ಕಿರು ಪರಿಚಯ

ನಾನು ಯಾರೆಂದಿರಾ?
ನಾನು ಬುದ್ಧಿವಂತ
ಬುದ್ಧನ ಜಾತಿಯಲಿ ಹುಟ್ಟಿ
ಸಾರಸ್ವತ ಲೋಕವನು
ಕೈಯಿಂದ ತಟ್ಟಿ
ಜ್ಞಾನ ಭಂಡಾರವನು
ಗಂಟಾಗಿ ಕಟ್ಟಿ
ಅಜ್ಞಾನ ಅಂಧಕಾರವನು
ಹೆಮ್ಮೆಯಿಂದ ಮೆಟ್ಟಿ
ಪಡೆದ ಬುದ್ಧಿ ಸ್ವಂತ
ನಾನು ಬುದ್ಧಿವಂತ.

ಶಿಕ್ಷಕರ ಶಿಕ್ಷಿಸ ಬಲ್ಲೆ
ಪ್ರಿಂಸಿಪಾಲನ ಕ್ಯಾಬಿನ ಖಿಂಡಿಗೆ
ಕಲ್ಲು ಹೊಡೆದು ಕನ್ನಡಿ ಮುರಿಯ ಬಲ್ಲೆ
ಲ್ಯಾಬಿನಲ್ಲಿ ಸಿಲಿಂಡರಿ
ನ ದ್ರವಗಳ ಚೆಲ್ಲಿ
ಪ್ರಯೋಗ ನಡೆಸ ಬಲ್ಲೆ
ಪರೀಕ್ಷೆಯ ಹಾಲಿನಲಿ
ಅರ್ಧ ಗಂಟೆಯೆ ಕುಳಿತು
ಪಾಸಾಗ ಬಲ್ಲೆ
ಪಾಸಾಗದೆಯು ಮುಂದಿನ ಕ್ಲಾಸಿಗೆ
ಹೋಗ ಬಲ್ಲೆ
ವಿಶ್ವವಿದ್ಯಾಲಯಗಳು
ನನ್ನ ಅಂಕಿತದಲ್ಲಿ
ಮೂರು ವಿಷಯಗಳ ಮೇಲೆ
ಎಮ್ಮೆ ಕಟ್ಟಿ
ನನ್ನ ಹೆಸರಿನ ಮುಂದೆ
ಡಿಗ್ರಿಗಳ ಕಂತೆ ನಿಲ್ಲಿಸ ಬಲ್ಲೆ
ದೇಶದಲ್ಲಿ ನನ್ನ ಯೋಗ್ಯತೆಗೆ
ಸರಿಯಾದ ನೌಕರಿಯೆ ಕಡಿಮೆ
ಅದಕ್ಕೆಂದೆ ನನಗಿಲ್ಲ ದುಡಿಮೆ
ನಾನು ಸಾಧು ಸಂತ
ನಾನು ನಿರ್ಧನವಂತ.

ತರುಣರ ಗುಂಪಿಗೆ ನಾನು ನಾಯಕ
ಸಂಪು, ಗುಲ್ಲು ಗಲಾಟೆಗಳೆ ನನ್ನ ಕಾಯಕ
ಕ್ಯೂಮುರಿ, ಫ್ಲರ್ಟ್ ಮಾಡು
ಧೂಮಪಾನ, ಬೀರಕುಡಿ
ವುದು ನನ್ನ ನಿತ್ಯಮನರಂಜನೆಗಾಗಿ
ಇಂದ್ರಮಾಡಿದ್ದ. ಕೃಷ್ಣ ಆಡಿದ್ದ
ನಾನು ಭಾಗವತ, ವೇದಗಳ
ಓದಿರುವ ಬುದ್ಧಿವಂತ

ನಾನು ಅಜ್ಞಾನಿ ಅನಂತ.

ಕಸ್ಮೈದೇವಾಯ ಎಂಬ ಸವಾಲಿಗೆ
ಸವಾಲಾಗಿ ನೂರು ದೇವರ
ಸಮನಾಗಿ ಪೂಜಿಸ ಬಲ್ಲೆ
ಮಂದಿರ ಮಸೀದಿ ಚರ್ಚ್
ಸಾಯಿಬಾಬಾ, ಶಿರಡಿ ಬಾಬಾ
ರಜನೀಶ ಬ್ರಹ್ಮಚಾರಿ ಬಾಬಾ
ಎಲ್ಲಿರುವೆ ತಂದೆ ಬಾ. ಬಾ.
ಎನ್ನುತ
ಹರದಾರಿ ಹರಿದ್ವಾರಗಳ ಸುತ್ತಿ
ದೇವರ ಪತ್ತೆ ಹಚ್ಚಬಲ್ಲೆ.

