ಬಸವನ ಹುಳುವಿಗೆ ಗರಿ

ಸಂಕುಚಿತ ಪ್ರವೃತ್ತಿಯ ಶಿಕ್ಷಕ ಅವನು. ಮಕ್ಕಳಿಗೆ ಪಾಠ ಬೋಧಿಸುವಾಗ ಮನುಷ್ಯನ ಸಣ್ಣತನವನ್ನು ಖಂಡಿಸುತ್ತಿದ್ದ. ವೈಶಾಲ್ಯತೆ ದಕ್ಕಿಸಿಕೊಳ್ಳಲು ಸಾಕ್ಷಿಪ್ರಜ್ಞೆಯಾಗುತ್ತಿದ್ದ. ಸಂದರ್ಭ ಸಿಕ್ಕಾಗೆಲ್ಲ ಪಾಠದ ಆಶಯವನ್ನು ವಿರೂಪಗೊಳಿಸಿ ವಿಷಂತರದಿಂದ ಕೆಳಸ್ತರದ ವಿದ್ಯಾರ್ಥಿಗಳನ್ನು ದಮನಿಸುವ ಮತ್ತು ಮೇಲುಸ್ತರದವರನ್ನು ವೈಭವೀಕರಿಸುವದರೊಂದಿಗೆ ಸ್ವಜನಪಕ್ಷಪಾತದಿಂದ ಹಾಲುಮನಸ್ಸಿನ ಮಕ್ಕಳ ನಡುವೆ ಗೋಡೆ ಎಬ್ಬಿಸುತ್ತಿದ್ದ. ನಿಂತ ನೀರಿನಂತಿದ್ದ ಅವನಿಗೆ ತನ್ನ ಕುಲಸ್ಥರೆಂದರೆ ಉತ್ಕಟ ಅಭಿಮಾನ, ಪ್ರೀತಿ, ತಮ್ಮ ಮೇಧಾವಿತನ ಹುಟ್ಟಿನಿಂದಲೇ ಬಂದದ್ದು. ತಮ್ಮ ಚತುರಮತಿಯಿಂದಲೇ ಈ ಭೂಮಿ ಉಸಿರಾಡುವುದೆಂದು ಅವರು ಮತ್ತೆ ಮತ್ತೆ ಮಾತಾಡಿ ಸಮರ್ಥಿಸಿಕೊಳ್ಳುವನು.

ದಲಿತ ಹುಡುಗನೊಬ್ಬ ತನ್ನ ಅಗಾಧ ಪ್ರತಿಭೆಯಿಂದ ಅವರ ಕಣ್ಣು ಕುಕ್ಕಿದ್ದ. ಶಿಕ್ಷಕ ತೀವ್ರ ತಳಮಳ ಅನುಭವಿಸುತ್ತಿದ್ದ. ಆ ಹುಡುಗ ಕಳೆದ ಜನ್ಮದಲ್ಲಿ ತಮ್ಮ ಕುಲಸ್ಥನೆ ಆಗಿರಬೇಕು ಅಥವಾ ಹುಟ್ಟುವಾಗ ಅಕಸ್ಮಿಕವಾಗಿ ಏರು ಪೇರಾಗಿರಬಹುದು ಎಂಬ ಅನುಮಾನದಿಂದ ಅವನನ್ನು ಗಮನಿಸುತ್ತಿದ್ದ. ಅವನು ತನ್ನನ್ನು ಕೀಳರಮೆಯಿಂದ ಕಾಣುತ್ತಿರುವ ಸೂಕ್ಷ್ಮವನ್ನು ಬದಿಗಿಟ್ಟು ಗುರು ಎಂಬ ಪೂಜ್ಯ ಭಾವನೆಯನ್ನು ಅಭಿವ್ಯಕ್ತಪಡಿಸುತ್ತಿದ್ದ ಹುಡುಗ ಗೌರವದಿಂದ ನಮಸ್ಕರಿಸುತ್ತಿದ್ದ.

