Home / ಕವನ / ಕವಿತೆ / ಅದೇ ಕವಿತೆ

ಅದೇ ಕವಿತೆ

ಅದೇ ಕವಿತೆ
ಹರಿತ ಕತ್ತಿಯಂತೆ
ಸ್ವಾತಿ ಮುತ್ತಿನಂತೆ
ಚಿತ್ತಿ ಮಳೆಯಂತೆ
ಕರಾವಳಿ ಲಗ್ನದಂತೆ
ಬದಲಾಗದ ವ್ಯವಸ್ಥೆಯಂತೆ.
*

ಅದೇ ಕವಿತೆ,
ಅದೇ ಕಪ್ಪಿಟ್ಟ ಮುಖ
ಬಡಿದಾಡೋ ಕೈ ಕಾಲು,
ಉರಿಯುತ್ತಿರುವ ಕಣ್ಣುಗಳು
ಮುಳುಗಡೆಯಾಗಿರುವ ಊರು ಕೇರಿಗಳು
ಈ ಪ್ರಗತಿ ವಾಕರಿಕೆ ಭರಿಸಿದೆ.
*

ಅದೇ… ಜನ.. ದನ..
ಮನ.. ದವನ!
ದಾವನೆಲ!
ಕೋಮುಗಲಭೆ ಓಣಿ ಓಣಿಗೆ-
ಬರೀ ಕಾಗದದ ಗದ್ದೆ
ಮಾತೂ ಮಾರೂದ್ದ
ಉದ್ಧಾರ ತೂತು ಬಿದ್ದ ಗಡಿಗೆ!
*

ಅದೇ ಬಿಟ್ರಿಷರ ಕಾರುಬಾರು
ಹೊಸ ಸೀಸೆಯಲ್ಲಿ, ಹಳೇ ಮದ್ಯದಂತೆ
ಹಳೆ ಗಾಯಕ್ಕೆ ಹೊಸ ಬರೆ
ಹೆಸರು ಬೇರೆ ಬೇರೆ!
ಅದೇ ಕಳೆ ಕಿತ್ತಷ್ಟು, ಸಿಬಿರಿನಷ್ಟು…
ಹಗಲು ಗಂಡರ ವೇದಾಂತ
ರಾತ್ರಿ ಮಿಂಡರ ರಾದ್ಧಾಂತ
ಮಳೆ ಬೆಳೆ ಪುಢಾರಿಯಂತೆ.
*

ಅದೇ ಹಗಲು ರಾತ್ರಿ,
ಬೆದೆ ಬಿದ್ದ ಗೌಡ
ಜೀತಕ್ಕಿರುವ ಹೈದ
ಸೂತಕದಿ ಬಿಚ್ಚದ ಕದಗಳು
ಕೊತ ಕೊತ ಕುದಿವ ಕೊಳೆಗೇರಿಗಳು
ವರಸೆ ಬದಲಿಸಿದ ಮಿಂಡರೀಗ
ಜಾಗತೀಕರಣ, ಖಾಸಗೀಕರಣ
ಉದಾರೀಕರಣದ ತಲೆ ಹಿಡುಕರು!
ಏಡ್ಸ್ ಮಾರಿಗೆ ಶಾಮೀಯಾನವಾದವರು!
ಪ್ರತಿಭೆ, ಮೆರಿಟ್‌ಗೆ, ಏಣಿ ಹಾಕಿ-
ಮೀಸಲಾತಿಗೆ ‘ಕೋ’ ಕೊಟ್ಟ ಬ್ರಹ್ಮಾಚಾರಿಗಳು!
*

ಇನ್ನೂ ಬರಲಿಲ್ಲ ಕಪ್ಪು ಸೂರ್‍ಯ…
ಅರಳಲಿಲ್ಲ ಕಪ್ಪು ಗುಲಾಬೀ…
ಅದೇ ಕವಿತೆ, ಹಣತೆಯಂತೇ…
ಬದಲಾಗದ ಜನತೆಯಂತೇ…
ಮೇವು ತಿಂದು ‘ನಮಲುಗರಿವಾ’… ದನಗಳಂತೇ…
ಅಂದು: ಈಸ್ಟ್ ಇಂಡಿಯಾ ಕಂಪನಿ!
ಇಂದು: ಖಾಸಗಿ ಕಂಪನಿಗಳು!
ಈ ದೇಶದ ಕೀಲಿಕೈ… ಹೊರಗಿನವರೇ…
ಕಾದು ನೋಡಿ…
ಆಳಿಸಿಕೊಳ್ಳಲು ಲಾಯಕ್ಕು!
*****

