ಅದೇ ಕವಿತೆ

ಅದೇ ಕವಿತೆ
ಹರಿತ ಕತ್ತಿಯಂತೆ
ಸ್ವಾತಿ ಮುತ್ತಿನಂತೆ
ಚಿತ್ತಿ ಮಳೆಯಂತೆ
ಕರಾವಳಿ ಲಗ್ನದಂತೆ
ಬದಲಾಗದ ವ್ಯವಸ್ಥೆಯಂತೆ.
*

ಅದೇ ಕವಿತೆ,
ಅದೇ ಕಪ್ಪಿಟ್ಟ ಮುಖ
ಬಡಿದಾಡೋ ಕೈ ಕಾಲು,
ಉರಿಯುತ್ತಿರುವ ಕಣ್ಣುಗಳು
ಮುಳುಗಡೆಯಾಗಿರುವ ಊರು ಕೇರಿಗಳು
ಈ ಪ್ರಗತಿ ವಾಕರಿಕೆ ಭರಿಸಿದೆ.
*

ಅದೇ… ಜನ.. ದನ..
ಮನ.. ದವನ!
ದಾವನೆಲ!
ಕೋಮುಗಲಭೆ ಓಣಿ ಓಣಿಗೆ-
ಬರೀ ಕಾಗದದ ಗದ್ದೆ
ಮಾತೂ ಮಾರೂದ್ದ
ಉದ್ಧಾರ ತೂತು ಬಿದ್ದ ಗಡಿಗೆ!
*

ಅದೇ ಬಿಟ್ರಿಷರ ಕಾರುಬಾರು
ಹೊಸ ಸೀಸೆಯಲ್ಲಿ, ಹಳೇ ಮದ್ಯದಂತೆ
ಹಳೆ ಗಾಯಕ್ಕೆ ಹೊಸ ಬರೆ
ಹೆಸರು ಬೇರೆ ಬೇರೆ!
ಅದೇ ಕಳೆ ಕಿತ್ತಷ್ಟು, ಸಿಬಿರಿನಷ್ಟು…
ಹಗಲು ಗಂಡರ ವೇದಾಂತ
ರಾತ್ರಿ ಮಿಂಡರ ರಾದ್ಧಾಂತ
ಮಳೆ ಬೆಳೆ ಪುಢಾರಿಯಂತೆ.
*

ಅದೇ ಹಗಲು ರಾತ್ರಿ,
ಬೆದೆ ಬಿದ್ದ ಗೌಡ
ಜೀತಕ್ಕಿರುವ ಹೈದ
ಸೂತಕದಿ ಬಿಚ್ಚದ ಕದಗಳು
ಕೊತ ಕೊತ ಕುದಿವ ಕೊಳೆಗೇರಿಗಳು
ವರಸೆ ಬದಲಿಸಿದ ಮಿಂಡರೀಗ
ಜಾಗತೀಕರಣ, ಖಾಸಗೀಕರಣ
ಉದಾರೀಕರಣದ ತಲೆ ಹಿಡುಕರು!
ಏಡ್ಸ್ ಮಾರಿಗೆ ಶಾಮೀಯಾನವಾದವರು!
ಪ್ರತಿಭೆ, ಮೆರಿಟ್‌ಗೆ, ಏಣಿ ಹಾಕಿ-
ಮೀಸಲಾತಿಗೆ ‘ಕೋ’ ಕೊಟ್ಟ ಬ್ರಹ್ಮಾಚಾರಿಗಳು!
*

ಇನ್ನೂ ಬರಲಿಲ್ಲ ಕಪ್ಪು ಸೂರ್‍ಯ…
ಅರಳಲಿಲ್ಲ ಕಪ್ಪು ಗುಲಾಬೀ…
ಅದೇ ಕವಿತೆ, ಹಣತೆಯಂತೇ…
ಬದಲಾಗದ ಜನತೆಯಂತೇ…
ಮೇವು ತಿಂದು ‘ನಮಲುಗರಿವಾ’… ದನಗಳಂತೇ…
ಅಂದು: ಈಸ್ಟ್ ಇಂಡಿಯಾ ಕಂಪನಿ!
ಇಂದು: ಖಾಸಗಿ ಕಂಪನಿಗಳು!
ಈ ದೇಶದ ಕೀಲಿಕೈ… ಹೊರಗಿನವರೇ…
ಕಾದು ನೋಡಿ…
ಆಳಿಸಿಕೊಳ್ಳಲು ಲಾಯಕ್ಕು!
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಚಂದ್ರನ ಚಾಳಿ
Next post ನಚ್ಚಿನ ಸೋದರಿ

