ಕಡಲಡಿಯಲ್ಲಿ ಧರೆ ಡೋಲು ಬಾರಿಸಿದಾಗ

ಗುಡುಗುಟ್ಟಿದ ಧರೆ
ಕೆರಳಿತು ಸಾಗರ
ಅಪ್ಪಳಿಸುತ ರಾಕ್ಷಸಾಕಾರದ ಸುನಾಮಿ
ಕೊಚ್ಚಿ ಹೋದವು ಮನೆ ಮಠ
ಜಲಸಮಾಧಿಯಾದವು ಜೀವರಾಶಿ

ಕಂದಮ್ಮಗಳ ಸಾವಿನಲ್ಲಿ
ಮುಗಿಲ ಮುಟ್ಟಿದ ಹೆತ್ತೊಡಲ ಕರುಳಿನ
ನೋವು! ಕೇಳುವವರ್‍ಯಾರು?
ಮಾರಣ ಹೋಮ ನಡೆಯಿತು
ಜೀವರಾಶಿಗಳ ಮೇಲೆ

ನೀರ ರಾಶಿಯ ಎದುರು ಕಣ್ಣೀರ ಕಡಲು
ಎಲ್ಲೆಲ್ಲೂ ಮನ ಕರಗುವಂತೆ
ಸಾವುನೋವಿನ ನಡುವೆ ಉಳಿದವರ
ತೊಳಲಾಟ
ಹೃದಯ ಕರಗುವ ಘೋರ ದುರಂತ

ಸಾಗರ ಗರ್‍ಭದಲ್ಲಿ ಡೋಲು ಬಾರಿಸಿದರೆ
ಎದೆ ನಡುಗಿತು,
ಕಡಲಲೆಗಳ ಅಬ್ಬರದಲ್ಲಿ ತತ್ತರಿಸಿದವು
ನೆಲಜಲಗಳಲಿ ಅವುಗಳ ರಾಶಿರಾಶಿ

ಭೋರ್‍ಗರೆವ ಕಡಲೇ
ಇನ್ನಾದರೂ ಶಾಂತವಾಗು : ಹೇಳು
ನಿನಗಿಷ್ಟವೇ ಕಳಕೊಂಡವರ ಗೋಳು
ಇನ್ನೆಂದೂ ಬಾರದಿರಲಿ ಇಂಥ ಕ್ರೂರದಿನ
ಓ ಪ್ರಕೃತಿಯೇ ನೀನೇ ಸೃಷ್ಟಿಸಿದ
ಜೀವರ ಮೇಲೆ ಕರುಣೆ ಇರಲಿ,
ಕ್ಷಮೆ ಇರಲಿ ಅಸಹಾಯಕರ ಮೇಲೆ

ಶಾಂತವಾಗು ಶಾಂತವಾಗು ಸಾಗರವೇ
ಸಾಕು ಈ ರುದ್ರ ನರ್ತನ.
*****
ಜನವರಿ ೯, ೨೦೦೫ ಸಾಗರದ ಮಣ್ಣಿನವಾಸನೆ ವಾರಪತ್ರಿಕೆ ಪ್ರಕಟ

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಅಯ್ಯೋ ಪಾಪ
Next post ಕಲಾವಿದ

ಸಣ್ಣ ಕತೆ

  • ದೇವರು

    ನನ್ನ ದೇವರಿಗೆ, ಬಹಳ ದಿನಗಳ ನಂತರ ನಿಮಗೆ ಕಾಗದ ಬರೆಯುತ್ತಿದ್ದೇನೆ. ಏಕೆಂದರೆ ನೀವು ಬರೆದ ಕಾಗದಕ್ಕೆ ಉತ್ತರ ಕೇಳಿದ್ದೀರಿ. ನಾನೀಗ ಉತ್ತರ ಬರೆಯಲೇಬೇಕು ಬರೆಯುತ್ತಿದ್ದೇನೆ. "ಪತಿಯೇ ದೇವರು"… Read more…

  • ಕೇರೀಜಂ…

    ಮಂಜೇಲ್ಮುಂಜೇಲಿ ಯೆದ್ಬೇಗ್ನೇ ಕೇರ್ಮುಂದ್ಗಡೆ ಸಿವಪ್ಪ ಚೂರಿ, ಕತ್ತಿ, ಕುಡ್ಗೋಲು, ಯಿಳ್ಗೆಮಣೆ, ಕೊಡ್ಲಿನ... ಮಸ್ಗೆಲ್ಗೆ ಆಕಿ, ಗಸ್ಗಾಸಾ... ನುಣ್ಗೆ ತ್ವಟ್ವಟ್ಟೇ... ನೀರ್ಬಟ್ಗಾಂತಾ, ಜ್ವಲ್ಸುರ್ಗಿಗ್ಯಾಂತಾ, ಅವ್ಡುಗಚ್ಗೊಂಡೂ ಮಸೆಯತೊಡ್ಗಿದ್ವನ... ಕಟ್ದಿ ತುರ್ಬು,… Read more…

  • ಏಕಾಂತದ ಆಲಾಪ

    ಅಂದು ದಸರೆಯ ಮುನ್ನಾದಿನ ಮಕ್ಕಳಿಗೆಲ್ಲಾ ಶಾಲಾ ರಜೆ ದಿವಸಗಳು. ಅವಳು ಕಾತ್ಯಾಯನಿ, ಒಂದು ತಿಂಗಳಿಂದ ಆ ಪಟ್ಟಣದ ಪ್ರಸಿದ್ಧ ನೇತ್ರಾಲಯಕ್ಕೆ ಅಲೆಯುತ್ತಿದ್ದಾಳೆ. ಎರಡೂ ಕಣ್ಣುಗಳು ಪೊರೆಯಿಂದ ಮುಂದಾಗಿವೆ.… Read more…

  • ಅಂತರಂಗ ಶುದ್ಧಿ ಬಹಿರಂಗ ಶುದ್ಧಿ

    ಸ್ವಾಮೀಜಿಗಳಿಗೆ ಈವತ್ತಂತೂ ಮೈ ತುರಿಸಿಕೊಳ್ಳಲೂ ಪುರುಸೊತ್ತಿಲ್ಲ. ಹಲವು ಕಾರ್ಯಕ್ರಮಗಳ ಒತ್ತಡ, ರಾಜಕಾರಣಿಗಳ ಭೇಟಿ ಜೊತೆಗೆ ತಂಡೋಪತಂಡವಾಗಿ ಆಶೀರ್ವಾದ ಬೇಡಿ ಬರುವ ಭಕ್ತರ ಕಿರಿಕಿರಿ. ಇದರ ಮದ್ಯೆ ಜಪತಪ,… Read more…

  • ಟೋಪಿ ಮಾರುತಿ

    "ಏ ಕಾಗಿ, ಕಾಳೀ ಮಗನ! ಯಾಕ ಕೂಗ್ತೀಯಾ?" ಭಾವಿಯಲ್ಲಿಯ ಹಗ್ಗ ಮೇಲೆ ಕೆಳಗೆ ಹೋಗುತ್ತಿರುತ್ತದೆ. ಒಂದು ಮೊಳ ಹಗ್ಗ ಸೇದಿದರೆ ಅರ್‍ಧ ಮೊಳ ಒಳಗೆ ಸೇರಿರುತ್ತದೆ. "ಥೂ… Read more…

cheap jordans|wholesale air max|wholesale jordans|wholesale jewelry|wholesale jerseys