ಲೋಕಸಿರಿ

ಹಸಿರು ಗರಿಕೆಯ ಚಿಗುರು ಹಬ್ಬಿ
ಮನದ ತುಂಬ ಒಲವ ಸಿರಿ
ನಿನ್ನೊಂದಿಗೆ ಮಾತ್ರ ಈ ಲೋಕ

ಗುಪ್ತಗಾಮಿನಿ ನದಿ ಹರಿದು
ಗಿಡಮರಗಳ ಮರ್ಮರ ಸಾಕ್ಷಿ
ಎಲ್ಲ ಲೋಕವೂ ನಿನಗಿಂತ ಚಿಕ್ಕದು

ಎಷ್ಟೊಂದು ಕುಸುಮಗಳರಳಿ
ತೀಡಿ ಗಾಳಿ ಗಂಧ ತೇಲಿ
ಎಲ್ಲದಕೂ ಮೂಲ ಬೆಳಕು ನೀನು.

ಹೂವು ಹಕ್ಕಿ ಗಾಳಿ ಕಂಪ ಸವರಿ
ಪೂಜೆಯ ಪರಿ ಅರಳಿ ಸರಿ
ಎಲ್ಲದಕೂ ಲೋಕ ಪರಿಚಾರಕ ನೀನು.

ಹರಿದು ಹಬ್ಬಿ ಚಿಗುರಿ ಚಿಮ್ಮಿ
ಒಡಲಾಳದಲಿ ಸಿರಿಗಂಧ ತೇಲಿ
ನೀನು ಕಾರಣವಾದ ಎಲ್ಲಾ ಪ್ರೀತಿಗೆ.

ಗರಿಸಿರಿಗಳ ಭೂಮಿ ಭಾನು
ನಕ್ಷತ್ರ ಸೂರ್ಯಮಂಡಲ ಮಿನುಗಿ
ಅದರೊಳಗೆ ಹಾಗೆ ಉಳಿದ ಹೋದ ನೀನು

ಎಲ್ಲ ಬೆಳಕ ಕಿರಣಗಳ ಸರಿಸಿ
ಮೋಡ ಮಳೆ ಸುರಿಸಿ ಹರಿಸಿ
ಮಾತು ಮೀರಿದ ನೀನು ಲೋಕಸಿರಿ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಚಂದ್ರ ಚಕೋರಿ
Next post ಅನಿಸಿಕೆ

ಸಣ್ಣ ಕತೆ

  • ಸಾವಿಗೊಂದು ಸ್ಮಾರಕ

    ಶಾಲೆಯ ಮಾಸ್ತರ್ ಆಗಿ ಗಜರಾಜ ಸಿಂಗ್ ಅವರು ಪ್ರೈಮರಿ ಶಾಲೆಯ ಮಕ್ಕಳಿಗೆ ಹೇಳಿಕೊಡುತ್ತಿದ್ದ ಮೊದಲ ಪಾಠವೆಂದರೆ "ತಂದೆ ತಾಯಿಯನ್ನು ಗೌರವಿಸಿ, ಅವರೇ ನಿಮ್ಮ ಪಾಲಿನ ದೈವ" ಎಂದು.… Read more…

  • ಕಲ್ಪನಾ

    ಚಿತ್ರ: ಟಾಮ್ ಬಿ ಇದು ಇಪ್ಪತ್ತು ವರ್ಷಗಳ ಹಿಂದಿನ ಕಥೆ! ಮಾತನಾಡುವ ಸಿನಿಮಾ ಪ್ರಪಂಚ ಅದೇ ಆಗ ದಕ್ಷಿಣ ಭಾರತದಲ್ಲಿ ತಲೆಯೆತ್ತಿದ್ದಿತು! ಸಿನಿಮಾದಲ್ಲಿ ಪಾತ್ರವಹಿಸುವ ನಟಿನಟಿಯರನ್ನು ಅಚ್ಚರಿಯ… Read more…

  • ಕೆಂಪು ಲುಂಗಿ

    ಬೇಸಿಗೆಯ ರಜೆ ಬಂತೆಂದರೆ ಅಮ್ಮಂದಿರ ಗೋಳು ಬೇಡ; ಮಕ್ಕಳೆಲ್ಲಾ ಮನೆಯಲ್ಲೇ... ಟೀವಿಯ ಎದುರಿಗೆ ಇಲ್ಲವಾದರೆ ಅಂಗಳದ ಸೀಬೆಮರ ಮತ್ತು ಎತ್ತರವಾದ ಕಾಂಪೌಂಡಿನ ಗೋಡೆಗಳ ಮೇಲೆ.... ಯಾರಾದರೂ ಬಿದ್ದರೆ,… Read more…

  • ಒಲವೆ ನಮ್ಮ ಬದುಕು

    "The best of you is he who behaves best towards the members of his family" (The Holy Prophet) ವಾರದ ಸಂತೆ.… Read more…

  • ಜೀವಂತವಾಗಿ…ಸ್ಮಶಾನದಲ್ಲಿ…

    ಎರಡು ಮೂರು ವರ್ಷದ ಅಂತರದಲ್ಲಿ ಒಂದಾದ ಮೇಲೊಂದು ಗಂಡು ಮಕ್ಕಳು ಜನನವಾದಾಗ ದೇಬಾನಂದಸಾಹುಗೆ ಅವನ ಪತ್ನಿ ನಿಲಾಂದ್ರಿಗೆ ಬಹಳ ಸಂತಸವಾಗಿತ್ತು. "ಮಕ್ಕಳು ದೊಡ್ಡವರಾಗಿ ವಿದ್ಯಾವಂತರಾಗಿ ಉದ್ಯೋಗ ಮಾಡಿದರೆ… Read more…