ಅದೇ ಕವಿತೆ

ಅದೇ ಕವಿತೆ
ಹರಿತ ಕತ್ತಿಯಂತೆ
ಸ್ವಾತಿ ಮುತ್ತಿನಂತೆ
ಚಿತ್ತಿ ಮಳೆಯಂತೆ
ಕರಾವಳಿ ಲಗ್ನದಂತೆ
ಬದಲಾಗದ ವ್ಯವಸ್ಥೆಯಂತೆ.
*

ಅದೇ ಕವಿತೆ,
ಅದೇ ಕಪ್ಪಿಟ್ಟ ಮುಖ
ಬಡಿದಾಡೋ ಕೈ ಕಾಲು,
ಉರಿಯುತ್ತಿರುವ ಕಣ್ಣುಗಳು
ಮುಳುಗಡೆಯಾಗಿರುವ ಊರು ಕೇರಿಗಳು
ಈ ಪ್ರಗತಿ ವಾಕರಿಕೆ ಭರಿಸಿದೆ.
*

ಅದೇ… ಜನ.. ದನ..
ಮನ.. ದವನ!
ದಾವನೆಲ!
ಕೋಮುಗಲಭೆ ಓಣಿ ಓಣಿಗೆ-
ಬರೀ ಕಾಗದದ ಗದ್ದೆ
ಮಾತೂ ಮಾರೂದ್ದ
ಉದ್ಧಾರ ತೂತು ಬಿದ್ದ ಗಡಿಗೆ!
*

ಅದೇ ಬಿಟ್ರಿಷರ ಕಾರುಬಾರು
ಹೊಸ ಸೀಸೆಯಲ್ಲಿ, ಹಳೇ ಮದ್ಯದಂತೆ
ಹಳೆ ಗಾಯಕ್ಕೆ ಹೊಸ ಬರೆ
ಹೆಸರು ಬೇರೆ ಬೇರೆ!
ಅದೇ ಕಳೆ ಕಿತ್ತಷ್ಟು, ಸಿಬಿರಿನಷ್ಟು…
ಹಗಲು ಗಂಡರ ವೇದಾಂತ
ರಾತ್ರಿ ಮಿಂಡರ ರಾದ್ಧಾಂತ
ಮಳೆ ಬೆಳೆ ಪುಢಾರಿಯಂತೆ.
*

ಅದೇ ಹಗಲು ರಾತ್ರಿ,
ಬೆದೆ ಬಿದ್ದ ಗೌಡ
ಜೀತಕ್ಕಿರುವ ಹೈದ
ಸೂತಕದಿ ಬಿಚ್ಚದ ಕದಗಳು
ಕೊತ ಕೊತ ಕುದಿವ ಕೊಳೆಗೇರಿಗಳು
ವರಸೆ ಬದಲಿಸಿದ ಮಿಂಡರೀಗ
ಜಾಗತೀಕರಣ, ಖಾಸಗೀಕರಣ
ಉದಾರೀಕರಣದ ತಲೆ ಹಿಡುಕರು!
ಏಡ್ಸ್ ಮಾರಿಗೆ ಶಾಮೀಯಾನವಾದವರು!
ಪ್ರತಿಭೆ, ಮೆರಿಟ್‌ಗೆ, ಏಣಿ ಹಾಕಿ-
ಮೀಸಲಾತಿಗೆ ‘ಕೋ’ ಕೊಟ್ಟ ಬ್ರಹ್ಮಾಚಾರಿಗಳು!
*

ಇನ್ನೂ ಬರಲಿಲ್ಲ ಕಪ್ಪು ಸೂರ್‍ಯ…
ಅರಳಲಿಲ್ಲ ಕಪ್ಪು ಗುಲಾಬೀ…
ಅದೇ ಕವಿತೆ, ಹಣತೆಯಂತೇ…
ಬದಲಾಗದ ಜನತೆಯಂತೇ…
ಮೇವು ತಿಂದು ‘ನಮಲುಗರಿವಾ’… ದನಗಳಂತೇ…
ಅಂದು: ಈಸ್ಟ್ ಇಂಡಿಯಾ ಕಂಪನಿ!
ಇಂದು: ಖಾಸಗಿ ಕಂಪನಿಗಳು!
ಈ ದೇಶದ ಕೀಲಿಕೈ… ಹೊರಗಿನವರೇ…
ಕಾದು ನೋಡಿ…
ಆಳಿಸಿಕೊಳ್ಳಲು ಲಾಯಕ್ಕು!
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಚಂದ್ರನ ಚಾಳಿ
Next post ನಚ್ಚಿನ ಸೋದರಿ