ಹುಡುಗನಿಗೆ ಊರ್ಧ್ವಮುಖಿಯ ತುಡಿತ. ಅದರ ಫಲವಂತಿಕೆಗಾಗಿ ಹಗಲಿರುಳು ಶ್ರಮಿಸುವನು. ಆದರೆ ಶಿಕ್ಷಕನ ಕ್ಷುದ್ರ ಮನಸ್ಸು ಪ್ರತಿಯೊಂದು ಪರೀಕ್ಷಗಳಲ್ಲಿ ಹುಡುಗನ ಪ್ರತಿಭೆಗೆ ಕಾಲ್ತೊಡಕಾಗುತ್ತಲೆ ಇತ್ತು. “ನೀನು ನೆಲದ ಮೇಲೆ ತೆವಳುವ ಬಸವನ ಹುಳದಂತೆ ಹುಡುಗ, ನಿನಗೆ ಗರಿಗಳು ಮೂಡುವುದಿಲ್ಲ ಆಕಾಶದಲ್ಲಿ ಹಾರಾಡುವ ಕನಸು ಕಾಣಬೇಡ” ಎಂದು ಪದೆಪದೇ ಅವನನ್ನು ಅವಮಾನಿಸುವನು.

ಕೊನೆಗೂ ಆ ಶಿಕ್ಷಕನ ನೀಚ ಪರಿಧಿಯಿಂದ ಹುಡುಗ ಪಾರಾದ. ಶಿಕ್ಷಕನೂ ಆ ಹುಡುಗನನ್ನು ಮರೆತ. ಆ ಶಿಕ್ಷಕ ಮಾತುಗಳನ್ನು ಸವಾಲಾಗಿ ಸ್ವೀಕರಿಸಿದ ಹುಡುಗ ಕಷ್ಟಪಟ್ಟು ಓದಿದ. ಶಿಕ್ಷಣ ಇಲಾಖೆಯಲ್ಲಿ ಅಧಿಕಾರಿಯಾದ. ಅಷ್ಟು ಹೊತ್ತಿಗೆ ಆ ಶಿಕ್ಷಕ ಬೇರೊಂದು ಶಾಲೆಯ ಮುಖ್ಯಾಧ್ಯಾಪಕನಾಗಿ ನಿವೃತ್ತಿಯ ಅಂಚು ತಲುಪಿದ್ದ.

ಸಾಹೇಬರು ಅಚಾನಕ್ಕಾಗಿ ಶಾಲೆಗೆ ಭೇಟಿಕೊಟ್ಟರು. ಅಲ್ಲಿನ ಅಸ್ತವ್ಯಸ್ತ ಪರಿಸರವನ್ನು, ಹುಡುಗರ ಅಶಿಸ್ತನ್ನು, ತರಗತಿಗಳ ದುರ್ಭಾಗ್ಯವನ್ನು, ಶಿಕ್ಷಕರ ಭಂಡತನವನ್ನು ಗಮನಿಸಿ ಮುಖ್ಯಾಧ್ಯಾಪಕರನ್ನು ತರಾಟೆಗೆ ತೆಗೆದುಕೊಂಡರು. ಅವರು ಸಾಹೇಬರೆದುರಿಗೆ ಕೈ ಮುಗಿದುಕೊಂಡು ನಿಂತಿದ್ದರು. “ನೀವು ನನಗೆ ಕಲಿಸಿದ ಗುರುಳು. ನನಗೆ ಕೈ ಮುಗಿಯಬಾರದು” ಎಂದು ಅವರನ್ನು ಕುರ್ಚಿಯ ಮೇಲೆ ಕುಳ್ಳಿರಿಸಿ ತಮ್ಮ ಪರಿಚಯ ಮಾಡಿಕೊಟ್ಟಿದ್ದರು ಸಾಹೇಬರು.

ಅವರನ್ನು ದಿಟ್ಟಿಸಿ ನೋಡುತ್ತಿದ್ದಂತೆ ಶಿಕ್ಷಕನಿಗೆ ಹಸಿಹಸಿ ನೆನಪು. ಅವನ ಪ್ರತಿಭೆಯನ್ನು ಕುಗ್ಗಿಸುತ್ತಿದ್ದರ ನೆನಪು. “ನಿಮಗೆ ಋಣಿಯಾಗಿರುವೆ ಗುರುಗಳೆ. ನಿಮ್ಮ ಪುಣ್ಯದಿಂದ ಈ ಬಸವನ ಹುಳುವಿಗೆ ಗರಿ ಮೂಡಿದವು” ಎಂದರು ಸಾಹೇಬರು. ಶಿಕ್ಷಕನ ತಲೆ ತಗ್ಗಿತು.

