Home / ಕವನ / ಕವಿತೆ / ಥೆಮ್ಸ್ ನದಿಯ ಮೇಲೆ

ಥೆಮ್ಸ್ ನದಿಯ ಮೇಲೆ

(ಕಾರ್ಮೆನ್‌ಗೆ)

ಹೆನ್ಲಿಯೆಂಬುದೊಂದು ಹಳ್ಳಿ ಅಲ್ಲಿ
ಥೆಮ್ಸ್ ನದಿಗೆ ಅಪರೂಪದ ಭರ
ನದಿಯ ಮಧ್ಯದ ತನಕ ಹಾಕಿದ
ಮರದ ಸೇತುವೆಯಲ್ಲಿ
ನಾವು ನಡೆದವು.
ರೊಟ್ಟಿಯ ತುಣುಕಿಗೆ ಅಥವಾ
ಸೇಬಿನ ತಿರುಳಿಗೆ ಬಾತುಕೋಳಿಗಳು
ಹತ್ತಿರಕ್ಕೆ ಬರುತ್ತಿದ್ದುವು
ನೋಡುತ್ತ ನಿಂತೆವು.

ಆಕಡೆ ಗುಡ್ಡ ಕಾಡು-ಸೂಜಿ ಮೊನೆಯ
ಮರಗಳು, ಮೌನ ಮಂಜು
ಈಚೆ ದಡದ ಮೇಲೆ
ಮೋಜಿಗೆಂದು ವಿರಾಮ ಹಿಡಿಯಲು ಕುಳಿತವರು
ಒಬ್ಬೊಬ್ಬನ ಪಕ್ಕದಲ್ಲೂ
ಒಂದೊಂದು ಬುಟ್ಟಿ ಹುಳಗಳು

ಈ ಸೇತುವೆ, ಈ ನೀರು, ಇಲ್ಲಿ ಈ ನಿಮಿಷ
ಒಟ್ಟಿಗೆ ಬಂದು ನಿಂತ ಈ ನಾವು
ಇದೆಲ್ಲ ಇನ್ನೊಂದು ಕಾಲದ ಇನ್ನೊಂದು ದಿನದ
ಆವರ್ತನೆಯೆ ಅಥವ
ಬೇರೆಯ ದಿನವೆ?

ತೇಲಿ ಹೋಗುತ್ತಿರುವ ಆ
ಖಾಲಿ ಬೀಯರು ಡಬ್ಬದ ಹಾಗೆ
ಕೆಳಗಿನ ಇಳುಕಲಿನಲ್ಲಿ ಮರೆಯಾದರೆ
ಎಷ್ಟು ಖುಷಿ!
–ಎಂದಳು ಅವಳು

ಹಿಂದೆ ಬರುತ್ತಿದ್ದಾಗಲೇ ನಾವು ಗಮನಿಸಿದ್ದು
ಮಾಸಿದ ಅಕ್ಷರಗಳ ನೋಟಿಸು-
ಪ್ರವಾಸಿಗಳು ತಮ್ಮ ರಕ್ಷಣೆಗೆ
ತಾವೇ ಜವಾಬ್ದಾರರು-ಎಂದು.

ರೆವರೆಂಡ್ ಜೋನ್ಸ್–
ಈಗಿಲ್ಲಿದ ಜೋನ್ಸ್ ಟೌನಿನ ಪೂಜಾರಿ-
ಆತ ಕುಳಿತ್ತಿದ್ದ ವೇದಿಕೆಯ ಮೇಲೆ
ಬರೆದಿತ್ತಂತೆ:
“ಹಿಂದಿನದನ್ನು ಯಾರು ಮರೆಯುತ್ತಾರೋ
ಅವರು ಅದನ್ನೇ ಮತ್ತೆ ಮತ್ತೆ
ಆವರ್ತಿಸುವುದಕ್ಕೆ ಗುರಿಯಾಗುತ್ತಾರೆ.”

ಅವು ಸಾಂತಾಯನನ ಮಾತುಗಳಲ್ಲವೆ
ಏನದರ ಅರ್ಥ?

