ಅಮ್ಮಾ ನಿನ್ನ ಪುಣ್ಯಚರಣದ ಸಣ್ಣ ಧೂಳಿಯು ನಾನು

ಅಮ್ಮಾ ನಿನ್ನ ಪುಣ್ಯಚರಣದ ಸಣ್ಣ ಧೂಳಿಯು ನಾನು
ಅಮ್ಮಾ ನಿನ್ನ ಕಣ್ಣ ಕಾಂತಿಯ ಸಣ್ಣ ಕಿರಣವು ನಾನು

ಎಂಥ ಹೆಮ್ಮೆಯೆ ಅಮ್ಮ ನಿನ್ನ ಕಂದ ನಾನಾಗಿರುವುದು
ಸಾಟಿ ಇಲ್ಲದ ಭುವನಮಾತೆ ನನ್ನ ತಾಯಾಗಿರುವುದು

ಇತಿಹಾಸಕೇ ನಿಲುಕದ ಕಾಲಕೂ ನೀ ಪೂರ್ವಳು
ಉಪನಿಷತ್ತಿನ ಮಂತ್ರಗಾಥೆ ನಿನ್ನ ಪ್ರಥರ್ಮೊದ್ಗಾರವು
ಸೀತೆ ಎನ್ನುವ ತಾಳ್ಮೆಗೆ
ದ್ರೌಪದೀ ಸತಿ ಮೇಲ್ಮೆಗೆ
ನಿನ್ನ ಭಾವವೆ ಮೂಲ ಇಲ್ಲಿಯ ನಾರಿಯರ ಘನಕಾಣ್ಕೆಗೆ

ನಿನ್ನ ಜ್ಞಾನದ ಅಲೆಯು ಚಲಿಸಿ ವ್ಯಾಸ ಪಾಣಿನಿ ಬಂದರು
ಬುದ್ಧ ಗಾಂಧಿ ಕರುಣ ಭಾವದ ಸುಧೆಯ ಮೊಗೆದು ತಂದರು
ಕ್ಷಾತ್ರಭಾವಕೆ ಪಾರ್ಥನು
ತ್ಯಾಗಕೆ ಜೀಮೂತನು
ನಿನ್ನ ಪ್ರತಿಗುಣ ಗಣಿಗೆ ಕೋಟಿ ಹೊನ್ನಕಿಡಿಗಳ ಚಲನವು.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ದುಂಡಿರಾಜ
Next post ಸಂತೆ

ಸಣ್ಣ ಕತೆ

  • ಬಸವನ ನಾಡಿನಲಿ

    ೧೯೯೧ರಲ್ಲಿ ನಾ ವಿಭಾಗೀಯ ಸಾರಿಗೆ ಅಧಿಕಾರಿ ಎಂದು ಬಡ್ತಿ ಹೊಂದಿದೆ! ಇಷ್ಟಕ್ಕೆ ಕೆಲವರು ಹೊಟ್ಟೆ ಉರಿ ಬಿದ್ದರು. ಪ್ರಾಮಾಣಿಕರು, ಶೋಷಿತರು, ವಂಚಿತರು, ಪಾಪದವರು, ಮುಂದೆ ಬರಲಿ ಎಂಬ… Read more…

  • ಅವನ ಹೆಸರಲ್ಲಿ

    ಎಂದಿನಂತೆ ಬೆಳಿಗ್ಗೆ ಮಾಮೂಲಿ ಸಮಯಕ್ಕೆ ಎಚ್ಚರವಾದರೂ, ಎಂದಿನ ಉಲ್ಲಾಸ ನನ್ನಲ್ಲಿರಲಿಲ್ಲ. ತಿರುಗುತ್ತಿರುವ ಫ್ಯಾನಿನತ್ತ ದೃಷ್ಟಿ ಇಟ್ಟು ಮಲಗಿಕೊಂಡೇ ಆಲೋಚನೆ ಮಾಡುತ್ತಿದ್ದೆ. ನಿನ್ನೆ ತಾನೇ ಸರಕಾರಿ ಕೆಲಸದಿಂದ ನಿವೃತ್ತಿಯಾಗಿ… Read more…

  • ಹನುಮಂತನ ಕಥೆ

    ಹರಿಹರಯದ ಆ ಸಂದರ ಹುಡುಗಿ ದಿನವೂ ಅರಳೀ ಕಟ್ಟೆಗೆ ಬಂದು ಯಾರಿಗಾಗಿ ಕಾಯುತ್ತಾಳೆ? ಎಂದು ಯೋಚಿಸುವಾಗ ಅವಳ ಪ್ರಿಯತಮ ಬಂದು ಕುಳಿತ. ಅವನು ಅವಳ ತೊಡೆ ಏರಿದ… Read more…

  • ಕರಾಚಿ ಕಾರಣೋರು

    ಮಳೆಗಾಲ ಆರಂಭವಾಯಿತೆಂದರೆ ಕುಂಞಿಕಣ್ಣ ಕುರುಪ್ಪನ ಏಣೆಲು ಗದ್ದೆಗೆ ನೇಜಿ ಕೆಲಸಕ್ಕೆ ಹೋಗಲು ಕಪಿಲಳ್ಳಿಯ ಹೆಂಗಸರು, ಗಂಡಸರು ತುದಿಗಾಲಲ್ಲಿ ಕಾಯುತ್ತಿರುತ್ತಾರೆ. ವರ್ಷವಿಡೀ ವಿಪ್ರರ ಮತ್ತು ವಿಪ್ರಾತಿವಿಪ್ರರ ಆಡಿಕೆ ತೋಟಗಳಲ್ಲಿ… Read more…

  • ಹೃದಯದ ತೀರ್ಪು

    ಬೆಳಿಗ್ಗೆ ಏಳು ಗಂಟೆಯ ಹೊತ್ತಿಗೆ ತಿಂಡಿ ಕೂಡ ಮಾಡದೆ ಹೊರ ಹೋಗುತ್ತಿದ್ದ ಯೂಸುಫ್, ಮಧ್ಯಾಹ್ನ ಮಾತ್ರ ಮನೆಯಲ್ಲಿ ಉಣ್ಣುತ್ತಿದ್ದ. ರಾತ್ರಿಯ ಊಟ ಅವನ ತಾಯಿಯ ಮನೆಯಲ್ಲಿ. ತಾಯಿಯ… Read more…

cheap jordans|wholesale air max|wholesale jordans|wholesale jewelry|wholesale jerseys