*****

 

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಬೆಳಕು
Next post ಬಂದಿತು ಬರಬಹುದು

ಸಣ್ಣ ಕತೆ

  • ಅಹಮ್ ಬ್ರಹ್ಮಾಸ್ಮಿ

    ಬಹುಶಃ ಮೊದಲ ಬಾರಿ ನಾನು ಅವನನ್ನು ನೋಡುತ್ತಿರಬೇಕು. ಅವನು ಅಕಸ್ಮತ್ತಾಗಿ ನನ್ನ ಕಣ್ಣಿಗೆ ಬಿದ್ದನೋ, ಅಲ್ಲಾ ಅವನೇ ನಾನು ಕಾಣುವ ಹಾಗೆ ಎದುರಿಗೆ ಬಂದನೋ ಎಂಬ ವಿಷಯದಲ್ಲಿ… Read more…

  • ಎರಡು…. ದೃಷ್ಟಿ!

    ದೀಪಾವಳಿಯು ಸಮೀಪಿಸಿದ್ದಿತು. ದೀಪಾವಳಿಯನ್ನು ನಾವು ಪಂಚಾಗ ನೋಡದೆ ತಿಳಿದುಕೊಳ್ಳಬಹುದು. ಅದು ಹೇಗೆ? ದೀಪಾವಳಿ ಪೂರ್ವರಂಗದ ಸುಳಿವು ನಮಗೇ ಗೊತ್ತೇ ಆಗುವದು. ಮನೆಯಲ್ಲಿ ಕರಚೀ ಕಾಯಿ, ಚಿರೋಟಿಗಳನ್ನು ಕರಿಯುವ… Read more…

  • ಮಿಂಚು

    "ಸಾವಿತ್ರಿ, ಇದು ಏನು? ನನ್ನಾಣೆಯಾಗಿದೆ. ಹೀಗೆ ಮಾಡಬೇಡ! ಇದು ಒಳ್ಳೆಯದಲ್ಲ. ಬಿಡು, ಬಿಡು...! ನಾಲ್ಕು ಜನ ನೋಡಿದರೆ ಏನು ಅಂದಾರು?" ಅನ್ನಲಿ ಏನೇ ಅನ್ನಲಿ ನಾನು ಯಾವ… Read more…

  • ಕಳಕೊಂಡವನು

    ಸುಮಾರು ಒಂದು ಗಂಟೆಯ ಪಯಣದಿಂದ ಸುಸ್ತಾದ ಅವನು ಬಸ್ಸಿನಿಂದ ಇಳಿದು ರಸ್ತೆಯ ಬದಿಗೆ ಬಂದು ನಿಂತು ತನ್ನ ಕೈಗಡಿಯಾರ ದೃಷ್ಟಿಸಿದ. ಮಧ್ಯಾಹ್ನ ಒಂದು ಗಂಟೆ. ಒಮ್ಮೆ ಮುಖ… Read more…

  • ತೊಳೆದ ಮುತ್ತು

    ಕರ್ನಾಟಕದಲ್ಲಿ ನಮ್ಮ ಮನೆತನವು ಪ್ರತಿಷ್ಠಿತವಾದದ್ದು. ವರ್ಷಾ ನಮಗೆ ಇನಾಮು ಭೂಮಿಗಳಿಂದ ಎರಡು- ಮೂರು ಸಾವಿರ ರೂಪಾಯಿಗಳ ಉತ್ಪನ್ನ. ನಮ್ಮ ತಂದೆಯವರಾದ ರಾವಬಹಾದ್ದೂರ ಅನಂತರಾಯರು ಡೆಪುಟಿ ಕಲೆಕ್ಟರರಾಗಿ ಪೆನ್ಶನ್ನ… Read more…

cheap jordans|wholesale air max|wholesale jordans|wholesale jewelry|wholesale jerseys