Home / ಕವನ / ಕವಿತೆ / ಥೆಮ್ಸ್ ನದಿಯ ಮೇಲೆ

ಥೆಮ್ಸ್ ನದಿಯ ಮೇಲೆ

(ಕಾರ್ಮೆನ್‌ಗೆ)

ಹೆನ್ಲಿಯೆಂಬುದೊಂದು ಹಳ್ಳಿ ಅಲ್ಲಿ
ಥೆಮ್ಸ್ ನದಿಗೆ ಅಪರೂಪದ ಭರ
ನದಿಯ ಮಧ್ಯದ ತನಕ ಹಾಕಿದ
ಮರದ ಸೇತುವೆಯಲ್ಲಿ
ನಾವು ನಡೆದವು.
ರೊಟ್ಟಿಯ ತುಣುಕಿಗೆ ಅಥವಾ
ಸೇಬಿನ ತಿರುಳಿಗೆ ಬಾತುಕೋಳಿಗಳು
ಹತ್ತಿರಕ್ಕೆ ಬರುತ್ತಿದ್ದುವು
ನೋಡುತ್ತ ನಿಂತೆವು.

ಆಕಡೆ ಗುಡ್ಡ ಕಾಡು-ಸೂಜಿ ಮೊನೆಯ
ಮರಗಳು, ಮೌನ ಮಂಜು
ಈಚೆ ದಡದ ಮೇಲೆ
ಮೋಜಿಗೆಂದು ವಿರಾಮ ಹಿಡಿಯಲು ಕುಳಿತವರು
ಒಬ್ಬೊಬ್ಬನ ಪಕ್ಕದಲ್ಲೂ
ಒಂದೊಂದು ಬುಟ್ಟಿ ಹುಳಗಳು

ಈ ಸೇತುವೆ, ಈ ನೀರು, ಇಲ್ಲಿ ಈ ನಿಮಿಷ
ಒಟ್ಟಿಗೆ ಬಂದು ನಿಂತ ಈ ನಾವು
ಇದೆಲ್ಲ ಇನ್ನೊಂದು ಕಾಲದ ಇನ್ನೊಂದು ದಿನದ
ಆವರ್ತನೆಯೆ ಅಥವ
ಬೇರೆಯ ದಿನವೆ?

ತೇಲಿ ಹೋಗುತ್ತಿರುವ ಆ
ಖಾಲಿ ಬೀಯರು ಡಬ್ಬದ ಹಾಗೆ
ಕೆಳಗಿನ ಇಳುಕಲಿನಲ್ಲಿ ಮರೆಯಾದರೆ
ಎಷ್ಟು ಖುಷಿ!
–ಎಂದಳು ಅವಳು

ಹಿಂದೆ ಬರುತ್ತಿದ್ದಾಗಲೇ ನಾವು ಗಮನಿಸಿದ್ದು
ಮಾಸಿದ ಅಕ್ಷರಗಳ ನೋಟಿಸು-
ಪ್ರವಾಸಿಗಳು ತಮ್ಮ ರಕ್ಷಣೆಗೆ
ತಾವೇ ಜವಾಬ್ದಾರರು-ಎಂದು.

ರೆವರೆಂಡ್ ಜೋನ್ಸ್–
ಈಗಿಲ್ಲಿದ ಜೋನ್ಸ್ ಟೌನಿನ ಪೂಜಾರಿ-
ಆತ ಕುಳಿತ್ತಿದ್ದ ವೇದಿಕೆಯ ಮೇಲೆ
ಬರೆದಿತ್ತಂತೆ:
“ಹಿಂದಿನದನ್ನು ಯಾರು ಮರೆಯುತ್ತಾರೋ
ಅವರು ಅದನ್ನೇ ಮತ್ತೆ ಮತ್ತೆ
ಆವರ್ತಿಸುವುದಕ್ಕೆ ಗುರಿಯಾಗುತ್ತಾರೆ.”

ಅವು ಸಾಂತಾಯನನ ಮಾತುಗಳಲ್ಲವೆ
ಏನದರ ಅರ್ಥ?

ಯಾರಿಗೆ ಗೊತ್ತು, ಕಾರ್ಮೆನ್,
ಆ ಎಂಟುನೂರ ಹನ್ನೊಂದು ಮಂದಿಯಲ್ಲಿ
ಯಾರೂ ಉಳಿಯಲಿಲ್ಲ.
*****

Tagged:

Leave a Reply

Your email address will not be published. Required fields are marked *

೧ ಗೌರಿಯ ಹಬ್ಬವು ಕಳೆದು ಕೆಲವು ದಿನಗಳಾಗಿದ್ದುವು. ಭಾಗೀರಥಮ್ಮನೂ ಅವಳ ಜೊತೆಯ ಹುಡುಗಿಯರೂ ಒಂದೊಂದು ದಿನವನ್ನು ಕಳೆಯುವುದೂ ಒಂದೊಂದು ಯುಗವನ್ನು ಕಳೆದಂತೆ ಕಷ್ಟವಾಗಿದ್ದಿತು. ಅವರು ಎಷ್ಟು ಕುತೂಹಲದಿಂದ ಬಯಸಿದರೂ ದಿನಗಳು ಬೇಗ ಬೇಗ ಉರುಳಲೊಲ್ಲವು. ಒಂದು ದಿನ ಅವರೆಲ್ಲರೂ ಸೇರಿ ಕವಡೆಯ...

ಸಂಜೆ ನಾಲ್ಕು ಗಂಟೆಯಾದರೆ ಸಾಕು. ಅವರೆಲ್ಲರೂ ಒಬ್ಬೊಬ್ಬರಾಗಿ ಬಂದು ಸೇರುತ್ತಾರೆ. ಅದೊಂದು ಪಂಚಾಯಿತಿ ಕಟ್ಟೆ ಇದ್ದಂತೆ. ಮಧ್ಯದಲ್ಲೊಂದು ಸಿಮೆಂಟ್ ಬೆಂಚು, ಅದರ ಎಡ, ಬಲ ಎರಡೂ ಕಡೆ ಇವರೇ ಒಂದಷ್ಟು ಕಲ್ಲು ಚಪ್ಪಡಿಗಳನ್ನು ಎಳೆದು ತಂದು ಕೊಡುವುದಕ್ಕೆ ಪೀಠಗಳನ್ನು ಮಾಡಿಕೊಂಡಿದ್ದಾರೆ. ಸ...

ತಿಮ್ಮಣ್ಣ ನಮ್ಮೂರಿನ ಪಕ್ಕದ ಹಳ್ಳಿಯಲ್ಲಿನ ಅಡುಗೆ ಭಟ್ಟ ತಿಪ್ಪಾಭಟ್ಟರ ಮಗ. ತಿಪ್ಪಾಭಟ್ಟರಿಗೆ ಮದುವೆಯಾಗಿ ಹತ್ತು ವರ್ಷ ಕಳೆದರೂ ಮಕ್ಕಳಾಗಿರಲಿಲ್ಲ. ಕೊನೆಗೆ ಪಕ್ಕದ ಮನೆಯ ಕಮಲಾಕ್ಷಮ್ಮನ ಸಲಹೆ ಮೇರೆಗೆ ಮಗುವಾದರೆ ತಿರುಪತಿಗೆ ಹೋಗಿ ಬರುವ ಹರಕೆ ಹೊತ್ತರು. ತಿಮ್ಮಪ್ಪನ ಕೃಪಾಕಟಾಕ್ಷವೋ ...

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...