Home / ಕವನ / ಕವಿತೆ / ಕಿರು ಪರಿಚಯ

ಕಿರು ಪರಿಚಯ

ನಾನು ಯಾರೆಂದಿರಾ?
ನಾನು ಬುದ್ಧಿವಂತ
ಬುದ್ಧನ ಜಾತಿಯಲಿ ಹುಟ್ಟಿ
ಸಾರಸ್ವತ ಲೋಕವನು
ಕೈಯಿಂದ ತಟ್ಟಿ
ಜ್ಞಾನ ಭಂಡಾರವನು
ಗಂಟಾಗಿ ಕಟ್ಟಿ
ಅಜ್ಞಾನ ಅಂಧಕಾರವನು
ಹೆಮ್ಮೆಯಿಂದ ಮೆಟ್ಟಿ
ಪಡೆದ ಬುದ್ಧಿ ಸ್ವಂತ
ನಾನು ಬುದ್ಧಿವಂತ.

ಶಿಕ್ಷಕರ ಶಿಕ್ಷಿಸ ಬಲ್ಲೆ
ಪ್ರಿಂಸಿಪಾಲನ ಕ್ಯಾಬಿನ ಖಿಂಡಿಗೆ
ಕಲ್ಲು ಹೊಡೆದು ಕನ್ನಡಿ ಮುರಿಯ ಬಲ್ಲೆ
ಲ್ಯಾಬಿನಲ್ಲಿ ಸಿಲಿಂಡರಿ
ನ ದ್ರವಗಳ ಚೆಲ್ಲಿ
ಪ್ರಯೋಗ ನಡೆಸ ಬಲ್ಲೆ
ಪರೀಕ್ಷೆಯ ಹಾಲಿನಲಿ
ಅರ್ಧ ಗಂಟೆಯೆ ಕುಳಿತು
ಪಾಸಾಗ ಬಲ್ಲೆ
ಪಾಸಾಗದೆಯು ಮುಂದಿನ ಕ್ಲಾಸಿಗೆ
ಹೋಗ ಬಲ್ಲೆ
ವಿಶ್ವವಿದ್ಯಾಲಯಗಳು
ನನ್ನ ಅಂಕಿತದಲ್ಲಿ
ಮೂರು ವಿಷಯಗಳ ಮೇಲೆ
ಎಮ್ಮೆ ಕಟ್ಟಿ
ನನ್ನ ಹೆಸರಿನ ಮುಂದೆ
ಡಿಗ್ರಿಗಳ ಕಂತೆ ನಿಲ್ಲಿಸ ಬಲ್ಲೆ
ದೇಶದಲ್ಲಿ ನನ್ನ ಯೋಗ್ಯತೆಗೆ
ಸರಿಯಾದ ನೌಕರಿಯೆ ಕಡಿಮೆ
ಅದಕ್ಕೆಂದೆ ನನಗಿಲ್ಲ ದುಡಿಮೆ
ನಾನು ಸಾಧು ಸಂತ
ನಾನು ನಿರ್ಧನವಂತ.

ತರುಣರ ಗುಂಪಿಗೆ ನಾನು ನಾಯಕ
ಸಂಪು, ಗುಲ್ಲು ಗಲಾಟೆಗಳೆ ನನ್ನ ಕಾಯಕ
ಕ್ಯೂಮುರಿ, ಫ್ಲರ್ಟ್ ಮಾಡು
ಧೂಮಪಾನ, ಬೀರಕುಡಿ
ವುದು ನನ್ನ ನಿತ್ಯಮನರಂಜನೆಗಾಗಿ
ಇಂದ್ರಮಾಡಿದ್ದ. ಕೃಷ್ಣ ಆಡಿದ್ದ
ನಾನು ಭಾಗವತ, ವೇದಗಳ
ಓದಿರುವ ಬುದ್ಧಿವಂತ

ನಾನು ಅಜ್ಞಾನಿ ಅನಂತ.

ಕಸ್ಮೈದೇವಾಯ ಎಂಬ ಸವಾಲಿಗೆ
ಸವಾಲಾಗಿ ನೂರು ದೇವರ
ಸಮನಾಗಿ ಪೂಜಿಸ ಬಲ್ಲೆ
ಮಂದಿರ ಮಸೀದಿ ಚರ್ಚ್
ಸಾಯಿಬಾಬಾ, ಶಿರಡಿ ಬಾಬಾ
ರಜನೀಶ ಬ್ರಹ್ಮಚಾರಿ ಬಾಬಾ
ಎಲ್ಲಿರುವೆ ತಂದೆ ಬಾ. ಬಾ.
ಎನ್ನುತ
ಹರದಾರಿ ಹರಿದ್ವಾರಗಳ ಸುತ್ತಿ
ದೇವರ ಪತ್ತೆ ಹಚ್ಚಬಲ್ಲೆ.

ನಾನು ಸಾಹಿತಿ-ಕವಿ,
ದತ್ತಾಡಿಗ ಪುಟಪ್‌ಗಳ
ಕಾವ್ಯದ ಹಿಂಡುವೆನು ಕಿವಿ
ನಾಕು ತಂತಿಯಲಿ ಒಂದನು ಮುರಿದು
ರಾಮಾಯಣ ದರ್ಶನದ ಶಿಲ್ಪದ ಮೇಲೆ
“ಕಟ್ಟುವೆನು ನಾನು ಹೊಸನಾಡೊಂದನು
ರಸದ ಬೀಡೊಂದನು”
*****

Tagged:

Leave a Reply

Your email address will not be published. Required fields are marked *

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...

ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...