ಬಂದಿತು ಬರಬಹುದು

ಬಂದಿತು ಬರಬಹುದು ಇದು ದುರ್ಮುಖಿ ಸಂವತ್ಸರಕೆ
ಚಂದ್ರಧರನು ಕೋಪತಾಳಿ ಈ ಭೂಮಿಗೆ || ಪ ||

ಬಂದು ಕಲ್ಕಿ‌ಅವತಾರ ಸೀಮಿಗೆ
ಮು೦ದುವರಿದು ಯಮರಾಜನ ಕೊಲೆಗಳ
ದ್ವಂದ್ವನೇತ್ರಕೆ ಕಷ್ಟತರಿಸುವ ||ಆ.ಪ.||

ಚಾರುತರಹ ಚೌಭಾಗ ದಕ್ಷಿಣ ಸುಸೂತ್ರ ಮಳಿ-ಬೆಳಿ
ಉತ್ತಮವೆನಿಸಿ ಉತ್ತರಕೆ ಕಡೆಮೊದಲು ತೂಗುತ
ಶ್ಯಾರ ವಿಜಾಪುರ ಉಕ್ಕಲಿ ದನಗಳ ನೋಡುತ
ಮನದೊಳು ಕಷ್ಟಗೊಳ್ಳುತ ಕಳವಳಗೊಳ್ಳುತ
ಘೋರವಾಗಿ ಮಹಾಮುಂಬೈಯೊಳು
ಏರಿಗಟ್ಟ ಯ೦ತ್ರದ ಗಿರಣಿಗಳು
ಮಾರಿಕಾಗಿ ಮೈ ಬಣ್ಣದ ಗುಳ್ಳೆಗಳಗೆ
ಕಳ್ಳಜನರು ನಷ್ಟಾದರು ಸಖಿಯೆ ||೧||

ಆರು ಮೂರು ಒಂಭತ್ತು ಲಕ್ಷ ಜನ
ತೀರುತ ಸಾರಿದ ಲಕ್ಷ ಮೂರರೊಳು
ಮೀರಿ ಉಳಿದರು ಸಾವಕಾರ ತಾ
ಘೋರವಾಗಿ ಬೆಳಗಾವಿಗೆ ಜಾಹೀರ ಮುಟ್ಟುತಾ
ಜನನ ಮರಣ ಸಂಖ್ಯೆ
ಜನರಿಗೆ ವಿಪರೀತ ತೋರುತಾ
ಸುಟ್ಟುಹೋತು ರಂಗಮಾಲು ಕುಂಬಾರದೊರಿ
ಎಂಟು ಲಕ್ಷದ್ದಿತ್ತಿ ಮಹಾಲಕರಿ
ಕೋಟಿ ಜಲ್ಮವ ದಾಟಿ
ಉಳವಿ ಶಿವಶರಣರಾಗಿ ಮರ್ತ್ಯಕ್ಕೆ ಶಿಕ್ಷಿಸುತಾ ||೨||

ಪ್ಯಾಟಿ ಪಟ್ಟಣಾ ಹುಬ್ಬಳ್ಳಿ ಜನರೊಡ ತಾ
ದನಕರ ಗೋಳಿಡುತಾ
ದುಡ್ಡಿಗೆ ಮೂರು ಮಾತಾಡುತಾ
ನೀಟವಾಗಿ ಮಲ್ಲಾಡ ಬೆಳವಲಕೆ ಓಡುತಾ
ಮೈಸೂರಸೀಮಿ ಸೇರಿ ಷಣ್ಮುಖ ಆವತಾರ ತೋರುತಾ
ಸಾಧಿಸುತ ವಿಳಂಬಿ ಸಂವತ್ಸರ ಕೂಡುತಾ
ಇಳೆಯೊಳು ಸಜ್ಜನರು ಕಳವಳಗೊಳ್ಳುತಾ ನಿಜಪಾಡುತಾ
ಸಾಧುಸಂತರು ಯಮನಾಲಯ ಮೀರಿ
ಬೋಧಿಸಿದರು ಪರಮಾತ್ಮನ ಲೀಲಾ
ಚೋದ್ಯವಾಯಿತು ಅಮರಾರಿಪುರುರಿಗೆ || ೩ ||

ವೀರ್ಯದೊಳು ವಿಕಾರಿ ಸಂವತ್ಸರ ಗಾವುದಕೆ ನಿಂದಿಸಿ
ಗಾರುಗೊಂಡು ಮನಿ ಮನಿ ಗಾವುದಕೆ ಹೊಂದಿಸಿ
ಸಾರಿ ಹೇಳತೇನಿ ಮೂರು ಸಂವತ್ಸರ ಕೂಡಿಸಿ
ಇದರೊಳು ತಪ್ಪು ಆದರೆ ಗುರುಗೋವಿಂದನ ಸಾಕ್ಷಿ
ಧರೆಯೊಳು ಶಿಶುನಾಳ ಗುರುಪುತ್ರ ಕವಿಗೆ
ಸರಿಯಾಯಿತು ಕಾಲಜ್ಞಾನ ಸೂಚನದ ಭವಿ
ಮರೆಯಲಾರೆ ಸಂಸಾರದ ಸವಿ
ಗುರುಮೂರ್ತಿ ಶಶಿಯಂಬುಜಮುಖಿಯೆ || ೪ ||
*****

