ಸಂಜೆಬೆಳಕು

ಬಿಲ್ಲಿಗೆ ಏರಿದೆ ಬಾಣ
ಕೊರಳಿಗೆ ಹಾರಿದೆ ಪ್ರಾಣ
ಭಯವಿಸ್ಮಯದಲಿ ಗೀತೆಯ
ಕೊನೆಚರಣದ ಗಾನ

ಸಂಜೆಯ ಸೂರ್ಯನ ಕೆಂಪಿಗೆ
ಕಂಪಿಸುತಿದೆ ಮರದೆಲೆಯಲಿ
ಸಂಚರಿಸಿಯು ನಿಂತಂತಿದೆ
ಗಾಳಿಗು ನಿತ್ರಾಣ

ಮಳೆಸುರಿದೂ ಹೊಳೆಹರಿದೂ
ಹಕ್ಕಿ ಹಗುರ ದನಿಗರೆದೂ
ಲೋಕ ಏಕೋ ಮಂಕು ಮೋರೆ
ಹಾಕಿ ನಿಂತ ಭಾವ,
ಚಲಿಸುತ್ತಿದೆ ಹಳೆ ನೆರಳಿಗೆ
ದಣಿವ ಕಳೆವ ತಾಯ ಉಡಿಗೆ
ಹಗಲ ಹಚ್ಚಿ ಅದರೊಳಿಡುವ
ಸೃಜನ ಶೀಲ ಇರುಳಿಗೆ

ಅರಳಿದೆ ಅರಿಯದ ಹೊಸ ಭವ
ಕ್ರಯವಾಗುತ ಹಳೆಯನುಭವ
ಹೊಸ ಕಾಣ್ಕೆಗೆ ಕಣ್ಣೆತ್ತಲಿ
ಚಡಪಡಿಸದೆ ಜೀವ
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಗಳಿಗೆಬಟ್ಟಲ ತಿರುವುಗಳಲ್ಲಿ – ೩೨
Next post ಮತೀಯ ಬೆಳವಣಿಗೆ – ಮಾನವ ಮಾರಕ

ಸಣ್ಣ ಕತೆ

  • ರಾಧೆಯ ಸ್ವಗತ

    ಈಗ ಸೃಷ್ಟಿಕರ್ತನ್ನು ದೂಷಿಸುತ್ತಾ ಕಾಲ ಕಳೆಯುತ್ತಿದ್ದೇನೆ ಕೃಷ್ಣಾ. ಹೆಂಗಸರಿಗ್ಯಾಕೆ ಅವರ ಪ್ರಿಯಕರರಿಗಿಂತ ಹೆಚ್ಚು ಆಯುಸ್ಸನ್ನು ಅವನು ಕೊಡುತ್ತಾನೋ? ನೀನು ಹೇಳುತ್ತಿದ್ದುದು ಮತ್ತೆ ಮತ್ತೆ ನೆನಪಾಗುತ್ತಿದೆ: "ರಾಧೆ, ಈ… Read more…

  • ನಂಟಿನ ಕೊನೆಯ ಬಲ್ಲವರಾರು?

    ಕುಳಿತವನು ಅಲುಗದಂತೆ ತದೇಕ ಚಿತ್ತದಿಂದ ಕಡಲನ್ನು ನೋಡುತ್ತಿದ್ದ. ಹಾಗೇ ಕುಳಿತು ಅರ್ಧಗಂಟೆ ಕಳೆದಿತ್ತು. ಮೊಲದ ಬಾರಿಗೆ ಕಡಲ ಕಂಡವನ ಚಿತ್ತ ಕಲಕುವುದೇಕೆಂದು ಕುಳಿತಲ್ಲೇ ಅವನನ್ನು ಬಿಟ್ಟು ತಿರುಗಾಡಿ… Read more…

  • ಪಾಠ

    ಚೈತ್ರ ಮಾಸದ ಮಧ್ಯ ಕಾಲ. ಬೇಸಿಗೆ ಕಾಲಿಟ್ಟಿದೆ. ವಸಂತಾಗಮನ ಈಗಾಗಾಲೇ ಆಗಿದೆ. ಊರಲ್ಲಿ ಸುಗ್ಗಿ ಸಮಯ. ಉತ್ತರ ಕರ್ನಾಟಕದ ನಮ್ಮ ಭಾಗದಲ್ಲಿ ಹತ್ತಿ ಜೋಳ ಪ್ರಮುಖ ಬೆಳೆಗಳು.… Read more…

  • ಕಲಾವಿದ

    "ನನಗದು ಬೇಕಿಲ್ಲ. ಬೇಕಿಲ್ಲ! ಸುಮ್ಮನೆ ಯಾಕೆ ಗೋಳು ಹುಯ್ಯುತ್ತೀಯಮ್ಮಾ?" "ಹೀಗೇ ಎಷ್ಟು ದಿನ ಮನೆಯಲ್ಲೇ ಕುಳಿತಿರುವೆ, ಮಗು?" "ಇಷ್ಟು ದಿನವಿರಲಿಲ್ಲವೇನಮ್ಮ-ಇನ್ನು ಮೇಲೆಯೂ ಹಾಗೆಯೇ, ಹೊರಗಿನ ಪ್ರಪಂಚಕ್ಕಿಂತ ನನ್ನ… Read more…

  • ದಿನಚರಿಯ ಪುಟದಿಂದ

    ಮಂಗಳೂರಿನ ಹೃದಯ ಭಾಗದಿಂದ ಸುಮಾರು ೧೫ ಕಿ.ಮೀ. ದೂರದಲ್ಲಿರುವ ಚಿತ್ರಾಪುರ ಪೇಟೆ ಕೆಲವು ವಿಷಯಗಳಲ್ಲಿ ಪ್ರಖ್ಯಾತಿಯನ್ನು ಹೊಂದಿದೆ. ಸಿಟಿಬಸ್ಸುಗಳು ಇಲ್ಲಿ ಓಡಾಡುತ್ತಿಲ್ಲವಾದರೂ ಬಸ್ಸುಗಳಿಗೇನೂ ಕಮ್ಮಿಯಿಲ್ಲ. ಎಕ್ಸ್‌ಪ್ರೆಸ್ ಬಸ್ಸುಗಳು… Read more…