Home / ಕವನ / ಕವಿತೆ / ಥೆಮ್ಸ್ ನದಿಯ ಮೇಲೆ

ಥೆಮ್ಸ್ ನದಿಯ ಮೇಲೆ

(ಕಾರ್ಮೆನ್‌ಗೆ)

ಹೆನ್ಲಿಯೆಂಬುದೊಂದು ಹಳ್ಳಿ ಅಲ್ಲಿ
ಥೆಮ್ಸ್ ನದಿಗೆ ಅಪರೂಪದ ಭರ
ನದಿಯ ಮಧ್ಯದ ತನಕ ಹಾಕಿದ
ಮರದ ಸೇತುವೆಯಲ್ಲಿ
ನಾವು ನಡೆದವು.
ರೊಟ್ಟಿಯ ತುಣುಕಿಗೆ ಅಥವಾ
ಸೇಬಿನ ತಿರುಳಿಗೆ ಬಾತುಕೋಳಿಗಳು
ಹತ್ತಿರಕ್ಕೆ ಬರುತ್ತಿದ್ದುವು
ನೋಡುತ್ತ ನಿಂತೆವು.

ಆಕಡೆ ಗುಡ್ಡ ಕಾಡು-ಸೂಜಿ ಮೊನೆಯ
ಮರಗಳು, ಮೌನ ಮಂಜು
ಈಚೆ ದಡದ ಮೇಲೆ
ಮೋಜಿಗೆಂದು ವಿರಾಮ ಹಿಡಿಯಲು ಕುಳಿತವರು
ಒಬ್ಬೊಬ್ಬನ ಪಕ್ಕದಲ್ಲೂ
ಒಂದೊಂದು ಬುಟ್ಟಿ ಹುಳಗಳು

ಈ ಸೇತುವೆ, ಈ ನೀರು, ಇಲ್ಲಿ ಈ ನಿಮಿಷ
ಒಟ್ಟಿಗೆ ಬಂದು ನಿಂತ ಈ ನಾವು
ಇದೆಲ್ಲ ಇನ್ನೊಂದು ಕಾಲದ ಇನ್ನೊಂದು ದಿನದ
ಆವರ್ತನೆಯೆ ಅಥವ
ಬೇರೆಯ ದಿನವೆ?

ತೇಲಿ ಹೋಗುತ್ತಿರುವ ಆ
ಖಾಲಿ ಬೀಯರು ಡಬ್ಬದ ಹಾಗೆ
ಕೆಳಗಿನ ಇಳುಕಲಿನಲ್ಲಿ ಮರೆಯಾದರೆ
ಎಷ್ಟು ಖುಷಿ!
–ಎಂದಳು ಅವಳು

ಹಿಂದೆ ಬರುತ್ತಿದ್ದಾಗಲೇ ನಾವು ಗಮನಿಸಿದ್ದು
ಮಾಸಿದ ಅಕ್ಷರಗಳ ನೋಟಿಸು-
ಪ್ರವಾಸಿಗಳು ತಮ್ಮ ರಕ್ಷಣೆಗೆ
ತಾವೇ ಜವಾಬ್ದಾರರು-ಎಂದು.

ರೆವರೆಂಡ್ ಜೋನ್ಸ್–
ಈಗಿಲ್ಲಿದ ಜೋನ್ಸ್ ಟೌನಿನ ಪೂಜಾರಿ-
ಆತ ಕುಳಿತ್ತಿದ್ದ ವೇದಿಕೆಯ ಮೇಲೆ
ಬರೆದಿತ್ತಂತೆ:
“ಹಿಂದಿನದನ್ನು ಯಾರು ಮರೆಯುತ್ತಾರೋ
ಅವರು ಅದನ್ನೇ ಮತ್ತೆ ಮತ್ತೆ
ಆವರ್ತಿಸುವುದಕ್ಕೆ ಗುರಿಯಾಗುತ್ತಾರೆ.”

ಅವು ಸಾಂತಾಯನನ ಮಾತುಗಳಲ್ಲವೆ
ಏನದರ ಅರ್ಥ?

ಯಾರಿಗೆ ಗೊತ್ತು, ಕಾರ್ಮೆನ್,
ಆ ಎಂಟುನೂರ ಹನ್ನೊಂದು ಮಂದಿಯಲ್ಲಿ
ಯಾರೂ ಉಳಿಯಲಿಲ್ಲ.
*****

Tagged:

Leave a Reply

Your email address will not be published. Required fields are marked *

ಹೆರಿಗೆ ನೋವಿನಿಂದ ಸಂಕಟಪಡುತ್ತಿದ್ದ ಹೆಂಡತಿ ಗಂಗಾಳನ್ನು ಆಸ್ಪತ್ರೆಗೆ ಚಿಕ್ಕಣ್ಣ ಕರೆದುಕೊಂಡು ಬಂದಾಗ ಔಟ್ ಪೇಶಂಟ್ ವಿಭಾಗ ಗಿಜಿಗುಟ್ಟುತ್ತಿತ್ತು. ಗುಂಪುಕಟ್ಟಿ ನಿಂತಿದ್ದ ಮಹಿಳೆಯರ ಸಾಲನ್ನು ಛೇಧಿಸಿಕೊಂಡು ವೈದ್ಯರ ಮೇಜಿನ ಬಳಿ ಬಂದು ನಿಂತ ಅವನ ತೋಳುಗಳಲ್ಲಿ ಎರಡೂವರೆ ವರ್ಷದ ಮಗುವ...

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...