Tagged:

Leave a Reply

Your email address will not be published. Required fields are marked *

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಹೊರ ಕೋಣೆಯಲ್ಲಿ ಕಾಲೂರಿ ಕೂತು ಬೀಡಿ ಕಟ್ಟುತ್ತಿದ್ದ ಸುಮಯ್ಯಾಗೆ ಕಣ್ಣು ಮತ್ತು ಕಿವಿಯ ಸುತ್ತಲೇ ಆಗಾಗ ಗುಂಯ್.. ಎನ್ನುತ್ತಾ ನೊಣವೊಂದು ಸರಿಸುಮಾರು ಹದಿನೈದು ನಿಮಿಷಗಳಿಂದ ಹಾರಾಡುತ್ತಾ ಕಿರಿಕಿರಿ ಮಾಡುತ್ತಿತ್ತು. ಹಿಡಿದು ಹೊಸಕಿ ಹಾಕಬೇಕೆಂದರೆ ಕೈಗೆ ಸಿಗದೆ ಮೈ ಪರಚಿಕೊಳ್ಳಬೇಕೆನ್ನ...

ಮೂಲ: ಗಾಯ್ ಡಿ ಮೊಪಾಸಾ ಗಗನಚುಂಬಿತವಾದ ಬೀಚ್‌ ವೃಕ್ಷಗಳೊಳಗಿಂದ ತಪ್ಪಿಸಿಕೊಂಡು ಸೂರ್ಯ ಕಿರಣಗಳು ಹೊಲಗಳ ಮೇಲೆ ಬೆಳಕನ್ನು ಕೆಡುವುವುದು ಬಲು ಅಪರೂಪ. ಬೆಳೆದ ಹುಲ್ಲನ್ನು ಕೊಯ್ದುದರಿಂದಲೂ, ದನಗಳೂ ಕಚ್ಚಿ ಕಚ್ಚಿ ತಿಂದುದರಿಂದಲೂ ನೆಲವು ಅಲ್ಲಲ್ಲಿ ತಗ್ಗು ದಿನ್ನೆಯಾಗಿ ಒಡೆದು ಕಾಣುತ್ತಿ...

ಒಂದೊಂದೆ ನೀರ ಹನಿಗಳು ಮುಳಿಹುಲ್ಲಿನ ಮಾಡಿನಿಂದ ಜಿನುಗಿ ತೊಟ್ಟಿಕ್ಕಿ ಆತ ಹೊದ್ದ ಕಂಬಳಿಯ ನೆನೆಸಿ ಒಳನುಸುಳಿ ಆತನ ಕುಂಡೆಯ ಭಾಗವೆಲ್ಲಾ ಒದ್ದೆಯಾದ ಕಾರಣವೋ ಹೊತ್ತಿಗೆ ಮುಂಚೆ ಎಂದೂ ಏಳದ ಹೊಲಿಯಪ್ಪ ಅಂದು ದಡಬಡಿಸಿ ಎದ್ದ. ಆತ ಮಲಗಿದ ಕಡೆಯಲ್ಲಿ ನೆಲವೆಲ್ಲಾ ಅದಾಗಲೇ ಹಸಿಯಾಗಿತ್ತಲ್ಲ. ಹ...

ಅದು ರಾಷ್ಟೀಯ ಹೆದ್ದಾರಿ ಎನ್.ಎಚ್.೧೭. ಎಡೆಬಿಡದ ವಾಹನಗಳ ಸಂಚಾರ. ಮಧ್ಯೆ ಮಧ್ಯೆ ಅಪಾಯಕಾರಿ ತಿರುವುಗಳು. ಹೊಸಬರಿಗೆ ಅಪರಿಚಿತರಿಗೆ ಮುಂದೆ ತಿರುವು ಇದೆ ಎಂದು ತಿಳಿಯಲಾಗದ, ಅವಘಡವೇನಾದರೂ ಸಂಭವಿಸಿದರೆ ನೇರವಾಗಿ ಪ್ರಪಾತದ ಪಾಲಾಗುವ ಭಯವನ್ನು ಹೊಂದಿದ ಭೀಕರ ತಿರುವುಗಳನ್ನು ಹೊಂದಿದ ವಕ...