ಸಣ್ಣ ಕತೆ

  • ಏಕಾಂತದ ಆಲಾಪ

    ಅಂದು ದಸರೆಯ ಮುನ್ನಾದಿನ ಮಕ್ಕಳಿಗೆಲ್ಲಾ ಶಾಲಾ ರಜೆ ದಿವಸಗಳು. ಅವಳು ಕಾತ್ಯಾಯನಿ, ಒಂದು ತಿಂಗಳಿಂದ ಆ ಪಟ್ಟಣದ ಪ್ರಸಿದ್ಧ ನೇತ್ರಾಲಯಕ್ಕೆ ಅಲೆಯುತ್ತಿದ್ದಾಳೆ. ಎರಡೂ ಕಣ್ಣುಗಳು ಪೊರೆಯಿಂದ ಮುಂದಾಗಿವೆ.… Read more…

  • ಎದಗೆ ಬಿದ್ದ ಕತೆ

    ೧೯೯೫. ನಾನಾಗ ಹುಬ್ಬಳ್ಳಿಯ ಕೇಂದ್ರೀಯ ಬಸ್ ನಿಲ್ದಾಣದಲ್ಲಿ ವಿಭಾಗೀಯ ಸಾರಿಗೆ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದೆ. ಇಲ್ಲಿ ೧೯೯೭ರ ವರೆಗೆ ನರಕ ಅನುಭವಿಸಿದೆ. ಪಾಪದ ಕೂಪವಿದು ಸ್ವರ್ಗ ನರಕ… Read more…

  • ದೇವರು ಮತ್ತು ಅಪಘಾತ

    ಊರಿನ ಕೊನೆಯಂಚಿನಲ್ಲಿದ್ದ ಕೆರೆಯಂಗಳದಲ್ಲಿ ಅಣಬೆಗಳಂತೆ ಮೈವೆತ್ತಿದ್ದ ಗುಡಿಸಲುಗಳಲ್ಲಿ ಕೊನೆಯದು ಅವಳದಾಗಿತ್ತು. ನಾಲ್ಕೈದು ಸಾರಿ ಮುನಿಸಿಪಾಲಿಟಿಯವರು ಆ ಗುಡಿಸಲುಗಳನ್ನು ಕಿತ್ತು ಹಾಕಿದ್ದರೂ ಮನುಷ್ಯ ಪ್ರಾಣಿಗಳ ಸೂರಿನ ಅದಮ್ಯ ಅವಶ್ಯಕ… Read more…

  • ಧರ್ಮಸಂಸ್ಥಾಪನಾರ್ಥಾಯ

    ಕಪಿಲಳ್ಳಿಯ ಏಕೈಕ ಸಂರಕ್ಷಕ ಕಪಿಲೇಶ್ವರನ ವಾರ್ಷಿಕ ರಥೋತ್ಸವದ ಮುನ್ನಾದಿನ ಧಾರ್ಮಿಕ ಪ್ರವಚನವೊಂದನ್ನು ಏರ್ಪಡಿಸಲೇಬೇಕೆಂದೂ, ಇಲ್ಲದಿದ್ದರೆ ಜಾತ್ರಾ ಮಹೋತ್ಸವಕ್ಕೆ ತನ್ನ ಸಪೋರ್ಟು ಮತ್ತು ಕೋ-ಆಪರೇಶನ್ನು ಬಿಲ್ಲು ಕುಲ್ಲು ಸಿಗಲಾರದೆಂದೂ,… Read more…

  • ಶಾಕಿಂಗ್ ಪ್ರೇಮ ಪ್ರಕರಣ

    ಅವನು ಅವಳನ್ನು ದಿನವೂ ತಪ್ಪದೇ ನೋಡುತ್ತಿದ್ದ. ಅವಳು ಕಾಲೇಜಿಗೆ ಹೋಗುವ ಹೊತ್ತಿಗೆ ಅವಳನ್ನು ಹಿಂಬಾಲಿಸುತ್ತಿದ್ದ. ಕಾಲೇಜು ಬಿಡುವ ಹೊತ್ತಿಗೆ ಗೇಟಿನ ಎದುರು ಕಾದು ನಿಂತು ಮತ್ತೆ ಹಿಂಬಾಲಿಸುತ್ತಿದ್ದ.… Read more…