Home / ಕವನ / ಕವಿತೆ / ಕಡಲಡಿಯಲ್ಲಿ ಧರೆ ಡೋಲು ಬಾರಿಸಿದಾಗ

ಕಡಲಡಿಯಲ್ಲಿ ಧರೆ ಡೋಲು ಬಾರಿಸಿದಾಗ

ಗುಡುಗುಟ್ಟಿದ ಧರೆ
ಕೆರಳಿತು ಸಾಗರ
ಅಪ್ಪಳಿಸುತ ರಾಕ್ಷಸಾಕಾರದ ಸುನಾಮಿ
ಕೊಚ್ಚಿ ಹೋದವು ಮನೆ ಮಠ
ಜಲಸಮಾಧಿಯಾದವು ಜೀವರಾಶಿ

ಕಂದಮ್ಮಗಳ ಸಾವಿನಲ್ಲಿ
ಮುಗಿಲ ಮುಟ್ಟಿದ ಹೆತ್ತೊಡಲ ಕರುಳಿನ
ನೋವು! ಕೇಳುವವರ್‍ಯಾರು?
ಮಾರಣ ಹೋಮ ನಡೆಯಿತು
ಜೀವರಾಶಿಗಳ ಮೇಲೆ

ನೀರ ರಾಶಿಯ ಎದುರು ಕಣ್ಣೀರ ಕಡಲು
ಎಲ್ಲೆಲ್ಲೂ ಮನ ಕರಗುವಂತೆ
ಸಾವುನೋವಿನ ನಡುವೆ ಉಳಿದವರ
ತೊಳಲಾಟ
ಹೃದಯ ಕರಗುವ ಘೋರ ದುರಂತ

ಸಾಗರ ಗರ್‍ಭದಲ್ಲಿ ಡೋಲು ಬಾರಿಸಿದರೆ
ಎದೆ ನಡುಗಿತು,
ಕಡಲಲೆಗಳ ಅಬ್ಬರದಲ್ಲಿ ತತ್ತರಿಸಿದವು
ನೆಲಜಲಗಳಲಿ ಅವುಗಳ ರಾಶಿರಾಶಿ

ಭೋರ್‍ಗರೆವ ಕಡಲೇ
ಇನ್ನಾದರೂ ಶಾಂತವಾಗು : ಹೇಳು
ನಿನಗಿಷ್ಟವೇ ಕಳಕೊಂಡವರ ಗೋಳು
ಇನ್ನೆಂದೂ ಬಾರದಿರಲಿ ಇಂಥ ಕ್ರೂರದಿನ
ಓ ಪ್ರಕೃತಿಯೇ ನೀನೇ ಸೃಷ್ಟಿಸಿದ
ಜೀವರ ಮೇಲೆ ಕರುಣೆ ಇರಲಿ,
ಕ್ಷಮೆ ಇರಲಿ ಅಸಹಾಯಕರ ಮೇಲೆ

ಶಾಂತವಾಗು ಶಾಂತವಾಗು ಸಾಗರವೇ
ಸಾಕು ಈ ರುದ್ರ ನರ್ತನ.
*****
ಜನವರಿ ೯, ೨೦೦೫ ಸಾಗರದ ಮಣ್ಣಿನವಾಸನೆ ವಾರಪತ್ರಿಕೆ ಪ್ರಕಟ

Tagged:

Leave a Reply

Your email address will not be published. Required fields are marked *

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಹೊರ ಕೋಣೆಯಲ್ಲಿ ಕಾಲೂರಿ ಕೂತು ಬೀಡಿ ಕಟ್ಟುತ್ತಿದ್ದ ಸುಮಯ್ಯಾಗೆ ಕಣ್ಣು ಮತ್ತು ಕಿವಿಯ ಸುತ್ತಲೇ ಆಗಾಗ ಗುಂಯ್.. ಎನ್ನುತ್ತಾ ನೊಣವೊಂದು ಸರಿಸುಮಾರು ಹದಿನೈದು ನಿಮಿಷಗಳಿಂದ ಹಾರಾಡುತ್ತಾ ಕಿರಿಕಿರಿ ಮಾಡುತ್ತಿತ್ತು. ಹಿಡಿದು ಹೊಸಕಿ ಹಾಕಬೇಕೆಂದರೆ ಕೈಗೆ ಸಿಗದೆ ಮೈ ಪರಚಿಕೊಳ್ಳಬೇಕೆನ್ನ...

ಮೂಲ: ಗಾಯ್ ಡಿ ಮೊಪಾಸಾ ಗಗನಚುಂಬಿತವಾದ ಬೀಚ್‌ ವೃಕ್ಷಗಳೊಳಗಿಂದ ತಪ್ಪಿಸಿಕೊಂಡು ಸೂರ್ಯ ಕಿರಣಗಳು ಹೊಲಗಳ ಮೇಲೆ ಬೆಳಕನ್ನು ಕೆಡುವುವುದು ಬಲು ಅಪರೂಪ. ಬೆಳೆದ ಹುಲ್ಲನ್ನು ಕೊಯ್ದುದರಿಂದಲೂ, ದನಗಳೂ ಕಚ್ಚಿ ಕಚ್ಚಿ ತಿಂದುದರಿಂದಲೂ ನೆಲವು ಅಲ್ಲಲ್ಲಿ ತಗ್ಗು ದಿನ್ನೆಯಾಗಿ ಒಡೆದು ಕಾಣುತ್ತಿ...

ಒಂದೊಂದೆ ನೀರ ಹನಿಗಳು ಮುಳಿಹುಲ್ಲಿನ ಮಾಡಿನಿಂದ ಜಿನುಗಿ ತೊಟ್ಟಿಕ್ಕಿ ಆತ ಹೊದ್ದ ಕಂಬಳಿಯ ನೆನೆಸಿ ಒಳನುಸುಳಿ ಆತನ ಕುಂಡೆಯ ಭಾಗವೆಲ್ಲಾ ಒದ್ದೆಯಾದ ಕಾರಣವೋ ಹೊತ್ತಿಗೆ ಮುಂಚೆ ಎಂದೂ ಏಳದ ಹೊಲಿಯಪ್ಪ ಅಂದು ದಡಬಡಿಸಿ ಎದ್ದ. ಆತ ಮಲಗಿದ ಕಡೆಯಲ್ಲಿ ನೆಲವೆಲ್ಲಾ ಅದಾಗಲೇ ಹಸಿಯಾಗಿತ್ತಲ್ಲ. ಹ...

ಅದು ರಾಷ್ಟೀಯ ಹೆದ್ದಾರಿ ಎನ್.ಎಚ್.೧೭. ಎಡೆಬಿಡದ ವಾಹನಗಳ ಸಂಚಾರ. ಮಧ್ಯೆ ಮಧ್ಯೆ ಅಪಾಯಕಾರಿ ತಿರುವುಗಳು. ಹೊಸಬರಿಗೆ ಅಪರಿಚಿತರಿಗೆ ಮುಂದೆ ತಿರುವು ಇದೆ ಎಂದು ತಿಳಿಯಲಾಗದ, ಅವಘಡವೇನಾದರೂ ಸಂಭವಿಸಿದರೆ ನೇರವಾಗಿ ಪ್ರಪಾತದ ಪಾಲಾಗುವ ಭಯವನ್ನು ಹೊಂದಿದ ಭೀಕರ ತಿರುವುಗಳನ್ನು ಹೊಂದಿದ ವಕ...