ಎಂದಿಗಾದೀತು ಈ ದೇಶ

ಎಂದಿಗಾದೀತು ಈ ದೇಶ
ಎಲ್ಲರಂತೆ ತಾನೂ?
ಎಂದಿಗಾದೀತು ಇರದಂತೆ
ತರತಮ ಏನೇನೂ?

ಜನಮನಗಳ ನಡುವೆ-ಗೋಡೆ
ಎಂದಿಗೆ ಉರುಳುವುವು?
ಬಡವರ ಇರುಳುಗಳು-ಎಂದಿಗೆ
ಪೂರಾ ಕರಗುವುವು?
ಸೆರೆಯೊಳಿರುವ ಲಕ್ಷ್ಮಿ-ದೀನರ
ಕಡೆ ಹೊರಳುವಳೆಂದು?
ಗಾಳಿ ಬಿಸಿಲಿನಂತೆ – ಎಲ್ಲರ
ಬಳಿಸಾರುವಳೆಂದು ?

ಪಕ್ಷಪಾತವಿರದ ಪ್ರಕೃತಿ
ನೀಡಿದಂಥ ಸಿರಿಯು
ಸೋದದರೆಲ್ಲರಿಗೆ ಎಂದಿಗೆ
ಸಮ ಸಮ ದೊರೆಯುವುವು?
ಅನ್ನ ನೆರಳು ಅರಿವ-ಜೊತೆಗೇ
ಮರ್ಯಾದೆಯ ದುಡಿಮೆ
ಮೇಲು ಕೀಳು ಎನದೆ – ಎಂದಿಗೆ
ಎಲ್ಲರಿಗೊದಗುವುವು?

ಕವಿದ ಮಂಜು ಕರಗಿ-ಬೆಳಕಿಗೆ
ಏಳಲಂಥ ನಾಡು,
ಬಿಟ್ಟು ಹಳೆಯ ಹಾದಿ-ದೇಶ
ತುಳಿಯಲಿ ಹೊಸ ಜಾಡು;
ಪ್ರೇಮ ದುಡಿಮೆ ತ್ಯಾಗ-ತರಲಿ
ಹೊಸ ಬೆಲೆಯೊಂದನ್ನು,
ತುಳುಕಲಿ ಮಿಂಚನ್ನು – ಭಾವೀ
ಪ್ರಜೆಗಳ ಎಳೆಗಣ್ಣು.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಜಾಣ – ಪೆದ್ದ
Next post ಅಣ್ವಸ್ತ್ರ

ಸಣ್ಣ ಕತೆ

  • ಆನುಗೋಲು

    ರೈಲು ನಿಲ್ದಾಣದಲ್ಲಿ ನಿಂತಿತು! "ಪೇಪರ! ಡೇಲಿ ಪೇಪರ!........ಟಾಯಿಮ್ಸ, ಫ್ರೀ ಪ್ರೆಸ್, ಸಕಾಳ! ಪ್ಲಾಟ ಫಾರ್ಮ ಮೇಲಿನ ಜನರ ನೂರೆಂಟು ಗದ್ದಲದಲ್ಲಿ ಈ ಧ್ವನಿಯು ಎದ್ದು ಕೇಳಿಸುತ್ತಿತ್ತು. ಹೋಗುವವರ… Read more…

  • ಒಲವೆ ನಮ್ಮ ಬದುಕು

    "The best of you is he who behaves best towards the members of his family" (The Holy Prophet) ವಾರದ ಸಂತೆ.… Read more…

  • ಸಿಹಿಸುದ್ದಿ

    ಶ್ರೀನಿವಾಸ ದೇವಸ್ಥಾನದಲ್ಲಿ ಎರಡು ಪ್ರದಕ್ಷಿಣೆ ಹಾಕಿ ಮೂರನೇ ಪ್ರದಕ್ಷಿಣೆಗೆ ಹೊರಡುತ್ತಿದ್ದಂತೆಯೇ, ಯಾರೋ ಹಿಂದಿನಿಂದ "ಕಲ್ಯಾಣಿ," ಎಂದು ಕರೆದಂತಾಯಿತು. ಹಿಂತಿರುಗಿ ನೋಡಿದರೆ ಯಾರೋ ಮಧ್ಯ ವಯಸ್ಸಿನ ಮಹಿಳೆ ಬರುತ್ತಿದ್ದರು.… Read more…

  • ರಣಹದ್ದುಗಳು

    ಗರ್ಭಿಣಿಯರ ನೋವು ಚೀರಾಟಗಳಿಗೆ ಡಾಕ್ಟರ್ ಸರಳಾಳ ಕಿವಿಗಳೆಂದೋ ಕಿವುಡಾಗಿ ಬಿಟ್ಟಿವೆ. ಸರಳ ಮಾಮೂಲಿ ಎಂಬಂತೆ ಆ ಹಳ್ಳಿ ಹೆಂಗಸರನ್ನು ಪರೀಕ್ಷಿಸಿದ್ದಳು. ಹೆಂಗಸು ಹೆಲ್ತಿಯಾಗಿದ್ದರೂ ಒಂದಷ್ಟು ವೀಕ್ ಇದ್ದಾಳೇಂತ… Read more…

  • ನಾಗನ ವರಿಸಿದ ಬಿಂಬಾಲಿ…

    ಬಿಂಬಾಲಿ ಬೋಯ್ ತನ್ನ ಅಮ್ಮ ಅಣ್ಣ ಅತ್ತಿಗೆ ಜೊತೆ ಅಟಲಾ ಎಂಬ ಒರಿಸ್ಸಾದ ಹಳ್ಳಿಯಲ್ಲಿ ವಾಸಿಸುತ್ತಿದ್ದಳು. ತಂದೆಯ ಮರಣದ ಮುಂಚೆಯೆ ಅವಳ ಹಿರಿಯಕ್ಕನ ಮದುವೆಯಾಗಿತ್ತು. ತಂದೆ ಬದುಕಿದ್ದಾಗ… Read more…

cheap jordans|wholesale air max|wholesale jordans|wholesale jewelry|wholesale jerseys