ಯಾರಿಗೆ ಗೊತ್ತು, ಕಾರ್ಮೆನ್,
ಆ ಎಂಟುನೂರ ಹನ್ನೊಂದು ಮಂದಿಯಲ್ಲಿ
ಯಾರೂ ಉಳಿಯಲಿಲ್ಲ.
*****

Tagged:

Leave a Reply

Your email address will not be published. Required fields are marked *

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಹೊರ ಕೋಣೆಯಲ್ಲಿ ಕಾಲೂರಿ ಕೂತು ಬೀಡಿ ಕಟ್ಟುತ್ತಿದ್ದ ಸುಮಯ್ಯಾಗೆ ಕಣ್ಣು ಮತ್ತು ಕಿವಿಯ ಸುತ್ತಲೇ ಆಗಾಗ ಗುಂಯ್.. ಎನ್ನುತ್ತಾ ನೊಣವೊಂದು ಸರಿಸುಮಾರು ಹದಿನೈದು ನಿಮಿಷಗಳಿಂದ ಹಾರಾಡುತ್ತಾ ಕಿರಿಕಿರಿ ಮಾಡುತ್ತಿತ್ತು. ಹಿಡಿದು ಹೊಸಕಿ ಹಾಕಬೇಕೆಂದರೆ ಕೈಗೆ ಸಿಗದೆ ಮೈ ಪರಚಿಕೊಳ್ಳಬೇಕೆನ್ನ...

ಮೂಲ: ಗಾಯ್ ಡಿ ಮೊಪಾಸಾ ಗಗನಚುಂಬಿತವಾದ ಬೀಚ್‌ ವೃಕ್ಷಗಳೊಳಗಿಂದ ತಪ್ಪಿಸಿಕೊಂಡು ಸೂರ್ಯ ಕಿರಣಗಳು ಹೊಲಗಳ ಮೇಲೆ ಬೆಳಕನ್ನು ಕೆಡುವುವುದು ಬಲು ಅಪರೂಪ. ಬೆಳೆದ ಹುಲ್ಲನ್ನು ಕೊಯ್ದುದರಿಂದಲೂ, ದನಗಳೂ ಕಚ್ಚಿ ಕಚ್ಚಿ ತಿಂದುದರಿಂದಲೂ ನೆಲವು ಅಲ್ಲಲ್ಲಿ ತಗ್ಗು ದಿನ್ನೆಯಾಗಿ ಒಡೆದು ಕಾಣುತ್ತಿ...

ಒಂದೊಂದೆ ನೀರ ಹನಿಗಳು ಮುಳಿಹುಲ್ಲಿನ ಮಾಡಿನಿಂದ ಜಿನುಗಿ ತೊಟ್ಟಿಕ್ಕಿ ಆತ ಹೊದ್ದ ಕಂಬಳಿಯ ನೆನೆಸಿ ಒಳನುಸುಳಿ ಆತನ ಕುಂಡೆಯ ಭಾಗವೆಲ್ಲಾ ಒದ್ದೆಯಾದ ಕಾರಣವೋ ಹೊತ್ತಿಗೆ ಮುಂಚೆ ಎಂದೂ ಏಳದ ಹೊಲಿಯಪ್ಪ ಅಂದು ದಡಬಡಿಸಿ ಎದ್ದ. ಆತ ಮಲಗಿದ ಕಡೆಯಲ್ಲಿ ನೆಲವೆಲ್ಲಾ ಅದಾಗಲೇ ಹಸಿಯಾಗಿತ್ತಲ್ಲ. ಹ...

ಅದು ರಾಷ್ಟೀಯ ಹೆದ್ದಾರಿ ಎನ್.ಎಚ್.೧೭. ಎಡೆಬಿಡದ ವಾಹನಗಳ ಸಂಚಾರ. ಮಧ್ಯೆ ಮಧ್ಯೆ ಅಪಾಯಕಾರಿ ತಿರುವುಗಳು. ಹೊಸಬರಿಗೆ ಅಪರಿಚಿತರಿಗೆ ಮುಂದೆ ತಿರುವು ಇದೆ ಎಂದು ತಿಳಿಯಲಾಗದ, ಅವಘಡವೇನಾದರೂ ಸಂಭವಿಸಿದರೆ ನೇರವಾಗಿ ಪ್ರಪಾತದ ಪಾಲಾಗುವ ಭಯವನ್ನು ಹೊಂದಿದ ಭೀಕರ ತಿರುವುಗಳನ್ನು ಹೊಂದಿದ ವಕ...