ನಾನು ಸಾಹಿತಿ-ಕವಿ,
ದತ್ತಾಡಿಗ ಪುಟಪ್‌ಗಳ
ಕಾವ್ಯದ ಹಿಂಡುವೆನು ಕಿವಿ
ನಾಕು ತಂತಿಯಲಿ ಒಂದನು ಮುರಿದು
ರಾಮಾಯಣ ದರ್ಶನದ ಶಿಲ್ಪದ ಮೇಲೆ
“ಕಟ್ಟುವೆನು ನಾನು ಹೊಸನಾಡೊಂದನು
ರಸದ ಬೀಡೊಂದನು”
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಅಮ್ಮನ ಮಡಿಲನೇರಿ
Next post ಕೂಳ ಕೊಂಡು ತಂದರದು ಸಾವಯವವಾದೀತೇ ?

ಸಣ್ಣ ಕತೆ

  • ಜೋತಿಷ್ಯ

    ತಮಿಳು ಮೂಲ: ಕೊನಷ್ಟೈ "ನೀವು ಏನು ಬೇಕಾದರೂ ಹೇಳಿ, ನನಗೆ ಜ್ಯೋತಿಷ್ಯದಲ್ಲಿ ನಂಬಿಕೆ ತಪ್ಪುವುದಿಲ್ಲ. ಅದರಲ್ಲಿಯೂ ರಾಮಲಿಂಗ ಜೋಯಿಸರಲ್ಲಿ ಪೂರ್ಣ ನಂಬಿಕೆ"ಎಂದಳು ಕಮಲಾ. ಸಮಯ, ಸಂಧ್ಯಾ ಕಾಲ.… Read more…

  • ಪಾಠ

    ಚೈತ್ರ ಮಾಸದ ಮಧ್ಯ ಕಾಲ. ಬೇಸಿಗೆ ಕಾಲಿಟ್ಟಿದೆ. ವಸಂತಾಗಮನ ಈಗಾಗಾಲೇ ಆಗಿದೆ. ಊರಲ್ಲಿ ಸುಗ್ಗಿ ಸಮಯ. ಉತ್ತರ ಕರ್ನಾಟಕದ ನಮ್ಮ ಭಾಗದಲ್ಲಿ ಹತ್ತಿ ಜೋಳ ಪ್ರಮುಖ ಬೆಳೆಗಳು.… Read more…

  • ಲೋಕೋಪಕಾರ!

    ಸಾಥಿ ಶಿವರಾವ ಅವರಿಗೆ ಬಹು ದೊಡ್ಡ ಚಿಂತೆ! ಅವರು ಅನೇಕ ಪ್ರಶ್ನೆಗಳನ್ನು ಬಹು-ಸರಳವಾಗಿ ಬಿಡಿಸುತ್ತಿದ್ದರು. ಪರೀಕ್ಷೆಯಲ್ಲಿ ಅನೇಕ ಪ್ರಶ್ನೆಗಳಿಗೆ ಉತ್ತರ ಬರೆದಿದ್ದಾರು. ಆದರೆ ಎಂತಹ ದೊಡ್ಡ ಪ್ರಶ್ನೆ… Read more…

  • ವ್ಯವಸ್ಥೆ

    ಮಗಳ ಮದುವೆ ಪಿಕ್ಸ್ ಆಗಿದ್ದರಿಂದ ದೊಡ್ಡ ತಲೆ ಭಾರ ಇಳಿದಂತಾಗಿತ್ತು. ಮದುವೆ ಮುಂದಿನ ತಿಂಗಳ ಕೊನೆಯ ವಾರವೆಂದು ದಿನಾಂಕವನ್ನೂ ನಿಗದಿಪಡಿಸಲಾಗಿತ್ತು. ಗಂಡಿನವರ ತರಾತುರಿಗೆ ಒಪ್ಪಲೇಬೇಕಾದ ಪರಿಸ್ಥಿತಿ ನನ್ನದು.… Read more…

  • ಇರುವುದೆಲ್ಲವ ಬಿಟ್ಟು

    ಕುಮಾರನಿಗೆ ಪಕ್ಕದ ಮನೆಯ ರೆಡಿಯೋದಲ್ಲಿ ಬಸಪ್ಪ ಮಾದರ ಧ್ವನಿ ಕೇಳಿ ಎಚ್ಚರವಾಯ್ತು. ದೇಹಲಿ ಕೇಂದ್ರದಿಂದ ವಾರ್ತೆಗಳು ಬರುತ್ತಿದ್ದವು. ಹಾಸಿಗೆಯಿಂದ ಎದ್ದವನೆ ಕದ ತೆಗೆದ. ಬೆಳಗಿನ ಸೊಗಸು ಕೊರೆವ… Read more…