Home / ಕವನ / ಕವಿತೆ / ಅದೇ ಕವಿತೆ

ಅದೇ ಕವಿತೆ

ಅದೇ ಕವಿತೆ
ಹರಿತ ಕತ್ತಿಯಂತೆ
ಸ್ವಾತಿ ಮುತ್ತಿನಂತೆ
ಚಿತ್ತಿ ಮಳೆಯಂತೆ
ಕರಾವಳಿ ಲಗ್ನದಂತೆ
ಬದಲಾಗದ ವ್ಯವಸ್ಥೆಯಂತೆ.
*

ಅದೇ ಕವಿತೆ,
ಅದೇ ಕಪ್ಪಿಟ್ಟ ಮುಖ
ಬಡಿದಾಡೋ ಕೈ ಕಾಲು,
ಉರಿಯುತ್ತಿರುವ ಕಣ್ಣುಗಳು
ಮುಳುಗಡೆಯಾಗಿರುವ ಊರು ಕೇರಿಗಳು
ಈ ಪ್ರಗತಿ ವಾಕರಿಕೆ ಭರಿಸಿದೆ.
*

ಅದೇ… ಜನ.. ದನ..
ಮನ.. ದವನ!
ದಾವನೆಲ!
ಕೋಮುಗಲಭೆ ಓಣಿ ಓಣಿಗೆ-
ಬರೀ ಕಾಗದದ ಗದ್ದೆ
ಮಾತೂ ಮಾರೂದ್ದ
ಉದ್ಧಾರ ತೂತು ಬಿದ್ದ ಗಡಿಗೆ!
*

ಅದೇ ಬಿಟ್ರಿಷರ ಕಾರುಬಾರು
ಹೊಸ ಸೀಸೆಯಲ್ಲಿ, ಹಳೇ ಮದ್ಯದಂತೆ
ಹಳೆ ಗಾಯಕ್ಕೆ ಹೊಸ ಬರೆ
ಹೆಸರು ಬೇರೆ ಬೇರೆ!
ಅದೇ ಕಳೆ ಕಿತ್ತಷ್ಟು, ಸಿಬಿರಿನಷ್ಟು…
ಹಗಲು ಗಂಡರ ವೇದಾಂತ
ರಾತ್ರಿ ಮಿಂಡರ ರಾದ್ಧಾಂತ
ಮಳೆ ಬೆಳೆ ಪುಢಾರಿಯಂತೆ.
*

ಅದೇ ಹಗಲು ರಾತ್ರಿ,
ಬೆದೆ ಬಿದ್ದ ಗೌಡ
ಜೀತಕ್ಕಿರುವ ಹೈದ
ಸೂತಕದಿ ಬಿಚ್ಚದ ಕದಗಳು
ಕೊತ ಕೊತ ಕುದಿವ ಕೊಳೆಗೇರಿಗಳು
ವರಸೆ ಬದಲಿಸಿದ ಮಿಂಡರೀಗ
ಜಾಗತೀಕರಣ, ಖಾಸಗೀಕರಣ
ಉದಾರೀಕರಣದ ತಲೆ ಹಿಡುಕರು!
ಏಡ್ಸ್ ಮಾರಿಗೆ ಶಾಮೀಯಾನವಾದವರು!
ಪ್ರತಿಭೆ, ಮೆರಿಟ್‌ಗೆ, ಏಣಿ ಹಾಕಿ-
ಮೀಸಲಾತಿಗೆ ‘ಕೋ’ ಕೊಟ್ಟ ಬ್ರಹ್ಮಾಚಾರಿಗಳು!
*

ಇನ್ನೂ ಬರಲಿಲ್ಲ ಕಪ್ಪು ಸೂರ್‍ಯ…
ಅರಳಲಿಲ್ಲ ಕಪ್ಪು ಗುಲಾಬೀ…
ಅದೇ ಕವಿತೆ, ಹಣತೆಯಂತೇ…
ಬದಲಾಗದ ಜನತೆಯಂತೇ…
ಮೇವು ತಿಂದು ‘ನಮಲುಗರಿವಾ’… ದನಗಳಂತೇ…
ಅಂದು: ಈಸ್ಟ್ ಇಂಡಿಯಾ ಕಂಪನಿ!
ಇಂದು: ಖಾಸಗಿ ಕಂಪನಿಗಳು!
ಈ ದೇಶದ ಕೀಲಿಕೈ… ಹೊರಗಿನವರೇ…
ಕಾದು ನೋಡಿ…
ಆಳಿಸಿಕೊಳ್ಳಲು ಲಾಯಕ್ಕು!
*****

Tagged:

Leave a Reply

Your email address will not be published. Required fields are marked *

ಮಳೆ ಜೋರಾಗಿ ಸುರಿಯುತ್ತಿತ್ತು. ಚಾವಣಿ ತೂತಾಗಿ ಸೋರುತ್ತಿದ್ದುದರಿಂದ ಸಾವಿತ್ರಿಗೆ ನಿದ್ದೆ ಇರಲಿಲ್ಲ. ಅವಳ ಉಗ್ಗವನದೂ ಅದೇ ಕತೆ. ಒಂದು ಮೂಲೆಯಲ್ಲಿ ಉಗ್ಗವನಿಗೆ ಒರಗಿಕೊಂಡು ಹಳೇ ಕಂಬಳಿ ಹೊದ್ದು ಸಾವಿತ್ರಿ ತೂಕಡಿಸುತ್ತಿದ್ದಳು. ಬಾಗಿಲ ಸಂದಿನಿಂದ ಆಗಾಗ ಚಳಕ್ಕನೆ ಕಾಣಿಸಿಕೊಳ್ಳುವ ಮಿ...

