ಕಡಲಡಿಯಲ್ಲಿ ಧರೆ ಡೋಲು ಬಾರಿಸಿದಾಗ

ಗುಡುಗುಟ್ಟಿದ ಧರೆ
ಕೆರಳಿತು ಸಾಗರ
ಅಪ್ಪಳಿಸುತ ರಾಕ್ಷಸಾಕಾರದ ಸುನಾಮಿ
ಕೊಚ್ಚಿ ಹೋದವು ಮನೆ ಮಠ
ಜಲಸಮಾಧಿಯಾದವು ಜೀವರಾಶಿ

ಕಂದಮ್ಮಗಳ ಸಾವಿನಲ್ಲಿ
ಮುಗಿಲ ಮುಟ್ಟಿದ ಹೆತ್ತೊಡಲ ಕರುಳಿನ
ನೋವು! ಕೇಳುವವರ್‍ಯಾರು?
ಮಾರಣ ಹೋಮ ನಡೆಯಿತು
ಜೀವರಾಶಿಗಳ ಮೇಲೆ

ನೀರ ರಾಶಿಯ ಎದುರು ಕಣ್ಣೀರ ಕಡಲು
ಎಲ್ಲೆಲ್ಲೂ ಮನ ಕರಗುವಂತೆ
ಸಾವುನೋವಿನ ನಡುವೆ ಉಳಿದವರ
ತೊಳಲಾಟ
ಹೃದಯ ಕರಗುವ ಘೋರ ದುರಂತ

ಸಾಗರ ಗರ್‍ಭದಲ್ಲಿ ಡೋಲು ಬಾರಿಸಿದರೆ
ಎದೆ ನಡುಗಿತು,
ಕಡಲಲೆಗಳ ಅಬ್ಬರದಲ್ಲಿ ತತ್ತರಿಸಿದವು
ನೆಲಜಲಗಳಲಿ ಅವುಗಳ ರಾಶಿರಾಶಿ

ಭೋರ್‍ಗರೆವ ಕಡಲೇ
ಇನ್ನಾದರೂ ಶಾಂತವಾಗು : ಹೇಳು
ನಿನಗಿಷ್ಟವೇ ಕಳಕೊಂಡವರ ಗೋಳು
ಇನ್ನೆಂದೂ ಬಾರದಿರಲಿ ಇಂಥ ಕ್ರೂರದಿನ
ಓ ಪ್ರಕೃತಿಯೇ ನೀನೇ ಸೃಷ್ಟಿಸಿದ
ಜೀವರ ಮೇಲೆ ಕರುಣೆ ಇರಲಿ,
ಕ್ಷಮೆ ಇರಲಿ ಅಸಹಾಯಕರ ಮೇಲೆ

ಶಾಂತವಾಗು ಶಾಂತವಾಗು ಸಾಗರವೇ
ಸಾಕು ಈ ರುದ್ರ ನರ್ತನ.
*****
ಜನವರಿ ೯, ೨೦೦೫ ಸಾಗರದ ಮಣ್ಣಿನವಾಸನೆ ವಾರಪತ್ರಿಕೆ ಪ್ರಕಟ

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಅಯ್ಯೋ ಪಾಪ
Next post ಕಲಾವಿದ

ಸಣ್ಣ ಕತೆ

  • ಜುಡಾಸ್

    "ಪೀಟರ್" "ಪ್ರಭು" "ಇನ್ನು ಮೂರುದಿನ ಮಾತ್ರ, ಪೀಟರ್. ಅನಂತರ...." ಮಾತು ಅರ್ಧಕ್ಕೆ ನಿಂತಿತು. ಯೇಸುಕ್ರಿಸ್ತ ತನ್ನ ಶಿಷ್ಯರೊಂದಿಗೆ ಕಾಲುನಡಿಗೆಯಲ್ಲಿ ಜೆರೂಸಲೆಂ ನಗರಕ್ಕೆ ನಡೆದು ಬರುತ್ತಿದ್ದ. ಹನ್ನೆರಡುಜನ ಶಿಷ್ಯರೂ… Read more…

  • ನಿಂಗನ ನಂಬಿಗೆ

    ಹೊಸಳ್ಳಿ ನೋಡುವದಕ್ಕೆ ಸಣ್ಣದಾದರೂ ಕಣ್ಣಿಗೆ ಅಂದವಾಗಿದೆ. ಬೆಳವಲ ನಾಡಿನಲ್ಲಿ ಬರಿ ಬಯಲೆಂದು ಟೀಕೆ ಮಾಡುವವರಿಗೆ ಹೊಸಳ್ಳಿ ಕೂಗಿ ಹೇಳುತ್ತಿದೆ - ತಾನು ಮಲೆನಾಡ ಮಗಳೆಂದು ! ಊರ… Read more…

  • ಕರಿ ನಾಗರಗಳು

    ಚಿತ್ರ: ಆಂಬರ್‍ ಕ್ಲೇ ಇಶಾಂ ನಮಾಜಿಗೆ (ರಾತ್ರೆಯ ನಮಾಜು) ಮೊದಲು ಅರಬ್ಬಿ ಪುಸ್ತಕವನ್ನು ಬ್ಯಾಗಿನೊಳಗಿಟ್ಟುಕೊಂಡು, ಅದನ್ನು ದುಪಟ್ಟದೊಳಗೆ ಮರೆ ಮಾಡಿಕೊಂಡು ಓಡಿ ಬಂದ, ತರನ್ನುಮ್‌ ನೀರು ಹರಿಯುತ್ತಿದ್ದ… Read more…

  • ರಾಧೆಯ ಸ್ವಗತ

    ಈಗ ಸೃಷ್ಟಿಕರ್ತನ್ನು ದೂಷಿಸುತ್ತಾ ಕಾಲ ಕಳೆಯುತ್ತಿದ್ದೇನೆ ಕೃಷ್ಣಾ. ಹೆಂಗಸರಿಗ್ಯಾಕೆ ಅವರ ಪ್ರಿಯಕರರಿಗಿಂತ ಹೆಚ್ಚು ಆಯುಸ್ಸನ್ನು ಅವನು ಕೊಡುತ್ತಾನೋ? ನೀನು ಹೇಳುತ್ತಿದ್ದುದು ಮತ್ತೆ ಮತ್ತೆ ನೆನಪಾಗುತ್ತಿದೆ: "ರಾಧೆ, ಈ… Read more…

  • ಅವಳೇ ಅವಳು

    ಇತ್ತೀಚೆಗೆ ಅವಳೇಕೋ ತುಂಬಾ ಕಾಡುತ್ತಿದ್ದಾಳೆ- ಮೂವತ್ತು ವರ್ಷಗಳೇ ಸಂದರೂ ಮರೆಯಾಗಿಲ್ಲ ಜೀವನದಲ್ಲಿ ಅದೆಷ್ಟೋ ನಡೆಯಬಾರದ ಅಥವಾ ನಡೆಯಲೇಬೇಕಾದ ಅನೇಕ ಘಟನೆಗಳು ನಡೆದು ಹೋಗಿವೆ. ದೈಹಿಕವಾಗಿ, ಮಾನಸಿಕವಾಗಿ, ವ್ಯಾವಹಾರಿಕವಾಗಿ,… Read more…