ಸಂತೆ

ಪರದೇಶಿ ಸಾಗಿಹಳು ಸಂತೆಗಾಡಿಯೊಳು
ಹರಹರಾ ಎಂದೆನುತ ಶಿರಬಾಗಿಸಿದಳು

ಸಂತೆ ಮಾಡಿದ ಯಾವ ಲಕ್ಷಣಗಳಿಲ್ಲ
ಚಿಂತೆ ಮಾಡುತ ಜನರ ಮಧ್ಯೆ ಕುಳಿತಿಹಳು

ತಕ್ಕಡಿ ಸೇರಿಲ್ಲ ಹೊಗೆಪುಡಿಯು ಇಲ್ಲ
ಪಕ್ಕದೊಳು ಕಾಳಿನ ಚೀಲಗಳು ಇಲ್ಲ

ಎಣ್ಣೆ ಡಬ್ಬಗಳಿಲ್ಲ ಗೆಡ್ಡೆ ಗೆಣಸುಗಳಿಲ್ಲ
ಎಲೆಪಿಂಡಿ ಬೆಳ್ಳುಳ್ಳಿ ಈರುಳ್ಳಿ ಇಲ್ಲ

ಸಂಬಾರ ದಿನಸುಗಳ ಕೊಂಡು ತಿಂದಿಲ್ಲ
ಹೊಂಬಾಳೆ ಸಿಗಿಸಿಲ್ಲ ಎಲೆಯಡಕೆ ಇಲ್ಲ

ಬುತ್ತಿ ತಂದವಳಲ್ಲ ಕಡಲೆ ಬುರುಗಿಲ್ಲ
ರಸ್ತಾಳೆ ಕಬ್ಬನು ಕೊಂಡುತಂದಿಲ್ಲ

ರಟ್ಟೆ ಕಡಗಗಳಿಲ್ಲ ತಾಳಿಸರವಿಲ್ಲ
ಪಟ್ಟಿ ನಡುವಿನೊಳಿಲ್ಲ ಓಲೆ ಮೂಗುತಿಯಿಲ್ಲ

ಸಂತೆಗೈದಿಹರೆಲ್ಲ ನೋಡಿ ನಗುತಿಹರು
ಕೊಂತೆಮ್ಮನಿವಳಾರು ನುಡಿಯದಿಹಳೆನುತ

ಯಾರವ್ವ ಯಾವೂರು ಎಲ್ಲಿಗೆಂದೆನುತ
ತಾರವ್ವ ಅಡಕೆಲೆಯ ತತ್ತಿಯೆಂದೆನುತ

ಮಾರಟವೇನವ್ವ ಸಂತೇಲಿ ನಿನದು
ತೌರೂರು ಯಾವೂರು ಸುಣ್ಣ ತಾರೆನುತ

ನಿಮ್ಮೂರ ಕೆರೆಯೊಳಗೆ ನೀರುಂಟೆ ಎನುತ
ಸುಮ್ಮನೆ ಕುಂತವ್ಳೆ ಯಾಕಮ್ಮ ಎನುತ

ಮಕ್ಕಳೈದಾರೇನೆ ಯಜಮಾನನೆಲ್ಲೆ
ಯಕ್ಕ ನಿನ ಎಸ್ರೇನೆ ಮಾತಾಡೆ ಎನುತ

ಕನಿಕರದ ಮಾತುಗಳ ಕೇಳಿ ಪಯಣಿಗಳು
ಜನಕಜೆ ಕಾಣ್ರವ್ವ ಎಂದೊಮ್ಮೆ ನಕ್ಕಳು!
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಅಮ್ಮಾ ನಿನ್ನ ಪುಣ್ಯಚರಣದ ಸಣ್ಣ ಧೂಳಿಯು ನಾನು
Next post ಅತ್ತ ದರಿ ಇತ್ತ ಪುಲಿ

