ಮೇಲು-ಕೀಳು

ಬೇವು ವಿಷವಾದೊಡೆ ಅದರ ನೆರಳು ವಿಷವೇ ?
ಮಾವು ರುಚಿಯಾದೊಡೇನದರ ನೆರಳು ರುಚಿಯೇ ?
ಕೀಳು ಹೊಲೆಯನೆನಲು ಹಿರಿಮೆಗೆ ಸಾವೇ ?
ಸಿರಿವ ಸಿರಿಯಾದೊಡೇ ಶೀಲದಲಿ ಸಿರಿಯೇ ?

ತಿನಲಾಗದು ಬಲುಕೀಳು ಹುಲ್ಲೆನಲು ಸಲ್ಲುವದೇ ?
ಬಿಡಲಾಗದು ಸಿಹಿ ಕಬ್ಬೆನಲದನೆ ಮೆಲಬಹುದೇ ?
ಹೊಲೆಯ ಹೊಲಸೆನಲು ಮಿಗಿದೆಲ್ಲ ಹಸನವಹುದೇ?
ಶ್ರೇಷ್ಟ ಕುಲಜರಿರಲು ಮಾನವ ಕರುಳ ಕಾಣಲರಿಯನೇ ?

ಕೆಸರೊಳುದಿಸಿದ ಕಮಲ ಸಲ್ಲದೇ ಆ ಈಶ್ವರಗೆ ?
ನಿಲುಕದಾಕಾಶ ಮಲ್ಲಿಗೆ ಏಸು ಲೇಸಾದರೆ ಏಕೆ ?
ಹೊಲೆಯ ಕೀಳೆನಲು ಮಾನವತೆಗೆ ಹೊರಗೆ ?
ಮರುಗದಾ ಅದಾವ ದೊರೆಯಾದೊಡೆ ಬೇಕೆ ಜಗಕ್ಕೆ ?

ಕೇರಿ ಹೊಲೆಯನಲು ಹೊಲೆಯನಾ ಹರಯಾರು ?
ಒಳ್ಳೆಯವರು ನಾವೆನಲು ನಮ್ಮನುದಿಸಿದವನಾರು ?
ಅವನಿಗಾರು ? ಎಮಗಾರು? ದೇವನೋ ನೂರಾರು ?
ಅರಿಯುವಾ ಮರೆಯದೇ ನಾವೆಲ ಮಾನವರು
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಬರ
Next post ಜೆಂಡರ್

ಸಣ್ಣ ಕತೆ

  • ಮತ್ತೆ ಬಂದ ವಸಂತ

    ಚಿತ್ರ: ಆಮಿ ಮೊದಲ ರಾತ್ರಿಯ ಉನ್ಮಾದದಲ್ಲಿದ್ದ ಮಧುವಿನ ಕಿವಿ ಹಿಂಡಿ ಅವಳಂದಳು. ‘ಮಧು, ಇಂದಿನಿಂದ ನಾವು ಗಂಡ - ಹೆಂಡತಿಯಾಗಿರುವುದು ಬೇಡ. ಬದುಕಿನ ಕೊನೆ ತನಕವೂ ಗೆಳೆಯ… Read more…

  • ಗೃಹವ್ಯವಸ್ಥೆ

    ಬೆಳಗು ಮುಂಜಾನೆ ಎಂಟು ಗಂಟೆಗೆ ಹೊಗೆಬಂಡಿಯು XX ಸ್ಟೇಶನಕ್ಕೆ ಬಂದು ನಿಂತಿತು. ಸಂತ್ರಾಧಾರವಾಗಿ ಮಳೆ ಹೊಡೆಯುತ್ತಿರುವದರಿಂದ ಪ್ರಯಾಣಸ್ಥರು ಬೇಸತ್ತು ಗಾಡಿಯಿಂದ ಯಾವಾಗ ಇಳಿಯುವೆವೋ ಎಂದೆನ್ನುತ್ತಿದ್ದರು. ನಿರ್ಮಲಾಬಾಯಿಯು ಅವಳ… Read more…

  • ಬಿರುಕು

    ಚಂಪಾ ಹಾಲು ತುಂಬಿದ ಲೋಟ ಕೈಯಲ್ಲಿ ಹಿಡಿದು ಒಳಗೆ ಬಂದಳು. ಎಂದಿನಂತೆ ಮೇಜಿನ ಮೇಲಿಟ್ಟು ಮಾತಿಲ್ಲದೆ ಹೊರಟು ಹೋಗುತ್ತಿದ್ದ ಅವಳು ಹೊರಡುವ ಸೂಚನೆಯನ್ನೇ ತೋರದಿದ್ದಾಗ ಮೂರ್‍ತಿ ಬೆಚ್ಚಿ… Read more…

  • ಕ್ಷಮೆ

    ಸುಂದರರಾಜ್ ಬೆಂಗಳೂರಿನಲ್ಲಿಯೇ ಹುಟ್ಟಿಬೆಳೆದವನು. ಹಾಗಾಗಿ ಅವನು ಕನ್ನಡ ಮಾಧ್ಯಮದಲ್ಲಿಯೇ ವಿಧ್ಯಾಭ್ಯಾಸ ಮಾಡಿ ಮುಂದೆ ಕಾಲೇಜಿನ ದಿನಗಳಲ್ಲಿ ಇಂಗ್ಲೀಷ್ ಮಾಧ್ಯಮದಲ್ಲಿ ಓದಿದ್ದ. ತನ್ನ ಮಾತೃ ಭಾಷೆಯಾದ ತಮಿಳು ಸಾಧಾರಣವಾಗಿ… Read more…

  • ಕೊಳಲು ಉಳಿದಿದೆ

    ಮಾತಿನ ತೆರೆ ಒಂದು "ನೋಡಿ, ಜನರು ನನ್ನನ್ನು ನೋಡಿ ನಗುತ್ತಾರೆ! ಈ ಬಂಗಾರದ ಕೃಷ್ಣನ ಮೂರ್ತಿ ಇವಳ ಕೈಯಲ್ಲಿ ಯಾವಾಗಲೂ ಏಕೆ ಎಂದು ಕೇಳುತ್ತಾರೆ! ನನ್ನ ಹತ್ತರ… Read more…

cheap jordans|wholesale air max|wholesale jordans|wholesale jewelry|wholesale jerseys