Home / ಕವನ / ಕವಿತೆ / ಸಂತೆ

ಸಂತೆ

ಪರದೇಶಿ ಸಾಗಿಹಳು ಸಂತೆಗಾಡಿಯೊಳು
ಹರಹರಾ ಎಂದೆನುತ ಶಿರಬಾಗಿಸಿದಳು

ಸಂತೆ ಮಾಡಿದ ಯಾವ ಲಕ್ಷಣಗಳಿಲ್ಲ
ಚಿಂತೆ ಮಾಡುತ ಜನರ ಮಧ್ಯೆ ಕುಳಿತಿಹಳು

ತಕ್ಕಡಿ ಸೇರಿಲ್ಲ ಹೊಗೆಪುಡಿಯು ಇಲ್ಲ
ಪಕ್ಕದೊಳು ಕಾಳಿನ ಚೀಲಗಳು ಇಲ್ಲ

ಎಣ್ಣೆ ಡಬ್ಬಗಳಿಲ್ಲ ಗೆಡ್ಡೆ ಗೆಣಸುಗಳಿಲ್ಲ
ಎಲೆಪಿಂಡಿ ಬೆಳ್ಳುಳ್ಳಿ ಈರುಳ್ಳಿ ಇಲ್ಲ

ಸಂಬಾರ ದಿನಸುಗಳ ಕೊಂಡು ತಿಂದಿಲ್ಲ
ಹೊಂಬಾಳೆ ಸಿಗಿಸಿಲ್ಲ ಎಲೆಯಡಕೆ ಇಲ್ಲ

ಬುತ್ತಿ ತಂದವಳಲ್ಲ ಕಡಲೆ ಬುರುಗಿಲ್ಲ
ರಸ್ತಾಳೆ ಕಬ್ಬನು ಕೊಂಡುತಂದಿಲ್ಲ

ರಟ್ಟೆ ಕಡಗಗಳಿಲ್ಲ ತಾಳಿಸರವಿಲ್ಲ
ಪಟ್ಟಿ ನಡುವಿನೊಳಿಲ್ಲ ಓಲೆ ಮೂಗುತಿಯಿಲ್ಲ

ಸಂತೆಗೈದಿಹರೆಲ್ಲ ನೋಡಿ ನಗುತಿಹರು
ಕೊಂತೆಮ್ಮನಿವಳಾರು ನುಡಿಯದಿಹಳೆನುತ

ಯಾರವ್ವ ಯಾವೂರು ಎಲ್ಲಿಗೆಂದೆನುತ
ತಾರವ್ವ ಅಡಕೆಲೆಯ ತತ್ತಿಯೆಂದೆನುತ

ಮಾರಟವೇನವ್ವ ಸಂತೇಲಿ ನಿನದು
ತೌರೂರು ಯಾವೂರು ಸುಣ್ಣ ತಾರೆನುತ

ನಿಮ್ಮೂರ ಕೆರೆಯೊಳಗೆ ನೀರುಂಟೆ ಎನುತ
ಸುಮ್ಮನೆ ಕುಂತವ್ಳೆ ಯಾಕಮ್ಮ ಎನುತ

ಮಕ್ಕಳೈದಾರೇನೆ ಯಜಮಾನನೆಲ್ಲೆ
ಯಕ್ಕ ನಿನ ಎಸ್ರೇನೆ ಮಾತಾಡೆ ಎನುತ

ಕನಿಕರದ ಮಾತುಗಳ ಕೇಳಿ ಪಯಣಿಗಳು
ಜನಕಜೆ ಕಾಣ್ರವ್ವ ಎಂದೊಮ್ಮೆ ನಕ್ಕಳು!
*****

Tagged:

