ಲೋಕಸಿರಿ

ಹಸಿರು ಗರಿಕೆಯ ಚಿಗುರು ಹಬ್ಬಿ
ಮನದ ತುಂಬ ಒಲವ ಸಿರಿ
ನಿನ್ನೊಂದಿಗೆ ಮಾತ್ರ ಈ ಲೋಕ

ಗುಪ್ತಗಾಮಿನಿ ನದಿ ಹರಿದು
ಗಿಡಮರಗಳ ಮರ್ಮರ ಸಾಕ್ಷಿ
ಎಲ್ಲ ಲೋಕವೂ ನಿನಗಿಂತ ಚಿಕ್ಕದು

ಎಷ್ಟೊಂದು ಕುಸುಮಗಳರಳಿ
ತೀಡಿ ಗಾಳಿ ಗಂಧ ತೇಲಿ
ಎಲ್ಲದಕೂ ಮೂಲ ಬೆಳಕು ನೀನು.

ಹೂವು ಹಕ್ಕಿ ಗಾಳಿ ಕಂಪ ಸವರಿ
ಪೂಜೆಯ ಪರಿ ಅರಳಿ ಸರಿ
ಎಲ್ಲದಕೂ ಲೋಕ ಪರಿಚಾರಕ ನೀನು.

ಹರಿದು ಹಬ್ಬಿ ಚಿಗುರಿ ಚಿಮ್ಮಿ
ಒಡಲಾಳದಲಿ ಸಿರಿಗಂಧ ತೇಲಿ
ನೀನು ಕಾರಣವಾದ ಎಲ್ಲಾ ಪ್ರೀತಿಗೆ.

ಗರಿಸಿರಿಗಳ ಭೂಮಿ ಭಾನು
ನಕ್ಷತ್ರ ಸೂರ್ಯಮಂಡಲ ಮಿನುಗಿ
ಅದರೊಳಗೆ ಹಾಗೆ ಉಳಿದ ಹೋದ ನೀನು

ಎಲ್ಲ ಬೆಳಕ ಕಿರಣಗಳ ಸರಿಸಿ
ಮೋಡ ಮಳೆ ಸುರಿಸಿ ಹರಿಸಿ
ಮಾತು ಮೀರಿದ ನೀನು ಲೋಕಸಿರಿ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಚಂದ್ರ ಚಕೋರಿ
Next post ಅನಿಸಿಕೆ

ಸಣ್ಣ ಕತೆ

  • ದೇವರೇ ಪಾರುಮಾಡಿದಿ ಕಂಡಿಯಾ

    "Life is as tedious as a twice-told tale" ಧಾರವಾಡದ ಶಾಖೆಯೊಂದಕ್ಕೆ ಸಪ್ತಾಪುರವೆಂಬ ಹೆಸರು, ದೂರ ದೂರಾಗಿ ಕಟ್ಟಿರುವ ಆ ಗ್ರಾಮದ ಮನೆಗಳಲ್ಲಿ ಒಂದು ಮನೆಯು… Read more…

  • ಧನ್ವಂತರಿ

    ಡಾ|| ಕೃಷ್ಣ ಪ್ರಸಾದ್ ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯವರು. ಅವರು ಯಾದಗಿರಿ ಜಿಲ್ಲೆ ಸುರಪುರ ತಾಲ್ಲೂಕಿನ ಕೆಂಭಾವಿಯಲ್ಲಿ ಬಂದು ನೆಲೆಸಿರುವುದೂ ಒಂದು ಆಕಸ್ಮಿಕವೇ. ಒಂದು ದಿನ ತಮ್ಮ… Read more…

  • ಏಕಾಂತದ ಆಲಾಪ

    ಅಂದು ದಸರೆಯ ಮುನ್ನಾದಿನ ಮಕ್ಕಳಿಗೆಲ್ಲಾ ಶಾಲಾ ರಜೆ ದಿವಸಗಳು. ಅವಳು ಕಾತ್ಯಾಯನಿ, ಒಂದು ತಿಂಗಳಿಂದ ಆ ಪಟ್ಟಣದ ಪ್ರಸಿದ್ಧ ನೇತ್ರಾಲಯಕ್ಕೆ ಅಲೆಯುತ್ತಿದ್ದಾಳೆ. ಎರಡೂ ಕಣ್ಣುಗಳು ಪೊರೆಯಿಂದ ಮುಂದಾಗಿವೆ.… Read more…

  • ಅಂತರಂಗ ಶುದ್ಧಿ ಬಹಿರಂಗ ಶುದ್ಧಿ

    ಸ್ವಾಮೀಜಿಗಳಿಗೆ ಈವತ್ತಂತೂ ಮೈ ತುರಿಸಿಕೊಳ್ಳಲೂ ಪುರುಸೊತ್ತಿಲ್ಲ. ಹಲವು ಕಾರ್ಯಕ್ರಮಗಳ ಒತ್ತಡ, ರಾಜಕಾರಣಿಗಳ ಭೇಟಿ ಜೊತೆಗೆ ತಂಡೋಪತಂಡವಾಗಿ ಆಶೀರ್ವಾದ ಬೇಡಿ ಬರುವ ಭಕ್ತರ ಕಿರಿಕಿರಿ. ಇದರ ಮದ್ಯೆ ಜಪತಪ,… Read more…

  • ಜುಡಾಸ್

    "ಪೀಟರ್" "ಪ್ರಭು" "ಇನ್ನು ಮೂರುದಿನ ಮಾತ್ರ, ಪೀಟರ್. ಅನಂತರ...." ಮಾತು ಅರ್ಧಕ್ಕೆ ನಿಂತಿತು. ಯೇಸುಕ್ರಿಸ್ತ ತನ್ನ ಶಿಷ್ಯರೊಂದಿಗೆ ಕಾಲುನಡಿಗೆಯಲ್ಲಿ ಜೆರೂಸಲೆಂ ನಗರಕ್ಕೆ ನಡೆದು ಬರುತ್ತಿದ್ದ. ಹನ್ನೆರಡುಜನ ಶಿಷ್ಯರೂ… Read more…

cheap jordans|wholesale air max|wholesale jordans|wholesale jewelry|wholesale jerseys