ನಚ್ಚಿನ ಸೋದರಿ

ನಚ್ಚಿನಾ ಸೋದರಿಯೆ ಕಡುಜಾಣೆ ನೀನಮ್ಮ
ಸ್ವಚ್ಛವಾಗಿದೆ ಮನವು ಮುದವಾಯಿತಮ್ಮ
ಅಚ್ಯುತಾನಂತದೊಳು ಎನಿಬರೆನಿಬರು ಉಂಟೊ?
ಸಚ್ಚರಿತ ಮಾನವರು ಶೀಲ ಸುಗುಣಾನ್ವಿತರು

ನಿನ್ನ ನುಡಿ ಹಿತವಿಹುದು ನಿನ್ನ ನಡೆ ಸೊಗವಿಹುದು
ನಿನ್ನ ಶ್ರಾವ್ಯದ ಗಾನ ಮಧುರವಾಗಿಹುದು
ಬಿನ್ನಾಣ ಬೆಡಗಿಲ್ಲ ಸಿಡುಕು ದುಡುಕುಗಳಿಲ್ಲ
ಸನ್ನುತಾಂಗಿಯೆ ರಸಿಕೆ ಸರಳ ಮಾನಸಳಮ್ಮ

ಸಕಲ ಕಲೆಗಳ ಒಳಗೆ ಅಕಳಂಕ ತುಂಬಿಹನು
ವಿಕಟ ಮಾನಸರಿದನು ತಿಳಿಯದಿಹರು
ಪ್ರಕೃತಿ ದೇವಿಯ ನೋಡೆ ನೃತ್ಯಗೈದಿಹಳಿಲ್ಲಿ
ಸುಖವಲ್ಲದೇ ಉಂಟೆ ದುಃಖವೀ ಜೀವನಿಗೆ

ಸಿರಿ ನಮಗೆ ಸ್ಥಿರವಲ್ಲ ಕಲ್ಪನೆಯ ಕೈಮರವು
ಕೊರತೆ ನಮಗೊಂದಿಲ್ಲ ತಿಳಿದಿಲ್ಲಿ ನೋಡೆ
ಹರಿಯ ಕೀರ್ತನೆ ಮಾಡಿ ವಿಜಯ ಧ್ವಜವನು ಹೂಡಿ
ಪರಮ ಸಂತೋಷದೊಳು ನಲಿವುದೇ ಸುಖವಮ್ಮ

ಯಾತ್ರಿಕರು ನಾವೆಲ್ಲಾ ನಿಯಮದಿಂ ಬಂದಿಹೆವು
ಕ್ಷೇತ್ರವೆಮಗೀ ಧರೆಯು ಕೇಳಮ್ಮ ತಂಗಿ
ಸತ್ಯಶೋಧನೆ ಇಲ್ಲೆ, ನಾಕನರಕಗಳಿಲ್ಲೆ
ನಿತ್ಯ ನಿರ್ಮಲಸ್ವಾಮಿ ಪ್ರತ್ಯಕ್ಷವಹುದಿಲ್ಲೆ

ನಾನು ನೀನೆಂದೆಂಬೊ ದ್ವೈತ ಭಾವಗಳಿಲ್ಲೆ
ಜ್ಞಾನಿ ತಾನರಿತಿರುವ ಅದ್ವೈತವಿಲ್ಲೆ
ಧ್ಯಾನಸಾಧನೆ ಇಲ್ಲೆ, ಫಲವನುಂಬುವುದಿಲ್ಲೆ
ಜನಕಜೆಯು ಅನುಭವಿಪ ಆನಂದವಿಹುದಿಲ್ಲೆ
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಅದೇ ಕವಿತೆ
Next post ಸರಳ ಜೀವನ

ಸಣ್ಣ ಕತೆ

  • ಕೆಂಪು ಲುಂಗಿ

    ಬೇಸಿಗೆಯ ರಜೆ ಬಂತೆಂದರೆ ಅಮ್ಮಂದಿರ ಗೋಳು ಬೇಡ; ಮಕ್ಕಳೆಲ್ಲಾ ಮನೆಯಲ್ಲೇ... ಟೀವಿಯ ಎದುರಿಗೆ ಇಲ್ಲವಾದರೆ ಅಂಗಳದ ಸೀಬೆಮರ ಮತ್ತು ಎತ್ತರವಾದ ಕಾಂಪೌಂಡಿನ ಗೋಡೆಗಳ ಮೇಲೆ.... ಯಾರಾದರೂ ಬಿದ್ದರೆ,… Read more…

  • ಮೈಥಿಲೀ

    "ಹಾಗಿದ್ದರೆ, ಪಾಪವೆಂದರೇನು ಗುರುಗಳೇ?" ಕಣ್ಣು ಮುಚ್ಚಿ ಧ್ಯಾನಾಸಕ್ತರಾದ ಯೋಗೀಶ್ವರ ವಿದ್ಯಾರಣ್ಯರು ಕಣ್ತೆರೆಯಲಿಲ್ಲ. ಅಪ್ಪನ ಪ್ರಶ್ನೆಗೆ ಉತ್ತರ ಕೊಡಲಿಲ್ಲ. ತೇಜಪುಂಜವಾದ ಗಂಭೀರವಾದ ಮುಖದ ಮೇಲೊಂದು ಮುಗುಳುನಗೆ ಸುಳಿಯಿತು ಅಷ್ಟೇ!… Read more…

  • ಆನುಗೋಲು

    ರೈಲು ನಿಲ್ದಾಣದಲ್ಲಿ ನಿಂತಿತು! "ಪೇಪರ! ಡೇಲಿ ಪೇಪರ!........ಟಾಯಿಮ್ಸ, ಫ್ರೀ ಪ್ರೆಸ್, ಸಕಾಳ! ಪ್ಲಾಟ ಫಾರ್ಮ ಮೇಲಿನ ಜನರ ನೂರೆಂಟು ಗದ್ದಲದಲ್ಲಿ ಈ ಧ್ವನಿಯು ಎದ್ದು ಕೇಳಿಸುತ್ತಿತ್ತು. ಹೋಗುವವರ… Read more…

  • ಅಹಮ್ ಬ್ರಹ್ಮಾಸ್ಮಿ

    ಬಹುಶಃ ಮೊದಲ ಬಾರಿ ನಾನು ಅವನನ್ನು ನೋಡುತ್ತಿರಬೇಕು. ಅವನು ಅಕಸ್ಮತ್ತಾಗಿ ನನ್ನ ಕಣ್ಣಿಗೆ ಬಿದ್ದನೋ, ಅಲ್ಲಾ ಅವನೇ ನಾನು ಕಾಣುವ ಹಾಗೆ ಎದುರಿಗೆ ಬಂದನೋ ಎಂಬ ವಿಷಯದಲ್ಲಿ… Read more…

  • ಗೋಪಿ

    ವೆಂಕಪ್ಪನ ಜೊತೆಗೆ ಒಂದು ಆಕಳು ಇದ್ದೇ ಇದೆ. ಅವನ ಮನೆಯ ಮುಂದೆ ಯಾವಾಗಲೂ ಅದು ಜೋಲುಮೋರೆ ಹಾಕಿಕೊಂಡು ನಿಂತೇ ನಿಂತಿರುತ್ತದೆ. ದಾರಿಯಲ್ಲಿ ಹೋಗುತ್ತಿದ್ದವರನ್ನು ಮಿಕಿ ಮಿಕಿ ಕಣ್ಣು… Read more…