ಸಣ್ಣ ಕತೆ

  • ಕಲಾವಿದ

    "ನನಗದು ಬೇಕಿಲ್ಲ. ಬೇಕಿಲ್ಲ! ಸುಮ್ಮನೆ ಯಾಕೆ ಗೋಳು ಹುಯ್ಯುತ್ತೀಯಮ್ಮಾ?" "ಹೀಗೇ ಎಷ್ಟು ದಿನ ಮನೆಯಲ್ಲೇ ಕುಳಿತಿರುವೆ, ಮಗು?" "ಇಷ್ಟು ದಿನವಿರಲಿಲ್ಲವೇನಮ್ಮ-ಇನ್ನು ಮೇಲೆಯೂ ಹಾಗೆಯೇ, ಹೊರಗಿನ ಪ್ರಪಂಚಕ್ಕಿಂತ ನನ್ನ… Read more…

  • ಕೇರೀಜಂ…

    ಮಂಜೇಲ್ಮುಂಜೇಲಿ ಯೆದ್ಬೇಗ್ನೇ ಕೇರ್ಮುಂದ್ಗಡೆ ಸಿವಪ್ಪ ಚೂರಿ, ಕತ್ತಿ, ಕುಡ್ಗೋಲು, ಯಿಳ್ಗೆಮಣೆ, ಕೊಡ್ಲಿನ... ಮಸ್ಗೆಲ್ಗೆ ಆಕಿ, ಗಸ್ಗಾಸಾ... ನುಣ್ಗೆ ತ್ವಟ್ವಟ್ಟೇ... ನೀರ್ಬಟ್ಗಾಂತಾ, ಜ್ವಲ್ಸುರ್ಗಿಗ್ಯಾಂತಾ, ಅವ್ಡುಗಚ್ಗೊಂಡೂ ಮಸೆಯತೊಡ್ಗಿದ್ವನ... ಕಟ್ದಿ ತುರ್ಬು,… Read more…

  • ಆಮಿಷ

    ರಮಾ ಕುರ್ಚಿಯನ್ನೊರಗಿ ಕುಳಿತಿದ್ದಳು. ದುಃಖವೇ ಮೂರ್ತಿವೆತ್ತಂತೆ ಕುಳಿತಿದ್ದ ಅವಳ ಹೃದಯದಲ್ಲಿ ಭೀಕರ ಕೋಲಾಹಲ ನಡೆದಿತ್ತು. ಕಣ್ಣುಗಳು ಆಳಕ್ಕಿಳಿದಿದ್ದವು. ದೇಹದ ಅಣು ಅಣುವೂ ನೋವಿನಿಂದ ಮಿಡಿಯುತ್ತಿತ್ತು. "ತಾನೇಕೆ ದುಡುಕಿಬಿಟ್ಟೆ?… Read more…

  • ಯಾರು ಹೊಣೆ?

    "ಧಡ್....... ಧಡಲ್........ ಧಡಕ್" ಗಾಡಿ ನಿಂತಿತು. ಹೊರಗೆ ಮೋರೆಹಾಕಿ ನೋಡಿದೆ. ಕತ್ತಲು ಕವಿದಿತ್ತು. ಚುಕ್ಕೆಗಳು ಪಕಪಕ ಕಣ್ಣು ಬಿಡುತ್ತಿದ್ದವು. ಮೂಡಲ ಗಾಳಿ "ಸಿಳ್" ಎಂದು ಬೀಸುತ್ತಿತ್ತು. ನಾನು… Read more…

  • ಮಂಜುಳ ಗಾನ

    ಶ್ರೀ ಸರಸ್ವತಿ ಕಾಲೇಜಿನ ಪಾಠಪ್ರವಚನಗಳ ಬಗ್ಗೆ ಎರಡನೆ ಮಾತಿಲ್ಲ. ಅತ್ಯಂತ ಉತ್ತಮ ಗುಣಮಟ್ಟದ ಶಿಕ್ಷಣ ವಿದ್ಯಾರ್ಥಿಗಳಿಗೆ ದೊರಕುತ್ತಿತ್ತು. ಆದರೆ ಈ ಕಾಲೇಜಿನ ವಿಶೇಷವೆಂದರೆ ವಿದ್ಯಾರ್ಥಿಗಳ ಮತ್ತು ಉಪನ್ಯಾಸಕರ… Read more…