ಗೆಳತಿ

ಏಕೆ ಗೆಳತಿ ಮನ
ಬಾಗಿಲವರೆಗೂ ಬಂದು
ತಟ್ಟಿ ಕರೆಯಲಿಲ್ಲ
ನಿನ್ನ ಭಾವನೆಗಳೇಕೆ
ನನ್ನವರೆಗೂ ಮುಟ್ಟಲೇ ಇಲ್ಲ
ನನಗೂ ಇತ್ತಲ್ಲ ಆಸೆ
ನಿನ್ನಂತೆ

ಗೆಳತಿಯಾಗಿ ಬಂದವಳು
ಪ್ರೇಮಿಯಾಗಿ ಬರಲೆಂದು
ಜೀವನಕೆ ಜೊತೆಯಾಗಲೆಂದೆ
ಅದಕ್ಕೇಕೆ ತಣ್ಣೀರನ್ನೆರೆಚಿದೆ?
ಕಡೆತನಕ ಬಗೆಗೊಡು
ಹೊಗೆಗೂಡಾಗಲೆಂದೇ?

ಬಣ್ಣದ ಚಿತ್ತಾರ ಬಿಡಿಸ
ಹೊರಟಾಗ ಕಪ್ಪು ಮಸಿ
ಚೆಲ್ಲಿ ಕಲೆಯಾಯಿತೆ?

ವ್ಯಥೆ ಬೇಡ ಗೆಳತಿ
ನವ್ಯ ಕಲೆಯ ರೀತಿ
ಗೆರೆ ಎಳೆದು ಚಿತ್ರವಾಗಿಸುವೆ
ಹೊಗೆಗೂಡ ಕಿಂಡಿಯನು
ತೆರೆದು ಬಿಡು
ಶುದ್ಧವಾತ ಹರಿದು ಬರಲಿ
ಪ್ರೇಮವಿರದಿರೆ,
ಸ್ನೇಹವಾದರೂ ಇರಲಿ ಈ ಪರಿ

ಸ್ವಾರ್ಥದ ನೆರಳಿಲ್ಲ
ಏಕತಾನೆತೆಯ ಕೊರಗಿಲ್ಲ
ವಿಳಂಬ ಬೇಡ ಗೆಳತಿ
ಈಗಲಾದರೂ ಪ್ರೇಮಸೌಧದ
ತಳಪಾಯದ ಮೇಲೆ
ಕಟ್ಟೋ ನಡಿ ಸ್ನೇಹಸೌಧ

*****

Previous post ನವ್ಯ
Next post ಮಂಡಿಯಲ್ಲಿ ಕವಿ

ಸಣ್ಣ ಕತೆ

  • ತ್ರಿಪಾದ

    ವಿಲಿಯಂ ಜೋನ್ಸ್ ಭಾರತದ ದೇವನಹಳ್ಳಿ ವಿಮಾನ ನಿಲ್ದಾಣದಲ್ಲಿ ಇಳಿದಾಗ, ಅವನ ಮನವನ್ನು ಕಾಡುತ್ತಿದ್ದ ಪ್ರೀತಿ ಅವನ ಹೆಂಡತಿ ಮಕ್ಕಳೊಂದಿಗೆ ಅವನನ್ನು ಅತಿಯಾಗಿ ಹಚ್ಚಿಕೊಂಡಿದ್ದ ಅವನ ಪ್ರೀತಿಯ ನಾಯಿ… Read more…

  • ಇನ್ನೊಬ್ಬ

    ದೇವರ ವಿಷಯದಲ್ಲಿ ನಾನು ಅಗ್ನೋಸ್ಟಿಕನೂ ರಾಜಕೀಯದ ವಿಷಯದಲ್ಲಿ ಸೆಂಟ್ರಿಸ್ಟನೂ ಆಗಿದ್ದೇನೆ. ಇವೆರಡೂ ಅಪಾಯವಿಲ್ಲದ ನಿಲುವುಗಳೆಂಬುದು ನನಗೆ ಗೊತ್ತು. ಅಗ್ನೋಸ್ಟಿಕನಾಗಿದ್ದವನನ್ನು ಆಸ್ತಿಕರೂ ನಾಸ್ತಿಕರೊ ಒಂದೇ ತರಹ ಪ್ರೀತಿಯಿಂದ ಕಾಣುತ್ತಾರೆ,… Read more…

  • ಇರುವುದೆಲ್ಲವ ಬಿಟ್ಟು

    ಕುಮಾರನಿಗೆ ಪಕ್ಕದ ಮನೆಯ ರೆಡಿಯೋದಲ್ಲಿ ಬಸಪ್ಪ ಮಾದರ ಧ್ವನಿ ಕೇಳಿ ಎಚ್ಚರವಾಯ್ತು. ದೇಹಲಿ ಕೇಂದ್ರದಿಂದ ವಾರ್ತೆಗಳು ಬರುತ್ತಿದ್ದವು. ಹಾಸಿಗೆಯಿಂದ ಎದ್ದವನೆ ಕದ ತೆಗೆದ. ಬೆಳಗಿನ ಸೊಗಸು ಕೊರೆವ… Read more…

  • ನಿಂಗನ ನಂಬಿಗೆ

    ಹೊಸಳ್ಳಿ ನೋಡುವದಕ್ಕೆ ಸಣ್ಣದಾದರೂ ಕಣ್ಣಿಗೆ ಅಂದವಾಗಿದೆ. ಬೆಳವಲ ನಾಡಿನಲ್ಲಿ ಬರಿ ಬಯಲೆಂದು ಟೀಕೆ ಮಾಡುವವರಿಗೆ ಹೊಸಳ್ಳಿ ಕೂಗಿ ಹೇಳುತ್ತಿದೆ - ತಾನು ಮಲೆನಾಡ ಮಗಳೆಂದು ! ಊರ… Read more…

  • ಮತ್ತೆ ಬಂದ ವಸಂತ

    ಚಿತ್ರ: ಆಮಿ ಮೊದಲ ರಾತ್ರಿಯ ಉನ್ಮಾದದಲ್ಲಿದ್ದ ಮಧುವಿನ ಕಿವಿ ಹಿಂಡಿ ಅವಳಂದಳು. ‘ಮಧು, ಇಂದಿನಿಂದ ನಾವು ಗಂಡ - ಹೆಂಡತಿಯಾಗಿರುವುದು ಬೇಡ. ಬದುಕಿನ ಕೊನೆ ತನಕವೂ ಗೆಳೆಯ… Read more…