Home / ಕವನ / ಕವಿತೆ / ಸಂತೆ

ಸಂತೆ

ಪರದೇಶಿ ಸಾಗಿಹಳು ಸಂತೆಗಾಡಿಯೊಳು
ಹರಹರಾ ಎಂದೆನುತ ಶಿರಬಾಗಿಸಿದಳು

ಸಂತೆ ಮಾಡಿದ ಯಾವ ಲಕ್ಷಣಗಳಿಲ್ಲ
ಚಿಂತೆ ಮಾಡುತ ಜನರ ಮಧ್ಯೆ ಕುಳಿತಿಹಳು

ತಕ್ಕಡಿ ಸೇರಿಲ್ಲ ಹೊಗೆಪುಡಿಯು ಇಲ್ಲ
ಪಕ್ಕದೊಳು ಕಾಳಿನ ಚೀಲಗಳು ಇಲ್ಲ

ಎಣ್ಣೆ ಡಬ್ಬಗಳಿಲ್ಲ ಗೆಡ್ಡೆ ಗೆಣಸುಗಳಿಲ್ಲ
ಎಲೆಪಿಂಡಿ ಬೆಳ್ಳುಳ್ಳಿ ಈರುಳ್ಳಿ ಇಲ್ಲ

ಸಂಬಾರ ದಿನಸುಗಳ ಕೊಂಡು ತಿಂದಿಲ್ಲ
ಹೊಂಬಾಳೆ ಸಿಗಿಸಿಲ್ಲ ಎಲೆಯಡಕೆ ಇಲ್ಲ

ಬುತ್ತಿ ತಂದವಳಲ್ಲ ಕಡಲೆ ಬುರುಗಿಲ್ಲ
ರಸ್ತಾಳೆ ಕಬ್ಬನು ಕೊಂಡುತಂದಿಲ್ಲ

ರಟ್ಟೆ ಕಡಗಗಳಿಲ್ಲ ತಾಳಿಸರವಿಲ್ಲ
ಪಟ್ಟಿ ನಡುವಿನೊಳಿಲ್ಲ ಓಲೆ ಮೂಗುತಿಯಿಲ್ಲ

ಸಂತೆಗೈದಿಹರೆಲ್ಲ ನೋಡಿ ನಗುತಿಹರು
ಕೊಂತೆಮ್ಮನಿವಳಾರು ನುಡಿಯದಿಹಳೆನುತ

ಯಾರವ್ವ ಯಾವೂರು ಎಲ್ಲಿಗೆಂದೆನುತ
ತಾರವ್ವ ಅಡಕೆಲೆಯ ತತ್ತಿಯೆಂದೆನುತ

ಮಾರಟವೇನವ್ವ ಸಂತೇಲಿ ನಿನದು
ತೌರೂರು ಯಾವೂರು ಸುಣ್ಣ ತಾರೆನುತ

ನಿಮ್ಮೂರ ಕೆರೆಯೊಳಗೆ ನೀರುಂಟೆ ಎನುತ
ಸುಮ್ಮನೆ ಕುಂತವ್ಳೆ ಯಾಕಮ್ಮ ಎನುತ

ಮಕ್ಕಳೈದಾರೇನೆ ಯಜಮಾನನೆಲ್ಲೆ
ಯಕ್ಕ ನಿನ ಎಸ್ರೇನೆ ಮಾತಾಡೆ ಎನುತ

ಕನಿಕರದ ಮಾತುಗಳ ಕೇಳಿ ಪಯಣಿಗಳು
ಜನಕಜೆ ಕಾಣ್ರವ್ವ ಎಂದೊಮ್ಮೆ ನಕ್ಕಳು!
*****

Tagged:

Leave a Reply

Your email address will not be published. Required fields are marked *

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...

ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...