ಎಡ ಬಲ

ಎಡಬಲದಿ ನೀನಿರಲು ತೊಡಕುಗಳು ಎನಗುಂಟೆ?
ಬಿಡೆ ನಿನ್ನ ನಿಲ್ಲು ದೊರೆಯೇ
ಕಡು ಬಾಧೆಗಳು ಬಂದು ಹುಡುಕಿ ತಂದುವು ನಿನ್ನ
ಅಡಿಗೆರಗಿ ನುತಿಸುವೆನು ತಾಳು ಶ್ರೀ ಹರಿಯೆ

ಎನ್ನ ಒಳ ಹೊರಗೆಲ್ಲಾ ನಿನ್ನ ರಾಜ್ಯವೆ ನೋಡ
ಇನ್ನಾವ ಕೊರತೆ ಎನಗೆ
ಕಣ್ಣು ಸಾಲವೊ ನಿನ್ನ ಸೊಗಸು ನೋಡಲು ದೇವಾ
ಸನ್ನುತಾಂಗನೆ ಇದನು ಬಣ್ಣಿಸಲು ಅಳವೇ

ಜನನಿ ಬುವಿಯಾಗಿರಲು ಜನಕ ನೀನಿರುತಿರಲು
ಎಣೆಯುಂಟೆ ಈ ಭಾಗ್ಯಕೆ?
ಉಣಿಸಿ ಸಲಹುವಳಮ್ಮ ಜ್ಞಾನವೊಸಗುವೆ ನೀನು
ಜನಿಸುವೆನು ಮರಮರಳಿ ಘನರೂಪು ತಾಳಿ

ಸ್ನಿಗ್ಧಮಯವಾಗಿಹುದು ಮಧುವು ತುಳುಕುತಲಿಹುದು
ಮಧುರಭಾವಗಳು ತುಂಬಿ
ದಿಗ್ದಿಗಂತಕೆ ನುಗ್ಗಿ ಸೂರೆಗೊಂಬೆನು ಫಲವ
ಸಿದ್ಧವಾಗಿಹೆನಿನ್ನು ಜಯವು ಜನಕಜೆಗೆ
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ದೇವಲೋಕದ ಹೂ
Next post ಮಿಂಚುಳ್ಳಿ ಬೆಳಕಿಂಡಿ – ೬೨

ಸಣ್ಣ ಕತೆ

  • ಎರಡು ಮದುವೆಗಳು

    ಮುಂಗಾರು ಮಳೆಗಳು ಸರಿಯಾಗಿ ಬಾರದೇ ಭುವನೇಶ್ವರದ ಹಳ್ಳಿಯ ಜನರಲ್ಲಿ ಒಂದು ರೀತಿಯ ಕಳವಳವಾಗಿತ್ತು. ಮಳೆ ಬಂದರೆ ಬೆಳೆ, ಬೆಳೆ ಆದರೆ ಬಾಳು ಎಂದು ಬದುಕುತ್ತಿದ್ದ ಅವರಿಗೆ ಏನು… Read more…

  • ನಂಬಿಕೆ

    ಮಧ್ಯರಾತ್ರಿ ನಿದ್ದೆಯಿಂದ ಎಚ್ಚೆತ್ತ ಕಾದ್ರಿ ಒಮ್ಮೆ ಎಡಕ್ಕೆ ಮತ್ತೊಮ್ಮೆ ಬಲಕ್ಕೆ ಹೊರಳಾಡಿದ. ಹೂ... ಹೂ.... ನಿದ್ರೆ ಬರಲಾರದು. ಎದ್ದು ಕುಳಿತು ಪಕ್ಕದ ಚಾಪೆಯತ್ತ ಕಣ್ಣಾಡಿಸಿದ ಪಾತು ಅವನ… Read more…

  • ದೇವರು

    ನನ್ನ ದೇವರಿಗೆ, ಬಹಳ ದಿನಗಳ ನಂತರ ನಿಮಗೆ ಕಾಗದ ಬರೆಯುತ್ತಿದ್ದೇನೆ. ಏಕೆಂದರೆ ನೀವು ಬರೆದ ಕಾಗದಕ್ಕೆ ಉತ್ತರ ಕೇಳಿದ್ದೀರಿ. ನಾನೀಗ ಉತ್ತರ ಬರೆಯಲೇಬೇಕು ಬರೆಯುತ್ತಿದ್ದೇನೆ. "ಪತಿಯೇ ದೇವರು"… Read more…

  • ದುರಾಶಾ ದುರ್ವಿಪಾಕ

    "ಒಳ್ಳೇದು, ಅವನನ್ನು ಒಳಗೆ ಬರಹೇಳು" ಎಂದು ಪ್ರೇಮಚಂದನು- ಘನವಾದ ವ್ಯಾಪಾರಸ್ಥನು- ಆಢ್ಯತೆಯಿಂದ, ತಾನು ಆಡುವ ಒಂದೊಂದು ಶಬ್ದವನ್ನು ತೂಕಮಾಡಿ ಚಲ್ಲುವಂತೆ ಸಾವಕಾಶವಾಗಿ ನುಡಿದನು. ಬಾಗಿಲಲ್ಲಿ ನಿಂತಿದ್ದ ವೃದ್ಧ… Read more…

  • ರಣಹದ್ದುಗಳು

    ಗರ್ಭಿಣಿಯರ ನೋವು ಚೀರಾಟಗಳಿಗೆ ಡಾಕ್ಟರ್ ಸರಳಾಳ ಕಿವಿಗಳೆಂದೋ ಕಿವುಡಾಗಿ ಬಿಟ್ಟಿವೆ. ಸರಳ ಮಾಮೂಲಿ ಎಂಬಂತೆ ಆ ಹಳ್ಳಿ ಹೆಂಗಸರನ್ನು ಪರೀಕ್ಷಿಸಿದ್ದಳು. ಹೆಂಗಸು ಹೆಲ್ತಿಯಾಗಿದ್ದರೂ ಒಂದಷ್ಟು ವೀಕ್ ಇದ್ದಾಳೇಂತ… Read more…