪ್ರೇಮವೆಂದರೆ ತ್ಯಾಗವೆ, ಭೋಗವೆ, ಭ್ರಮೆಯೆ ಆಥವಾ ಕೇವಲ ದಾಸ್ಯವೆ? ಮನಸ್ಸಿಗಾದ ಗ್ಯಾಂಗ್ರಿನ್ ಕಾಯಿಲೆಯೆ? ಇಂತಹ ದುರಾರೋಚನೆಗಳು ಹುಟ್ಟಲು… Read more…

cheap jordans|wholesale air max|wholesale jordans|wholesale jewelry|wholesale jerseys