Home / ಕವನ / ಕವಿತೆ / ಒಂದು ಗುಮಾನಿ

ಒಂದು ಗುಮಾನಿ

ನನ್ನ ಕಾಲೇಜಿನೆದುರು
ಯಮಾಲಯದಂತೆ ನಿಂತಿರುವ
ರೋಗಗ್ರಸ್ತ, ಜರ್ಜರ
ಮಹಾಮಹಡಿಯ ಪ್ರಾಚೀನ
ಮಂದಿರದಲ್ಲಿ
ದೇವರಿಲ್ಲ
ಅವನ ಬದಲಿಗೆ
ಅಧಿಕೃತ ಏಜಂಟ್‌ಗಳಾಗಿ
ಮುದಿ, ತರುಣ ವೈದ್ಯರು
ಗೌರ, ಮೃದು ಭಾವದ ನರ್ಸುಗಳು
ಸೇವೆಯ ಪಣ ಹೊತ್ತು
ಯಾವದೋ ಜನ್ಮದ
ಋಣತೆರುವ ಖಯಾಲಿನಲ್ಲಿ
ದಿನ ರಾತ್ರಿ ಸಾವಿನೊಡನೆ
ಸೆಣಸುವ
ದುಷ್ಕರ್ಮಿಗಳ ನರಳಾಟವನ್ನು
ಅಳಿಸುವ
ಅರೆ ಮನಸ್ಸಿನ ನಿರ್ಧಾರದಿಂದ
ಓಡಾಡುವುದು ಕಾಣುವುದು,
ಯಾವ ಶಾಪವೊ
ಮನುಷ್ಯ ಇಲ್ಲಿ ಬಂದು
ತನ್ನವರಿಂದ ದೂರವಾಗುವ
ನೋವನ್ನು ಉಣ್ಣುತ್ತ
ಬದುಕುವ ಭರವಸೆಯನ್ನು
ಕಾಣದೆ, ಭಯಾತುರನಾಗಿ
ಕಣ್ಣ ಕುಳಿಯಲ್ಲಿರುವ ನಿರಾಶೆಯ ಆಳದಲ್ಲಿ
ಮುಳುಗುತ್ತಿರುವಾಗ
ನಾನು,
ನವುರಾಗಿ ಬಟ್ಟೆಧರಿಸಿದ
ವಿದೇಶೀ ಗಂಧ ಸೂಸುವ
ಯುವ ವೈದ್ಯರು
ಸುರಸುಂದರಿಯೊಂದಿಗೆ
ಅಲ್ಲಲ್ಲಿ ನಿಂತು
ಸರಸವಾಡುವುದನ್ನು ನೋಡುತ್ತೇನೆ.
ಆಗ,
ಈ ಲೋಕವೊಂದು ರುಗ್ದಾಲಯ
ಇಲ್ಲಿ ಬರುವ ಪ್ರತಿಯೊಬ್ಬನೂ
ರೋಗಿ,
ಈ ಮೈಮನಸ್ಸಿನ ರೋಗಕ್ಕೆ
ಪರಿಹಾರ ಎಲ್ಲಿ?
ಎಂಬ ಗುಮಾನಿ ಬಂದು
ಖಿನ್ನ-ಛಿನ್ನನಾಗಿ
ಅಲ್ಲಿಂದ ಹೊರಬೀಳುತ್ತೇನೆ.
*****

Tagged:

Leave a Reply

Your email address will not be published. Required fields are marked *

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...