ಒಂದು ಗುಮಾನಿ

ನನ್ನ ಕಾಲೇಜಿನೆದುರು
ಯಮಾಲಯದಂತೆ ನಿಂತಿರುವ
ರೋಗಗ್ರಸ್ತ, ಜರ್ಜರ
ಮಹಾಮಹಡಿಯ ಪ್ರಾಚೀನ
ಮಂದಿರದಲ್ಲಿ
ದೇವರಿಲ್ಲ
ಅವನ ಬದಲಿಗೆ
ಅಧಿಕೃತ ಏಜಂಟ್‌ಗಳಾಗಿ
ಮುದಿ, ತರುಣ ವೈದ್ಯರು
ಗೌರ, ಮೃದು ಭಾವದ ನರ್ಸುಗಳು
ಸೇವೆಯ ಪಣ ಹೊತ್ತು
ಯಾವದೋ ಜನ್ಮದ
ಋಣತೆರುವ ಖಯಾಲಿನಲ್ಲಿ
ದಿನ ರಾತ್ರಿ ಸಾವಿನೊಡನೆ
ಸೆಣಸುವ
ದುಷ್ಕರ್ಮಿಗಳ ನರಳಾಟವನ್ನು
ಅಳಿಸುವ
ಅರೆ ಮನಸ್ಸಿನ ನಿರ್ಧಾರದಿಂದ
ಓಡಾಡುವುದು ಕಾಣುವುದು,
ಯಾವ ಶಾಪವೊ
ಮನುಷ್ಯ ಇಲ್ಲಿ ಬಂದು
ತನ್ನವರಿಂದ ದೂರವಾಗುವ
ನೋವನ್ನು ಉಣ್ಣುತ್ತ
ಬದುಕುವ ಭರವಸೆಯನ್ನು
ಕಾಣದೆ, ಭಯಾತುರನಾಗಿ
ಕಣ್ಣ ಕುಳಿಯಲ್ಲಿರುವ ನಿರಾಶೆಯ ಆಳದಲ್ಲಿ
ಮುಳುಗುತ್ತಿರುವಾಗ
ನಾನು,
ನವುರಾಗಿ ಬಟ್ಟೆಧರಿಸಿದ
ವಿದೇಶೀ ಗಂಧ ಸೂಸುವ
ಯುವ ವೈದ್ಯರು
ಸುರಸುಂದರಿಯೊಂದಿಗೆ
ಅಲ್ಲಲ್ಲಿ ನಿಂತು
ಸರಸವಾಡುವುದನ್ನು ನೋಡುತ್ತೇನೆ.
ಆಗ,
ಈ ಲೋಕವೊಂದು ರುಗ್ದಾಲಯ
ಇಲ್ಲಿ ಬರುವ ಪ್ರತಿಯೊಬ್ಬನೂ
ರೋಗಿ,
ಈ ಮೈಮನಸ್ಸಿನ ರೋಗಕ್ಕೆ
ಪರಿಹಾರ ಎಲ್ಲಿ?
ಎಂಬ ಗುಮಾನಿ ಬಂದು
ಖಿನ್ನ-ಛಿನ್ನನಾಗಿ
ಅಲ್ಲಿಂದ ಹೊರಬೀಳುತ್ತೇನೆ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ನನ್ನ ಜನರು
Next post ನವೆ ಕೆರೆದರದನೆ ಕೆಲಸವೆನಲುಂಟೇ ?

ಸಣ್ಣ ಕತೆ

  • ದೇವರು ಮತ್ತು ಅಪಘಾತ

    ಊರಿನ ಕೊನೆಯಂಚಿನಲ್ಲಿದ್ದ ಕೆರೆಯಂಗಳದಲ್ಲಿ ಅಣಬೆಗಳಂತೆ ಮೈವೆತ್ತಿದ್ದ ಗುಡಿಸಲುಗಳಲ್ಲಿ ಕೊನೆಯದು ಅವಳದಾಗಿತ್ತು. ನಾಲ್ಕೈದು ಸಾರಿ ಮುನಿಸಿಪಾಲಿಟಿಯವರು ಆ ಗುಡಿಸಲುಗಳನ್ನು ಕಿತ್ತು ಹಾಕಿದ್ದರೂ ಮನುಷ್ಯ ಪ್ರಾಣಿಗಳ ಸೂರಿನ ಅದಮ್ಯ ಅವಶ್ಯಕ… Read more…

  • ಧನ್ವಂತರಿ

    ಡಾ|| ಕೃಷ್ಣ ಪ್ರಸಾದ್ ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯವರು. ಅವರು ಯಾದಗಿರಿ ಜಿಲ್ಲೆ ಸುರಪುರ ತಾಲ್ಲೂಕಿನ ಕೆಂಭಾವಿಯಲ್ಲಿ ಬಂದು ನೆಲೆಸಿರುವುದೂ ಒಂದು ಆಕಸ್ಮಿಕವೇ. ಒಂದು ದಿನ ತಮ್ಮ… Read more…

  • ಇರುವುದೆಲ್ಲವ ಬಿಟ್ಟು

    ಕುಮಾರನಿಗೆ ಪಕ್ಕದ ಮನೆಯ ರೆಡಿಯೋದಲ್ಲಿ ಬಸಪ್ಪ ಮಾದರ ಧ್ವನಿ ಕೇಳಿ ಎಚ್ಚರವಾಯ್ತು. ದೇಹಲಿ ಕೇಂದ್ರದಿಂದ ವಾರ್ತೆಗಳು ಬರುತ್ತಿದ್ದವು. ಹಾಸಿಗೆಯಿಂದ ಎದ್ದವನೆ ಕದ ತೆಗೆದ. ಬೆಳಗಿನ ಸೊಗಸು ಕೊರೆವ… Read more…

  • ಯಾರು ಹೊಣೆ?

    "ಧಡ್....... ಧಡಲ್........ ಧಡಕ್" ಗಾಡಿ ನಿಂತಿತು. ಹೊರಗೆ ಮೋರೆಹಾಕಿ ನೋಡಿದೆ. ಕತ್ತಲು ಕವಿದಿತ್ತು. ಚುಕ್ಕೆಗಳು ಪಕಪಕ ಕಣ್ಣು ಬಿಡುತ್ತಿದ್ದವು. ಮೂಡಲ ಗಾಳಿ "ಸಿಳ್" ಎಂದು ಬೀಸುತ್ತಿತ್ತು. ನಾನು… Read more…

  • ಕೂನನ ಮಗಳು ಕೆಂಚಿಯೂ….

    ಬೊಮ್ಮನಹಳ್ಳಿ ಸಂತೆಯಿಂದ ದಲ್ಲಾಳಿಗೆ ಸಂಚಾಗಾರ ಎಂದು ನೂರು ರೂಪಾಯಿ ಸೇರಿ ಒಂದು ಸಾವಿರದ ಒಂದುನೂರು ಕೊಟ್ಟು ತಂದ ’ಚೆನ್ನಿ’ಕರುಹಾಕಿ ಮೂರು ತಿಂಗಳಲ್ಲಿ ಕೊಟ್ಟಿಗೆಯೊಳಗೆ ಕಾಲು ಜಾರಿ ಬಿದ್ದದ್ದೆ… Read more…