ಸಂಜೆಬೆಳಕು

ಬಿಲ್ಲಿಗೆ ಏರಿದೆ ಬಾಣ
ಕೊರಳಿಗೆ ಹಾರಿದೆ ಪ್ರಾಣ
ಭಯವಿಸ್ಮಯದಲಿ ಗೀತೆಯ
ಕೊನೆಚರಣದ ಗಾನ

ಸಂಜೆಯ ಸೂರ್ಯನ ಕೆಂಪಿಗೆ
ಕಂಪಿಸುತಿದೆ ಮರದೆಲೆಯಲಿ
ಸಂಚರಿಸಿಯು ನಿಂತಂತಿದೆ
ಗಾಳಿಗು ನಿತ್ರಾಣ

ಮಳೆಸುರಿದೂ ಹೊಳೆಹರಿದೂ
ಹಕ್ಕಿ ಹಗುರ ದನಿಗರೆದೂ
ಲೋಕ ಏಕೋ ಮಂಕು ಮೋರೆ
ಹಾಕಿ ನಿಂತ ಭಾವ,
ಚಲಿಸುತ್ತಿದೆ ಹಳೆ ನೆರಳಿಗೆ
ದಣಿವ ಕಳೆವ ತಾಯ ಉಡಿಗೆ
ಹಗಲ ಹಚ್ಚಿ ಅದರೊಳಿಡುವ
ಸೃಜನ ಶೀಲ ಇರುಳಿಗೆ

ಅರಳಿದೆ ಅರಿಯದ ಹೊಸ ಭವ
ಕ್ರಯವಾಗುತ ಹಳೆಯನುಭವ
ಹೊಸ ಕಾಣ್ಕೆಗೆ ಕಣ್ಣೆತ್ತಲಿ
ಚಡಪಡಿಸದೆ ಜೀವ
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಗಳಿಗೆಬಟ್ಟಲ ತಿರುವುಗಳಲ್ಲಿ – ೩೨
Next post ಮತೀಯ ಬೆಳವಣಿಗೆ – ಮಾನವ ಮಾರಕ

ಸಣ್ಣ ಕತೆ

  • ಪತ್ರ ಪ್ರೇಮ

    ಅಂಚೆ ಇಲಾಖೆಯ ಅದೊಂದು ಸಮಾರಂಭ. ಇಲಾಖೆಯ ಸಿಬ್ಬಂದಿ ವರ್ಗದ ಕಾರ್ಯದಕ್ಷತೆ ಕುರಿತು ಕೇಂದ್ರ ಕಾರ್ಮಿಕ ಸಚಿವ ಆಸ್ಕರ್‍ ಫರ್ನಾಂಡಿಸ್ ಅಮೆರಿಕಾದಲ್ಲಿ ನಡೆದ ಒಂದು ಸತ್ಯ ಘಟನೆ ಎಂದು… Read more…

  • ರಾಧೆಯ ಸ್ವಗತ

    ಈಗ ಸೃಷ್ಟಿಕರ್ತನ್ನು ದೂಷಿಸುತ್ತಾ ಕಾಲ ಕಳೆಯುತ್ತಿದ್ದೇನೆ ಕೃಷ್ಣಾ. ಹೆಂಗಸರಿಗ್ಯಾಕೆ ಅವರ ಪ್ರಿಯಕರರಿಗಿಂತ ಹೆಚ್ಚು ಆಯುಸ್ಸನ್ನು ಅವನು ಕೊಡುತ್ತಾನೋ? ನೀನು ಹೇಳುತ್ತಿದ್ದುದು ಮತ್ತೆ ಮತ್ತೆ ನೆನಪಾಗುತ್ತಿದೆ: "ರಾಧೆ, ಈ… Read more…

  • ತಿಥಿ

    "ಲೋ ಬೋಸುಡಿಕೆ ನನ್ಮಗನೇ, ಇದು ಕೊನೆಯ ಬಾರಿ ನಿನಗೆ ವಾರ್ನಿಂಗ್ ಕೊಡುತ್ತಾ ಇದ್ದೇನೆ. ಮೂರು ಸಾರಿ ಈ ಜೈಲಿನಿಂದ ನಿನಗೆ ವಿದಾಯ ಕೊಟ್ಟಾಯಿತು. ಇನ್ನು ಹೋಗಿ ನಿನ್ನ… Read more…

  • ನಂಟಿನ ಕೊನೆಯ ಬಲ್ಲವರಾರು?

    ಕುಳಿತವನು ಅಲುಗದಂತೆ ತದೇಕ ಚಿತ್ತದಿಂದ ಕಡಲನ್ನು ನೋಡುತ್ತಿದ್ದ. ಹಾಗೇ ಕುಳಿತು ಅರ್ಧಗಂಟೆ ಕಳೆದಿತ್ತು. ಮೊಲದ ಬಾರಿಗೆ ಕಡಲ ಕಂಡವನ ಚಿತ್ತ ಕಲಕುವುದೇಕೆಂದು ಕುಳಿತಲ್ಲೇ ಅವನನ್ನು ಬಿಟ್ಟು ತಿರುಗಾಡಿ… Read more…

  • ಏಡಿರಾಜ

    ಚಲೋ ವಂದು ಅರಸು ಮನಿ, ಗಂಡ-ಹೆಂಡ್ತಿ ದೊಡ್ಡ ಮನ್ತಾನದಲ್ ಆಳ್ಕತಿದ್ರು. ಆವಾಗೆ ಆ ಅರಸೂಗೆ ಗಂಡ್ ಹುಡ್ಗರಿಲ್ಲ. ಸಂತತ್ಯಲ್ಲ, ಇದ್ರದು ನಿಚ್ಚಾ ಕೆಲ್ಸಯೇನಪ್ಪ ಅರಸು ಹಿಂಡ್ತಿದು, ಮನಿ… Read more…

cheap jordans|wholesale air max|wholesale jordans|wholesale jewelry|wholesale jerseys