Home / ಕವನ / ಕವಿತೆ / ಗೆಳತಿ

ಗೆಳತಿ

ಏಕೆ ಗೆಳತಿ ಮನ
ಬಾಗಿಲವರೆಗೂ ಬಂದು
ತಟ್ಟಿ ಕರೆಯಲಿಲ್ಲ
ನಿನ್ನ ಭಾವನೆಗಳೇಕೆ
ನನ್ನವರೆಗೂ ಮುಟ್ಟಲೇ ಇಲ್ಲ
ನನಗೂ ಇತ್ತಲ್ಲ ಆಸೆ
ನಿನ್ನಂತೆ

ಗೆಳತಿಯಾಗಿ ಬಂದವಳು
ಪ್ರೇಮಿಯಾಗಿ ಬರಲೆಂದು
ಜೀವನಕೆ ಜೊತೆಯಾಗಲೆಂದೆ
ಅದಕ್ಕೇಕೆ ತಣ್ಣೀರನ್ನೆರೆಚಿದೆ?
ಕಡೆತನಕ ಬಗೆಗೊಡು
ಹೊಗೆಗೂಡಾಗಲೆಂದೇ?

ಬಣ್ಣದ ಚಿತ್ತಾರ ಬಿಡಿಸ
ಹೊರಟಾಗ ಕಪ್ಪು ಮಸಿ
ಚೆಲ್ಲಿ ಕಲೆಯಾಯಿತೆ?

ವ್ಯಥೆ ಬೇಡ ಗೆಳತಿ
ನವ್ಯ ಕಲೆಯ ರೀತಿ
ಗೆರೆ ಎಳೆದು ಚಿತ್ರವಾಗಿಸುವೆ
ಹೊಗೆಗೂಡ ಕಿಂಡಿಯನು
ತೆರೆದು ಬಿಡು
ಶುದ್ಧವಾತ ಹರಿದು ಬರಲಿ
ಪ್ರೇಮವಿರದಿರೆ,
ಸ್ನೇಹವಾದರೂ ಇರಲಿ ಈ ಪರಿ

ಸ್ವಾರ್ಥದ ನೆರಳಿಲ್ಲ
ಏಕತಾನೆತೆಯ ಕೊರಗಿಲ್ಲ
ವಿಳಂಬ ಬೇಡ ಗೆಳತಿ
ಈಗಲಾದರೂ ಪ್ರೇಮಸೌಧದ
ತಳಪಾಯದ ಮೇಲೆ
ಕಟ್ಟೋ ನಡಿ ಸ್ನೇಹಸೌಧ

*****

Tagged:

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...

ಎಲೈ ಓದುಗರೇ! ಕಣ್ಣುಗಳನ್ನು ಅಗಲಿಸಿ ಏಕಚಿತ್ತದಿಂದ ಓದಿ! ನಾನೊಂದು ಕಥೆ ಹೇಳಲಿದ್ದೇನೆ. ರೋಮಾಂಚಕಾರಿ, ಮೈನಡುಗಿಸುವಂತಹ ಕಥೆ! ಒಬ್ಬ ಸಾಹಿತಿಯ ಕಥೆ! ಸಾಹಿತಿ ಆಗೇ ತೀರಬೇಕೆಂದು ಹಂಬಲಿಸುವವನ ಕಥೆ! ಸಾಹಿತ್ಯದಲ್ಲಿ ಎಲ್ಲ ಬಿರುದು ಬಹುಮಾನಗಳನ್ನು, ಪ್ರಶಸ್ತಿ ಪ್ರಶಂಸೆಗಳನ್ನು ಹೇಗೆ ಪಡೆ...

“ಎಷ್ಟು ದಿನ ಹೀಗೇ ತೊಂದರೆ ಪಟ್ಟುಕೊಳ್ಳುತ್ತಿರುವದು ಕೃಷ್ಣ ಮೂರ್ತಿ? ಮಕ್ಕಳನ್ನು ಆರಯ್ಯುವದು, ಅಡಿಗೆ ಮಾಡುವದು- ಇವುಗಳಿಗೆಲ್ಲ ಆಳು ಇಟ್ಟು ಪೂರೈಸೀತೇ? ಸುಮ್ಮನೆ ಇನ್ನೊಂದು ಮದುವೆಯಾಗಿ ಬಿಡಬಾರದೇ?” “ಪ್ರೀತಿ ಇಷ್ಟು ಅಗ್ಗ ಅಲ್ಲ ನೋಡು” “ಪ್ರೀತಿಯ ವಿಷಯವೇನೇ ...

ಕಾಲೇಜಿನ ಲೈಬ್ರೆರಿಯಿಂದ ಹೊರಬಂದ ಅವಳು ಒಮ್ಮೆ ಆಟದ ಮೈದಾನವನ್ನು ದಿಟ್ಟಿಸಿ ನೋಡಿದಳು. ಮೈದಾನ ಖಾಲಿ ಇರುವುದನ್ನು ಖಚಿತ ಮಾಡಿಕೊಂಡ ಅವಳು ವೇಗವಾಗಿ ನಡೆಯುತ್ತಾ ರಾಜ ರಸ್ತೆಗೆ ಬಂದಳು. ಅಲ್ಲಿಂದ ತನ್ನ ಮನೆಯ ವಿರುದ್ಧ ದಿಕ್ಕಿಗೆ ಹೆಜ್ಜೆ ಹಾಕ ತೊಡಗಿದಳು. ತನ್ನ ಶಕ್ತಿಯನ್ನೆಲ್ಲಾ ಪ್ರಯ...

ಅಡಿಕೆ ಭತ್ತಗಳ ವ್ಯಾಪಾರದಿಂದ ಅಶ್ವತ್ಥ ಹೆಬ್ಬಾರರು ನೂರಾರು ಸಾವಿರ ರೂಪಾಯಿ ಗಳಿಸಿದರೆಂದು ದಟ್ಟವಾಗಿ ಸುದ್ದಿ ಹಬ್ಬಿತು. ಇದಕ್ಕೆ ಸಾಕ್ಷಿ ಕೊಡುವಂತೆ ಹೆಬ್ಬಾರರು ಗ್ರಾಮದೇವಸ್ಥಾನದಲ್ಲಿ ಒಂದು ಯಜ್ಞವನ್ನು ಮಾಡಿಸುವೆನೆಂದು ಸಾರಿ, ತಯಾರಿ ಮಾಡಹತ್ತಿದರು. ತಟ್ಟೆಯ ಬಿಡಾರದಲ್ಲಿ ಸಾಲೆ ನ...

ಬ್ಯಾಂಕಿನ ಅರೆತೆರೆದ ಬಾಗಿಲನ್ನು ದೂಡಿ ಒಳಬಂದ ಪ್ರಹ್ಲಾದ, ಕೆಲಸದಲ್ಲಿ ಮಗ್ನಳಾಗಿದ್ದ ಸುಮಾಳ ಬಳಿಗೋಡಿ ಅವಳ ಪರ್‍ಸನ್ನು ತಡಕಾಡಿ ಹಣತೆಗೆದುಕೊಂಡು ಬಂದಷ್ಟೇ ವೇಗದಿಂದ ಹೊರಗೋಡಿದ್ದ. “ಏನು ಮಗರಾಯನ ಗಲಾಟೆ” ಹತ್ತಿರದಲ್ಲಿದ್ದ ದಿನಕರನ ಪ್ರಶ್ನೆಗೆ “ಅವನದ್ದು ಯಾವಾ...