ಬಂದಿತು ಬರಬಹುದು

ಬಂದಿತು ಬರಬಹುದು ಇದು ದುರ್ಮುಖಿ ಸಂವತ್ಸರಕೆ
ಚಂದ್ರಧರನು ಕೋಪತಾಳಿ ಈ ಭೂಮಿಗೆ || ಪ ||

ಬಂದು ಕಲ್ಕಿ‌ಅವತಾರ ಸೀಮಿಗೆ
ಮು೦ದುವರಿದು ಯಮರಾಜನ ಕೊಲೆಗಳ
ದ್ವಂದ್ವನೇತ್ರಕೆ ಕಷ್ಟತರಿಸುವ ||ಆ.ಪ.||

ಚಾರುತರಹ ಚೌಭಾಗ ದಕ್ಷಿಣ ಸುಸೂತ್ರ ಮಳಿ-ಬೆಳಿ
ಉತ್ತಮವೆನಿಸಿ ಉತ್ತರಕೆ ಕಡೆಮೊದಲು ತೂಗುತ
ಶ್ಯಾರ ವಿಜಾಪುರ ಉಕ್ಕಲಿ ದನಗಳ ನೋಡುತ
ಮನದೊಳು ಕಷ್ಟಗೊಳ್ಳುತ ಕಳವಳಗೊಳ್ಳುತ
ಘೋರವಾಗಿ ಮಹಾಮುಂಬೈಯೊಳು
ಏರಿಗಟ್ಟ ಯ೦ತ್ರದ ಗಿರಣಿಗಳು
ಮಾರಿಕಾಗಿ ಮೈ ಬಣ್ಣದ ಗುಳ್ಳೆಗಳಗೆ
ಕಳ್ಳಜನರು ನಷ್ಟಾದರು ಸಖಿಯೆ ||೧||

ಆರು ಮೂರು ಒಂಭತ್ತು ಲಕ್ಷ ಜನ
ತೀರುತ ಸಾರಿದ ಲಕ್ಷ ಮೂರರೊಳು
ಮೀರಿ ಉಳಿದರು ಸಾವಕಾರ ತಾ
ಘೋರವಾಗಿ ಬೆಳಗಾವಿಗೆ ಜಾಹೀರ ಮುಟ್ಟುತಾ
ಜನನ ಮರಣ ಸಂಖ್ಯೆ
ಜನರಿಗೆ ವಿಪರೀತ ತೋರುತಾ
ಸುಟ್ಟುಹೋತು ರಂಗಮಾಲು ಕುಂಬಾರದೊರಿ
ಎಂಟು ಲಕ್ಷದ್ದಿತ್ತಿ ಮಹಾಲಕರಿ
ಕೋಟಿ ಜಲ್ಮವ ದಾಟಿ
ಉಳವಿ ಶಿವಶರಣರಾಗಿ ಮರ್ತ್ಯಕ್ಕೆ ಶಿಕ್ಷಿಸುತಾ ||೨||

ಪ್ಯಾಟಿ ಪಟ್ಟಣಾ ಹುಬ್ಬಳ್ಳಿ ಜನರೊಡ ತಾ
ದನಕರ ಗೋಳಿಡುತಾ
ದುಡ್ಡಿಗೆ ಮೂರು ಮಾತಾಡುತಾ
ನೀಟವಾಗಿ ಮಲ್ಲಾಡ ಬೆಳವಲಕೆ ಓಡುತಾ
ಮೈಸೂರಸೀಮಿ ಸೇರಿ ಷಣ್ಮುಖ ಆವತಾರ ತೋರುತಾ
ಸಾಧಿಸುತ ವಿಳಂಬಿ ಸಂವತ್ಸರ ಕೂಡುತಾ
ಇಳೆಯೊಳು ಸಜ್ಜನರು ಕಳವಳಗೊಳ್ಳುತಾ ನಿಜಪಾಡುತಾ
ಸಾಧುಸಂತರು ಯಮನಾಲಯ ಮೀರಿ
ಬೋಧಿಸಿದರು ಪರಮಾತ್ಮನ ಲೀಲಾ
ಚೋದ್ಯವಾಯಿತು ಅಮರಾರಿಪುರುರಿಗೆ || ೩ ||

