ದಾಹ

ನಿಮ್ಮ ದಾಹಕ್ಕೆ
ಎಳೆ ನೀರು ನಾವು
ಕೊಚ್ಚಿ ಕುಡಿದಿರಿ ನಮ್ಮನ್ನು
ನಮ್ಮ ಮಕ್ಕಳನ್ನು

ನಿಮ್ಮ ದಾಹಕ್ಕೆ
ಸಿಹಿ ಕಬ್ಬು ನಾವು
ಹಿಂಡಿ ಕುಡಿದಿರಿ ನಮ್ಮನ್ನು
ನಮ್ಮ ಮಕ್ಕಳನ್ನು

ನಿಮ್ಮ ದಾಹಕ್ಕೆ
ನಿಂಬೆ ಹಣ್ಣಿನ ಶರಬತ್ತು ನಾವು
ಬಿಡದೆ ಕುಡಿದಿರಿ ನಮ್ಮನ್ನು
ನಮ್ಮ ಮಕ್ಕಳನ್ನು

ನಿಮ್ಮ ದಾಹಕ್ಕೆ
ಬೆಲೆವೆಣ್ಣುಗಳು ನಾವು
ಕಚ್ಚಿ ಕುಡಿದಿರಿ ನಮ್ಮನ್ನು
ನಮ್ಮ ಮಕ್ಕಳನ್ನು

ನಮ್ಮ ದಾಹಕ್ಕೆ?

ನಮ್ಮ ದಾಹಕ್ಕೆ
ಎಳೆ ನೀರಿನಂತೆ ಸಿಹಿ ಕಬ್ಬಿನಂತೆ
ನಿಂಬೆ ಹಣ್ಣಿನಂತೆ
ಬಳಸಿಕೊಳ್ಳುವುದಿಲ್ಲ
ನಿಮ್ಮನ್ನು ನಿಮ್ಮ ಮಕ್ಕಳನ್ನು
ನಿಮ್ಮ ಹೆಣ್ಣುಗಳ ಮಾನ
ಕಳೆಯುವುದಿಲ್ಲ

ಬದಲಾಗುತ್ತೇವೆ
‘ಮನುಷ್ಯ’ರಾಗಿ!
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ನಿನ್ನ ಗಾನದ ಸವಿಗೆ
Next post ನೆತ್ತಿಯಲ್ಲಿ ಗಿರಿಛತ್ರಿಯನೆತ್ತಿದ ಶಕ್ತಿ

ಸಣ್ಣ ಕತೆ

  • ಕತೆಗಾಗಿ ಜತೆ

    ರಾಜರ ಮನಿಲಿ ವಂದ್ ಮಡವಾಳವ ಬಟ್ಟೆ ಶೆಳೀಲಿಕ್ಕಿದಿದ್ದ. ಅವನಿಗೆ ನೆಂಟ್ರ ಮನಿಗೆ ವಂದಿವ್ಸ ಹೋಗಬೇಕು ಹೇಳಿರೆ ಸೌಡಾಗುದಿಲ್ಲ. ನಿತ್ಯೆ ಬಟ್ಟೆ ಶೆಳುದ್ ವಂದೇಯ. ವಂದಾನೊಂದ ದಿವಸ ಇವತ್… Read more…

  • ವರ್ಗಿನೋರು

    ಆಗ್ಲೇ ವಾಟು ವಾಲಿತ್ತು. ಯೆಷ್ಟು ವಾಟು ವಾಲ್ದ್ರೇನು? ಬಳ್ಳಾರಿ ಬಿಸ್ಲೆಂದ್ರೆ ಕೇಳ್ಬೇಕೇ? ನಡೆವ... ದಾರ್ಗೆ ಕೆಂಡ ಸುರ್ದಂಗೆ. ನೆಲಂಭೋ ನೆಲಾ... ಝಣ ಝಣ. ‘ಅಲ್ಗೆ’ ಕಾದಂಗೆ. ಕಾಲಿಟ್ರೆ… Read more…

  • ಪ್ರೇಮನಗರಿಯಲ್ಲಿ ಮದುವೆ

    ಜಾರ್ಜ್, ಎಲೆನಾಳನ್ನು ಸಂಧಿಸಿದಾಗ ಅವಳ ಮನೋಸ್ಥಿತಿ ಬಹಳ ಹದಗೆಟ್ಟಿತ್ತು. ಪಾರ್ಕಿನ ಬೆಂಚಿನ ಮೇಲೆ ತಲೆ ಬಗ್ಗಿಸಿ ಕಣೀರನ್ನು ಒರೆಸಿಕೊಳ್ಳುತ್ತಿದ್ದ ಎಲೆನಾಳನ್ನು ಕಂಡು ಅವರ ಮನಸ್ಸು ಕರಗಿತು. "ಹಾಯ್,… Read more…

  • ಎರಡು…. ದೃಷ್ಟಿ!

    ದೀಪಾವಳಿಯು ಸಮೀಪಿಸಿದ್ದಿತು. ದೀಪಾವಳಿಯನ್ನು ನಾವು ಪಂಚಾಗ ನೋಡದೆ ತಿಳಿದುಕೊಳ್ಳಬಹುದು. ಅದು ಹೇಗೆ? ದೀಪಾವಳಿ ಪೂರ್ವರಂಗದ ಸುಳಿವು ನಮಗೇ ಗೊತ್ತೇ ಆಗುವದು. ಮನೆಯಲ್ಲಿ ಕರಚೀ ಕಾಯಿ, ಚಿರೋಟಿಗಳನ್ನು ಕರಿಯುವ… Read more…

  • ಎದಗೆ ಬಿದ್ದ ಕತೆ

    ೧೯೯೫. ನಾನಾಗ ಹುಬ್ಬಳ್ಳಿಯ ಕೇಂದ್ರೀಯ ಬಸ್ ನಿಲ್ದಾಣದಲ್ಲಿ ವಿಭಾಗೀಯ ಸಾರಿಗೆ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದೆ. ಇಲ್ಲಿ ೧೯೯೭ರ ವರೆಗೆ ನರಕ ಅನುಭವಿಸಿದೆ. ಪಾಪದ ಕೂಪವಿದು ಸ್ವರ್ಗ ನರಕ… Read more…