ದೀಪಾವಳಿಯ ಸೂಟಿಯನ್ನು ಕಳೆಯಲು ಊರಿಗೆ ಹೋಗಿದ್ದೆ. ಹಳ್ಳಿಗೆ ಹೋದಾಗೆಲ್ಲ ಕತೆಯ ಸುಬ್ಬಣ್ಣನ ಮನೆಗೆ ಹೋಗದಿದ್ದರೆ ನನ್ನ ಮನಸ್ಸು ಕೇಳುವದಿಲ್ಲ. ಊರಿಗೆ ಬಂದು ತನ್ನ ಮನೆಗೆ ಬರದಿದ್ದರೆ ಸುಬ್ಬಣ್ಣ ಬಿಡುತ್ತಾನೇ? ಅವನ ಆಮಂತ್ರಣ ಬರುವ ಮುಂಚೆಯೇ ಹೋಗುವದು ಉಚಿತವೆಂದು ತೋರಿತು. ಅವನ ಕತೆ ಕೇ...

ಒಂದು ತಿಂಗಳ ಮಗು ಹೆನ್ರಿ ನೋಡಲು ಬಲು ಮುದ್ದಾಗಿದ್ದ. ಸೇಬಿನ ಕೆನ್ನೆಗಳು, ದೊಡ್ಡ ಕಪ್ಪು ಕಣ್ಣುಗಳು, ತಲೆಯಲ್ಲಿ ಕೆಂಚು ಕೂದಲು, ನೀಳ ಮೂಗು, ಮುದ್ದಾದ ಪುಟ್ಟ ಬಾಯಿ, ನೋಡಿದೊಡನೆ ಹೇಳಬಹುದಿತ್ತು ಆ ಮಗು ಬ್ರಿಟಿಷ್ ತಂದೆ ತಾಯಿಗೆ ಹುಟ್ಟಿದವನೆಂದು. ತಂದೆ ಸ್ಮಿಥ್ ಮತ್ತು ತಾಯಿ ಮೇರಿಗೆ...

ಕೊನೆಗೊಮ್ಮೆ ಶಂಕರ ಹೂಂಗುಟ್ಟಲೇಬೇಕಾಯಿತು. “ಹುಡುಗಿ ಮನಸ್ಸಿಗೆ ಬಂದರೆ ಮಾತ್ರ ಆಗಿ. ಈ ವಿಷಯದಲ್ಲಿ ಒತ್ತಾಯಮಾಡಬರುತ್ತದೆಯೇ?” ಎಂದು ಶಿವರಾಮ ಹೆಗಡೆಯವರು ಶಂಕರನನ್ನು ಹೊರಡಿಸಿದರು. ದಾರಿಯುದ್ದಕ್ಕೂ ಹೆಗಡೆಯವರು ತಮ್ಮ ಮಗಳ ಗುಣಗಾನವನ್ನು ಪ್ರಸ್ತುತ ಅಪ್ರಸ್ತುತ ಪ್ರಶಂಸೆಗಳಿಂದ...

ಅಡಿಗೆಯ ಮನೆಯಿಂದ ಉಮೆಯು ಓಡಿ ಬಂದು “ನೀರಿನ ಕೊಡದ ಬಳಿಗೆ ಒಂದು ಕಪ್ಪೆ ಕುಳಿತಿದೆ. ಹೊರಗೆ ಹಾಕಿ ಕೊಡಿ” ಅಂದಳು. ತನಗೆ ಹೆದರದವಳು ಒಂದು ಕಪ್ಪೆಗೆ ಅಂಜುತ್ತಾಳಲ್ಲ ಅಂದುಕೊಂಡು ಉಮೇಶ ಒಳಗೆ ಬಂದ. ಕಪ್ಪೆಯು ಭದ್ರಾಸನ ಹಾಕಿತ್ತು. ಉಮೇಶ ಒಂದು ಸೌದೆಯಿಂದ ಕೊಡವನ್ನು ಕುಟ್ಟಿ...

ಹೊಲದ ಬದುವಿನ ಮೇಲೆ ಸಿದ್ದವ್ವ ಕುಳಿತಿದ್ದಳು. ಬಿಳಿ ಜ್ವಾಳದ ತೆನೆಗಳ ಮೇಲೆ ಹಾಯ್ದ ಗಾಳಿ ಒಂದೇ ಸಮನೆ ಬೀಸುತ್ತಿತ್ತು. ಇದೇ ಹೊಲದಲ್ಲಿ ತಾನು ಬಾಲ್ಯವನ್ನೆಲ್ಲಾ ಕಳೆದದ್ದು ನೆನಪಾಗಿ ಎಂಬತ್ತೈದರ ಸಿದ್ದವ್ವಳಿಗೆ ಮೈಯಲ್ಲಿ ಹರೆಯ ಉಕ್ಕಿ ಬಂದಂಗೆ ಆಯ್ತು. ತನ್ನ ಸೊರಗಿ ತೆಳುವಾದ ಕೈ ಕಾಲು...