ಸಣ್ಣ ಕತೆ

  • ಗಿಣಿಯ ಸಾಕ್ಷಿ

    ಹತ್ತಿರವಿದ್ದ ನೆರೆಹೊರೆಯ ಮನೆಯವರಿಗೆ ಗಿಣಿಯ ಕೀರಲು ಕಿರುಚಾಟ ಕೂಗಾಟ ಸತತವಾಗಿ ಕೇಳಿಬಂದಾಗ ಅವರು ಅಲ್ಲಿಗೆ ಧಾವಿಸಿ ಬಂದಿದ್ದರು. ಗೌರಿಯು ಕಳೇಬರವಾಗಿ ಬಿದ್ದಿರುವುದು ನೋಡಿ ಅವರಿಗೆ ದಿಗ್ಭ್ರಾಂತಿಯಾಯಿತು. ಅವಳ… Read more…

  • ಆಪ್ತಮಿತ್ರ

    ಧಾರಾಕಾರವಾಗಿ ಮಳೆ ಸುರಿಯುತ್ತಿತ್ತು. ದೊಡ್ಡದೊಡ್ಡ ಮರಗಳು ಭೋರ್ ಎಂದು ಬೀಸುವ ಗಾಳಿಯಲ್ಲಿ ತೂಗಾಡುತ್ತಿದ್ದವು. ಇಂಗ್ಲೆಂಡಿನ ಆ ಚಳಿ ಮಳೆಯಲ್ಲಿ ಎರಡು ಆಪ್ತಮಿತ್ರ ಜೀವಗಳು ಒಂದನ್ನು ಅನುಸರಿಸಿ ಇನ್ನೊಂದು… Read more…

  • ಜಡ

    ಮಾರಯ್ಯನನ್ನು ಅವನ ಹಳ್ಳಿಯಲ್ಲಿ ಹಲವರು ಹಲವು ಹೆಸರುಗಳಿಂದ ಕರೆಯುತ್ತಿದ್ದರು. ಹಾಗಾಗಿ ಅವನ ನಿಜವಾದ ಪೂರ್ತಿ ಹೆಸರು ಮಾರಯ್ಯನೆಂಬುವುದು ಸಮಯ ಬಂದಾಗ ಅವನಿಗೆ ಒತ್ತಿ ಹೇಳಬೇಕಾಗಿ ಬರುತ್ತಿತ್ತು. ಅಂತಹ… Read more…

  • ಮಿಂಚಿನ ದೀಪ

    ಸಂಜೆ ಮೊಗ್ಗೂಡೆದಿತ್ತು. ಆಕಾಶದ ತುಂಬೆಲ್ಲಾ ಬಣ್ಣದ ಬಾಟಲಿ ಉರುಳಿಸಿದ ಹಾಗೆ ಕೆಂಪು, ನೀಲಿ ಬಣ್ಣ ಚೆಲ್ಲಿ, ಚಳಿಗಾಲದ ಸಂಜೆಯ ಮಬ್ಬಿನ ತೆಳುಪರದೆಯ ‘ಓಡಿನಿ’ ಎಲ್ಲವನ್ನೂ ಸುತ್ತುವಂತೆ ಪಸರಿಸಿಕೊಂಡಿತ್ತು.… Read more…

  • ಅಮ್ಮ

    ‘ಅಮ್ಮನ್ಗೆ ಯಿಡೀ ರಾತ್ರೆಲ್ಲ ವಾಂತಿ ಭೇದಿ ವುಬ್ಸ ಆಯಾಸ... ಕುತ್ರೂಸಾ... ಬಾಳಾ ಯೆಚ್ಕುಡ್ಮೆಯಾಗಿ ರಾಮ್ಪಾರ್ದ ಡಾಕಿಟ್ರಾತ್ರ ತೋರ್ಸಿದ್ರು ಗುಣಾಗಿಲ್ಲ! ನೀ ಆದಷ್ಟು ಗಡಾನೇ ವೂರ್ಗೆ ಬಾಣ್ಣ...’ ಸೇಕ್ರಿ,… Read more…