Leave a Reply

Your email address will not be published. Required fields are marked *

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಹೊರ ಕೋಣೆಯಲ್ಲಿ ಕಾಲೂರಿ ಕೂತು ಬೀಡಿ ಕಟ್ಟುತ್ತಿದ್ದ ಸುಮಯ್ಯಾಗೆ ಕಣ್ಣು ಮತ್ತು ಕಿವಿಯ ಸುತ್ತಲೇ ಆಗಾಗ ಗುಂಯ್.. ಎನ್ನುತ್ತಾ ನೊಣವೊಂದು ಸರಿಸುಮಾರು ಹದಿನೈದು ನಿಮಿಷಗಳಿಂದ ಹಾರಾಡುತ್ತಾ ಕಿರಿಕಿರಿ ಮಾಡುತ್ತಿತ್ತು. ಹಿಡಿದು ಹೊಸಕಿ ಹಾಕಬೇಕೆಂದರೆ ಕೈಗೆ ಸಿಗದೆ ಮೈ ಪರಚಿಕೊಳ್ಳಬೇಕೆನ್ನ...

ಮೂಲ: ಗಾಯ್ ಡಿ ಮೊಪಾಸಾ ಗಗನಚುಂಬಿತವಾದ ಬೀಚ್‌ ವೃಕ್ಷಗಳೊಳಗಿಂದ ತಪ್ಪಿಸಿಕೊಂಡು ಸೂರ್ಯ ಕಿರಣಗಳು ಹೊಲಗಳ ಮೇಲೆ ಬೆಳಕನ್ನು ಕೆಡುವುವುದು ಬಲು ಅಪರೂಪ. ಬೆಳೆದ ಹುಲ್ಲನ್ನು ಕೊಯ್ದುದರಿಂದಲೂ, ದನಗಳೂ ಕಚ್ಚಿ ಕಚ್ಚಿ ತಿಂದುದರಿಂದಲೂ ನೆಲವು ಅಲ್ಲಲ್ಲಿ ತಗ್ಗು ದಿನ್ನೆಯಾಗಿ ಒಡೆದು ಕಾಣುತ್ತಿ...

ಒಂದೊಂದೆ ನೀರ ಹನಿಗಳು ಮುಳಿಹುಲ್ಲಿನ ಮಾಡಿನಿಂದ ಜಿನುಗಿ ತೊಟ್ಟಿಕ್ಕಿ ಆತ ಹೊದ್ದ ಕಂಬಳಿಯ ನೆನೆಸಿ ಒಳನುಸುಳಿ ಆತನ ಕುಂಡೆಯ ಭಾಗವೆಲ್ಲಾ ಒದ್ದೆಯಾದ ಕಾರಣವೋ ಹೊತ್ತಿಗೆ ಮುಂಚೆ ಎಂದೂ ಏಳದ ಹೊಲಿಯಪ್ಪ ಅಂದು ದಡಬಡಿಸಿ ಎದ್ದ. ಆತ ಮಲಗಿದ ಕಡೆಯಲ್ಲಿ ನೆಲವೆಲ್ಲಾ ಅದಾಗಲೇ ಹಸಿಯಾಗಿತ್ತಲ್ಲ. ಹ...

ಅದು ರಾಷ್ಟೀಯ ಹೆದ್ದಾರಿ ಎನ್.ಎಚ್.೧೭. ಎಡೆಬಿಡದ ವಾಹನಗಳ ಸಂಚಾರ. ಮಧ್ಯೆ ಮಧ್ಯೆ ಅಪಾಯಕಾರಿ ತಿರುವುಗಳು. ಹೊಸಬರಿಗೆ ಅಪರಿಚಿತರಿಗೆ ಮುಂದೆ ತಿರುವು ಇದೆ ಎಂದು ತಿಳಿಯಲಾಗದ, ಅವಘಡವೇನಾದರೂ ಸಂಭವಿಸಿದರೆ ನೇರವಾಗಿ ಪ್ರಪಾತದ ಪಾಲಾಗುವ ಭಯವನ್ನು ಹೊಂದಿದ ಭೀಕರ ತಿರುವುಗಳನ್ನು ಹೊಂದಿದ ವಕ...