ವೀರ್ಯದೊಳು ವಿಕಾರಿ ಸಂವತ್ಸರ ಗಾವುದಕೆ ನಿಂದಿಸಿ
ಗಾರುಗೊಂಡು ಮನಿ ಮನಿ ಗಾವುದಕೆ ಹೊಂದಿಸಿ
ಸಾರಿ ಹೇಳತೇನಿ ಮೂರು ಸಂವತ್ಸರ ಕೂಡಿಸಿ
ಇದರೊಳು ತಪ್ಪು ಆದರೆ ಗುರುಗೋವಿಂದನ ಸಾಕ್ಷಿ
ಧರೆಯೊಳು ಶಿಶುನಾಳ ಗುರುಪುತ್ರ ಕವಿಗೆ
ಸರಿಯಾಯಿತು ಕಾಲಜ್ಞಾನ ಸೂಚನದ ಭವಿ
ಮರೆಯಲಾರೆ ಸಂಸಾರದ ಸವಿ
ಗುರುಮೂರ್ತಿ ಶಶಿಯಂಬುಜಮುಖಿಯೆ || ೪ ||
*****

 

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಬಸವನ ಹುಳುವಿಗೆ ಗರಿ
Next post ಶ್ರೀ ಗುರುವರನ ಕರುಣವ ಪಡೆಯುತ

ಸಣ್ಣ ಕತೆ

  • ಬಿರುಕು

    ಚಂಪಾ ಹಾಲು ತುಂಬಿದ ಲೋಟ ಕೈಯಲ್ಲಿ ಹಿಡಿದು ಒಳಗೆ ಬಂದಳು. ಎಂದಿನಂತೆ ಮೇಜಿನ ಮೇಲಿಟ್ಟು ಮಾತಿಲ್ಲದೆ ಹೊರಟು ಹೋಗುತ್ತಿದ್ದ ಅವಳು ಹೊರಡುವ ಸೂಚನೆಯನ್ನೇ ತೋರದಿದ್ದಾಗ ಮೂರ್‍ತಿ ಬೆಚ್ಚಿ… Read more…

  • ಗೃಹವ್ಯವಸ್ಥೆ

    ಬೆಳಗು ಮುಂಜಾನೆ ಎಂಟು ಗಂಟೆಗೆ ಹೊಗೆಬಂಡಿಯು XX ಸ್ಟೇಶನಕ್ಕೆ ಬಂದು ನಿಂತಿತು. ಸಂತ್ರಾಧಾರವಾಗಿ ಮಳೆ ಹೊಡೆಯುತ್ತಿರುವದರಿಂದ ಪ್ರಯಾಣಸ್ಥರು ಬೇಸತ್ತು ಗಾಡಿಯಿಂದ ಯಾವಾಗ ಇಳಿಯುವೆವೋ ಎಂದೆನ್ನುತ್ತಿದ್ದರು. ನಿರ್ಮಲಾಬಾಯಿಯು ಅವಳ… Read more…

  • ಬೆಟ್ಟಿ

    ಮೃದುವಾಗಿ ಯಾರೋ ತೋಳು ತಟ್ಟಿದಂತಾಯಿತು. ಪುಸ್ತಕದಿಂದ ತಟ್ಟನೆ ತಲೆ ಎತ್ತಿದಳು ಲಿಂಡಾ. ನೀಲಿಕಣ್ಣುಗಳಲ್ಲಿ ಆಶ್ಚರ್ಯ ಮೂಡಿತ್ತು. "ಮದರ್ ಕರೆಯುತ್ತಿದ್ದಾರೆ..." ಅಷ್ಟೇ ಹೇಳಿ ಮೇರಿ ಸಿಸ್ಟರ್ ಹೊರಟರು. ಅವಳ… Read more…

  • ಆನುಗೋಲು

    ರೈಲು ನಿಲ್ದಾಣದಲ್ಲಿ ನಿಂತಿತು! "ಪೇಪರ! ಡೇಲಿ ಪೇಪರ!........ಟಾಯಿಮ್ಸ, ಫ್ರೀ ಪ್ರೆಸ್, ಸಕಾಳ! ಪ್ಲಾಟ ಫಾರ್ಮ ಮೇಲಿನ ಜನರ ನೂರೆಂಟು ಗದ್ದಲದಲ್ಲಿ ಈ ಧ್ವನಿಯು ಎದ್ದು ಕೇಳಿಸುತ್ತಿತ್ತು. ಹೋಗುವವರ… Read more…

  • ಎರಡು ಪರಿವಾರಗಳು

    ಇದು ಎರಡು ಪರಿವಾರದ ಕತೆ. ಒಂದು ಹಕ್ಕಿ ಪರಿವಾರ, ಇನ್ನೊಂದು ಮನುಷ್ಯ ಪರಿವಾರದ್ದು. ಒಂದು ಸುಂದರ ತೋಟ; ವಿಧವಿಧದ ಗಿಡ ಮರಗಳು; ಅವುಗಳ ಕವಲು ಬಿಟ್ಟ ರೆಂಬೆಗಳಲ್ಲಿ… Read more…

cheap jordans|wholesale air max|wholesale jordans|wholesale jewelry|wholesale jerseys