Home / ಕವನ / ಕವಿತೆ / ಬಂದಿತು ಬರಬಹುದು

ಬಂದಿತು ಬರಬಹುದು

ಬಂದಿತು ಬರಬಹುದು ಇದು ದುರ್ಮುಖಿ ಸಂವತ್ಸರಕೆ
ಚಂದ್ರಧರನು ಕೋಪತಾಳಿ ಈ ಭೂಮಿಗೆ || ಪ ||

ಬಂದು ಕಲ್ಕಿ‌ಅವತಾರ ಸೀಮಿಗೆ
ಮು೦ದುವರಿದು ಯಮರಾಜನ ಕೊಲೆಗಳ
ದ್ವಂದ್ವನೇತ್ರಕೆ ಕಷ್ಟತರಿಸುವ ||ಆ.ಪ.||

ಚಾರುತರಹ ಚೌಭಾಗ ದಕ್ಷಿಣ ಸುಸೂತ್ರ ಮಳಿ-ಬೆಳಿ
ಉತ್ತಮವೆನಿಸಿ ಉತ್ತರಕೆ ಕಡೆಮೊದಲು ತೂಗುತ
ಶ್ಯಾರ ವಿಜಾಪುರ ಉಕ್ಕಲಿ ದನಗಳ ನೋಡುತ
ಮನದೊಳು ಕಷ್ಟಗೊಳ್ಳುತ ಕಳವಳಗೊಳ್ಳುತ
ಘೋರವಾಗಿ ಮಹಾಮುಂಬೈಯೊಳು
ಏರಿಗಟ್ಟ ಯ೦ತ್ರದ ಗಿರಣಿಗಳು
ಮಾರಿಕಾಗಿ ಮೈ ಬಣ್ಣದ ಗುಳ್ಳೆಗಳಗೆ
ಕಳ್ಳಜನರು ನಷ್ಟಾದರು ಸಖಿಯೆ ||೧||

ಆರು ಮೂರು ಒಂಭತ್ತು ಲಕ್ಷ ಜನ
ತೀರುತ ಸಾರಿದ ಲಕ್ಷ ಮೂರರೊಳು
ಮೀರಿ ಉಳಿದರು ಸಾವಕಾರ ತಾ
ಘೋರವಾಗಿ ಬೆಳಗಾವಿಗೆ ಜಾಹೀರ ಮುಟ್ಟುತಾ
ಜನನ ಮರಣ ಸಂಖ್ಯೆ
ಜನರಿಗೆ ವಿಪರೀತ ತೋರುತಾ
ಸುಟ್ಟುಹೋತು ರಂಗಮಾಲು ಕುಂಬಾರದೊರಿ
ಎಂಟು ಲಕ್ಷದ್ದಿತ್ತಿ ಮಹಾಲಕರಿ
ಕೋಟಿ ಜಲ್ಮವ ದಾಟಿ
ಉಳವಿ ಶಿವಶರಣರಾಗಿ ಮರ್ತ್ಯಕ್ಕೆ ಶಿಕ್ಷಿಸುತಾ ||೨||

ಪ್ಯಾಟಿ ಪಟ್ಟಣಾ ಹುಬ್ಬಳ್ಳಿ ಜನರೊಡ ತಾ
ದನಕರ ಗೋಳಿಡುತಾ
ದುಡ್ಡಿಗೆ ಮೂರು ಮಾತಾಡುತಾ
ನೀಟವಾಗಿ ಮಲ್ಲಾಡ ಬೆಳವಲಕೆ ಓಡುತಾ
ಮೈಸೂರಸೀಮಿ ಸೇರಿ ಷಣ್ಮುಖ ಆವತಾರ ತೋರುತಾ
ಸಾಧಿಸುತ ವಿಳಂಬಿ ಸಂವತ್ಸರ ಕೂಡುತಾ
ಇಳೆಯೊಳು ಸಜ್ಜನರು ಕಳವಳಗೊಳ್ಳುತಾ ನಿಜಪಾಡುತಾ
ಸಾಧುಸಂತರು ಯಮನಾಲಯ ಮೀರಿ
ಬೋಧಿಸಿದರು ಪರಮಾತ್ಮನ ಲೀಲಾ
ಚೋದ್ಯವಾಯಿತು ಅಮರಾರಿಪುರುರಿಗೆ || ೩ ||

ವೀರ್ಯದೊಳು ವಿಕಾರಿ ಸಂವತ್ಸರ ಗಾವುದಕೆ ನಿಂದಿಸಿ
ಗಾರುಗೊಂಡು ಮನಿ ಮನಿ ಗಾವುದಕೆ ಹೊಂದಿಸಿ
ಸಾರಿ ಹೇಳತೇನಿ ಮೂರು ಸಂವತ್ಸರ ಕೂಡಿಸಿ
ಇದರೊಳು ತಪ್ಪು ಆದರೆ ಗುರುಗೋವಿಂದನ ಸಾಕ್ಷಿ
ಧರೆಯೊಳು ಶಿಶುನಾಳ ಗುರುಪುತ್ರ ಕವಿಗೆ
ಸರಿಯಾಯಿತು ಕಾಲಜ್ಞಾನ ಸೂಚನದ ಭವಿ
ಮರೆಯಲಾರೆ ಸಂಸಾರದ ಸವಿ
ಗುರುಮೂರ್ತಿ ಶಶಿಯಂಬುಜಮುಖಿಯೆ || ೪ ||
*****

 

Tagged:

Leave a Reply

Your email address will not be published. Required fields are marked *

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...