ನೆತ್ತಿಯಲ್ಲಿ ಗಿರಿಛತ್ರಿಯನೆತ್ತಿದ ಶಕ್ತಿ

ನೆತ್ತಿಯಲ್ಲಿ ಗಿರಿಛತ್ರಿಯ ಎತ್ತಿದ
ಶಕ್ತಿಗಿದೋ ನಮನ,
ಸುತ್ತಲು ಸಾಗರವಸ್ತ್ರವ ಧರಿಸಿದ
ಭರ್ತೆಗಿದೋ ನಮನ;
ಕೋಟಿ ಕೋಟಿ ಕಣ್‌, ಕೋಟಿ ಕೋಟಿ ಕೈ
ತಾಳಿ ನಿಂತರೂನು
ಸಾಟಿಯಿಲ್ಲದಾ ಏಕರೂಪಾದ
ತಾಯಿಗಿದೋ ನಮನ.

ಮರಗಿಡ ಆಡಿ ತೀಡುವ ಗಾಳಿಯ
ಪರಿಮಳ ನಿನ್ನುಸಿರು,
ನೀ ಧರಿಸಿರುವ ಪೀತಾಂಬರಗಳು
ಶಾಲಿವನದ ಹಸಿರು;
ಹಗಲಲಿ ಸೂರ್ಯ ಇರುಳಲಿ ಚಂದ್ರ
ನಿನ್ನ ಹಣೆಯ ತಿಲಕ,
ಎಂಥ ಶ್ರೀಮಂತ ರೂಪ ನಿನ್ನದೇ
ನೋಡಿ ನನಗೆ ಪುಲಕ!

ಸಾವಿರ ಧಾರೆಗಳಾದರು ಒಂದೇ
ಸಾಗರ ನಮ್ಮ ಗುರಿ,
ಸಾವಿರ ರೇಶಿಮೆ ಎಳೆಗಳು ಸೇರಿದ
ಪತ್ತಲ ನಮ್ಮ ಸಿರಿ;
ನೂರು ಶಕ್ತಿಗಳ ಸುಂದರ ಸಂಗಮ-
ಸಂಸ್ಕೃತಿ ಈ ನಾಡು,
ಒಟ್ಟುಗೂಡಲು ನಾಡಿನ ದುಡಿಮೆಗೆ
ನಮಗೆ ಯಾರು ಈಡು?

ಕೈ ಕೈ ಸೇರಿಸಿ ನಗುತ ನಿಲ್ಲೋಣ
ತಾಯ ಸುತ್ತ ನಾವು,
ಅವಳ ಪಾಲನೆ ರಕ್ಷಣೆಗಾಗಿ
ಎದುರಿಸೋಣ ಸಾವು;
ಎಲ್ಲ ದೇವರಿಗು ಹಿರಿಯದೇವಿ ಈ
ತಾಯಿಯ ವೈಭವಕೆ
ಎಲ್ಲ ಭೇದಗಳ ಚೆಲ್ಲಿ ಬಾಳೋಣ
ಬೇರ ಪೂಜೆ ಯಾಕೆ?
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ದಾಹ
Next post ಗುಡಿಸಲು-ಮಹಲು

ಸಣ್ಣ ಕತೆ

  • ವಿರೇಚನೆ

    ರವಿವಾರ ರಜವೆಂದು ರಾಮರಾವು ಶನಿವಾರ ರಾತ್ರಿಯೇ ಭೇದಿಗೆ ಔಷಧಿ ತೆಗೆದುಕೊಂಡ, ಕೆಲವು ತಿಂಗಳುಗಳಿಂದ ಊಟಕ್ಕೆ ರುಚಿಯಿಲ್ಲ. ತಿಂದದ್ದು ಜೀರ್ಣವಾಗುವುದಿಲ್ಲ. ರಾತ್ರಿ ನಿದ್ರೆ ಬರುವುದಿಲ್ಲ, ಹೊಟ್ಟೆ ಉಬ್ಬುತ್ತಿದೆ, ದೃಷ್ಟಿ… Read more…

  • ಟೋಪಿ ಮಾರುತಿ

    "ಏ ಕಾಗಿ, ಕಾಳೀ ಮಗನ! ಯಾಕ ಕೂಗ್ತೀಯಾ?" ಭಾವಿಯಲ್ಲಿಯ ಹಗ್ಗ ಮೇಲೆ ಕೆಳಗೆ ಹೋಗುತ್ತಿರುತ್ತದೆ. ಒಂದು ಮೊಳ ಹಗ್ಗ ಸೇದಿದರೆ ಅರ್‍ಧ ಮೊಳ ಒಳಗೆ ಸೇರಿರುತ್ತದೆ. "ಥೂ… Read more…

  • ಮಂಜುಳ ಗಾನ

    ಶ್ರೀ ಸರಸ್ವತಿ ಕಾಲೇಜಿನ ಪಾಠಪ್ರವಚನಗಳ ಬಗ್ಗೆ ಎರಡನೆ ಮಾತಿಲ್ಲ. ಅತ್ಯಂತ ಉತ್ತಮ ಗುಣಮಟ್ಟದ ಶಿಕ್ಷಣ ವಿದ್ಯಾರ್ಥಿಗಳಿಗೆ ದೊರಕುತ್ತಿತ್ತು. ಆದರೆ ಈ ಕಾಲೇಜಿನ ವಿಶೇಷವೆಂದರೆ ವಿದ್ಯಾರ್ಥಿಗಳ ಮತ್ತು ಉಪನ್ಯಾಸಕರ… Read more…

  • ಮೋಟರ ಮಹಮ್ಮದ

    ನಮ್ಮಂತಹ ಈಗಿನ ಜನಗಳಿಗೆ ಹೊಲ, ಮನೆ, ಪೂರ್ವಾರ್ಜಿತ ಆಸ್ತಿ ಪಾಸ್ತಿಗಳಲ್ಲಿ ಹೆಚ್ಚು ಆದರವಿಲ್ಲೆಂದು ನಮ್ಮ ಹಿರಿಯರು ಮೇಲಿಂದ ಮೇಲೆ ಏನನ್ನೋ ಒಟಗುಟ್ಟುತ್ತಿರುತ್ತಾರೆ. ನಾವಾದರೋ ಹಳ್ಳಿಯನ್ನು ಕಾಣದೆ ಎಷ್ಟೋ… Read more…

  • ಯಾರು ಹೊಣೆ?

    "ಧಡ್....... ಧಡಲ್........ ಧಡಕ್" ಗಾಡಿ ನಿಂತಿತು. ಹೊರಗೆ ಮೋರೆಹಾಕಿ ನೋಡಿದೆ. ಕತ್ತಲು ಕವಿದಿತ್ತು. ಚುಕ್ಕೆಗಳು ಪಕಪಕ ಕಣ್ಣು ಬಿಡುತ್ತಿದ್ದವು. ಮೂಡಲ ಗಾಳಿ "ಸಿಳ್" ಎಂದು ಬೀಸುತ್ತಿತ್ತು. ನಾನು… Read more…

cheap jordans|wholesale air max|wholesale jordans|wholesale jewelry|wholesale jerseys