Home / ಕವನ / ಕವಿತೆ / ಕಿರು ಪರಿಚಯ

ಕಿರು ಪರಿಚಯ

ನಾನು ಯಾರೆಂದಿರಾ?
ನಾನು ಬುದ್ಧಿವಂತ
ಬುದ್ಧನ ಜಾತಿಯಲಿ ಹುಟ್ಟಿ
ಸಾರಸ್ವತ ಲೋಕವನು
ಕೈಯಿಂದ ತಟ್ಟಿ
ಜ್ಞಾನ ಭಂಡಾರವನು
ಗಂಟಾಗಿ ಕಟ್ಟಿ
ಅಜ್ಞಾನ ಅಂಧಕಾರವನು
ಹೆಮ್ಮೆಯಿಂದ ಮೆಟ್ಟಿ
ಪಡೆದ ಬುದ್ಧಿ ಸ್ವಂತ
ನಾನು ಬುದ್ಧಿವಂತ.

ಶಿಕ್ಷಕರ ಶಿಕ್ಷಿಸ ಬಲ್ಲೆ
ಪ್ರಿಂಸಿಪಾಲನ ಕ್ಯಾಬಿನ ಖಿಂಡಿಗೆ
ಕಲ್ಲು ಹೊಡೆದು ಕನ್ನಡಿ ಮುರಿಯ ಬಲ್ಲೆ
ಲ್ಯಾಬಿನಲ್ಲಿ ಸಿಲಿಂಡರಿ
ನ ದ್ರವಗಳ ಚೆಲ್ಲಿ
ಪ್ರಯೋಗ ನಡೆಸ ಬಲ್ಲೆ
ಪರೀಕ್ಷೆಯ ಹಾಲಿನಲಿ
ಅರ್ಧ ಗಂಟೆಯೆ ಕುಳಿತು
ಪಾಸಾಗ ಬಲ್ಲೆ
ಪಾಸಾಗದೆಯು ಮುಂದಿನ ಕ್ಲಾಸಿಗೆ
ಹೋಗ ಬಲ್ಲೆ
ವಿಶ್ವವಿದ್ಯಾಲಯಗಳು
ನನ್ನ ಅಂಕಿತದಲ್ಲಿ
ಮೂರು ವಿಷಯಗಳ ಮೇಲೆ
ಎಮ್ಮೆ ಕಟ್ಟಿ
ನನ್ನ ಹೆಸರಿನ ಮುಂದೆ
ಡಿಗ್ರಿಗಳ ಕಂತೆ ನಿಲ್ಲಿಸ ಬಲ್ಲೆ
ದೇಶದಲ್ಲಿ ನನ್ನ ಯೋಗ್ಯತೆಗೆ
ಸರಿಯಾದ ನೌಕರಿಯೆ ಕಡಿಮೆ
ಅದಕ್ಕೆಂದೆ ನನಗಿಲ್ಲ ದುಡಿಮೆ
ನಾನು ಸಾಧು ಸಂತ
ನಾನು ನಿರ್ಧನವಂತ.

ತರುಣರ ಗುಂಪಿಗೆ ನಾನು ನಾಯಕ
ಸಂಪು, ಗುಲ್ಲು ಗಲಾಟೆಗಳೆ ನನ್ನ ಕಾಯಕ
ಕ್ಯೂಮುರಿ, ಫ್ಲರ್ಟ್ ಮಾಡು
ಧೂಮಪಾನ, ಬೀರಕುಡಿ
ವುದು ನನ್ನ ನಿತ್ಯಮನರಂಜನೆಗಾಗಿ
ಇಂದ್ರಮಾಡಿದ್ದ. ಕೃಷ್ಣ ಆಡಿದ್ದ
ನಾನು ಭಾಗವತ, ವೇದಗಳ
ಓದಿರುವ ಬುದ್ಧಿವಂತ

ನಾನು ಅಜ್ಞಾನಿ ಅನಂತ.

ಕಸ್ಮೈದೇವಾಯ ಎಂಬ ಸವಾಲಿಗೆ
ಸವಾಲಾಗಿ ನೂರು ದೇವರ
ಸಮನಾಗಿ ಪೂಜಿಸ ಬಲ್ಲೆ
ಮಂದಿರ ಮಸೀದಿ ಚರ್ಚ್
ಸಾಯಿಬಾಬಾ, ಶಿರಡಿ ಬಾಬಾ
ರಜನೀಶ ಬ್ರಹ್ಮಚಾರಿ ಬಾಬಾ
ಎಲ್ಲಿರುವೆ ತಂದೆ ಬಾ. ಬಾ.
ಎನ್ನುತ
ಹರದಾರಿ ಹರಿದ್ವಾರಗಳ ಸುತ್ತಿ
ದೇವರ ಪತ್ತೆ ಹಚ್ಚಬಲ್ಲೆ.

ನಾನು ಸಾಹಿತಿ-ಕವಿ,
ದತ್ತಾಡಿಗ ಪುಟಪ್‌ಗಳ
ಕಾವ್ಯದ ಹಿಂಡುವೆನು ಕಿವಿ
ನಾಕು ತಂತಿಯಲಿ ಒಂದನು ಮುರಿದು
ರಾಮಾಯಣ ದರ್ಶನದ ಶಿಲ್ಪದ ಮೇಲೆ
“ಕಟ್ಟುವೆನು ನಾನು ಹೊಸನಾಡೊಂದನು
ರಸದ ಬೀಡೊಂದನು”
*****

Tagged:

Leave a Reply

Your email address will not be published. Required fields are marked *

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಹೊರ ಕೋಣೆಯಲ್ಲಿ ಕಾಲೂರಿ ಕೂತು ಬೀಡಿ ಕಟ್ಟುತ್ತಿದ್ದ ಸುಮಯ್ಯಾಗೆ ಕಣ್ಣು ಮತ್ತು ಕಿವಿಯ ಸುತ್ತಲೇ ಆಗಾಗ ಗುಂಯ್.. ಎನ್ನುತ್ತಾ ನೊಣವೊಂದು ಸರಿಸುಮಾರು ಹದಿನೈದು ನಿಮಿಷಗಳಿಂದ ಹಾರಾಡುತ್ತಾ ಕಿರಿಕಿರಿ ಮಾಡುತ್ತಿತ್ತು. ಹಿಡಿದು ಹೊಸಕಿ ಹಾಕಬೇಕೆಂದರೆ ಕೈಗೆ ಸಿಗದೆ ಮೈ ಪರಚಿಕೊಳ್ಳಬೇಕೆನ್ನ...

ಮೂಲ: ಗಾಯ್ ಡಿ ಮೊಪಾಸಾ ಗಗನಚುಂಬಿತವಾದ ಬೀಚ್‌ ವೃಕ್ಷಗಳೊಳಗಿಂದ ತಪ್ಪಿಸಿಕೊಂಡು ಸೂರ್ಯ ಕಿರಣಗಳು ಹೊಲಗಳ ಮೇಲೆ ಬೆಳಕನ್ನು ಕೆಡುವುವುದು ಬಲು ಅಪರೂಪ. ಬೆಳೆದ ಹುಲ್ಲನ್ನು ಕೊಯ್ದುದರಿಂದಲೂ, ದನಗಳೂ ಕಚ್ಚಿ ಕಚ್ಚಿ ತಿಂದುದರಿಂದಲೂ ನೆಲವು ಅಲ್ಲಲ್ಲಿ ತಗ್ಗು ದಿನ್ನೆಯಾಗಿ ಒಡೆದು ಕಾಣುತ್ತಿ...