ಗೆಳತಿ

ಏಕೆ ಗೆಳತಿ ಮನ
ಬಾಗಿಲವರೆಗೂ ಬಂದು
ತಟ್ಟಿ ಕರೆಯಲಿಲ್ಲ
ನಿನ್ನ ಭಾವನೆಗಳೇಕೆ
ನನ್ನವರೆಗೂ ಮುಟ್ಟಲೇ ಇಲ್ಲ
ನನಗೂ ಇತ್ತಲ್ಲ ಆಸೆ
ನಿನ್ನಂತೆ

ಗೆಳತಿಯಾಗಿ ಬಂದವಳು
ಪ್ರೇಮಿಯಾಗಿ ಬರಲೆಂದು
ಜೀವನಕೆ ಜೊತೆಯಾಗಲೆಂದೆ
ಅದಕ್ಕೇಕೆ ತಣ್ಣೀರನ್ನೆರೆಚಿದೆ?
ಕಡೆತನಕ ಬಗೆಗೊಡು
ಹೊಗೆಗೂಡಾಗಲೆಂದೇ?

ಬಣ್ಣದ ಚಿತ್ತಾರ ಬಿಡಿಸ
ಹೊರಟಾಗ ಕಪ್ಪು ಮಸಿ
ಚೆಲ್ಲಿ ಕಲೆಯಾಯಿತೆ?

ವ್ಯಥೆ ಬೇಡ ಗೆಳತಿ
ನವ್ಯ ಕಲೆಯ ರೀತಿ
ಗೆರೆ ಎಳೆದು ಚಿತ್ರವಾಗಿಸುವೆ
ಹೊಗೆಗೂಡ ಕಿಂಡಿಯನು
ತೆರೆದು ಬಿಡು
ಶುದ್ಧವಾತ ಹರಿದು ಬರಲಿ
ಪ್ರೇಮವಿರದಿರೆ,
ಸ್ನೇಹವಾದರೂ ಇರಲಿ ಈ ಪರಿ

ಸ್ವಾರ್ಥದ ನೆರಳಿಲ್ಲ
ಏಕತಾನೆತೆಯ ಕೊರಗಿಲ್ಲ
ವಿಳಂಬ ಬೇಡ ಗೆಳತಿ
ಈಗಲಾದರೂ ಪ್ರೇಮಸೌಧದ
ತಳಪಾಯದ ಮೇಲೆ
ಕಟ್ಟೋ ನಡಿ ಸ್ನೇಹಸೌಧ

*****

Previous post ನವ್ಯ
Next post ಮಂಡಿಯಲ್ಲಿ ಕವಿ

ಸಣ್ಣ ಕತೆ

  • ಇರುವುದೆಲ್ಲವ ಬಿಟ್ಟು

    ನಿಂತ ರೈಲು ಬೋಗಿಯೊಳಗಿಂದ ನನ್ನ ದೃಷ್ಟಿ ಹೊರಗಿನ ನಿಲ್ದಾಣವನ್ನು ವೀಕ್ಷಿಸುತ್ತಿತ್ತೇ ಹೊರತು ನನ್ನ ಮನಸ್ಸು ಮಾತ್ರ ನಾಗಾಲೋಟದಿಂದ ಓಡುತ್ತಿತ್ತು. ಒಂದು ರೀತಿಯಲ್ಲಿ ಆಲೋಚನೆಗಳು ನನ್ನ ಗೆಳೆಯ ಎಂದೇ… Read more…

  • ಪಾಠ

    ಚೈತ್ರ ಮಾಸದ ಮಧ್ಯ ಕಾಲ. ಬೇಸಿಗೆ ಕಾಲಿಟ್ಟಿದೆ. ವಸಂತಾಗಮನ ಈಗಾಗಾಲೇ ಆಗಿದೆ. ಊರಲ್ಲಿ ಸುಗ್ಗಿ ಸಮಯ. ಉತ್ತರ ಕರ್ನಾಟಕದ ನಮ್ಮ ಭಾಗದಲ್ಲಿ ಹತ್ತಿ ಜೋಳ ಪ್ರಮುಖ ಬೆಳೆಗಳು.… Read more…

  • ಹೃದಯದ ತೀರ್ಪು

    ಬೆಳಿಗ್ಗೆ ಏಳು ಗಂಟೆಯ ಹೊತ್ತಿಗೆ ತಿಂಡಿ ಕೂಡ ಮಾಡದೆ ಹೊರ ಹೋಗುತ್ತಿದ್ದ ಯೂಸುಫ್, ಮಧ್ಯಾಹ್ನ ಮಾತ್ರ ಮನೆಯಲ್ಲಿ ಉಣ್ಣುತ್ತಿದ್ದ. ರಾತ್ರಿಯ ಊಟ ಅವನ ತಾಯಿಯ ಮನೆಯಲ್ಲಿ. ತಾಯಿಯ… Read more…

  • ಒಂಟಿ ತೆಪ್ಪ

    ನಮ್ಮ ಕಂಪೆನಿಗೆ ಹೊಸದಾಗಿ ಕೆಲಸಕ್ಕೆ ಸೇರಿದ ಕ್ಲೇರಾಳ ಬಗ್ಗೆ ನಾನು ತಿಳಿದುಕೊಳ್ಳಲು ಪ್ರಯತ್ನಿಸಿದಷ್ಟೂ ಅವಳು ನಿಗೂಢವಾಗುತ್ತಿದ್ದಳು. ನಾಲಗೆಯ ಚಪಲದಿಂದ ಸಹ-ಉದ್ಯೋಗಿಗಳು ಅವಳ ಬಗ್ಗೆ ಇಲ್ಲಸಲ್ಲದ ಆರೋಪಗಳನ್ನು ಹೊರಿಸಿದರೂ… Read more…

  • ಡಿಪೋದೊಳಗಣ ಕಿಚ್ಚು…

    ಚಿತ್ರ: ವಾಲ್ಡೊಪೆಪರ್‍ ಬೆಳಿ… ಬೆಳಿಗ್ಗೆನೇ… ಡಿಪೋದಲ್ಲಿ, ಜನ್ರು ಜಮಾಯಿಸಿದ್ದು ಕಂಡು, ಡಿಪೋ ಮ್ಯಾನೇಜರ್ ಮನೋಜ್ ಪಾಟೀಲರ ಹೃದಯ ಬಾಯಿಗೆ ಬಂತು. ’ಮ್ಯಾನೇಜರ್ ಡಿಪೋದಲ್ಲಿ ಕ್ಷಣ ಇಲ್ಲೆಂದ್ರೆ ಸಾಕು…… Read more…

cheap jordans|wholesale air max|wholesale jordans|wholesale jewelry|wholesale jerseys