ಸರಿದೀತೇ ಕಾರಿರುಳು?

ಸರಿದೀತೇ ಕಾರಿರುಳು
ಈ ದೇಶದ ಬಾಳಿಂದ?
ಸುರಿದೀತೇ ಹೂ ಬೆಳಕು
ಈ ಭೂಮಿಗೆ ಬಾನಿಂದ?

ಅಲುಗಾಡಿದ ಛಾವಣಿ ಮೇಲೆ
ಬಿರುಕಾಗಿವೆ ಗೋಡೆಗಳು,
ನಡುಗುತ್ತಿದೆ ಕಾಲಡಿ ನಲವೇ
ಗುಡುಗುತ್ತಿವೆ ಕಾರ್ಮುಗಿಲು,
ಕೆಳಸೋರಿದೆ ಮಳೆಧಾರೆಯು
ಹರಕಲು ಸೂರಿಂದ,
ಕೊನೆಯೆಂದಿಗೆ ಮನೆಮಂದಿಗೆ
ಈ ಎಲ್ಲ ಪಾಡಿನಿಂದ?

ಮತ ಜಾತಿಯ ಗಡಿ ಭಾಷೆಯ
ವಿಷ ಸೇರಿದ ನೀರಲ್ಲಿ,
ಅಧಿಕಾರದ ಹಣದಾಹದ
ಹುಸಿ ಊರಿದೆ ಬಾಳಲ್ಲಿ;
ಸುರಿದ ಕಸವ ತೊಳೆದು
ಹೊಗೆ ಧೂಪ ತಳಿಯುವ,
ಕುಸಿದಂಥ ಗಾಲಿ ಎತ್ತಿ
ರಥವನ್ನು ಎಳೆಯುವ.

ಈ ಎಲ್ಲವ ಗೆಲ್ಲುವ ಕೆಚ್ಚು
ಕಿಚ್ಚಾಗಿದೆ ಎದೆಯಲ್ಲಿ,
ತಾಯ್ನಾಡಿನ ಉಜ್ವಲ ಚಿತ್ತ
ಅಚ್ಚಾಗಿದೆ ಕಣ್ಣಲ್ಲಿ;
ಜಯಭಾರತ ಜಯಭಾರತ
ಕೋಟಿ ಕಂಠದಲ್ಲಿ
ಮೊಳಗುತ್ತಿದೆ ಬೆಳಗುತ್ತಿದೆ
ನೆಲ ಬಾನು ಜಲಗಳಲ್ಲಿ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಪ್ರೀತಿಯೇ ಬೆಟ್ಟವಾದವನು
Next post ಕೆಲಸವಿಲ್ಲ

ಸಣ್ಣ ಕತೆ

  • ಆನುಗೋಲು

    ರೈಲು ನಿಲ್ದಾಣದಲ್ಲಿ ನಿಂತಿತು! "ಪೇಪರ! ಡೇಲಿ ಪೇಪರ!........ಟಾಯಿಮ್ಸ, ಫ್ರೀ ಪ್ರೆಸ್, ಸಕಾಳ! ಪ್ಲಾಟ ಫಾರ್ಮ ಮೇಲಿನ ಜನರ ನೂರೆಂಟು ಗದ್ದಲದಲ್ಲಿ ಈ ಧ್ವನಿಯು ಎದ್ದು ಕೇಳಿಸುತ್ತಿತ್ತು. ಹೋಗುವವರ… Read more…

  • ಮತ್ತೆ ಬಂದ ವಸಂತ

    ಚಿತ್ರ: ಆಮಿ ಮೊದಲ ರಾತ್ರಿಯ ಉನ್ಮಾದದಲ್ಲಿದ್ದ ಮಧುವಿನ ಕಿವಿ ಹಿಂಡಿ ಅವಳಂದಳು. ‘ಮಧು, ಇಂದಿನಿಂದ ನಾವು ಗಂಡ - ಹೆಂಡತಿಯಾಗಿರುವುದು ಬೇಡ. ಬದುಕಿನ ಕೊನೆ ತನಕವೂ ಗೆಳೆಯ… Read more…

  • ಬೂಬೂನ ಬಾಳು

    ನಮ್ಮೂರು ಚಿಕ್ಕ ಹಳ್ಳಿ. ಹಳ್ಳಿಯೆಂದ ಕೂಡಲೆ, ಅದಕ್ಕೆ ಬರಬೇಕಾದ ಎಲ್ಲ ವಿಶೇಷಣಗಳೂ ಬರಬೇಕಲ್ಲವೇ ? ಸುತ್ತಲೂ ಹಸುರಾಗಿ ಒಪ್ಪುವ ಹೊಲಗಳು, ನಾಲ್ಕೂ ಕಡೆಗೆ ಸಾಗಿ ಹೋಗುವ ದಾರಿಗಳು,… Read more…

  • ಕೊಳಲು ಉಳಿದಿದೆ

    ಮಾತಿನ ತೆರೆ ಒಂದು "ನೋಡಿ, ಜನರು ನನ್ನನ್ನು ನೋಡಿ ನಗುತ್ತಾರೆ! ಈ ಬಂಗಾರದ ಕೃಷ್ಣನ ಮೂರ್ತಿ ಇವಳ ಕೈಯಲ್ಲಿ ಯಾವಾಗಲೂ ಏಕೆ ಎಂದು ಕೇಳುತ್ತಾರೆ! ನನ್ನ ಹತ್ತರ… Read more…

  • ಸಾವಿಗೊಂದು ಸ್ಮಾರಕ

    ಶಾಲೆಯ ಮಾಸ್ತರ್ ಆಗಿ ಗಜರಾಜ ಸಿಂಗ್ ಅವರು ಪ್ರೈಮರಿ ಶಾಲೆಯ ಮಕ್ಕಳಿಗೆ ಹೇಳಿಕೊಡುತ್ತಿದ್ದ ಮೊದಲ ಪಾಠವೆಂದರೆ "ತಂದೆ ತಾಯಿಯನ್ನು ಗೌರವಿಸಿ, ಅವರೇ ನಿಮ್ಮ ಪಾಲಿನ ದೈವ" ಎಂದು.… Read more…

cheap jordans|wholesale air max|wholesale jordans|wholesale jewelry|wholesale jerseys