 

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಬಸವನ ಹುಳುವಿಗೆ ಗರಿ
Next post ಶ್ರೀ ಗುರುವರನ ಕರುಣವ ಪಡೆಯುತ

ಸಣ್ಣ ಕತೆ

  • ಆನುಗೋಲು

    ರೈಲು ನಿಲ್ದಾಣದಲ್ಲಿ ನಿಂತಿತು! "ಪೇಪರ! ಡೇಲಿ ಪೇಪರ!........ಟಾಯಿಮ್ಸ, ಫ್ರೀ ಪ್ರೆಸ್, ಸಕಾಳ! ಪ್ಲಾಟ ಫಾರ್ಮ ಮೇಲಿನ ಜನರ ನೂರೆಂಟು ಗದ್ದಲದಲ್ಲಿ ಈ ಧ್ವನಿಯು ಎದ್ದು ಕೇಳಿಸುತ್ತಿತ್ತು. ಹೋಗುವವರ… Read more…

  • ಧರ್ಮಸಂಸ್ಥಾಪನಾರ್ಥಾಯ

    ಕಪಿಲಳ್ಳಿಯ ಏಕೈಕ ಸಂರಕ್ಷಕ ಕಪಿಲೇಶ್ವರನ ವಾರ್ಷಿಕ ರಥೋತ್ಸವದ ಮುನ್ನಾದಿನ ಧಾರ್ಮಿಕ ಪ್ರವಚನವೊಂದನ್ನು ಏರ್ಪಡಿಸಲೇಬೇಕೆಂದೂ, ಇಲ್ಲದಿದ್ದರೆ ಜಾತ್ರಾ ಮಹೋತ್ಸವಕ್ಕೆ ತನ್ನ ಸಪೋರ್ಟು ಮತ್ತು ಕೋ-ಆಪರೇಶನ್ನು ಬಿಲ್ಲು ಕುಲ್ಲು ಸಿಗಲಾರದೆಂದೂ,… Read more…

  • ಗ್ರಹಕಥಾ

    [ಸತಿಯು ಪತಿಯ ಹಾಗೂ ಪತಿಯು ಸತಿಯ ಮನೋವೃತ್ತಿಗಳನ್ನು ಅರಿತು ಪರಸ್ಪರರು ಪರಸ್ಪರರನ್ನು ಸಂತೋಷಗೊಳಿಸಿದರೆ ಮಾತ್ರ ಸಂಸಾರವು ಉಭಯತರಿಗೂ ಸುಖಮಯವಾಗುತ್ತದೆ ಹೊರತಾಗಿ, ಅವರಲ್ಲಿ ಯಾರಾದರೊಬ್ಬರು ಅಹಂಭಾವದಿಂದ ಪ್ರೇರಿತರಾಗಿ, ಪರರ… Read more…

  • ರಾಧೆಯ ಸ್ವಗತ

    ಈಗ ಸೃಷ್ಟಿಕರ್ತನ್ನು ದೂಷಿಸುತ್ತಾ ಕಾಲ ಕಳೆಯುತ್ತಿದ್ದೇನೆ ಕೃಷ್ಣಾ. ಹೆಂಗಸರಿಗ್ಯಾಕೆ ಅವರ ಪ್ರಿಯಕರರಿಗಿಂತ ಹೆಚ್ಚು ಆಯುಸ್ಸನ್ನು ಅವನು ಕೊಡುತ್ತಾನೋ? ನೀನು ಹೇಳುತ್ತಿದ್ದುದು ಮತ್ತೆ ಮತ್ತೆ ನೆನಪಾಗುತ್ತಿದೆ: "ರಾಧೆ, ಈ… Read more…

  • ದೋಂಟಿ ತ್ಯಾಂಪಣ್ಣನ ಯಾತ್ರಾ ಪುರಾಣವು

    ಸುಮಾರು ಆರೂವರೆ ಅಡಿಗಿಂತಲೂ ಎತ್ತರಕ್ಕೆ ಗಳದ ಹಾಗೆ ಬೆಳೆದಿರುವ ದೋಂಟಿ ತ್ಯಾಂಪಣ್ಣನು ತನ್ನ ದಣಿ ಕಪಿಲಳ್ಳಿ ಕೃಷ್ಣ ಮದ್ಲೆಗಾರರ ಮನೆ ಜಗಲಿಯಲ್ಲಿ ಮೂಡು ಸಂಪೂರ್ಣ ಆಫಾಗಿ ಕೂತಿದ್ದನು.… Read more…