ಮಂಡಿಯಲ್ಲಿ ಕವಿ

ಮೊಟ್ಚೆಗಳಿವೆ ಉಪಮೆಗಳಂತೆ
ಪ್ರತಿಮೆಗಳಂತಿವೆ ಹೊಟ್ಟೆಗಳು
ಅರ್ಥವಿಸ್ತಾರ ಹೆಚ್ಚಿಸುವುದಕ್ಕೆ
ವಿಸ್ತೃತ ಕುಂಡೆಯ ಹೆಣ್ಣುಗಳು
(ಎಲ್ಲವನ್ನೂ ನೋಡುವುವು
ಕವಿಯ ಜಾಗೃತ ಕಣ್ಣುಗಳು)

ಗುಂಪಿನ ನಡುವೆ ಬೇಕೆಂತಲೆ ಸಿಕ್ಕು
ಮೈಯೊರಸುವ ಮೈಗಳು
ನುಡಿದರೆ ಮುತ್ತಿನ ಹರಳಿನಂತಿರಬೇಕು
ಅ ರೀತಿಯ ಬೈಗಳು
(ಎಲ್ಲರನ್ನೂ ಮುನ್ನಡೆಸುವುವು
ಯಾರಿಗೂ ಕಾಣಿಸದ ಕೈಗಳು)

ಶ್ರೇಷ್ಠ ಲೇಖಕ ಕಾಫ್ಕ ಹೇಳಿದ-
“ಕೇಳಿದರೆ ಯಾರಿಗೂ ಬೇಡ
ಈ ನಿತ್ಯದ ಬದುಕು
ಆದರೆ ನೆನಪಿರಲಿ! ಮನುಷ್ಯರಿಗಿರೋದು ಮಾತ್ರ
ಇದೊಂದೇ ಸರಕು!’

ಇರಲಿ ನೆನಪಿರಲಿ
ಕೊಂಡ ಸಾಮಾನುಗಳ ಲೆಕ್ಕ
ಕೊಳ್ಳಬೇಕಾದ ಮಲಬಾರ್ ಪಪ್ಟಡಂ ಹಾಗೂ
ಕೈಲಿ ಉಳಿದಿರೋ ರೊಕ್ಕ

ನೆನಪಿರಲಿ ಸವೆದ ಚಪ್ಪಲಿಗಳಿಗೆ
ಮೆಟ್ಟದಿರಲು ಹಣ್ಣಿನ ಸಿಪ್ಪೆ
ಸುಂದರ ನಿಮಿಷಗಳಲ್ಲಿ ಕಣ್ಣುಗಳಿಗೆ
ಮುಚ್ಚದಿರಲು ರೆಪ್ಪೆ
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಗೆಳತಿ
Next post ಕೇಡು

ಸಣ್ಣ ಕತೆ

  • ಏಡಿರಾಜ

    ಚಲೋ ವಂದು ಅರಸು ಮನಿ, ಗಂಡ-ಹೆಂಡ್ತಿ ದೊಡ್ಡ ಮನ್ತಾನದಲ್ ಆಳ್ಕತಿದ್ರು. ಆವಾಗೆ ಆ ಅರಸೂಗೆ ಗಂಡ್ ಹುಡ್ಗರಿಲ್ಲ. ಸಂತತ್ಯಲ್ಲ, ಇದ್ರದು ನಿಚ್ಚಾ ಕೆಲ್ಸಯೇನಪ್ಪ ಅರಸು ಹಿಂಡ್ತಿದು, ಮನಿ… Read more…

  • ಅಹಮ್ ಬ್ರಹ್ಮಾಸ್ಮಿ

    ಬಹುಶಃ ಮೊದಲ ಬಾರಿ ನಾನು ಅವನನ್ನು ನೋಡುತ್ತಿರಬೇಕು. ಅವನು ಅಕಸ್ಮತ್ತಾಗಿ ನನ್ನ ಕಣ್ಣಿಗೆ ಬಿದ್ದನೋ, ಅಲ್ಲಾ ಅವನೇ ನಾನು ಕಾಣುವ ಹಾಗೆ ಎದುರಿಗೆ ಬಂದನೋ ಎಂಬ ವಿಷಯದಲ್ಲಿ… Read more…

  • ಮಿಂಚಿನ ದೀಪ

    ಸಂಜೆ ಮೊಗ್ಗೂಡೆದಿತ್ತು. ಆಕಾಶದ ತುಂಬೆಲ್ಲಾ ಬಣ್ಣದ ಬಾಟಲಿ ಉರುಳಿಸಿದ ಹಾಗೆ ಕೆಂಪು, ನೀಲಿ ಬಣ್ಣ ಚೆಲ್ಲಿ, ಚಳಿಗಾಲದ ಸಂಜೆಯ ಮಬ್ಬಿನ ತೆಳುಪರದೆಯ ‘ಓಡಿನಿ’ ಎಲ್ಲವನ್ನೂ ಸುತ್ತುವಂತೆ ಪಸರಿಸಿಕೊಂಡಿತ್ತು.… Read more…

  • ಬಿರುಕು

    ಚಂಪಾ ಹಾಲು ತುಂಬಿದ ಲೋಟ ಕೈಯಲ್ಲಿ ಹಿಡಿದು ಒಳಗೆ ಬಂದಳು. ಎಂದಿನಂತೆ ಮೇಜಿನ ಮೇಲಿಟ್ಟು ಮಾತಿಲ್ಲದೆ ಹೊರಟು ಹೋಗುತ್ತಿದ್ದ ಅವಳು ಹೊರಡುವ ಸೂಚನೆಯನ್ನೇ ತೋರದಿದ್ದಾಗ ಮೂರ್‍ತಿ ಬೆಚ್ಚಿ… Read more…

  • ಏಕಾಂತದ ಆಲಾಪ

    ಅಂದು ದಸರೆಯ ಮುನ್ನಾದಿನ ಮಕ್ಕಳಿಗೆಲ್ಲಾ ಶಾಲಾ ರಜೆ ದಿವಸಗಳು. ಅವಳು ಕಾತ್ಯಾಯನಿ, ಒಂದು ತಿಂಗಳಿಂದ ಆ ಪಟ್ಟಣದ ಪ್ರಸಿದ್ಧ ನೇತ್ರಾಲಯಕ್ಕೆ ಅಲೆಯುತ್ತಿದ್ದಾಳೆ. ಎರಡೂ ಕಣ್ಣುಗಳು ಪೊರೆಯಿಂದ ಮುಂದಾಗಿವೆ.… Read more…

cheap jordans|wholesale air max|wholesale jordans|wholesale jewelry|wholesale jerseys