ನನ್ನ ಜನರು

ನನ್ನ ಜನರು
ನನ್ನ ಜೊತೆ
ಎಲ್ಲಿ ಹೋದರಿರುವರು ||

ನನ್ನ ಜನರು
ನನ್ನ ಜೀವನ
ಬದುಕು ನೀಡಿದವರು ||

ಹೆತ್ತ ಒಡಲು
ತಂಪು ನೀಡಲು
ಅಮೃತ ಉಣಿಸಿದವರು ||

ಹಿರಿಯರೆನ್ನ
ತಂದೆ ತಾಯಿ
ಕಿರಿಯರೆನ್ನ ಬಂಧುಬಳಗ ||

ಜಾತಿ ನೀತಿ
ಭೇದ ಭಾವವಿಲ್ಲ
ನನ್ನ ಜನರೆ ನನಗೆಲ್ಲಾ ||

ಪ್ರೀತಿ ತುಂಬಿ
ಸ್ನೇಹ ತುಂಬಿ
ವಿಶ್ವಾಸದ ಹಣತೆ ಹಚ್ಚಿದವರು ||

ಮಾನ ಅಭಿಮಾನ
ಕೆಚ್ಚಿನ ನುಡಿಗಳು
ಸ್ವಾಭಿಮಾನಿ ನನ್ನ ಜನರು ||

ನೋವು ನಲಿವಿಗೆ
ಊರು ಗೋಲು
ಹೃದಯವಂತರು ನನ್ನ ಜನರು ||

ಸತ್ಯ ಧರ್ಮ
ನೀತಿ ನೇಮ ಅರಿತ
ತ್ಯಾಗವಂತರು ನನ್ನ ಜನರು ||

ವಿಶ್ವಕ್ಕೆಲ್ಲಾ ತಾಯಿ
ಒಬ್ಬಳೇ ನನ್ನ ಜನರು
ನನ್ನವರೆಲ್ಲಾ ಅವರೇಽಽಽ||

ಸೋಲು ಗೆಲುವು
ತಪ್ಪು ಒಪ್ಪು
ಒಡಲ ದನಿಯಾದವರು ||

ಜೀವದ ಜೀವನ
ಅಳಿವಿನ ಉಳುವಿಗೆ
ಬೆನ್ನೆಲುಬಾದವರು ನನ್ನ ಜನರು ||

ಕನ್ನಡ ನಾಡ ದೇವಿ
ಕೊರಳ ಹೂಮಾಲೆ
ಆದವರು ನನ್ನ ಜನರು ||
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಪಾಯಸ ಪುರಾಣ!
Next post ಒಂದು ಗುಮಾನಿ

ಸಣ್ಣ ಕತೆ

  • ಒಲವೆ ನಮ್ಮ ಬದುಕು

    "The best of you is he who behaves best towards the members of his family" (The Holy Prophet) ವಾರದ ಸಂತೆ.… Read more…

  • ಏಡಿರಾಜ

    ಚಲೋ ವಂದು ಅರಸು ಮನಿ, ಗಂಡ-ಹೆಂಡ್ತಿ ದೊಡ್ಡ ಮನ್ತಾನದಲ್ ಆಳ್ಕತಿದ್ರು. ಆವಾಗೆ ಆ ಅರಸೂಗೆ ಗಂಡ್ ಹುಡ್ಗರಿಲ್ಲ. ಸಂತತ್ಯಲ್ಲ, ಇದ್ರದು ನಿಚ್ಚಾ ಕೆಲ್ಸಯೇನಪ್ಪ ಅರಸು ಹಿಂಡ್ತಿದು, ಮನಿ… Read more…

  • ದೋಂಟಿ ತ್ಯಾಂಪಣ್ಣನ ಯಾತ್ರಾ ಪುರಾಣವು

    ಸುಮಾರು ಆರೂವರೆ ಅಡಿಗಿಂತಲೂ ಎತ್ತರಕ್ಕೆ ಗಳದ ಹಾಗೆ ಬೆಳೆದಿರುವ ದೋಂಟಿ ತ್ಯಾಂಪಣ್ಣನು ತನ್ನ ದಣಿ ಕಪಿಲಳ್ಳಿ ಕೃಷ್ಣ ಮದ್ಲೆಗಾರರ ಮನೆ ಜಗಲಿಯಲ್ಲಿ ಮೂಡು ಸಂಪೂರ್ಣ ಆಫಾಗಿ ಕೂತಿದ್ದನು.… Read more…

  • ಗದ್ದೆ

    ಅದೊಂದು ಬೆಟ್ಟದ ಊರು. ಪುಟ್ಟ ಪುಟ್ಟ ಗುಡ್ಡಕ್ಕೆ ತಾಗಿಕೊಂಡು ಸಂದಿಯಲ್ಲಿ ಗೊಂದಿಯಲ್ಲಿ ಎದ್ದ ಗುಡಿಸಲುಗಳು ಅರ್ಥಾತ್ ಈ ಜೀವನ ಕಳೆಯೋ ಬಗೆಯಲಿ ಕಟ್ಟಿಕೊಂಡ ಪುಟ್ಟ ಮನೆಗಳು ಹೊತ್ತು… Read more…

  • ಲೋಕೋಪಕಾರ!

    ಸಾಥಿ ಶಿವರಾವ ಅವರಿಗೆ ಬಹು ದೊಡ್ಡ ಚಿಂತೆ! ಅವರು ಅನೇಕ ಪ್ರಶ್ನೆಗಳನ್ನು ಬಹು-ಸರಳವಾಗಿ ಬಿಡಿಸುತ್ತಿದ್ದರು. ಪರೀಕ್ಷೆಯಲ್ಲಿ ಅನೇಕ ಪ್ರಶ್ನೆಗಳಿಗೆ ಉತ್ತರ ಬರೆದಿದ್ದಾರು. ಆದರೆ ಎಂತಹ ದೊಡ್ಡ ಪ್ರಶ್ನೆ… Read more…

cheap jordans|wholesale air max|wholesale jordans|wholesale jewelry|wholesale jerseys